Saturday, December 28, 2019

ರಾಜ್ಯಮಟ್ಟದಲ್ಲಿ ಸಾಧನೆಗೈದ ಚಂದ್ರಕಾಂತ ಹುಂದಲೇಕರ
ನಿಮ್ಮ ಸಾಧನೆಗೆ ಮನಪೂರ್ವಕ ವಂದನೆ-ಅಭಿವಂದನೆ
ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ವೀರಾಗ್ರಣಿಯಾಗಿ ಹೊರಹೊಮ್ಮಿದ ಚಂದ್ರಕಾಂತ ಹುಂದಲೇಕರ
ದಾಂಡೇಲಿ: ಇತ್ತೀಚೆಗೆ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಹಳಿಯಾಳ ವಿಭಾಗದ ಬರ್ಚಿ ಅರಣ್ಯ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಚಂದ್ರಕಾಂತ ಹುಂದಲೇಕರ ಅವರು ಭಾಗವಹಿಸಿ 3 ಚಿನ್ನ, 2 ಕಂಚು ಹಾಗೂ ಹಿರಿಯರ ಅಥ್ಲೇಟಿಕ್ ವಿಭಾಗದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನರಾಗಿ ಅರಣ್ಯ ಇಲಾಖೆಯ ಹಳಿಯಾಳ ವಿಭಾಗಕ್ಕೆ ಕೀರ್ತಿ ತಂದಿರುತ್ತಾರೆ.

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದಾಖಲೆಯ ಸಾಧನೆಗೈದ ಚಂದ್ರಕಾಂತ ಹುಂದಲೇಕರ ಅವರನ್ನು ಬರ್ಚಿ ಅರಣ್ಯ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಆಶ್ರಯದಲ್ಲಿ ಶನಿವಾರ ಸನ್ಮಾನಿಸಲಾಯಿತು.

ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬರ್ಚಿ ಅರಣ್ಯ ವಲಯದ ಅರಣ್ಯಾಧಿಕಾರಿ ಸಿ.ಜಿ ನಾಯ್ಕ ಅವರು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆಗೈದು ನಮ್ಮ ಹಳಿಯಾಳ ವಿಭಾಗಕ್ಕೆ ಗೌರವವನ್ನು ತಂದು ಕೊಟ್ಟ ಚಂದ್ರಕಾಂತ ಹುಂದಲೇಕರ ಅವರ ಕ್ರೀಡಾ ಸಾಧನೆ ಇಲಾಖೆಗೆ ಹಮ್ಮೆ ತಂದಿದೆ. ಶಿಸ್ತು ಹಾಗೂ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವ ಚಂದ್ರಕಾಂತ ಹುಂದಲೇಕರ ಅವರು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ರಾಜ್ಯಮಟ್ಟದಲ್ಲಿ ಸಾಧನೆಗೈದ ಚಂದ್ರಕಾಂತ ಹುಂದಲೇಕರ ಅವರು ರಾಷ್ಟ್ರಮಟ್ಟದಲ್ಲೂ ಸಾಧನೆಗೈದು ಕರುನಾಡಿಗೆ ಕೀರ್ತಿ ತರುವಂತಾಗಲೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಕಾಂತ ಹುಂದಲೇಕರ ಅವರು ರಾಜ್ಯಮಟ್ಟದಲ್ಲಿ ಸಾಧನೆ ಮಾಡಲು ಮಾರ್ಗದರ್ಶನ ನೀಡಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮತ್ತು ಪ್ರೋತ್ಸಾಹಿಸಿದ ಸಹದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರು. ನಿರಂತರವಾದ ಪ್ರಯತ್ನದಿಂದ ಸಾಧನೆ ಸಾಧ್ಯ. ಇದು ಒಂದು ದಿನದ ಸಾಧನೆಯಲ್ಲ. ಹಲವು ವರ್ಷಗಳ ಪ್ರಯತ್ನದ ಫಲ ಎಂದು ಪ್ರೀತಿಯಿಂದ ಸನ್ಮಾನಿಸಿ, ಜವಾಬ್ದಾರಿಯನ್ನು ಹೆಚ್ಚಿಸುವಂತೆ ಮಾಡಿದ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಅರಣ್ಯ ರಕ್ಷಕ ಪರಸಪ್ಪ ಖೋತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸವಿತಾ ಬೂದಿಹಾಳ ವಂದಿಸಿದರು.

ಅತ್ಯಂತ ಉತ್ಸಾಹಿ ವ್ಯಕ್ತಿತ್ವದ ಚಂದ್ರಕಾಂತ ಹುಂದಲೇಕರ ಅವರ ರಾಜ್ಯಮಟ್ಟದ ಸಾಧನೆ ನಮಗೆಲ್ಲಾ ಅತೀವ ಸಂತಸ ತಂದಿದೆ. ನಿರಂತರವಾದ ದೈಹಿಕ ಕಸರತ್ತು, ವ್ಯಾಯಾಮ ಹಾಗೂ ಸತತ ಪರಿಶ್ರಮದ ಗೆಲುವು ನಿಮ್ಮದಾಗಿದೆ. ನಿಮಗೆ ಶುಭವಾಗಲಿ. ಕ್ರೀಡಾ ಕ್ಷೇತ್ರದಲ್ಲಿ ಮಗದಷ್ಟು ಸಾಧನೆಗೈಯುವ ಸಾಧಕರು ನೀವಾಗಲೆಂದು ಪ್ರಾರ್ಥಿಸುವ,

ನಿಮ್ಮವ
ಸಂದೇಶ್.ಎಸ್.ಜೈನ್


 

Friday, December 27, 2019

 'ಸೇವಾ' ಸಂಘಟನೆಯ ರಾಜ್ಯ ಉಪ ಪ್ರಧಾನ ಕಾರ್ಯದರ್ಶಿಯಾಗಿ ದಾಂಡೇಲಿಯ ಬಿ.ಎಫ್.ರಾಥೋಡ ಆಯ್ಕೆ
ತಮಗಿದೊ ಹಾರ್ದಿಕ ಅಭಿನಂದನೆಗಳು.
ದಾಂಡೇಲಿ: ನಗರದ ಸ್ಟೇಟ್ ಬ್ಯಾಂಕಿನ ಅಧಿಕಾರಿ ಹಾಗೂ ಸ್ಟೇಟ್ ಬ್ಯಾಂಕಿನ ಎಸ್.ಸಿ/ಎಸ್.ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘವಾದ ಸೇವಾ ಸಂಘಟನೆಯ ವಿಭಾಗೀಯ ಮಟ್ಟದ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಿ.ಎಫ್.ರಾಥೋಡ ಅವರು ಇದೀಗ ಇದೇ ಸೇವಾ ಸಂಘಟನೆಯ ಕೇಂದ್ರಿಯ ಸಮಿತಿಯ ರಾಜ್ಯ ಉಪ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬ್ಯಾಂಕ್ ವೃತ್ತಿಯ ಜೊತೆಗೆ ಬ್ಯಾಂಕಿನ ಎಸ್.ಸಿ/ಎಸ್.ಟಿ ಸಿಬ್ಬಂದಿಗಳಿಗಾಗಿರುವ ಸೇವಾ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಸಿಬ್ಬಂದಿಗಳು ಮತ್ತು ಬ್ಯಾಂಕಿನ ನಡುವೆ ಉತ್ತಮ ಸಂಬಂಧ ಏರ್ಪಡುವಂತಾಗಲೂ ಬಹುಮೂಲ್ಯ ಪಾತ್ರವನ್ನು ವಹಿಸುತ್ತಿದ್ದಾರೆ. ಸಂಘಟನೆಯ ಸದಸ್ಯರುಗಳ ಸಮಸ್ಯೆಗೆ ತ್ವರಿತಗತಿಯಲ್ಲಿ ಸ್ಪಂದಿಸುವುದರ ಮೂಲಕ ಸಂಘಟನೆಯನ್ನು ಬಲವರ್ಧನೆಗೊಳಿಸಲು ಬಿ.ಎಫ್ ರಾಥೋಡ ಅವರು ಅಹರ್ನಿಶಿ ಶ್ರಮಿಸಿರುವುದನ್ನು ಪರಿಗಣಿಸಿ, ಅವರ ಸೇವಾ ದಕ್ಷತೆ ಮತ್ತು ಸಂಘಟನೆ ಹಾಗೂ ನಾಯಕತ್ವವನ್ನು ಮೆಚ್ಚಿ ಸೇವಾ ಸಂಘವು ತನ್ನ ಕೇಂದ್ರಿಯ ಸಮಿತಿಯ ರಾಜ್ಯ ಉಪ ಪ್ರಧಾನ ಕಾರ್ಯದರ್ಶಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿ ವಿಶೇಷ ಗೌರವವನ್ನು ನೀಡಿದೆ.

ಸಂಘಟನೆಯ ಅಧ್ಯಕ್ಷ ಡಿ.ವಿಜಯರಾಜ, ಪ್ರಧಾನ ಕಾರ್ಯದರ್ಶಿ ಕೆ.ಎಲ್.ಚೌವ್ಹಾಣ್ ಹಾಗೂ ಹುಬ್ಬಳ್ಳಿ ವಲಯದ ರಾಘವೇಂದ್ರ ಅಷ್ಟೇಕರ ಹಾಗೂ ಸಂಘದ ವಿಭಾಗೀಯ ಸಮಿತಿಯ ಪದಾಧಿಕಾರಿಗಳು ಆಯ್ಕೆಗೆ ಸಹಕರಿಸಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ಬಿ.ಎಫ್.ರಾಥೋಡ ಅವರು ಸೇವಾ ಸಂಘಟನೆಯನ್ನು ಇನ್ನಷ್ಟು ಬಲಪಡಿಸಿ, ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಸಂಘದ ಪುರೋ ಅಭಿವೃದ್ಧಿಗೆ ಶ್ರಮಿಸುವುದಾಗಿಯೂ ಮತ್ತು ತನ್ನ ಪ್ರತಿಯೊಂದು ಕಾರ್ಯಚಟುವಟಿಕೆಯನ್ನು ಬೆಂಬಲಿಸಿ, ಪ್ರೋತ್ಸಾಹ ನೀಡುತ್ತಿರುವ ದಾಂಡೇಲಿ ಎಸ್.ಬಿ.ಐ ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಗಳು ಉತ್ತಮವಾಗಿ ಸ್ಪಂದಿಸುತ್ತಿರುವುದರಿಂದ ಇಂಥಹ ಅವಕಾಶ ಪ್ರಾಪ್ತವಾಗಿದೆ ಎಂದು ಬಿ.ಎಫ್.ರಾಥೋಡ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ನೂತನವಾಗಿ ಆಯ್ಕೆಯಾದ ಬಿ.ಎಫ್.ರಾಥೋಡ ಅವರನ್ನು ನಗರದ ಸ್ಟೇಟ್ ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗಣ್ಯರನೇಕರು ಅಭಿನಂದಿಸಿದ್ದಾರೆ.

