Thursday, July 25, 2019

ಅಭಿಮಾನದ ಅಭಿನಂದನೆಗಳು
ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರಾಗಿ ಬ್ರದರ್ ರಾಹುಲ್ ಬಾವಾಜಿ ನೇಮಕ
ಉತ್ತರಕನ್ನಡ ಜಿಲ್ಲೆಗೆ ಗೌರವ ವನ್ಯಜೀವಿ ಪರಿಪಾಲಕರಾಗಿ ನಗರದ ಯುವ ನ್ಯಾಯವಾದಿ, Green ಅಂಬ್ರೆಲ್ಲಾ ಇಕೋ ಕ್ಲಬ್ ಅಧ್ಯಕ್ಷ ಹಾಗೂ ಪ್ರವಾಸೋದ್ಯಮಿ ರಾಹುಲ್ ಬಾವಾಜಿಯವರನ್ನು ನೇಮಕಗೊಳಿಸಲಾಗಿದೆ. ಹಾಗೂ ಪ್ರವಾಸೋದ್ಯಮಿ ರಾಹುಲ್ ಬಾವಾಜಿಯವರನ್ನು ನೇಮಕಗೊಳಿಸಲಾಗಿದೆ. ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ರ ಸೆಕ್ಷನ್ 4(1) (ಬಿಬಿ) ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸರ್ಕಾರದ ಅಧಿಸೂಚನೆ ಸಂಖ್ಯೆ: ಅಪಜೀ 28 ಎಫ್ ಡಬ್ಲೂ ಎಲ್ 2019, ದಿನಾಂಕ: 18.07.2019 ಆಯಾ ಜಿಲ್ಲೆಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಗೌರವ ವನ್ಯಜೀವಿ ಪರಿಪಾಲಕರನ್ನಾಗಿ ರಾಹುಲ್ ಬಾವಾಜಿಯವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ನಗರದ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ರಾಹುಲ್ ಬಾವಾಜಿಯವರು ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ನಗರದ ಕಲಾಶ್ರೀ ಸಂಸ್ಥೆ, ರೋಟರಿ ಕ್ಲಬಿನ ಪದಾಧಿಕಾರಿಯಾಗಿ ಹಾಗೂ ಸಂಡೇ ಮಾರ್ಕೆಟ್ ವಾಣಿಜ್ಯ ಕಟ್ಟಡದ ಮಳಿಗೆದಾರರ ಸಂಘದ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿರುವ ರಾಹುಲ್ ಬಾವಾಜಿಯವರು ಗೌರವ ವನ್ಯಜೀವಿ ಪರಿಪಾಲಕರಾಗಿರುವುದಕ್ಕೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

 
 ಚುರುಕಿನ ವ್ಯಕ್ತಿತ್ವದ ಜನಮುಖಿ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಜೊತೆಗೆ ವನ್ಯಜೀವಿಗಳು ಹಾಗೂ ಪರಿಸರದ ಬಗ್ಗೆ ಅಪಾರ ಗೌರವ ಮತ್ತು ಕಾಳಜಿಯನ್ನಿಟ್ಟುಕೊಂಡಿರುವ ನಿಮಗೆ ದೊರೆತ ಅವಕಾಶವು ಜಿಲ್ಲೆಯ ವನ್ಯಜೀವಿ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡುವಂತಾಗಲೆನ್ನುವ ಶುಭ ಹಾರೈಕೆಯೊಂದಿಗೆ, 

ನಿಮ್ಮವ
ಸಂದೇಶ್.ಎಸ್.ಜೈನ್

 

Wednesday, July 24, 2019

ಅಭಿಮಾನದ ಅಭಿನಂದನೆಗಳು
ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರಾಗಿ ನಮ್ಮಣ್ಣ ವಿಷ್ಣುಮೂರ್ತಿ ರಾವ್ ನೇಮಕ
ಉತ್ತರಕನ್ನಡ ಜಿಲ್ಲೆಗೆ ಗೌರವ ವನ್ಯಜೀವಿ ಪರಿಪಾಲಕರಾಗಿ ನಗರದ ಪ್ರವಾಸೋದ್ಯಮಿ ಹಾಗೂ ಖ್ಯಾತ ಯಕ್ಷಗಾನ ಕಲಾವಿದರಾದ ವಿಷ್ಣುಮೂರ್ತಿ.ವಿ.ರಾವ್ ಅವರನ್ನು ನೇಮಕಗೊಳಿಸಲಾಗಿದೆ. ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ರ ಸೆಕ್ಷನ್ 4(1) (ಬಿಬಿ) ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸರ್ಕಾರದ ಅಧಿಸೂಚನೆ ಸಂಖ್ಯೆ: ಅಪಜೀ 28 ಎಫ್ ಡಬ್ಲೂ ಎಲ್ 2019, ದಿನಾಂಕ: 18.07.2019 ಆಯಾ ಜಿಲ್ಲೆಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಗೌರವ ವನ್ಯಜೀವಿ ಪರಿಪಾಲಕರನ್ನಾಗಿ ವಿಷ್ಣುಮೂರ್ತಿ.ವಿ.ರಾವ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
 