ಉತ್ತಮ ಸಂಘಟಕರಾಗಿ, ಆತ್ಮೀಯ ನಡವಳಿಕೆಯ ಜೊತೆಗೆ ಸರಳ ವ್ಯಕ್ತಿತ್ವದ ನಿಮ್ಮ ಕ್ರಿಯಾಶೀಲತೆಗೆ ಮತ್ತು ನಾಯಕತ್ವವನ್ನು ಮೆಚ್ಚಿ ಈ ಅವಕಾಶ ದೊರೆತಿದೆ ಎಂದರೆ ಅತಿಶಯೋಕ್ತಿ ಎನಿಸದು. ನಿಮ್ಮ ಸಾಧನೆಗೆ ಮತ್ತು ನೂತನ ಜವಾಬ್ದಾರಿಗೆ ಶುಭವಾಗಲಿ. ನಿಮಗೆ ಇನ್ನಷ್ಟು ಸ್ಥಾನಮಾನಗಳು ನಿಮ್ಮನ್ನು ಅರಸಿ ಬರಲೆಂಬುವುದ ನನ್ನಯ ಪ್ರಾರ್ಥನೆ.

ನಿಮ್ಮವ
ಸಂದೇಶ್.ಎಸ್.ಜೈನ್

 

Thursday, December 26, 2019

ವಿಜೃಂಭಣೆಯಿಂದ ಸಂಪನ್ನಗೊಂಡ ಶ್ರೀ.ಕೃಷ್ಣ ಮೂರ್ತಿಯ ಮಹಾಪೂಜೆ
ಅಪ್ಪನಿಗೆ ತಕ್ಕ ಮಗ-ಮಗನಿಗೆ ತಕ್ಕ ಅಪ್ಪ
 
ದಾಂಡೇಲಿ : ನಗರದ ವನಶ್ರೀನಗರದ ನಿವಾಸಿ, ಸ್ಥಳೀಯ ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯ ಎನ್.ಆರ್.ನಾಯ್ಕ ಅವರ ಮಗನಾದ 16 ವರ್ಷದ ಬಾಲಕ ಪ್ರಥಮ್ ನಾಯ್ಕ ತಂದೆಯ ಸಹಕಾರದಲ್ಲಿ ತಾನೆ ಸ್ವಂತ ತಯಾರಿಸಿದ ಶ್ರೀ.ಕೃಷ್ಣಾ ಮೂರ್ತಿಯ ಭವ್ಯ ಮಹಾಪೂಜಾ ಕಾರ್ಯಕ್ರಮವು ವಿಜೃಂಭಣೆಯಿಂದ ಬುಧವಾರ ರಾತ್ರಿ ಜರುಗಿತು.

ಕಳೆದ 5 ವರ್ಷಗಳಿಂದ ಪ್ರತಿವರ್ಷ ಶ್ರೀ.ಕೃಷ್ಣ ಮೂರ್ತಿಯನ್ನು ತಯಾರಿಸಿ, ಪೂಜಾ ಕೈಂಕರ್ಯವನ್ನು ನಡೆಸುತ್ತಿರುವ ಪ್ರಥಮ್ ಸ್ಥಳೀಯ ಬಂಗೂರನಗರ ಕಾಲೇಜಿನ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಮಗನ ಧಾರ್ಮಿಕ ಬದ್ದತೆಗೆ ತಂದೆ ಎನ್.ಆರ್.ನಾಯ್ಕ ಅವರು ಮೂರ್ತಿ ತಯಾರಿಸಲು ಮತ್ತು ಅಂತಿಮ ಸ್ಪರ್ಷ ನೀಡಲು ವಿಶೇಷ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡುತ್ತಾ ಬಂದಿರುವುದು ಈ ಕಾರ್ಯಕ್ರಮದ ಯಶಸ್ಸಿಗೆ ಬಹುಮೂಲ್ಯ ಕಾರಣವಾಗಿದೆ.

ಈ ವರ್ಷ ಕಳೆದ 18 ದಿನಗಳಿಂದ ಪ್ರತಿಷ್ಟಾಪಿಸಲ್ಪಟ್ಟ ಶ್ರೀ.ಕೃಷ್ಣಾ ಮೂರ್ತಿಗೆ ಪ್ರತಿದಿನ ಪೂಜೆ, ನೈವೇದ್ಯಗಳು ನಡೆದಿದ್ದು, ಇದರ ಜೊತೆಗೆ ಗುಮಟೆಪಾಂಗ್ ಮೂಲಕ ದೇವರನ್ನು ಒಲಿಸಿಕೊಳ್ಳುವ ಮತ್ತು ಜಿಲ್ಲೆಯ ಧಾರ್ಮಿಕ ಕಲೆಯನ್ನು ಉಳಿಸಿ, ಬೆಳೆಸುವ ಮಹತ್ವದ ಆಶಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಬುಧವಾರ ಮಹಾಪೂಜೆ ನೆರವೇರಿಸಲಾಗಿದ್ದು, ಈ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳಿಗೆ ಸನ್ಮಾನಿಸಲಾಯಿತು. ಖ್ಯಾತ ನಾಟಕಕಾರ ಮುರ್ತುಜಾ ಆನೆಹೊಸೂರು, ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಪಟೇಲನಗರ ಉರ್ದು ಶಾಲೆಯ ಶಿಕ್ಷಕಿ ರಜಿಯಾ.ಆರ್.ಶೇಖ, ಜಿಲ್ಲಾ ಪ್ರಶಸ್ತಿ ವಿಜೇತ ಯುವ ಕವಿ ನರೇಶ ನಾಯ್ಕ, ಅರಣ್ಯ ಇಲಾಖೆಯ ಡಿಪ್ಪೋ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ ನಾಯ್ಕ ಅವರುಗಳನ್ನು ಎನ್.ಆರ್.ನಾಯ್ಕ ಹಾಗೂ ಗಣ್ಯರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ರೂವಾರಿ ಎನ್.ಆರ್.ನಾಯ್ಕ ಅವರು ಮಕ್ಕಳ ಆಸಕ್ತಿಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವಾದಾಗ ಸುಶಿಕ್ಷಿತ ಮತ್ತು ಸದೃಢ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳ ಅಭಿರುಚಿಗೆ ತಕ್ಕಂತೆ ಅವರನ್ನು ಯೋಗ್ಯರನ್ನಾಗಿಸುವ ಕಾರ್ಯ ಹೆತ್ತವರು ಮಾಡಿದಾಗ ಸುಸಂಸ್ಕೃತ ಮತ್ತು ಆದರ್ಶ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಮಗ ಪ್ರಥಮ್ ಕಳೆದ 5 ವರ್ಷಗಳಿಂದ ಕೃಷ್ಣಾನ ಮಣ್ಣಿನ ಮೂರ್ತಿಯನ್ನು ತಯಾರಿಸುತ್ತಿದ್ದು, ತಯಾರಿಸಿದ ಮೂರ್ತಿಗೆ ಪೂಜೆಯನ್ನು ನೆರವೇರಿಸುವುದರ ಮೂಲಕ ಮಕ್ಕಳ ಕಾರ್ಯಕ್ಕೆ ಬೆಂಬಲ ನೀಡುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದರು.

ಈ ಸಂದರ್ಭದಲ್ಲಿ ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ಆರ್.ಪಿ.ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತಿನ ಹಳಿಯಾಳ ತಾಲೂಕು ಅಧ್ಯಕ್ಷ ಉಪ್ಪೇಂದ್ರ ಘೋರ್ಪಡೆ, ಕೋಮಾರಪಂತ ಸಮಾಜದ ಪ್ರಮುಖರುಗಳಾದ ವಿ.ವಿ.ನಾಯ್ಕ, ಎಂ.ಎಸ್.ನಾಯ್ಕ, ಪೂಜಾ ನಾಯ್ಕ, ಶೀಲಾ ನಾಯ್ಕ, ಸಮಾಜ ಸೇವಕ ಸುರೇಶ ಕಾಮತ್, ಶಿಕ್ಷಕ ಸತೀಶ ನಾಯ್ಕ ಹಾಗೂ ಎನ್.ಆರ್.ನಾಯ್ಕ ಕುಟುಂಬಸ್ಥರು ಮತ್ತು ಸಮಾಜದ ನಾಗರೀಕರು, ಸ್ಥಳೀಯರು ಉಪಸ್ಥಿತರಿದ್ದರು.

ಒಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಕಂಡು ಬಂದ ಸಂದೇಶ ಇಷ್ಟೆ, ಅಪ್ಪನಿಗೆ ತಕ್ಕ ಮಗ-ಮಗನಿಗೆ ತಕ್ಕ ಅಪ್ಪ. ಇದ್ದರೇ ಹಿಂಗಿರಬೇಕು ನೋಡಿ. ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವ ಮಹೋನ್ನತ ಜವಾಬ್ದಾರಿ ಹೆತ್ತವರದ್ದು ಎನ್ನವುದನ್ನು ಮರೆಯುವ ಹಾಗಿಲ್ಲ.