ನಗರದ ಸಂತೋಷ್ ಹೊಟೆಲ್ ಹಾಗೂ ದಾಂಡೇಲಿ ಡ್ರಿಮ್ಸ್ ಹೋಂ ಸ್ಟೇ ಮಾಲಕರಾಗಿರುವ ವಿಷ್ಣುಮೂರ್ತಿ.ವಿ.ರಾವ್ ಅವರು ಯಕ್ಷಗಾನ ಭಾಗವತರಾಗಿ ಕಲಾ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ನಗರದ ಕಲಾಶ್ರೀ ಸಂಸ್ಥೆ, ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್, ರೋಟರಿ ಕ್ಲಬ್ ಹಾಗೂ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಪದಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ವಿಷ್ಣುಮೂರ್ತಿ.ವಿ.ರಾವ್ ಅವರು ಗೌರವ ವನ್ಯಜೀವಿ ಪರಿಪಾಲಕರಾಗಿರುವುದಕ್ಕೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಸದಾ ಶಾಂತಮೂರ್ತಿ ನಮ್ಮ ವಿಷ್ಣುಮೂರ್ತಿಯವರು. ನಿಮ್ಮ ಸರಳತೆ, ಪರೋಪಕಾರಿ ಗುಣಧರ್ಮಕ್ಕೆ ದೊರೆತ ಮಹತ್ವದ ಅವಕಾಶವಿದು. ವನ್ಯಜೀವಿಗಳು ಹಾಗೂ ಪರಿಸರದ ಬಗ್ಗೆ ಅಪಾರ ಗೌರವ ಮತ್ತು ಕಾಳಜಿಯನ್ನಿಟ್ಟುಕೊಂಡಿರುವ ನಿಮಗೆ ದೊರೆತ ಅವಕಾಶವು ಜಿಲ್ಲೆಯ ವನ್ಯಜೀವಿ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡುವಂತಾಗಲೆನ್ನುವ ಶುಭ ಪ್ರಾರ್ಥನೆಯೊಂದಿಗೆ, ಹಾರೈಕೆ.
 
ನಿಮ್ಮವ
ಸಂದೇಶ್.ಎಸ್.ಜೈನ್


Monday, July 22, 2019

ಅಪ್ಪುಗೆಯ ಅಮ್ಮ ನಮ್ಮ ಶಾಲಿನಿಯಮ್ಮ
ಸ್ವಚ್ಚ ಹೃದಯವಂತೆಗೆ ಜನ್ಮದಿನದ ಸಂಭ್ರಮ

ಬಹಳ ಹೆಮ್ಮೆ ಮತ್ತು ಗೌರವಾಭಿಮಾನದಿಂದ ನನ್ನನ್ನು ಅಕ್ಕರೆಯಿಂದ ಪ್ರೀತಿಸುವ, ಅಪ್ಪುಗೆಯಿಂದ ಆಶೀರ್ವದಿಸುವ ಅಮ್ಮ ಶಾಲಿನಿ ಬೆಂಡೆಯವರ ಬಗ್ಗೆ ನಾಲ್ಕಕ್ಷರ ಬರೆಯಲು ಉಲ್ಲಾಸೀತನಾಗಿದ್ದೇನೆ.
 
ಇಂದವರಿಗೆ ಜನ್ಮದಿನದ ಸಂಭ್ರಮ. ಅವರ ಪಾದಕ್ಕೆ ಶಿರಬಾಗುವುದರ ಜೊತೆಗೆ ಹುಟ್ಟು ಹಬ್ಬಕ್ಕೆ ಅಕ್ಷರ ರೂಪದಲ್ಲಿ ಶುಭ ಕೋರಲು ಅಣಿಯಾಗಿದ್ದೇನೆ. ಅಮ್ಮ ನಿಮಗೆ ಶುಭಾಷಯಗಳು. ಆಯುರಾರೋಗ್ಯ ಹಾಗೂ ಸದಾ ಸಂತೃಪ್ತಿ, ನೆಮ್ಮದಿ ನಿಮ್ಮ ಆಸ್ತಿಯಾಗಲೆನ್ನುವ ಹರಕೆ ಹಾರೈಕೆ ನನ್ನದು.
ಶಾಲಿನಿಯಮ್ಮ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನವರು. ನಾರಾಯಣ ಗಂಗೋಡ್ಕರ್ ಮತ್ತು ದೈವಭಕ್ತೆ, ಧರ್ಮಕಾರ್ಯಗಳ ಮೂಲಕ ಜನಪ್ರೀತಿಗಳಿಸಿದ ಸುಶೀಲಾ ದಂಪತಿಗಳ ಮುದ್ದಿನ ರಾಜಕುಮಾರಿಯೆ ಈ ನಮ್ಮ ಶಾಲಿನಿಯಮ್ಮ. ಸುಸಂಸ್ಕೃತ ಕುಟುಂಬದಲ್ಲಿ ಜನ್ಮವೆತ್ತ ಶಾಲಿನಿಯವರದ್ದು ಕೃಷಿಕ ಮನೆತನ. ಹಾಲು ಮೊಸರಿಗೇನೂ ಕೊರತೆಯಿರಲಿಲ್ಲ. ಅಕ್ಕಿಯಿಂದ ಹಿಡಿದು ತರಕಾರಿಯವರೆಗೂ ಅವರ ಜಮೀನಿನಲ್ಲೆ ಬೆಳೆಸಲಾಗುತ್ತಿತ್ತು. 
 
ಅಂಬೆಗಾಲಿಡಲು ಆರಂಭಿಸುತ್ತಿದ್ದ ಪುಟ್ಟ ಮಗು ಶಾಲಿನಿಯವರು ಎದ್ದು ಬಿದ್ದು ನಡೆಯಲು ಪ್ರಾರಂಭಿಸುವ ಹೊತ್ತಿನಲ್ಲೆ ಪ್ರತಿದಿನ ಅಮ್ಮನ ಜೊತೆ ಬೆಳ್ಳಂ ಬೆಳಗ್ಗೆ ರಂಗೋಲಿಯನ್ನು ಹಾಕುತ್ತಿದ್ದರಂತೆ, ಇದಾದ ಬಳಿಕ ಅಮ್ಮನ ಸಂಗಡ ಹಾಲು ಕರೆಯಲು ಹೆಲ್ಪರ್ ಆಗಿಯೂ ಪ್ರಾಣಿ ಪ್ರೀತಿಗೆ ಸಾಕ್ಷಿಯಾದವರು ನಮ್ಮ ಶಾಲಿನಿಯಮ್ಮ. ಒಟ್ಟಿನಲ್ಲಿ ಅತ್ಯಂತ ಚರುಕಿನ, ಚಂದನವನದ ಗೊಂಬೆಯಂತಿದ್ದ ಪುಟ್ಟ ಶಾಲಿನಿಯಮ್ಮ ಎಲ್ಲರ ನಲುಮೆ ಒಲುಮೆಗೆ ಪಾತ್ರರಾಗಿದ್ದು ಸುಳ್ಳಲ್ಲ.
 
ಇಂಥಹ ರೀತಿಯಲ್ಲಿ ಬೆಳೆದ ನಮ್ಮ ಶಾಲಿನಿಯಮ್ಮ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟೂರು ಖಾನಾಪುರದಲ್ಲೆ ಪಡೆದರು. ಹೈಸ್ಕೂಲೆ ಸಾಕೆಂದ ಶಾಲಿನಿಯಮ್ಮ ಅವರಮ್ಮನ ಒತ್ತಾಸೆಗೆ ಟೈಲರಿಂಗ್ ಕಲಿತರು. ಮನೆ ಕೆಲಸ ಮಾಡಿದ ಮೇಲೆ ಬಟ್ಟೆ ಹೊಲಿಯುವ ಕೆಲಸವನ್ನು ಶುರುವಚ್ಚಿಕೊಂಡವರು ನಮ್ಮ ಶಾಲಿನಿಯಮ್ಮ. ಹೀಗೆ ಬೆಳೆದ ಸುಂದರಿ ಶಾಲಿನಿಯಮ್ಮ ಹಳಿಯಾಳದ ಆದರ್ಶ ಮನೆತನದ ಕುಡಿ ಮೋಹನ ವಿಠ್ಠಲ ಬೆಂಡೆಯವರನ್ನು ವರಿಸಿಕೊಂಡರು.
 
ಅಂದ ಹಾಗೆ ಬ್ಯೂಟಿ ಶಾಲಿನಿಯಮ್ಮ ಬೆಂಡೆ ಕುಟುಂಬದ ಸುಸಂಸ್ಕೃತ ಸೊಸೆಯಾಗಿ ಎಲ್ಲರ ಅಕ್ಕರೆಗೆ ಪಾತ್ರರಾದರು. ಪತಿ ಮೋಹನ ಬೆಂಡೆಯವರದ್ದು ಮಾತು ಕಡಿಮೆ. ಆದರೆ ನಮ್ಮ ಶಾಲಿನಿಯಮ್ಮನವರದ್ದು ಮಾತು ಹೆಚ್ಚು. ಎಳೆಯ ಮಗುವಿನಿಂದ ಹಿಡಿದು ಎಲ್ಲರಲ್ಲಿಯೂ ಅತ್ಯಂತ ಗೌರವಯುತವಾಗಿ ಮಾತನಾಡುವವರು ಶಾಲಿನಿಯಮ್ಮ. ಬೆಂಡೆ ಮನೆತನದ ಹಿರಿಮೆ ಗರಿಮೆಯನ್ನು ಸುಭದ್ರವಾಗಿಸಿಕೊಂಡು ಮನೆತನವನ್ನು ಮುನ್ನಡೆಸಿದ ಧನ್ಯತೆ ಶಾಲಿನಿಯಮ್ಮವನರಿಗಿದೆ. 
 
ಪತಿ ಮೋಹನ ಅವರು ಕಾಗದ ಕಾರ್ಖಾನೆಯಲ್ಲಿ ಉದ್ಯೋಗದಲ್ಲಿದ್ದ ಕಾರಣ, ದಾಂಡೇಲಿಯಲ್ಲೆ ಕಾರ್ಖಾನೆಯ ಕ್ವಾಟ್ರಸಿನಲ್ಲಿ ಮನೆ ಮಾಡಿಕೊಂಡು ಭವಿಷ್ಯದ ಉನ್ನತಿಯೆಡೆಗೆ ಹಜ್ಜೆಯನ್ನೂರಿದರು. ನಮ್ಮ ಶಾಲಿನಿಯಮ್ಮನವರಿಗೆ ದಾಂಡೇಲಿಯ ಜಂಟ್ಲಮ್ಯಾನ್ ಸತೀಶ ಬೆಂಡೆಯವರು ಏಕೈಕ ಮಾನಸ ಪುತ್ರ ಹಾಗೂ ಸಂದ್ಯಾ, ಸುನೀತಾ ಮತ್ತು ಸಂಗೀತಾ ಎಂಬ ಮೂವರು ಮುದ್ದಿನ ಹೆಣ್ಮಕ್ಕಳು ಇದ್ದಾರೆ.
 
ಕರೆದು ಹೊಟ್ಟೆ ತುಂಬ ಊಟ ಹಾಕುವ ಅನ್ನಪೂರ್ಣೇಶ್ವರಿ ನಮ್ಮ ಶಾಲಿನಿಯಮ್ಮ. ಅವರ ಮನೆಗೆ ಯಾರೇ ಹೋಗಲಿ, ಬರಿಗೈಯಲ್ಲಿ ಕಳುಹಿಸುವ ಮನಸ್ಸು ಶಾಲಿನಿಯವರಿಗಿಲ್ಲ. ಹೊಟ್ಟೆ ತುಂಬ ತಿನ್ನಿಸಿ ಕಳುಹಿಸುವ ಉದಾತ್ತ ಗುಣಧರ್ಮವನ್ನು ಮೈಗೂಡಿಸಿಕೊಂಡವರು ನಮ್ಮ ಶಾಲಿನಿಯಮ್ಮನವರು.
 