ಎನ್.ಆರ್.ನಾಯ್ಕ  ಅವರಿಗೆ ಹಾಗೂ ಪ್ರಥಮನಿಗೆ ನನ್ನ ಕಡೆಯಿಂದ ದೊಡ್ಡ ಸಲಾಂ

ನಿಮ್ಮವ

ಸಂದೇಶ್.ಎಸ್.ಜೈನ್

 

Wednesday, December 25, 2019

ಉದಯಿಸುತ್ತಿರುವ ರಾಜಕೀಯ ದ್ರುವನಕ್ಷತ್ರ- ಶ್ರೀನಿವಾಸ ಘೋಟ್ನೇಕರ
ಅಹಂ ಇಲ್ಲದ ಆಪತ್ಪಾಂದವ ಶ್ರೀನಿವಾಸ ಘೋಟ್ನೇಕರವರಿಗೆ ಜನ್ಮದಿನದ ಸಂಭ್ರಮ

ಅವರು ಮನಸ್ಸು ಮಾಡಿರುತ್ತಿದ್ದರೇ ಹಳಿಯಾಳ ಬಿಟ್ಟು ಬೆಂಗಳೂರು ಅಥವಾ ಮಲ್ಟಿಸಿಟಿಯಲ್ಲಿ ನೆಲಸಬಹುದಿತ್ತು. ಅದಕ್ಕೆ ಅವರಪ್ಪನೂ ಹೂ: ಅನ್ನುತ್ತಿದ್ದರು ಬಿಡಿ. ಬೆಂಗಳೂರು, ಡೆಲ್ಲಿಯಂತಹ ನಗರಗಳಲ್ಲಿ ಬಹುದೊಡ್ಡ ಬ್ಯುಸಿನೆಸ್ ಮಾಡಬೇಕೆಂಬ ಹಂಬಲವಿದ್ದರೂ, ಹುಟ್ಟೂರು ಹಳಿಯಾಳ ಬಿಡಲಾರೆ, ಸಾಧಿಸಿದರೇ ಹಳಿಯಾಳದಲ್ಲೆ ಇದ್ದು ಸಾಧಿಸುವೆ ಎಂದು ಪ್ರತಿಜ್ಞೆ ಮಾಡಿ, ಯಶಸ್ವಿಯಾದ ನಗುಮೊಗದ ಕನಸುಗಣ್ಣಿನ ಯುವಕ ನಮ್ಮ ನಿಮ್ಮೆಲ್ಲರ ಮೆಚ್ಚಿನ ಹಾಗೂ ನೆಚ್ಚಿನ ಶ್ರೀನಿವಾಸ ಘೋಟ್ನೇಕರ ಅವರು ಎಂದು ಹೇಳಲು ಅಭಿಮಾನವೆನಿಸುತ್ತದೆ.

ನಾನ್ಯಾಕೆ ಅವರ ಬಗ್ಗೆ ಬರೆಯುತ್ತಿದ್ದೇನೆಂದು ಅಂದ್ಕೋಂಡ್ರಾ. ಹಾಂ: ಅದಕ್ಕೂ ಕಾರಣವುಂಟು. ಇಂದವರಿಗೆ ಜನ್ಮದಿನದ ಸಂಭ್ರಮ. ಈ ಸಂಭ್ರಮ, ಸಡಗರಕ್ಕೆ ನನ್ನದೊಂದು ಪದಗಳ ರೂಪದ ಶುಭಾಶಯ ಕೊರಲು ಅಣಿಯಾಗಿದ್ದೇನೆ. ಒಂದು ಮಾತು ಹೇಳಬೇಕೆಂದರೇ, ನಾನು ಯಾರು ಅಂತಲೆ ಅವರಿಗೆ ಗೊತ್ತಿರಲಿಕ್ಕಿಲ್ಲ. ಆದರೂ ಪೇಸ್ ಬುಕ್ ಪ್ರೆಂಡ್ ಅಂತು ಸತ್ಯ. ಅದು ಹೇಗೆ ಆಗಿದ್ದಾರೆ ಎನ್ನುವುದು ನನಗೂ ತಿಳಿಯಲಾಗದು. ಈಗ ಅದ್ಯಾಕೆ ಅಲ್ವೆ.

ಒಂದಂತು ನಿಜ. ನಾನ್ಯಾವತ್ತು ಅವರಲ್ಲಿ ಮಾತನಾಡಿದವನಲ್ಲ. ಆದರೂ ಈ ಮನುಷ್ಯನ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇನೆ. ನಾನು ತಿಳ್ಕೊಂಡಿರುವುದನ್ನು ನಿಮ್ಮ ಬಳಿ ಹಂಚಿಕೊಳ್ಳುತ್ತೇನೆ.

ಅಂದ ಹಾಗೆ, ಶ್ರೀನಿವಾಸ ಘೋಟ್ನೇಕರ ಅವರ ಪರಿಚಯ ಮಾಡುವ ಅಗತ್ಯವಿಲ್ಲ. ಆದರೆ ಪರಿಚಯ ಮಾಡದಿದ್ದರೇ ಮುಂದೆ ಹೋಗಲು ಸಾಧ್ಯವಿಲ್ಲರಿ. ಅದಕ್ಕೆ ಶುರುವಚ್ಚಿಕೊಂಡಿದ್ದೇನೆ.  ಹಳಿಯಾಳದ ನೇರಮಾತಿನ ಒಡೆಯರು, ವಿಧಾನ ಪರಿಷತ್ತಿನ ಸದಸ್ಯರು, ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಎಸ್.ಎಲ್.ಘೋಟ್ನೇಕರ ಅವರ ಮಾನಸಪುತ್ರ ಈ ನಮ್ಮ ಶ್ರೀನಣ್ಣ ಅರ್ಥತ್ ಶ್ರೀನಿವಾಸ ಅವರು ಅನ್ರಿ.
ತನ್ನ ಪ್ರಾಥಮಿಕ, ಮಾದ್ಯಮಿಕ ಶಿಕ್ಷಣವನ್ನು ಹಳಿಯಾಳದಲ್ಲೆ ಪಡೆದ ಶ್ರೀನಿವಾಸ ಅವರು ಮುಂದೆ ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದರು.

ಇದ್ದೊಬ್ಬ ಮಗನಿಗೆ ಕೇಳಿದ್ದನ್ನು ಕೊಡುವ ಅಪ್ಪ, ಗಿಣಿಯಂತೆ ಸಾಕುತ್ತಿದ್ದ ಸುಸಂಸ್ಕೃತ ಮನಸ್ಸಿನ ಅಮ್ಮನ ಅಪ್ಪುಗೆ, ಸಹೋದರಿಯರ ಪ್ರೋತ್ಸಾಹ ಶ್ರೀನಿವಾಸ ಘೋಟ್ನೇಕರ ಅವರ ಬೆಳವಣಿಗೆಗೆ ಶ್ರೀರಕ್ಷೆಯಾಯಿತೆಂದು ಹೇಳಲು ಅಡ್ಡಿಯಿಲ್ಲ. ಎಳೆಯ ಬಾಲಕನಿರುವಾಗ್ಲೆ ತುಂಟಾಟದ ಬಾಲಕನಾಗಿ, ಕೆಂಪು ಹಾಗೂ ಬಿಳಿ ಮುಖದ ಸ್ಮಾರ್ಟ್ ಪರ್ಸನಾಲಿಟಿಯ ಈ ಬಾಲಕ ಕಂಡ್ರೆ ಎಲ್ಲರಿಗೂ ಅಚ್ಚುಮೆಚ್ಚು. ಬಾಲಕನಿರುವಾಗ್ಲೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದ ಶ್ರೀನಿವಾಸ ಅವರು ಎಳೆಯ ಪ್ರಾಯದಲ್ಲೆ ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಶಾಶ್ವತ ಫಲಕಗಳಿಗೆ ಮುತ್ತಿಟ್ಟುಕೊಂಡು ಬಾಚಿಕೊಂಡವರು. ಅಪ್ಪ ರಾಜಕೀಯ ಆಟದಲ್ಲಿ ಮೇಲುಗೈ ಸಾಧಿಸಿದರೇ, ಇತ್ತ ಮಗ ಕ್ರೀಡಾ ಕ್ಷೇತ್ರದಲ್ಲಿ ಭವಿಷ್ಯದ ಆಸ್ತಿಯಾಗುವ ಎಲ್ಲ ಲಕ್ಷಣಗಳನ್ನು ತೋರಿದ್ದರು. ಹೀಗೆ ಬೆಳೆದ ಶ್ರೀನಿವಾಸ ಅವರಿಗೆ ಸಂಬಂಧಿಕರಿಗಿಂತ ಹೆಚ್ಚು ಗೆಳೆಯರ ಬಳಗವೆ ಬಹುದೊಡ್ಡದಾಗ್ತ ಹೋಯಿತು.

ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಸದೃಢ ಕುಟುಂಬದ ಕುಡಿ ಇವರಾದರೂ ಎಂದು ಅಹಂ, ಸೊಕ್ಕು ಮಾಡಿದವರಲ್ಲ. ಸಂಕಷ್ಟದಲ್ಲಿದ್ದವರಿಗೆ ತಡವರಿಯದೇ ಸಹಾಯ ಮಾಡುವ ಅವರ ಮಾನವೀಯ ಗುಣಕೈಂಕರ್ಯಕ್ಕೆ ಬಿಗ್ ಸೆಲ್ಯೂಟ್ ಹೊಡೆಯಲೆಬೇಕು. ಪರೋಪಕಾರಿ ಗುಣ ಸಂಸ್ಕೃತಿಯ ಶ್ರೀನಿವಾಸ ಅವರು ಆಪತ್ಕಾಲದ ಆಪತ್ಬಾಂದವರಾಗಿ ಎಲ್ಲರ ಗಮನ ಸೆಳೆದವರು.

ಬಡವರ, ನೊಂದವರ, ಕಷ್ಟದಲ್ಲಿದ್ದವರ ಅನೇಕರ ಕಣ್ಣೀರನ್ನು ಒರೆಸಿ, ಅಂಥವರಿಗೆ ನೆಮ್ಮದಿ ಮತ್ತು ಧೈರ್ಯವನ್ನು ತುಂಬಿದ ಮತ್ತು ತುಂಬುತ್ತಿರುವ ಸರಳ ವ್ಯಕ್ತಿತ್ವದ ಕರುಣಾಮಯಿ. ಹಾಗಾಂತ ಹೇಳಿ ಸಿಟ್ಟು ಮೂಗಿನ ತುದಿಯಲ್ಲೆ ಇದ್ದರೂ ಅದು ಒಂದು ನಿಮಿಷದ್ದು. ಆದರೆ ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾಧಿಸುವ ವ್ಯಕ್ತಿ ಶ್ರೀನಿವಾಸ ಅವರಲ್ಲ.