ಅವರ ನಳಪಾಕಕ್ಕೆ ಎಂಥವರೂ ಕೂಡ ಶರಣಾಗಲೆಬೇಕು. ವೆರೈಟಿ ವೆರೈಟಿ ರುಚಿಕರವಾದ ಆಹಾರ ತಯಾರಿಸುವ ಅವರ ಕೈರುಚಿ ಮಾತ್ರ ಅದ್ಬುತ. ನಿಜಕ್ಕೂ ಅವರ ಸೊಸೆ ಸಂಜನಾ ಅವರು ಪುಣ್ಯವಂತರೆಂದು ಹೇಳಲೂ ಅಂಜಿಕೆಯಿಲ್ಲ.
 
ತನ್ನ ನಾಲ್ವರು ಮಕ್ಕಳಿಗೂ ಉನ್ನತ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸಿ, ಆದರ್ಶ ಪ್ರಜೆಗಳನ್ನಾಗಿಸಿದ ಶಾಲಿನಿಯವರ ವ್ಯಕ್ತಿತ್ವಕ್ಕೆ ಮತ್ತು ಅವರ ಮಾತೃ ಹೃದಯದ ಮನಸ್ಸಿಗೆ ಶಿರಬಾಗಲೆಬೇಕು. ಮದುವೆಯಾದಾಗಿನಿಂದ ಒಂದು ದಿನವೂ ಜಗಳವಾಡದೇ ಪತಿಗೆ ತಕ್ಕ ಮಡದಿಯಾಗಿ, ಮಕ್ಕಳಿಗೆ ಹೆಮ್ಮೆಯ ಅಮ್ಮನಾಗಿ ತನ್ನನ್ನು ತಾನು ಸಮರ್ಪಿಸಿಕೊಂಡ ಶಾಲಿನಿಯವರ ಪರೋಪಕಾರಿ ನಡವಳಿಕೆ, ಅಹಂ ಇಲ್ಲವ ಶಾಂತ ಮನಸ್ಸಿನ ಮುಗ್ದತೆ ಮತ್ತು ಅವರ ಜೀವನ ನಡವಳಿಕೆ ಅನುಕರಣೀಯ ಹಾಗೂ ಅಭಿನಂದನೀಯ.
 
ಇತ್ತೀಚೆಗೆ ಅವರ ಪತಿಯವರು ಇಹಲೋಕವನ್ನು ತ್ಯಜಿಸಿದ್ದು, ಪತಿಯ ಅಗಲುವಿಕೆಯ ನೋವು ಇನ್ನೂ ಅವರ ಮನದಲ್ಲಿದೆ. ಆದರ್ಶ ದಂಪತಿಗಳಾಗಿ ಎಲ್ಲರಿಗೂ ಮಾದರಿಯಾಗಿ ಗಮನ ಸೆಳೆದವರು ಇದೇ ನಮ್ಮ ಶಾಲಿನಿಯಮ್ಮನವರು.
 
ಬಹುವರ್ಷಗಳ ಸ್ವಂತ ಮನೆ ನಿರ್ಮಾಣದ ಕನಸನ್ನು ನನಸಾಗಿಸಿದ ಮುದ್ದಿನ ಮಗ ಸತೀಶ ಬೆಂಡೆಯವರನ್ನು ಇನ್ನೂ ಎಳೆಯ ಮಗುವಿನಂತೆ ಕಾಣುವ ಶಾಲಿನಿಯಮ್ಮನವರ ಮುಗ್ದ ಮನಸ್ಸೆ ನಮಗೆ ಅತೀ ಖುಷಿ ನೀಡುವುದು.
 
ಸದಾ ಒಳಿತನ್ನೆ ಬಯಸುವ ಮಾತೃಶ್ರೀ ಶಾಲಿನಿಯಮ್ಮನವರಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ನೆರಳನ್ನೆ ಅನುಸರಿಸಿ, ಜೀವನದಲ್ಲಿ ಸಫಲತೆಯನ್ನು ಕಾಣುತ್ತಿರುವ ನಿಮ್ಮ ಕುಟುಂಬಸ್ಥರ ಪ್ರೀತಿ, ಪ್ರೋತ್ಸಾಹವೆ ನಿಮಗೆ ಬಹುದೊಡ್ಡ ಶಕ್ತಿ. 
 
ತಮ್ಮ ಸೇವಾ ಗುಣಗಳು ನಮಗೆಲ್ಲಾ ಸ್ಪೂರ್ತಿದಾಯಕವಾಗಿದೆ, ಪ್ರೇರಣಾದಾಯಿಯಾಗಿದೆ. ನಿಮ್ಮ ಆಶೀರ್ವಾದ ಎನಗಿರಲೆಂದು ಪ್ರಾರ್ಥಿಸುವೆ,

ನಿಮ್ಮವ
ಸಂದೇಶ್.ಎಸ್.ಜೈನ್

 

Thursday, July 18, 2019

ಜೆವಿಡಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ರೋಶನ್ ನೇತ್ರಾವಳಿ
ದಾಂಡೇಲಿ: ನಗರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಜೆವಿಡಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ನಗರದ ಸಮಾಜ ಸೇವಕ, ಬಿಜೆಪಿಯ ಜಿಲ್ಲಾ ಕಾರ್ಮಿಕ ಪ್ರಕೋಷ್ಟದ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ರೋಶನ್ ನೇತ್ರಾವಳಿಯವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುನೀತಾ ಅಗರವಾಲ್ ಅವರು ಆಯ್ಕೆಯಾಗಿದ್ದಾರೆ.
 