ಅಪ್ಪ ಮಾಡಿರುವ ಹಲವಾರು ಉದ್ದಿಮೆಗಳನ್ನು ಮುಂದುವರೆಸುವ ಅವಕಾಶವಿದ್ದರೂ, ಅದನ್ನು ಮುಂದುವರೆಸುತ್ತಲೆ, ತನ್ನದೇನಾದರೂ ಇರಬೇಕಲ್ವೆ ಅಂದ್ಕೊಂಡು ತಾನು ಉದ್ಯಮವನ್ನು ಪ್ರಾರಂಭಿಸಿ, ಅಲ್ಪ ಸಮಯದಲ್ಲೆ ಯಶಸ್ವಿ ಉದ್ಯಮಿಯಾಗಿ ಜನಮೆಚ್ಚುಗೆಯನ್ನು ಗಳಿಸಿದ ಹಿರಿಮೆ ನಮ್ಮ ಶ್ರೀನಿವಾಸ ಅವರಿಗಿದೆ.

ಮಹಾಲಕ್ಷ್ಮೀ ಕನ್ಸಟ್ರಕ್ಷನ್ ಹೀಗೆ ಹಲವಾರು ಉದ್ದಿಮೆಗಳನ್ನು, ಡಿಲರ್ಸ್ ಶಿಪ್ ಹಾಗೂ ಟ್ರಾಕ್ಟರ್ ವಿತರಕರಾಗಿಯೂ ಗಮನಾರ್ಹ ಪರಿಶ್ರಮವನ್ನು ಪಟ್ಟು ಉದ್ಯಮದಲ್ಲಿ ಸಾರ್ಥಕತೆಯನ್ನು ಪಡೆದ ಧನ್ಯತೆ ನಮ್ಮ ಶ್ರೀನಿವಾಸ ಅವರಿಗಿದೆ.

ಮಗ ಏನನ್ನೂ ಮಾಡಲಿ, ಒಟ್ಟಿನಲ್ಲಿ ಒಳ್ಳೆಯದನ್ನೆ ಮಾಡಲೆನ್ನುವುದೆ ಅವರಪ್ಪ ಎಸ್.ಎಲ್.ಘೋಟ್ನೇಕರ ಅವರ ಅಪೇಕ್ಷೆ. ಅದರಂತೆ ಮುನ್ನುಗ್ಗಿದ್ದವರು ಈ ಶ್ರೀನಿವಾಸ ಅವರು. ಬಿಸಿ ರಕ್ತದ ನವ ತರುಣರಾಗಿದ್ದಾಗಲೆ ರಾಜಕೀಯ ರಂಗ ಪ್ರವೇಶಿಸಿ ಯುವ ಕಾಂಗ್ರೇಸ್ಸಿನ ಪ್ರಮುಖ ಪದಾಧಿಕಾರಿಯಾಗಿ ಯುವ ಕಾಂಗ್ರೆಸಿಗೆ ಹೊಸ ಆಯಾಮ ಮತ್ತು ಶಕ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆಗೆ ಶ್ರೀನಿವಾಸ ಅವರು ಪಾತ್ರರಾಗಿದ್ದಾರೆ. ಹೀಗೆ ಮುಂದುವರೆದ ಅವರ ರಾಜಕೀಯ ನಡೆ ಎ.ಪಿ.ಎಂ.ಸಿ ಅಧ್ಯಕ್ಷರಾಗುವರೆಗೆ ನಡೆದಿದ್ದು, ಭವಿಷ್ಯದ ದಿನಮಾನದಲ್ಲಿ ರಾಜಕೀಯವಾಗಿ ಇನ್ನೂ ಉತ್ತುಂಗಕ್ಕೇರುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಹಾಗೂ ಮರಾಠಾ ಸಮಾಜದ ಒಗ್ಗೂಡುವಿಕೆ ಮತ್ತು ಸಂಘಟನೆಗಾಗಿ ಶ್ರೀನಿವಾಸ ಘೋಟ್ನೇಕರ ಅವರು ಪಟ್ಟ ಶ್ರಮ ಇಡೀ ಮರಾಠಾ ಸಮುದಾಯಕ್ಕೆ ಹರ್ಷ ತಂದಿದೆ.

ನನಗೆ ಬಹಳ ಇಷ್ಟವಾದ ಅವರ ಗುಣವೆಂದರೇ, ಧರ್ಮ, ಸಂಸ್ಕೃತಿ ವಿಚಾರದಲ್ಲೆಂದೂ ರಾಜಕೀಯವನ್ನು ತರದಿರುವ ಪ್ರೌಡಿಮೆಯನ್ನು ಮೈಗೂಡಿಸಿಕೊಂಡಿದ್ದಾರೆ. ತಾಲೂಕಿನ ಪ್ರಗತಿಯ ವಿಷಯ ಬಂದಾಗ, ಸಮಸ್ಯೆಗಳ ವಿಚಾರ ಬಂದಾಗ ರಾಜಕೀಯವನ್ನು ಮೀರಿ ಸಹೃದಯನಾಗಿ ಕೆಲಸ ಮಾಡುವ ಅವರ ಪರಿ ಅತ್ಯಂತ ಹೆಮ್ಮೆ ತಂದಿದೆ. ಈ ಕಾರಣಕ್ಕಾಗಿಯೆ ಶ್ರೀನಿವಾಸ ಘೋಟ್ನೇಕರ ಅವರು ನಮಗೆ ಲೈಕ್ ಆಗುವುದು.

ರಾಜಕೀಯ ಹಾಗೂ ಉದ್ಯಮ ಕ್ಷೇತ್ರದಲ್ಲಿ ಬಹುದೊಡ್ಡ ನಿರೀಕ್ಷೆಗಳನ್ನು ಹೊತ್ತಿ ಮುನ್ನಡೆಯುತ್ತಿರುವ ಯುವ ಪೀಳಿಗೆಯ ನಗುಮೊಗದ ಯಶಸ್ವಿ ರಾಜಕಾರಣಿ, ಶ್ರೀನಿವಾಸ ಘೋಟ್ನೇಕರ ಅವರಿಗೆ ಮಗದೊಮ್ಮೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಾ, ಬರವಣಿಗೆಗೆ ವಿರಾಮವನ್ನು ಬಯಸುತ್ತಿದ್ದೇನೆ.

ನೂರು ಕಾಲ ಚೆನ್ನಾಗಿರಿ ಶ್ರೀನಿವಾಸರವರೆ, ನಿಮಗೆ ಶುಭವಾಗಲಿ.

ನಿಮ್ಮವ

ಸಂದೇಶ್.ಎಸ್.ಜೈನ್




 
ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚಿನ ಪ್ರಾಧನ್ಯತೆ ನೀಡಬೇಕು-ಕುಮಾರ್ ಕರಗಯ್ಯ
ದಾಂಡೇಲಿ : ಕ್ರೀಡಾ ಕ್ಷೇತ್ರದಲ್ಲಿ ಮಾಡುವ ಸಾಧನೆ ಭವಿಷ್ಯದ ಉನ್ನತಿಗೆ ಬಹುದೊಡ್ಡ ಕೊಡುಗೆಯಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚಿನ ಪ್ರಾಧನ್ಯತೆ ನೀಡಬೇಕೆಂದು ನಗರದ ಹೆಸ್ಕಾಂ ಅಧಿಕಾರಿ ಹಾಗೂ ಖ್ಯಾತ ಕ್ರೀಡಾಪಟು ಕುಮಾರ್ ಕರಗಯ್ಯ ಹೇಳಿದರು.
 
ಅವರು ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್ ಹಾಗೂ ಉತ್ತರಕನ್ನಡ ಜಿಲ್ಲಾ ಅಥ್ಲೆಟಿಕ್ ಅಸೋಶಯೇಶನ್ ಇವರ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಜೆವಿಡಿ ವಿದ್ಯಾಲಯದ ಆಟದ ಮೈದಾನದಲ್ಲಿ 10 ಮತ್ತು 12 ವರ್ಷದೊಳಗಿನ ಕಿರಿಯ ಮಕ್ಕಳಿಗಾಗಿ ಪ್ರಪ್ರಥಮ ಬಾರಿಗೆ ನಗರದಲ್ಲಿ ಹಮ್ಮಿಕೊಂಡಿದ್ದ ಅಥ್ಲೆಟಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕ್ರೀಡೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಉಪಯುಕ್ತವಾಗಿದೆ. ಮಕ್ಕಳ ಮಾನಸಿಕ, ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಕ್ರೀಡೆ ಉಪಯುಕ್ತವಾಗಿದ್ದು,  ಕ್ರೀಡೆಯಲ್ಲಿ ಎಲ್ಲರೂ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕೆಂದು ಕುಮಾರ್ ಕರಗಯ್ಯ ಅವರು ಕರೆ ನೀಡಿದರು.
 
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶಿರಸಿ ಅರ್ಬನ್ ಬ್ಯಾಂಕಿನ ನಿರ್ದೇಶಕ ಹಾಗೂ ಉದ್ಯಮಿ ಟಿ.ಎಸ್.ಬಾಲಮಣಿಯವರು ಶಿಕ್ಷಣೇತರ ಸಂಸ್ಥೆಯಾದರೂ ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್ ಸಂಸ್ಥೆಯವರು ಈ ಕ್ರೀಡಗೆ ವಿಶೇಷ ಆಧ್ಯತೆಯನ್ನು ನೀಡಿ, ಜಿಲ್ಲೆಯ ಮಕ್ಕಳ ಕ್ರೀಡಾಸಕ್ತಿಗೆ ಉತ್ತೇಜನ ನೀಡುತ್ತಿರುವುದು ಸ್ವಾಗತಾರ್ಹ. ಇಂತಹ ಕ್ರೀಡಾಕೂಟಗಳು ಮೇಲಿಂದ ಮೇಲೆ ನಡೆದು ನಮ್ಮೂರ ಕ್ರೀಡಾ ಪ್ರತಿಭೆಗಳು ಸಮಾಜದ ಉತ್ತುಂಗ ಶಿಖರಕ್ಕೇರುವಂತಾಗಲೆಂದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
 
ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್ ಸಂಸ್ಥೆಯ ಮುಖ್ಯಸ್ಥ ರಿಜ್ವಾನ್ ಬೆಂಡಗೇರಿಯವರು ಮಾತನಾಡಿ, ಮಕ್ಕಳ ಕ್ರೀಡಾಸಕ್ತಿಯನ್ನು ಇಮ್ಮಡಿಗೊಳಿಸುವ ಮತ್ತು ಉತ್ತೇಜಿಸುವ ಮಹತ್ವದ ಉದ್ದೇಶದೊಂದಿಗೆ ಬಹುಮುಖ್ಯವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಬೆಳವಣಿಗೆಗಾಗಿ ಮತ್ತು ಗಂಡು-ಹೆಣ್ಣು ಎನ್ನುವ ಭೇದವಿಲ್ಲದೇ ಮಕ್ಕಳನ್ನು ಸಮಾನತೆ ದೃಷ್ಟಿಯಿಂದ ನೋಡುವ ಸಲುವಾಗಿ ಹಾಗೂ ಮಕ್ಕಳನ್ನು ಭವಿಷ್ಯದಲ್ಲಿ ರಾಷ್ಟ್ರದ ಆಸ್ತಿಯನ್ನಾಗಿಸುವ ಮಹತ್ವದ ಸಂಕಲ್ಪದಡಿ 10 ಮತ್ತು 12 ವರ್ಷದೊಳಗಿನ ಕಿರಿಯ ಮಕ್ಕಳಿಗಾಗಿ ಮುಕ್ತ ಅಥ್ಲೆಟಿಕ್ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
 
ಕ್ರೀಡಾಕೂಟದ ಉಸ್ತುವಾರಿಯನ್ನು ನಿರ್ವಹಿಸಿದ ರಾಷ್ಟ್ರೀಯ ಕ್ರೀಡಾ ತರಬೇತುದಾರ ಅಮರ್ ಗುರವ ಅವರ ಕ್ರೀಡಾಕೂಟವನ್ನು ನಡೆಸಲು ಸ್ಥಳಾವಕಾಶ ನೀಡಿದ ಜೆವಿಡಿ ಕಾಲೇಜಿನ ಪ್ರಾಚಾರ್ಯ ಎಂ.ಎಸ್.ಇಟಗಿ ಹಾಗೂ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿ, ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿ ಎಂದರು.
 
ವೇದಿಕೆಯಲ್ಲಿ ಉದ್ಯಮಿ ನವೀನ್ ಕಾಮತ್, ಸಮಾಜ ಸೇವಕ ವಿನೋದ ಬಾಂದೇಕರ, ರಾಜ್ಯ ನೌಕರರ ಸಂಘದ ದಾಂಡೇಲಿ ತಾಲೂಕಾಧ್ಯಕ್ಷ ಸುರೇಶ ನಾಯಕ ಮೊದಲಾದವರು ಉಪಸ್ಥಿತರಿದ್ದರು. ಕ್ರೀಡಾ ಕೂಟದಲ್ಲಿ ಹಳಿಯಾಳ, ದಾಂಡೇಲಿ, ಜೊಯಿಡಾ, ರಾಮನಗರ, ಗಣೇಶಗುಡಿ ಮೊದಲಾದ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ಭಾಗವಹಿಸಿದ್ದರು.
 
ನಿಮ್ಮವ
ಸಂದೇಶ್.ಎಸ್.ಜೈನ್



 

Tuesday, December 24, 2019

ಡಿ: 25 ರಂದು ನಮ್ಮ ಹೆಮ್ಮೆಯ ಕಲಾವಿದರುಗಳು ಅರ್ಪಿಸುವ ಮನಮೋಹಕ ಯಕ್ಷಗಾನ

ಕಾರ್ತೀವೀರ್ಯಾರ್ಜುನ ಉಚಿತ ಯಕ್ಷಗಾನ ಪ್ರದರ್ಶನ
ಕರಾವಳಿಯ ಗಂಡುಕಲೆಯನ್ನು ಉಳಿಸಿ, ಬೆಳೆಸೋಣ, ಕಲಾವಿದರುಗಳ ಕಲಾಸೇವೆಗೆ ಪ್ರೋತ್ಸಾಹಿಸೋಣ
 
ಸ್ಥಳ: ವಿದ್ಯಾಧಿರಾಜ ಸಭಾಭವನ, ದಾಂಡೇಲಿ
 ದಿನಾಂಕ : 25.12.2019, ಸಮಯ : ಸಂಜೆ-5.00 ಗಂಟೆಗೆ ಸರಿಯಾಗಿ ಪ್ರಾರಂಭ.

ಜಲ್ದಿ ಬಂದು ನಿಮ್ಮ ಆಸನವನ್ನು ಕಾಯ್ದಿರಿಸಿಕೊಳ್ಳಿ
ನಮ್ಮೂರ ಕಲೆಯ ಸಂರಕ್ಷಕರು ನಾವಾಗೋಣ
ಯಕ್ಷಗಾನಂ ಗೆಲ್ಗೆ

ದಾಂಡೇಲಿ : ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಯೋಗದೊಂದಿಗೆ ಜೊಯಿಡಾ ತಾಲೂಕಿನ ಗುಂದದ ಸಪ್ತಸ್ವರ ಸೇವಾ ಸಂಸ್ಥೆ, ದಾಂಡೇಲಿಯ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ನಗರದ ವಿದ್ಯಾಧಿರಾಜ ಸಭಾಭವನದಲ್ಲಿ ಕಲಾಶ್ರೀ ಹಾಗೂ ಸಪ್ತಸ್ವರ ಸೇವಾ ಸಂಸ್ಥೆಯ ಹಾಗೂ ಇತರೇ ಹವ್ಯಾಸಿ ಕಲಾವಿದರುಗಳಿಂದ ಉಚಿತವಾಗಿ ಕಾರ್ತೀವೀರ್ಯಾರ್ಜುನ ಯಕ್ಷಗಾನ ಪ್ರದರ್ಶನವು ದಿನಾಂಕ: 25.12.2019 ರಂದು ಸಂಜೆ 5.00 ಗಂಟೆಗೆ ಸರಿಯಾಗಿ ಪ್ರಾರಂಭವಾಗಲಿದೆ.

ಕಾರ್ಯಕ್ರಮವನ್ನು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೀಮಂತ್ ರಾಜ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಪ್ತಸ್ವರ ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ, ಸಂದ್ಯಾ ದೇಸಾಯಿ, ವಕೀಲ ಸೋಮಕುಮಾರ್, ಕಲಾಶ್ರೀ ಸಂಸ್ಥೆಯ ಸುರೇಶ ಕಾಮತ್, ಗಣೇಶ ಹೆಬ್ಬಾರ್, ಸುದರ್ಶನ ಹೆಗಡೆ ಮತ್ತು ಪ್ರವಾಸೋದ್ಯಮಿ ಆರ್.ಎನ್.ಹೆಗಡೆ ಗುಂದ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಭಾಗವತರಾಗಿ ಖ್ಯಾತ ಯಕ್ಷಗಾನ ಕಲಾವಿದ ವಿಷ್ಣುಮೂರ್ತಿ.ವಿ.ರಾವ್, ಮದ್ದಾಳೆ ಯಲಾಪುರ ಗಣಪತಿ ಹೆಗಡೆ, ಚೆಂಡೆ ಹಳವಳ್ಳಿಯ ಗಣೇಶ ಹೆಗಡೆಯವರು ಹಿಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಮುಮ್ಮೇಳನದಲ್ಲಿ ಮಯ್ಯೂರಿ ಉಪಾಧ್ಯಾಯ, ದಾಂಡೇಲಿಯ ಉಷಾ ಹೆಬ್ಬಾರ್, ಗಡಗಿಹೊಳೆಯ ಸುಮಾ ಹೆಗಡೆ, ಹಳಿಯಾಳದ ನಾಗರತ್ನಾ ದೇವಾಡಿಗ, ಗುಂದದ ಅರ್ಚನಾ ಹೆಗಡೆ ಹಾಗೂ ಸಹ ಕಲಾವಿದರುಗಳ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಯಕ್ಷಗಾನ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಕಲಾವಿದರುಗಳನ್ನು ಪ್ರೋತ್ಸಾಹಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ನಮ್ಮ ನಾಡ ಕಲೆ, ಕರಾವಳಿಯ ಹಿರಿಮೆ-ಗರಿಮೆಯನ್ನು ವಿಶ್ವವಿಖ್ಯಾತಿಗೊಳಿಸಿದ ಮಹೋನ್ನತ ಸಾಂಸ್ಕೃತಿಕ ಮತ್ತು ಸನ್ನಡತೆಯ ಕಲೆಯಾದ ಯಕ್ಷಗಾನವನ್ನು ಉಳಿಸುವ ಬಹುದೊಡ್ಡ ಸತ್ಕಾರ್ಯದಲ್ಲಿ ನಾವು ಭಾಗವಹಿಸುವುದರ ಮೂಲಕ ಪಾಲುದಾರರಾಗೋಣ.

ಯಕ್ಷಗಾನವನ್ನು ಹಮ್ಮಿಕೊಂಡಿರುವ ಕನ್ನಡ ಸಂಸ್ಕೃತಿ ಇಲಾಖೆಗೂ, ಕೈ ಜೋಡಿಸಿದ ಸಪ್ತಸ್ವರ ಸಂಸ್ಥೆಗೂ ಮತ್ತು ಕಲಾಶ್ರೀ ಸಂಸ್ಥೆಗೂ ತುಂಬು ಹೃದಯದ ಕೃತಜ್ಞತೆಗಳು.

ಮಾತೆರ್ಲಾ ಬಲೆ, ಆಟಗೂ, ನಮ್ಮೂರ್ದ ಕಲಾವಿದರೆನ ಪೊರ್ಲಕಂಠುದ ತೆಲಿಕೆ-ನಲಿಕೆದ ಆಟನೊರ ತೂಕ . ಮಾತೆರ್ಲಾ ಬೇಗ ಬಲೆ. ನಿಕ್ಲೇಗಾದು ಕಾತೊಂದು ಉಲ್ಲೇರು ನಮ್ಮ ಮೊಕೆದ ಕಲಾವಿದರು. ಮಾತೆರ್ಲಾ, ಬಲೆ, ಬರ್ರ ಮರಪ್ಪಡೆ, ಬರಾಂದೆ ನಿರಾಶೆ ಆವೋಡ್ಚಿ, ನಿಕುಲು ಬರ್ಪಾರು ಪನ್ಪಿ ನಂಬಿಕೆ ಎಂಕ್ಲೆಗೂ ಉಂಡು.

ನನರೊ, ಪಿರೊರಾ ಮಾತೆರೆಗ್ಲಾ ಉಡಲುದಿಂಜಿ ಸೊಲ್ಮೆಲು.

ನಿಮ್ಮವ
ಸಂದೇಶ್.ಎಸ್.ಜೈನ್


 

Monday, December 23, 2019

ಸಹೇಲಿಯಿಂದ ಸಾಧಕರಿಗೆ ಸನ್ಮಾನ

ಇವರು ನಮ್ಮ ದಾಂಡೇಲಿಗೆ ಹೆಮ್ಮೆ- ಇವರುಗಳ ಸಾಧನೆಗೆ ಅಭಿಮಾನದ ಅಭಿವಂದನೆ-ಸಾಧನೆಯನ್ನು ಗುರುತಿಸಿದ ಸಹೇಲಿಗೆ ಬಿಗ್ ಸೆಲ್ಯೂಟ್

ದಾಂಡೇಲಿ : ನಗರದ ಸಹೇಲಿ ಟ್ರಸ್ಟ್ ಅರ್ಪಿಸಿದ ಬಂಗೂರನಗರ ರಂಗನಾಥ ಸಭಾಭವನದಲ್ಲಿ ನಡೆದ ಸೂಪರ್ ಸೊಲೊ ಡ್ಯಾನ್ಸ್ ಮತ್ತು ಸಿಂಗಿಂಗ್ ಹಾಗೂ ಗ್ರೂಪ್ ಡ್ಯಾನ್ಸ್  ಎಂಬೆರಡು ಮುಕ್ತ ಸ್ಪರ್ಧಾ ಕಾರ್ಯಕ್ರಮಗಳ ಅದ್ದೂರಿ ಪೈನಲ್ ಕಾರ್ಯಕ್ರಮದ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳಾದ ಖ್ಯಾತ ಯಕ್ಷಗಾನ ಕಲಾವಿದ ಹಾಗೂ ನನ್ನ ಹೃದಯದ ಅಣ್ಣ ಉದ್ಯಮಿ ವಿಷ್ಣುಮೂರ್ತಿ ರಾವ್, ಕವಯತ್ರಿ ಹಾಗೂ ಉಪನ್ಯಾಸಕಿ ಸಹೋದರಿ ನಾಗರೇಖಾ ಗಾಂವಕರ, ವನವಾಸಿ ಕಲ್ಯಾಣ ಸಂಸ್ಥೆಯ ಪ್ರಾಂಜಲ ಮನಸ್ಸಿನ ರವಿ ಲಕ್ಷ್ಮೇಶ್ವರ, ಸಾಧನೆಗೈದ ಛಲಗಾರ್ತಿ ಖ್ಯಾತ ಭರತ ನಾಟ್ಯ ಕಲಾವಿದೆ ವಿಧೂಷಿ ಅಮೃತಾ ನಾಯ್ಕ ಅವರುಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಶಾಸಕ ಆರ್.ವಿ.ದೇಶಪಾಂಡೆಯವರು ಮತ್ತು ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರು ಸಾಧಕರಿಗೆ ಸನ್ಮಾನವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಹೇಲಿ ಟ್ರಸ್ಟಿನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ, ಪದಾಧಿಕಾರಿಗಳಾದ ನೀಲಾಂಬಿಕಾ ಕಣಿಮೆಹಳ್ಳಿ, ರಮ್ಯ ಪಾಠಾನಕರ, ಜಯ ನಾಯ್ಕ, ಜ್ಯೋತಿ ಪೈ, ಸುಜಾತ ಜನ್ನು, ಗಾಯತ್ರಿ ಬಾನಾವಳಿಕರ, ಶಶಿಕಲಾ ನಾಯ್ಕ, ರೇಷ್ಮಾ ಗುಡೆಅಂಗಡಿ, ಚಂದ್ರಕಲಾ ಶೆಟ್ಟಯಾರ, ಅಕ್ಷತಾ.ಎಂ, ಸುನೀತಾ ಮೆಹರವಾಡೆ ಮತ್ತು ಮಾರ್ಗದರ್ಶಕ ರಾಧಾಕೃಷ್ಣ ಕನ್ಯಾಡಿ ಉಪಸ್ಥಿತರಿದ್ದರು.

ನಮ್ಮೂರು ಬೆಳಗಿಸಿದ ಹೆಮ್ಮೆಯ ಸಾಧಕರುಗಳಿಗೆ ಭವಿಷ್ಯದಲ್ಲಿ ಮತ್ತಷ್ಟು, ಇನ್ನಷ್ಟು ಗೌರವಗಳು, ಸಮ್ಮಾನಗಳು ಅರಸಿ ಬರಲಿ. ಈ ಪುಣ್ಯದ ನಾಡಿಗೆ ಅವರ ಸೇವೆ ಹಾಗೂ ಸಾಧನೆಗಳು ಶಾಶ್ವತವಾಗಿರಲಿ ಎಂಬ ಪ್ರಾರ್ಥನೆಯೊಂದಿಗೆ,

ನಿಮ್ಮವ
ಸಂದೇಶ್.ಎಸ್.ಜೈನ್


Friday, December 20, 2019

ಎಳೆಯ ಮಕ್ಕಳಿಗಾಗಿ ಪ್ರಪ್ರಥಮ ಬಾರಿಗೆ ಮುಕ್ತ ಅಥ್ಲೆಟಿಕ್ ಕ್ರೀಡಾಕೂಟ.
ಮಕ್ಕಳ ಭವಿಷ್ಯದ ಉನ್ನತಿಗಾಗಿ ಈ ಸ್ಪರ್ಧೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಈ ಕ್ರೀಡಾಕೂಟ ಭವಿಷ್ಯಕ್ಕೆ ಆಸರೆಯಾಗಲಿದೆ.
ಡಿ: 22 ರಂದು ದಾಂಡೇಲಿಯಲ್ಲಿ ಕಿರಿಯ ಮಕ್ಕಳಿಗಾಗಿ ಮುಕ್ತ ಅಥ್ಲೆಟಿಕ್ ಕ್ರೀಡಾಕೂಟ

ದಾಂಡೇಲಿ : ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್ ಹಾಗೂ ಉತ್ತರಕನ್ನಡ ಜಿಲ್ಲಾ ಅಥ್ಲೆಟಿಕ್ ಅಸೋಶಯೇಶನ್ ಇವರ ಸಂಯುಕ್ತಾಶ್ರಯದಲ್ಲಿ 10 ಮತ್ತು 12 ವರ್ಷದೊಳಗಿನ ಕಿರಿಯ ಮಕ್ಕಳಿಗಾಗಿ ಪ್ರಪ್ರಥಮ ಬಾರಿಗೆ ನಗರದಲ್ಲಿ ಅಥ್ಲೆಟಿಕ್ ಕ್ರೀಡಾಕೂಟವನ್ನು ಡಿ:22 ರಂದು ಭಾನುವಾರ ಏರ್ಪಡಿಸಿದೆ ಎಂದು ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ನಿತೀಶ ಚಿನಿವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಕ್ರೀಡಾಸಕ್ತಿಯನ್ನು ಇಮ್ಮಡಿಗೊಳಿಸುವ ಮತ್ತು ಉತ್ತೇಜಿಸುವ ಮಹತ್ವದ ಉದ್ದೇಶದೊಂದಿಗೆ ಬಹುಮುಖ್ಯವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಬೆಳವಣಿಗೆಗಾಗಿ ಮತ್ತು ಗಂಡು-ಹೆಣ್ಣು ಎನ್ನುವ ಭೇದವಿಲ್ಲದೇ ಮಕ್ಕಳನ್ನು ಸಮಾನತೆ ದೃಷ್ಟಿಯಿಂದ ನೋಡುವ ಸಲುವಾಗಿ ಹಾಗೂ ಮಕ್ಕಳನ್ನು ಭವಿಷ್ಯದಲ್ಲಿ ರಾಷ್ಟ್ರದ ಆಸ್ತಿಯನ್ನಾಗಿಸುವ ಮಹತ್ವದ ಸಂಕಲ್ಪದಡಿ 10 ಮತ್ತು 12 ವರ್ಷದೊಳಗಿನ ಕಿರಿಯ ಮಕ್ಕಳಿಗಾಗಿ ಮುಕ್ತ ಅಥ್ಲೆಟಿಕ್ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.

ದಾಂಡೇಲಿ ನಗರದಲ್ಲಿ ಡಿ:22 ರಂದು ಅಂದರೆ ಭಾನುವಾರ ಬೆಳಿಗ್ಗೆ 8.00 ಗಂಟೆಗೆ 10-12 ವರ್ಷದೊಳಗಿನ ಮಕ್ಕಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅತ್ಯುತ್ತಮವಾದ ಮತ್ತು ಮಕ್ಕಳ ಮುಂದಿನ ಭವಿಷ್ಯದ ಏಳಿಗೆಗಾಗಿ ಈ ಸ್ಪರ್ಧೆಯು ಪ್ರಮುಖ ಪಾತ್ರವಹಿಸಲಿದೆ. ಜಿಲ್ಲೆಯ ಯಾವುದೇ ತಾಲೂಕಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ದೂರದೂರಿಂದ ಬರುವ ಮಕ್ಕಳಿಗೆ ಪ್ರಯಾಣ ಭತ್ತೆ ನೀಡಲಾಗುತ್ತಿದೆ. ವಯಸ್ಸಿನ ಆಧ್ಯತೆಯ ಪ್ರಕಾರ ಎರಡೂ ಕೆಟಗೇರಿಗಳಲ್ಲಿ ಮೊದಲು ಬಂದ 75 ಮಕ್ಕಳಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುವುದು. ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೆ ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆಯಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಮಕ್ಕಳ ಪೋಷಕರು ಅಥವಾ ಶಿಕ್ಷಕರುಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಕ್ರೀಡಾ ಮೈದಾನದ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9964528324, 7795200856, 8095602721ಗೆ ಸಂಪರ್ಕಿಸುವಂತೆ ಕೋರಲಾಗಿದೆ.