ಇತ್ತೀಚೆಗೆ ನಡೆದ ಆಯ್ಕೆ ಸಭೆಯು ಜೆವಿಡಿ ಸಂಯುಕ್ತಾ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಸ್.ಇಟಗಿ ಹಾಗೂ ಪ್ರೌಢಶಾಲೆಯ ಮುಖ್ಯೋಪಾದ್ಯಯಿನಿ ಹಲೀಮಾ ಮಾಲ್ದಾರ್ ಅವರ ನೇತೃತ್ವದಲ್ಲಿ ಜರುಗಿತು. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
 
ರೋಶನ್ ನೇತ್ರಾವಳಿಯವರ ಅಧ್ಯಕ್ಷತೆಯಲ್ಲಿ ಶಾಲೆಯು ಸಮಗ್ರ ಅಭಿವೃದ್ಧಿಯ ಕಡೆಗೆ ಶರವೇಗದ ಹೆಜ್ಜೆಯನ್ನು ಇಡುವಂತಾಗಲಿ. ದಾಂಡೇಲಿ ನಗರದ ಮುಕುಟಕ್ಕೆ ಕೀರ್ತಿಯ ಕಿರೀಟವನ್ನು ತರುವಂತಾಗಲೆನ್ನುವ ಶುಭ ಹಾರೈಕೆಯೊಂದಿಗೆ,

ನಿಮ್ಮವ
ಸಂದೇಶ್.ಎಸ್.ಜೈನ್
 

Sunday, July 14, 2019

ತುಂಬು ಹೃದಯದ ಕೃತಜ್ಞತೆಗಳು.

ದಾಂಡೇಲಿ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ಶನಿವಾರ ಸಂಜೆ ಅಂದರೆ ದಿನಾಂಕ: 13.07.2019 ರಂದು ಹಮ್ಮಿಕೊಂಡಿದ್ದ 'ಪತ್ರಿಕಾ ದಿನಾಚರಣೆ ಹಾಗೂ ಗೌರವ ಸನ್ಮಾನ' ಕಾರ್ಯಕ್ರಮಕ್ಕೆ ಆಗಮಿಸಿ, ಕಾರ್ಯಕ್ರಮಕ್ಕೆ ಮೆರುಗನ್ನು ತಂದುಕೊಟ್ಟಿರುವ ಸರ್ವರಿಗೂ ಅಭಿಮಾನಪೂರ್ವಕ ಕೃತಜ್ಞತೆಗಳು.

ನಮ್ಮ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿರುವುದರ ಜೊತೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲರಿಗೂ ನಮಿಸುವೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಸಹಕಾರ ನಮ್ಮ ಈ ಪ್ರೆಸ್ ಕ್ಲಬಿಗೆ ಹಾಗೂ ದಾಂಡೇಲಿಯ ಸರ್ವ ಪತ್ರಕರ್ತ ಸಹೋದದರರಿಗೆ ಸದಾ ಇರಲೆನ್ನುವುದೇ ನನ್ನಯ ಪ್ರಾರ್ಥನೆ.

ಕಾರ್ಯಕ್ರಮವನ್ನು ಆಯೋಜಿಸಲು ಸ್ಥಳಾವಕಾಶ ನೀಡಿ ಸಹಕರಿಸಿದ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ನವರಿಗೆ ಹೃದಯಪೂರ್ವಕ ಕೃತಜ್ಞತೆಗಳು. ನಮ್ಮ ಸಣ್ಣ ಸನ್ಮಾನವನ್ನು ಸ್ವೀಕರಿಸಿದ ಸನ್ಮಾನಿತರಿಗೆ ನನ್ನ ಕಡೆಯಿಂದ ಮಗದೊಮ್ಮೆ ಅಭಿನಂದನೆಗಳು. ನಮ್ಮನ್ನು ಯಾವತ್ತು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿರುವ ದಾಂಡೇಲಿಯ ಸಮಸ್ತ ಜನತೆಗೆ ಪ್ರೀತಿಯ ವಂದನೆಗಳು.

ನಮ್ಮ ಈ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಂತೆ ನಮ್ಮ ಜೊತೆಗೂಡಿ ಕೆಲಸ ಮಾಡಿದ ನಮ್ಮ ಅಣ್ಣ-ತಮ್ಮಂದಿರರಿಗೆ ವಂದಿಸುವೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ನಮ್ಮ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀ.ಬಿ.ಎನ್.ವಾಸರೆಯವರಿಗೆ ಹಾಗೂ ಸಂಘದ ಪದಾಧಿಕಾರಿಗಳಾದ ಶ್ರೀ.ಯು.ಎಸ್.ಪಾಟೀಲ್, ಶ್ರೀ. ಕೃಷ್ಣಾ ಪಾಟೀಲ, ಡಾ: ಬಿ.ಪಿ.ಮಹೇಂದ್ರಕುಮಾರ್, ಶ್ರೀ.ಗುರುಶಾಂತ ಜಡೆ ಹಿರೇಮಠ ಅವರುಗಳಿಗೆ ಹಾಗೂ ಸಹಕರಿಸಿದ ಪತ್ರಿಕಾ ವಿತರಕರುಗಳಾದ ಶ್ರೀ.ರಿಯಾಜ್ ಮತ್ತು ಶ್ರೀ.ಅಕ್ಷಯ್ ಅವರುಗಳಿಗೆ ದೊಡ್ಡ ನಮಸ್ಕಾರಗಳೊಂದಿಗೆ ಹಾರ್ದಿಕ ಕೃತಜ್ಞತೆಗಳು.

ಸರ್ವರ ಪ್ರೀತಿ, ಪ್ರೋತ್ಸಾಹ ನಮಗಿರಲಿ ಎಂಬ ಪ್ರಾರ್ಥನೆಯೊಂದಿಗೆ,

ನಿಮ್ಮವ
ಸಂದೇಶ್.ಎಸ್.ಜೈನ್


 

Wednesday, July 10, 2019

ತಮಗಿದೊ ಹಾರ್ದಿಕ ಅಭಿವಂದನೆಗಳು
ದಾಂಡೇಲಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಎಸ್.ಅರುಣಾದ್ರಿ ರಾವ್, ಕಾರ್ಯದರ್ಶಿಯಾಗಿ ಡಾ: ಮೆಹರವಾಡೆ, ಖಜಾಂಚಿಯಾಗಿ ಸುಧಾಕರ ಶೆಟ್ಟಿ



ನಗರದ ಪ್ರತಿಷ್ಟಿತ ರೋಟರಿ ಕ್ಲಬಿನ ನೂತನ ಸಾಲಿಗೆ ಅಧ್ಯಕ್ಷರಾಗಿ ಉದ್ಯಮಿ ಎಸ್.ಅರುಣಾದ್ರಿ ರಾವ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಗರದ ಬಂಗೂರನಗರ ಪದವಿ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ: ಹೀರಲಾಲ್ ಮೆಹರವಾಡೆ ಮತ್ತು ಖಜಾಂಚಿಯಾಗಿ ಉದ್ಯಮಿ ಸುಧಾಕರ ಶೆಟ್ಟಿ ಆಯ್ಕೆಯಾಗಿದ್ದಾರೆ. 

ನೂತನವಾಗಿ ಆಯ್ಕೆಯಾದ ಸರ್ವ ಪದಾಧಿಕಾರಿಗಳಿಗೆ ಹಾರ್ದಿಕ ಅಭಿವಂದನೆಗಳು. ತಮ್ಮ ಅವಧಿಯಲ್ಲಿ ದಾಂಡೇಲಿಯಲ್ಲಿ ಜನಪರ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆಯುವಂತಾಗಲಿ. ದಾಂಡೇಲಿಯ ಮುಕುಟಕ್ಕೆ ಕೀರ್ತಿ ತರುವ ಕಾರ್ಯ ದಾಂಡೇಲಿಯ ರೋಟರಿ ಕ್ಲಬಿನಿಂದ ಇನ್ನಷ್ಟು ಆಗುವಂತಾಗಲೆಂಬುವುದೆ ಹಾರೈಕೆ.

ನಿಮ್ಮವ

ಸಂದೇಶ್.ಎಸ್.ಜೈನ್


ಸಹಿಷ್ಣುತೆಯ ಮನಸ್ಸಿನ ನಮ್ಮೂರ ವಿಷ್ಣುವಿಗೆ ಜನ್ಮದಿನದ ಸಂಭ್ರಮ
ಯುವ ನಾಯಕನಾಗಿ ಬೆಳೆಯುತ್ತಿರುವ ವಿಷ್ಣು ನಾಯರ್

ಆತ ಎಲ್ಲರಂತಲ್ಲ. ಒಂಥರ ಡಿಪರೆಂಟ್ ಎನ್ನಿ. ಇನ್ನೊಬ್ಬರ ನೋವಿಗೆ ತಡಮಾಡದೇ ಧಾವಿಸಿ, ಸ್ಪಂದಿಸುವ ಗುಣವಂತ. ಜಾತಿ, ಧರ್ಮವನ್ನು ಮೀರಿ ಅನ್ಯಾಯಕ್ಕೊಳಗಾದವರಿಗೆ ಧ್ವನಿಯಾಗಿ ನಿಲ್ಲುವ ಗಟ್ಟಿ ಮನಸ್ಸಿನ ಧೈರ್ಯಶಾಲಿ ಯುವಕ. ಸಣ್ಣ ಮನೆಯಲ್ಲಿ ವಾಸವಿದ್ದರೂ ದೊಡ್ಡ ಮನಸ್ಸಿನ ಹೃದಯವಂತ. ಒಟ್ಟಿನಲ್ಲಿ ಹೇಳುವುದಾದರೇ ಶ್ರಮ ಸಾಧನೆಯ ಮೂಲಕ ಬದುಕು ಕಟ್ಟಿಕೊಂಡ ಶ್ರಮಿಕ ಈತ. ಯಾರಿವನು? ಎಂಬ ಪ್ರಶ್ನಗೆ ಉತ್ತರ ಹುಡುಕಲು ಹೊರಡದಿರಿ. ಯಾಕೆಂದ್ರೆ ಆ ಪುಣ್ಯಾತ್ಮನ ಜೀವನದ ಯಶೋಗಾಥೆಯನ್ನು ಹೊತ್ತು ತಂದು ಬರೆಯಲು ಅಣಿಯಾಗಿದ್ದೇನೆ.

ಆತ ಬೇರೆ ಯಾರು ಅಲ್ಲ. ದಾಂಡೇಲಿಯ ವಿಜಯನಗರದ ನಿವಾಸಿ ಮೋಹನ ನಾಯರ್ ಹಾಗೂ ಶ್ರಮವಹಿಸಿ ದುಡಿಯುವ ಅಮ್ಮ ರೋಹಿಣಿ ದಂಪತಿಗಳ ಮಾನಸಪುತ್ರ ನಮ್ಮೂರ ಬೆಂಕಿಯ ಚೆಂಡು ವಿಷ್ಣು ನಾಯರ್. ಅಂದ ಹಾಗೆ ವಿಷ್ಣು ನಾಯರನಿಗೆ ಇಂದು ಜನ್ಮದಿನದ ಸಂಭ್ರಮ, ಸಡಗರ. ಈ ಶುಭ ಸಂದರ್ಭದಲ್ಲಿ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಾ ಮುಂದಿನ ಬರವಣಿಗೆಗೆ ಹೆಜ್ಜೆಯೂರಿದ್ದೇನೆ.