ಮಾದರಿ ಹಾಗೂ ನಮ್ಮೂರ ಮಕ್ಕಳ ಭವಿಷ್ಯದ ಉನ್ನತಿಗಾಗಿ ಹಮ್ಮಿಕೊಂಡಿರುವ ಈ ಸ್ಪರ್ಧೆಯಲ್ಲಿ ನಿಮ್ಮ ಮಕ್ಕಳನ್ನು ಭಾಗವಹಿಸುವಂತೆ ಮಾಡಿ, ಮುಂದೆ ಭಾರಿ, ಭಾರಿ ಪ್ರಯೋಜನವುಂಟು. ಮನೆಯವರೆಗೆ ಬಂದ ಅವಕಾಶ ಮಾತ್ರ ಮಿಸ್ ಮಾಡ್ಕೊಬೇಡ್ರಿ.

ಹೇಮಗೂ ಭಾನುವಾರ ಐತೆ, ನಿಮ್ಮ ಮಕ್ಕಳನ್ನು ಜಲ್ದಿ ಕರ್ಕೊಂಡು ಬಂದು, ಅವರು ಆಡುವುದನ್ನು ನೋಡಿ ಮಜಾ ತೆಗೆದುಕೊಳ್ಳಿ.

ನಿಮ್ಮವ

ಸಂದೇಶ್.ಎಸ್.ಜೈನ್

 
ಡಿ: 21 ರಂದು ಸಹೇಲಿ ಟ್ರಸ್ಟ್ ಅರ್ಪಿಸುವ ಸೂಪರ್ ಡ್ಯಾನ್ಸರ್ಸ್ & ಸಿಂಗರ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ
ನಾಳೆ ಅಂದ್ರೆ ಶನಿವಾರ ಕಣ್ರೀ.

(ಸಹೇಲಿ ಟ್ರಸ್ಟ್ ಅರ್ಪಿಸುವಸಿರುವ ಕಳೆದ ವರ್ಷದ ಸೂಪರ್ ಡ್ಯಾನ್ಸರ್ಸ್ & ಸಿಂಗರ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಮೂಡಿಬಂದ ಮನಮೋಹಕ ನೃತ್ಯ ಕಾರ್ಯಕ್ರಮದ ಒಂದು ನೋಟ)

ಜಬರ್ದಸ್ತ್ ಪ್ರೋಗ್ರೆಮ್. ಕುಂತ್ರೆ ಕಾರ್ಯಕ್ರಮ ಮುಗಿಯೊವರೆಗೆ ಏಳೊಕ್ಕೆ ಮನಸ್ಸಾಗಲ್ರಿಯಪ್ಪ ಅಂಥ ಸೂಪರ್ ಡೂಪರ್ ಕಾರ್ಯಕ್ರಮ.
ಸಹೇಲಿ ಸಹೋದರಿಯರ ಸಂಘಟನೆಗೊಂದು ಸಾಕ್ಷಿ-ಈ ಕಾರ್ಯಕ್ರಮ

ದಾಂಡೇಲಿ: ನಗರದ ಖ್ಯಾತ ಸಾಂಸ್ಕೃತಿಕ ಸಂಘಟನೆ ಹಾಗೂ ಮಹಿಳೆಯರೆ ಕೂಡಿರುವ ಸಹೇಲಿ ಟ್ರಸ್ಟ್ ಪ್ರತಿವರ್ಷದಂತೆ ಈ ವರ್ಷವೂ ಯಶಸ್ವಿಯಾಗಿ ಹಮ್ಮಿಕೊಂಡಿರುವ ಸೂಪರ್ ಡ್ಯಾನ್ಸರ್ಸ್ & ಸಿಂಗರ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು ಡಿ:21 ರಂದು ಸಂಜೆ 6.30 ಗಂಟೆಗೆ ಸರಿಯಾಗಿ ಸ್ಥಳೀಯ ಬಂಗೂರನಗರ ರಂಗನಾಥ ಸಭಾಭವನದಲ್ಲಿ ಜರಗಲಿದೆ.
ಕಳೆದ ಒಂದು ತಿಂಗಳಿನಿಂದ ವಿವಿಧ ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸ್ಪರ್ಧೆಯಲ್ಲಿ ಸೊಲೊ ಡ್ಯಾನ್ಸ್, ಗ್ರೂಪ್ ಡ್ಯಾನ್ಸ್ ಮತ್ತು ಸೊಲೊ ಸಿಂಗಿಂಗ್ ಸ್ಪರ್ಧೆಯನ್ನು ನಡೆಸಲಾಗಿ, ವಿವಿಧ ಸುತ್ತುಗಳ ಮೂಲಕ ಆಯ್ಕೆಯಾದ ಅಂತಿಮ ಸ್ಪರ್ಧಾಳುಗಳಿಗಾಗಿ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಆರ್.ವಿ.ದೇಶಪಾಂಡೆಯವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರು ಭಾಗವಹಿಸಲಿದ್ದಾರೆ. ಅತ್ಯುತ್ತಮವಾದ ಈ ಭಾಗದ ಕಲಾ ಪ್ರತಿಭೆಗಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಮ್ಮೂರ ಪ್ರತಿಭೆಗಳ ಪ್ರತಿಭೆಗಳಿಗೆ ಶುಭ ಹಾರೈಸಿ, ಪ್ರೋತ್ಸಾಹಿಸುವಂತೆ ಸಹೇಲಿ ಟ್ರಸ್ಟಿನ ಅಧ್ಯಕೆ ಮೀನಾಕ್ಷಿ ಕನ್ಯಾಡಿ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

ಮಿಸ್ ಮಾಡ್ಬೇಡ್ರಿ, ನೀವು ಬನ್ನಿ, ನಿಮ್ಮವರನ್ನು ಕರೆ ತನ್ನಿ, ಸಹೇಲಿ ಸಹೋದರಿಯರ ಸಮಾಜಮುಖಿ ಕಾರ್ಯಕ್ರಮ ಹಾಗೂ ಶ್ರಮಸಾಧನೆಯನ್ನು ಪ್ರೋತ್ಸಾಹಿಸೋಣ.

ನಿಮ್ಮವ
ಸಂದೇಶ್.ಎಸ್.ಜೈನ್
-

 

Friday, December 6, 2019

ಸಾಧನೆಯ ಛಲಗಾರ್ತಿ ನಾಗರೇಖಾ ಗಾಂವಕರಗೆ ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿ
ಅವರು ನಮ್ಮ ದಾಂಡೇಲಿಗೆ ಮಾತ್ರವಲ್ಲ ಇಡೀ ಜಿಲ್ಲೆಗೆ ಹೆಮ್ಮೆ. ಬಹುಷ: ಅವರ ಬೆಳವಣಿಗೆ ನೋಡಿದರೆ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯಕ್ಕೆ ಆಸ್ತಿಯಾಗಬಲ್ಲ ಶರವೇಗದ ಸಾದನೆಯ ಛಲಗಾರ್ತಿ ಎನ್ನಲು ಅಡ್ಡಿಯಿಲ್ಲ. ವೃತ್ತಿಯಲ್ಲಿ ಕಾಲೇಜು ಉಪನ್ಯಾಸಕಿಯಾಗಿದ್ದರೂ ವೃತ್ತಿ ಬದುಕಿನ ಜೊತೆಗೆ ಸಂಸಾರದ ಸಾರಥಿಯಾಗಿ ಮನೆ ನಿರ್ವಹಣೆಯ ಕೆಲಸವನ್ನು ಶೃದ್ದೆಯಿಂದ ಮಾಡಿ, ಸಂಸಾರದ ಪ್ರಗತಿಯ ದೀಪವಾಗಿದ್ದಾರೆ. ಅವರು ಬೇರೆ ಯಾರು ಅಲ್ಲ. ನಿರಂತರವಾದ ಶ್ರಮಸಾಧನೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸದೃಢ ಹೆಜ್ಜೆಯೊಂದಿಗೆ ಮುನ್ನಡೆಯುತ್ತಿರುವ ಸುಸಂಸ್ಕೃತ ಅಕ್ಕ ನಮ್ಮ ನಾಗರೇಖಾ ಗಾಂವಕರ. 
 
ಕನ್ನಡ ಸಾರಸ್ವತ ಲೋಕಕ್ಕೆ ಹಲವಾರು ಕೃತಿಗಳನ್ನು ಸಮರ್ಪಿಸುವುದರ ಮೂಲಕ ಕನ್ನಡಮ್ಮನ ಸೇವೆಯನ್ನು ಅತ್ಯಂತ ಶೃದ್ದಾಭಕ್ತಿಯಿಂದ ನಿರ್ವಹಿಸುತ್ತಿರುವ ನಾಗರೇಖಾ ಅವರು ಕವಯತ್ರಿಯಾಗಿ, ಅಂಕಣಕಾರರಾಗಿ, ಬರಹಗಾರರಾಗಿ ಗಮನ ಸೆಳೆಯುವುದರ ಜೊತೆಗೆ ಉತ್ತಮ ವಾಗ್ಮಿಯಾಗಿ ಚಿರಪರಿಚಿತರಾಗಿದ್ದಾರೆ.
 
ಈಗಾಗಲೆ ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗಿರುವ ಪ್ರೀತಿಯ ಅಕ್ಕ ನಾಗರೇಖಾ ಗಾಂವಕರ ಅವರ ಮಡಿಲಿಗೆ ಬೆಳಗಾವಿಯ  ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ವತಿಯಿಂದ ಕೊಡಮಾಡುವ ಡಾ. ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿಯು ಅರಸಿ ಬಂದಿರುವುದು ನಮಗೆಲ್ಲಾ ಅತೀವ ಆನಂದ ತಂದಿದೆ. ಡಿಸೆಂಬರ 8 ರಂದು ಬೆಳಗಾವಿಯ ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನಾಗರೇಖಾರವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. 
 ಸರಳ, ಸಜ್ಜನಿಕೆಯ ಸುಯೋಗ್ಯ ಸುಸಂಸ್ಕೃತಿಯ ಅಕ್ಕ ನಾಗರೇಖಾ ಗಾಂವಕರ ಅವರ ಶ್ರಮಸಾಧನೆಗೆ ಅನಂತಕೋಟಿ ವಂದನೆಗಳು ಮತ್ತು ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಅಭಿಮಾನಪೂರ್ವಕ ಅಭಿವಂದನೆಗಳು. ಇವರ ಸಾಧನೆಗೆ ಕಲ್ಪವೃಕ್ಷದಂತಿರುವ ಅವರ ಪತಿ ಪ್ರವೀಣ ನಾಯಕರಿಗೂ ಒಂದು ಸೆಲ್ಯೂಟ್.