ನಮ್ಮ ವಿಷ್ಣು ನಾಯರನಿಗೆ ವಿದ್ಯಾ ಎಂಬ ಮುದ್ದಿನ ಅಕ್ಕ ಹಾಗೂ ವೀಣಾ ಎಂಬ ಅಕ್ಕರೆಯ ತಂಗಿ ಇದ್ದಾರೆ. ತೀವ್ರ ಬಡತನದ ಕುಟುಂಬದಲ್ಲಿ ಜನ್ಮವೆತ್ತರೂ, ಬೆವರು ಸುರಿಸಿ ಬದುಕು ಕಟ್ಟಿಕೊಂಡ ಶ್ರಮ ಸಾಧಕರ ಮನೆಯ ಹೆಮ್ಮೆಯ ಕುಡಿ ನಮ್ಮ ವಿಷ್ಣು ನಾಯರ್.

ಎಳೆಯ ಬಾಲಕಿನಿರುವಾಗ್ಲೆ ಅಗರಬತ್ತಿಯಂತಿದ್ದ ವಿಷ್ಣು ನಾಯರ್ ಬಗ್ಗೆ ಅವನ ಅಪ್ಪ, ಅಮ್ಮನಿಗೆ ಇವ ಹೆಂಗೆ ಬೆಳೆಯಬಹುದು. ಪತ್ಲ ಮಗು ಮುಂದೆ ಹೆಂಗೆ ಬೆಳೆಯಬಹುದೆಂಬುದೆ ದೊಡ್ಡ ಹೆಡಕ್ ಆಗಿತ್ತಂತೆ. ಆದರೂ ಇದ್ದದ್ದರಲ್ಲೆ ಬೆಳೆದ ನಮ್ಮ ವಿಷ್ಣು ನಾಯರ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಬಂಗೂರನಗರ ಸರಕಾರಿ ಕನ್ನಡ ಶಾಲೆಯಲ್ಲಿ ಪಡೆದು ಮುಂದೆ ಹಳೆದಾಂಡೇಲಿ ಸರಕಾರಿ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪಡೆದನು.

ತನ್ನ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣದ ಸಮಯದಲ್ಲಿ ಮನೆ ಮನೆಗೆ ಪೇಪರ್ ಹಂಚುತ್ತಿದ್ದ ಇದೇ ವಿಷ್ಣು ನಾಯರ್ ಸಂಜೆಯಾಗುತ್ತಲೆ ತನ್ನ ಅಮ್ಮನಿಟ್ಟಿದ್ದ ಸಣ್ಣ ಟೀ ಅಂಗಡಿಯಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದನು. ಹೈಸ್ಕೂಲ್ ಮುಗಿದ ಮೇಲೆ ಕೇರಳದ ತಲಕಾಡುವಿನಲ್ಲಿ 3 ತಿಂಗಳ ಮೆಕಾನಿಕಲ್ ಇಂಜಿನಿಯರಿಂಗ್ ತರಬೇತಿಯನ್ನು ಪಡೆದುಕೊಂಡ. ಅಲ್ಲಿ ತರಬೇತಿ ಪಡೆದ ಮೇಲೆ ಅಲ್ಲೆ ಉದ್ಯೋಗದ ಅವಕಾಶ ಬಂದಿತ್ತಾದರೂ, ಹುಟ್ಟಿದ ದಾಂಡೇಲಿಯಲ್ಲೆ ಬದುಕು ಕಟ್ಟಿಕೊಳ್ಳುತ್ತೇನೆಂದು ನಿರ್ಧರಿಸಿ ದಾಂಡೇಲಿಗೆ ಬಂದು ಬಿಟ್ಟ ನಮ್ಮ ವಿಷ್ಣು ನಾಯರ್.

ದಾಂಡೇಲಿಗೆ ಬಂದ ವಿಷ್ಣು ನಾಯರ್ ಆರಂಭದಲ್ಲಿ ಅಲ್ಲಿ ಇಲ್ಲಿ ಎಂದು ಕೆಲಸ ಹುಡುಕಿ ಸುಸ್ತಾಗಿ, ಕೊನೆಗೊಮ್ಮೆ ರೇಣುಕಾ ಆಟೊಮೊಬೈಲ್ ಅಂಗಡಿಯನ್ನು ಪ್ರಾರಂಭಿಸಿದ. ಕೆಲ ವರ್ಷಗಳವರೆಗೆ ಈ ಅಂಗಡಿಯನ್ನು ನಡೆಸಿ, ಆನಂತರದಲ್ಲಿ ಕಾಗದ ಕಾರ್ಖಾನೆಯಲ್ಲಿ ನೌಕರಿ ಸಿಕ್ಕಿ ಈಗ ಅಲ್ಲೆ ನೌಕರಿ ಮಾಡುತ್ತಿದ್ದರೂ ತಾನು ಆರಂಭಿಸಿದ ಆಟೊಮೊಬೈಲ್ ಗ್ಯಾರೇಜನ್ನು ಈಗಲೂ ನಡೆಸಿಕೊಂಡು ಹೋಗುತ್ತಿದ್ದಾನೆ.