ನಿಮ್ಮ ತಮ್ಮ
ಸಂದೇಶ್.ಎಸ್.ಜೈನ್
 
 

Wednesday, December 4, 2019

ಜೈನ್ ಇಡ್ಲಿ ಕೆಫೆ ದಾಂಡೇಲಿ
ಇಂದು ದಿನಾಂಕ: 05.12.2019, ಮಧ್ಯಾಹ್ನ 12 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೆ ಸ್ವಾದಿಷ್ಟ ರುಚಿಯೊಂದಿಗೆ ಊಟ

ಸೋಡಾ ಪುಡಿ, ಟೇಸ್ಟಿಂಗ್ ಪೌಡರ್ ಬಳಸದೆ ಮಾಡಿರುವ ಮನೆಪಾಕ ತತ್ವ ನಮ್ಮದು.

ನಿಮಗೆ ಕುಚಲಕ್ಕಿ ಗಂಜಿ ಬೇಕೆ ನಮ್ಮಲ್ಲಿ ಬನ್ನಿ

ಅರಮನೆ ನೋಡಲು ಅಂದ
ಆದ್ರೆ ಊಟ ಜೈನ್ ಇಡ್ಲಿ ಕೆಫೆದ್ದೆ ಚೆಂದ
ಭರ್ಜರಿ ವೆರೈಟಿ ವೆರೈಟಿ ಊಟ ಕೇವಲ ರೂ:50/- ಮಾತ್ರ

ಸ್ಥಳ: ಜೈನ್ ಇಡ್ಲಿ ಕೆಫೆ, ನಿಯರ್: ಡಾ: ಪಾಟೀಲ್ ಆಸ್ಪತ್ರೆ

ವೈವಿಧ್ಯಮಯ ಊಟದ ಅರಮನೆ

ಇಂದು ನಮ್ಮ ಊಟದ ವಿಶೇಷತೆಗಳು:
1.    ಕುಚಲಕ್ಕಿ ಗಂಜಿ ನೀರಿನ ಆರೋಗ್ಯವರ್ದಕ ಸೂಪ್
2.    ನಾವೆ ಸಿದ್ದಪಡಿಸಿದ ರುಚಿಕರ ಉಪ್ಪಿನಕಾಯಿ
3.    ಬದನೆಕಾಯಿ ಗಸಿ
4.    ಸ್ಮಾರ್ಟ್ ಟೊಮೆಟೊ ಕೂರ್ಮ
5.    ಚಪಾತಿ
6.    ಅನ್ನ
7.    ಸಾಂಬರ್

ಇಂದು ನಮ್ಮಲ್ಲಿ ಲಭ್ಯವಿರುವ ಉಪಹಾರ:
1.    ಇಡ್ಲಿ
2.    ಉಪ್ಪಿಟ್ಟು
3.    ದಾಲ್ ಕಿಚಡಿ
4.    ಚಪಾತಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂದೇಶ್.ಎಸ್.ಜೈನ್, ಪತ್ರಕರ್ತ, ಮೊ:9620595555,7349443043

ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.

ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.

ಊಟ ಮಾಡಿ ನೋಡಿ. ಊಟ ನಮ್ಮದು, ಸಂಭ್ರಮ ನಿಮ್ಮದು.
ನಮ್ಮ ರುಚಿಯೆ ನಿಮಗೆ ಹಬ್ಬ- ನಿಮ್ಮ ಖುಷಿಯೆ ನಮಗೆ ಹಬ್ಬ

ನಿಮ್ಮವ
ಸಂದೇಶ್.ಎಸ್.ಜೈನ್



 

Tuesday, December 3, 2019

ಜೈನ್ ಇಡ್ಲಿ ಕೆಫೆ ದಾಂಡೇಲಿ
ಇಂದು ದಿನಾಂಕ: 04.12.2019, ಮಧ್ಯಾಹ್ನ 12 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೆ ಸ್ವಾದಿಷ್ಟ ರುಚಿಯೊಂದಿಗೆ ಊಟ

ಸೋಡಾ ಪುಡಿ, ಟೇಸ್ಟಿಂಗ್ ಪೌಡರ್ ಬಳಸದೆ ಮಾಡಿರುವ ಮನೆಪಾಕ ತತ್ವ ನಮ್ಮದು.

ನಿಮಗೆ ಕುಚಲಕ್ಕಿ ಗಂಜಿ ಬೇಕೆ ನಮ್ಮಲ್ಲಿ ಬನ್ನಿ

ಅರಮನೆ ನೋಡಲು ಅಂದ
ಆದ್ರೆ ಊಟ ಜೈನ್ ಇಡ್ಲಿ ಕೆಫೆದ್ದೆ ಚೆಂದ

ಭರ್ಜರಿ ವೆರೈಟಿ ವೆರೈಟಿ ಊಟ ಕೇವಲ ರೂ:50/- ಮಾತ್ರ

ಸ್ಥಳ: ಜೈನ್ ಇಡ್ಲಿ ಕೆಫೆ, ನಿಯರ್: ಡಾ: ಪಾಟೀಲ್ ಆಸ್ಪತ್ರೆ

ವೈವಿಧ್ಯಮಯ ಊಟದ ಅರಮನೆ
 
ಇಂದು ನಮ್ಮ ಊಟದ ವಿಶೇಷತೆಗಳು:
1.    ಕುಚಲಕ್ಕಿ ಗಂಜಿ ನೀರಿನ ಆರೋಗ್ಯವರ್ದಕ ಸೂಪ್
2.    ನಾವೆ ಸಿದ್ದಪಡಿಸಿದ ರುಚಿಕರ ಉಪ್ಪಿನಕಾಯಿ
3.    ಹೀರೆಕಾಯಿ, ಕ್ಯಾಪ್ಸಿಕಂ ಪಲ್ಯ
4.    ಸ್ಮಾರ್ಟ್ ರೆಡ್ ಕೂರ್ಮ
5.    ಚಪಾತಿ
6.    ಅನ್ನ
7.    ಸಾಂಬರ್
ಇಂದು ನಮ್ಮಲ್ಲಿ ಲಭ್ಯವಿರುವ ಉಪಹಾರ:
1.    ಇಡ್ಲಿ
2.    ದಾಲ್ ಕಿಚಡಿ
3.    ಚಪಾತಿ
 
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂದೇಶ್.ಎಸ್.ಜೈನ್, ಪತ್ರಕರ್ತ, ಮೊ:9620595555,7349443043
 
ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.
 
ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.
 
ಊಟ ಮಾಡಿ ನೋಡಿ. ಊಟ ನಮ್ಮದು, ಸಂಭ್ರಮ ನಿಮ್ಮದು.
ನಮ್ಮ ರುಚಿಯೆ ನಿಮಗೆ ಹಬ್ಬ- ನಿಮ್ಮ ಖುಷಿಯೆ ನಮಗೆ ಹಬ್ಬ

ನಿಮ್ಮವ
ಸಂದೇಶ್.ಎಸ್.ಜೈನ್



 

ಜೈನ್ ಇಡ್ಲಿ ಕೆಫೆ ದಾಂಡೇಲಿ
ಇಂದು ಸಂಜೆಯಿಂದ ರಾತ್ರಿ 10.30 ಗಂಟೆಯವರೆಗೆ ಊಟದ ಹಬ್ಬ

ಜೈನ್ ಇಡ್ಲಿ ಕೆಫೆ ಪ್ರಸ್ತುತ ಪಡಿಸುತ್ತಿರುವ ಮೊದಲ ಬಾರಿಗೆ ಊಟದ ಹಬ್ಬ. ಇಂದು ಮಾತ್ರ
 
ಭರ್ಜರಿ ವೆರೈಟಿ ವೆರೈಟಿ ಊಟ ಕೇವಲ ರೂ:60/- ಮಾತ್ರ  ಇಂದು ಮಾತ್ರ
 
ಸ್ಥಳ: ಜೈನ್ ಇಡ್ಲಿ ಕೆಫೆ, ನಿಯರ್: ಡಾ: ಪಾಟೀಲ್ ಆಸ್ಪತ್ರೆ
ಸಮಯ: ಇಂದು ಸಂಜೆ 6.30 ರಿಂದ ರಾತ್ರಿ 10.30 ಗಂಟೆಯವರೆಗೆ ಮಾತ್ರ

ನೋಡಲು ಅರಮನೆ ಚೆಂದ
ಆದ್ರೆ ಊಟ ನಮ್ಮ ಜೈನ್ ಇಡ್ಲಿ ಕೆಫೆಯದ್ದೆ ಚೆಂದ

ವೈವಿಧ್ಯಮಯ ಊಟದ ಅರಮನೆ
 
ಇಂದು ನಮ್ಮ ಊಟದ ವಿಶೇಷತೆಗಳು:
1.    ಸೂಪ್
2.    ನಾವೆ ಸಿದ್ದಪಡಿಸಿದ ರುಚಿಕರ ಉಪ್ಪಿನಕಾಯಿ
3.    ಹೆಮ್ಮೆಯ ಚಟ್ನಿ
4.    ಬಿನ್ಸ್ ಪಲ್ಯ
5.    ಗಸಿ
6.    ಕೂರ್ಮ
7.    ಚಪಾತಿ
8.    ಪಾಯಸ
9.    ಅನ್ನ
10.    ಸಾಂಬರ್
11.    ರಸಂ
12.    ಮಜ್ಜಿಗೆ
13.    ಮಿರ್ಚಿ ಪ್ರೈ
 
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂದೇಶ್.ಎಸ್.ಜೈನ್, ಪತ್ರಕರ್ತ, ಮೊ:9620595555,7349443043
ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.
 
ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.
 
ಊಟ ಮಾಡಿ ನೋಡಿ. ಊಟ ನಮ್ಮದು, ಸಂಭ್ರಮ ನಿಮ್ಮದು.
 
ನಮ್ಮ ರುಚಿಯೆ ನಿಮಗೆ ಹಬ್ಬ- ನಿಮ್ಮ ಖುಷಿಯೆ ನಮಗೆ ಹಬ್ಬ

ನಿಮ್ಮವ
ಸಂದೇಶ್.ಎಸ್.ಜೈನ್




 

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...