ಒಂದು ಕಡೆ ಸಣ್ಣದಾದ ಗ್ಯಾರೇಜ್, ಇನ್ನೊಂದು ಕಡೆ ದುಡಿಮೆಗೆ ತಕ್ಕ ಪಗಾರವಿರುವ ನೌಕರಿ. ಒಟ್ಟಿನಲ್ಲಿ ಸಂತೃಪ್ತಿಯ ನಿಟ್ಟುಸಿರು ನಮ್ಮ ವಿಷ್ಣು ಬ್ರದರಿಗೆ.

ಹೀಗೆ ಬದುಕಿಗೆ ಪರ್ಪೆಕ್ಟ್ ದಾರಿ ಹುಡುಕಿಕೊಂಡ ವಿಷ್ಣು ನಾಯರ್, ತಾನೊಬ್ಬನೇ ಬದುಕಿದರೇ ಸಾಲದು, ಅದರ ಜೊತೆ ಜೊತೆಗೆ ಇನ್ನೊಬ್ಬರ ಬದುಕಿಗೆ ನೆರವಾಗಬೇಕು, ಅದಕ್ಕಾಗಿ ಸಮಾಜ ಸೇವೆಯಲ್ಲಿ ನಿರತನಾಗಬೇಕೆಂದು ಬಯಸಿ, 2006 ರಲ್ಲಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಳ್ಳಲಾರಂಭಿಸಿದನು. ಬಿಜೆಪಿಗೆ ಸೇರಿದವನೇ ಆರಂಭದಲ್ಲಿ ಬಿಜೆಪಿ ಯುವ ಮೋರ್ಚಾದ ಸಕ್ರೀಯ ಸದಸ್ಯನಾಗಿ ರಾಜಕೀಯ ದೀಕ್ಷೆಯನ್ನು ಪಡೆದನು. ಇಲ್ಲಿಂದ ಆರಂಭಗೊಂಡ ರಾಜಕೀಯ ನಡೆ, ಮುಂದೆ ಪಕ್ಷದ ಆಟೋ ಎನೌನ್ಸರ್ ಆಗಿ ಗಮನ ಸೆಳೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಹೀಗೆ ರಾಜಕೀಯವಾಗಿ ಹಂತ ಹಂತವಾಗಿ ಬೆಳೆದ ವಿಷ್ಣು ನಾಯರ್ ಮುಂದೆ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷನಾಗಿ, ಇದೀಗ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಇದರ ಜೊತೆ ಜೊತೆಗೆ ಈ ದೇಶ ಕಂಡ ಅಪ್ರತಿಮ ಹಾಗೂ ಎಂದು ಮರೆಯಲಾರದ ಧೀಮಂತ ವ್ಯಕ್ತಿತ್ವದ ಮಾಜಿ ಪ್ರಧಾನಿ ದಿ: ಅಟಲ್ ಬಿಹಾರಿ ವಾಜಪೇಯಿಯವರು ಕಾಲವಾದ ನಂತರ ಅವರ ಹೆಸರಲ್ಲಿ ಆರಂಭಿಸಿದ ಅಟಲ್ ಅಭಿಮಾನಿ ಸಂಘಟನೆಯನ್ನು ಹುಟ್ಟು ಹಾಕಿ ಅದರ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಈ ಸಂಘಟನೆಯ ಮೂಲಕ ಸಮಾಜದ ಹಲವಾರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಶೃದ್ದೆಯಿಂದ ಮಾಡುವುದರ ಮೂಲಕ ಭವಿಷ್ಯದ ಕೌನ್ಸಿಲರ್ ಎಂಬ ಬಿರುದಿಗೆ ಪಾತ್ರನಾಗಿದ್ದಾನೆ ನಮ್ಮೂರ ಬಿಸಿರಕ್ತದ ನವ ತರುಣ ವಿಷ್ಣು ನಾಯರ್.

ದಾಂಡೇಲಿಯಲ್ಲಿ ನಡೆಯುವ ಸಾಮಾಜಿಕ ಹೋರಾಟಗಳಲ್ಲಿ ಸಕ್ರೀಯನಾಗಿ ಭಾಗವಹಿಸುತ್ತಿರುವ ವಿಷ್ಣು ನಾಯರ್ ನಗರದ ದಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಸಕ್ರೀಯನಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಮೂಲಕ ಎಲ್ಲರ ಪ್ರೀತಿ, ಅಭಿಮಾನಕ್ಕೆ ಪಾತ್ರನಾಗಿದ್ದಾನೆ.

ರಾಜಕೀಯವಾಗಿ ಹಂತ ಹಂತವಾಗಿ ಬೆಳೆಯುತ್ತಿರುವ ವಿಷ್ಣು ನಾಯರನ ಬೆಳವಣಿಗೆಗೆ ಅವನ ಅಪ್ಪ, ಅಮ್ಮನ ಆಶೀರ್ವಾದ, ಅಕ್ಕ, ತಂಗಿಯ ಸಹಕಾರ, ಗುರು ಹಿರಿಯರ ಆಶೀರ್ವಾದ, ಗೆಳೆಯರ ನಗುಮೊಗದ ಪ್ರೀತಿಯೆ ಬಹುಮೂಲ್ಯ ಕಾರಣವಾಗಿದೆ.

ತಾನು ಬೆಳೆಯುವುದರ ಜೊತೆಗೆ ಇನ್ನೊಬ್ಬರ ಬೆಳವಣಿಗೆಗೆ ಮತ್ತು ಒಳಿತಿಗಾಗಿ ಶ್ರಮಿಸುವ ಭವಿಷ್ಯದ ಭರವಸೆಯ ನಾಯಕ ವಿಷ್ಣು ನಾಯರನಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ನಿಮ್ಮವ
ಸಂದೇಶ್.ಎಸ್.ಜೈನ್

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...