ನಮ್ಮ ನಿಮ್ಮೆಲ್ಲರ ಪ್ರೀತಿಯ ಅನಿಲ್ ಎಸ್.ಕೆ ಇನ್ನು ನೆನಪು ಮಾತ್ರ
ಅಗಲಿದ ಅನಿಲ್ ರಿಗೆ ಭಾವಪೂರ್ಣ ಶೃದ್ದಾಂಜಲಿ
ಅಗಲಿದ ಅನಿಲ್ ರಿಗೆ ಭಾವಪೂರ್ಣ ಶೃದ್ದಾಂಜಲಿ
ಎಂಥ ಶಾಕಿಂಗ್ ನ್ಯೂಸ್. ನಂಬಲಾಗುತ್ತಿಲ್ಲ. ಆದರೂ ಘಟನೆ ನಡೆದೆ ಹೋಗಿದೆ. ನಮ್ಮ ನಿಮ್ಮೆಲ್ಲರ ಪ್ರೀತಿಯ ಸ್ನೇಹಿತರು, ದಾಂಡೇಲಿ ನಗರದ ಸುಪ್ರಸಿದ್ದ ಡ್ಯಾನ್ಸರ್, ಅನಿಲ್ ಎಸ್.ಕೆ ಡ್ಯಾನ್ಸ್ ಅಕಾಡೆಮಿಯ ಸಂಸ್ಥಾಪಕ ಪ್ರವರ್ತಕರು ಆಗಿರುವ ಅನಿಲ್. ಎಸ್.ಕೆ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಬರಸಿಡಿಲ ರೂಪದಲ್ಲಿ ಬಂದ ಈ ಸುದ್ದಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ದಾಂಡೇಲಿಯ ಅದೇಷ್ಟೊ ಮಕ್ಕಳನ್ನು ನೃತ್ಯಗಾರರನ್ನಾಗಿ ಮಾಡಿ ಜಿಲ್ಲೆ, ರಾಜ್ಯಮಟ್ಟದವರೆಗೆ ಗುರುತಿಸುವಂತಾಗಲೂ ಕಾರಣೀಕರ್ತನಾದ ಅನಿಲ್. ಎಸ್.ಕೆ ಮಕ್ಕಳೊಂದಿಗೆ ಮಕ್ಕಳಂತಿದ್ದು, ಮಕ್ಕಳನ್ನು ಬೆಳೆಸಿ, ಪ್ರೋತ್ಸಾಹಿಸಿದ ರೀತಿಯನ್ನು ವರ್ಣಿಸಲು ಅಸಾಧ್ಯ. ಒಬ್ಬ ಪರಿಪಕ್ವ, ಆರೋಗ್ಯವಂತ ನವಚೈತನ್ಯದ 40 ವರ್ಷದ ಯುವಕ ಇನ್ನು ನೆನಪು ಮಾತ್ರ ಅಂದರೆ ಇದೆಂಥ ದುರ್ದೈವ್ಯ.
ಓ, ಭಗವಂತ ಯಾಕೆ ಹಿಂಗೆ ಮಾಡ್ತಿಯಾ, ನೂರಾರು ಕನಸುಗಳನ್ನಿಟ್ಟು ಕಠಿಣ ಪರಿಶ್ರಮದ ಸಾಧನೆಯ ಹಾದಿಯಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದ್ದ ನಮ್ಮ ಅನಿಲ್ ನ ವೇಗವನ್ನು ನಿಲ್ಲಿಸಿ ಬಿಟ್ಟಿಯಲ್ಲ. ಇವತ್ತು ನಗರದ ಸಾಂಸ್ಕೃತಿಕ ಕ್ಷೇತ್ರ ಬಹುದೊಡ್ಡ ಆಸ್ತಿಯನ್ನು ಕಳೆದುಕೊಂಡು ಬಡವಾಗಿದೆ. ನಗರದ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಹೊರಟಿದ್ದ ಅನಿಲ್ ಅವರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುವೆ.
ಸಾವು ಬರ್ಬೇಕು, ಆದ್ರೆ ಇಷ್ಟು ಸಣ್ಣ ವಯಸ್ಸಿನಲ್ಲಿ ಅಲ್ಲವೆ ಅಲ್ಲ. ಜೀವನದ ಕಹಿಯನ್ನುಂಡು ಸಿಹಿಯನ್ನು ಉಣ್ಣಲಾರಂಭಿಸುವಾಗ್ಲೆ ಅನಿಲ್ ನಮ್ಮನ್ನೆಲ್ಲ ಬಿಟ್ಟು ಬರಬಾರದ ಲೋಕಕ್ಕೆ ಹೊರಟು ಹೋಗಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಆದರೇನು, ನಮ್ಮ ಮುಂದೆ ಓಡಾಡಿಕೊಂಡಿದ್ದ ಅನಿಲ್ ಅವರಿಗೆ ಓಂ ಶಾಂತಿ ಬಿಟ್ಟು ಬೇರೆ ಏನನ್ನು ಹೇಳಲಾಗದು.
ಓಂ ಶಾಂತಿ.
ಮರಳಿ ಜನ್ಮವೆತ್ತಿ ಬನ್ನಿ,
ದುಖ:ತೃಪ್ತ ಗೆಳೆಯ
ಸಂದೇಶ್.ಎಸ್.ಜೈನ್
ಬರಸಿಡಿಲ ರೂಪದಲ್ಲಿ ಬಂದ ಈ ಸುದ್ದಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ದಾಂಡೇಲಿಯ ಅದೇಷ್ಟೊ ಮಕ್ಕಳನ್ನು ನೃತ್ಯಗಾರರನ್ನಾಗಿ ಮಾಡಿ ಜಿಲ್ಲೆ, ರಾಜ್ಯಮಟ್ಟದವರೆಗೆ ಗುರುತಿಸುವಂತಾಗಲೂ ಕಾರಣೀಕರ್ತನಾದ ಅನಿಲ್. ಎಸ್.ಕೆ ಮಕ್ಕಳೊಂದಿಗೆ ಮಕ್ಕಳಂತಿದ್ದು, ಮಕ್ಕಳನ್ನು ಬೆಳೆಸಿ, ಪ್ರೋತ್ಸಾಹಿಸಿದ ರೀತಿಯನ್ನು ವರ್ಣಿಸಲು ಅಸಾಧ್ಯ. ಒಬ್ಬ ಪರಿಪಕ್ವ, ಆರೋಗ್ಯವಂತ ನವಚೈತನ್ಯದ 40 ವರ್ಷದ ಯುವಕ ಇನ್ನು ನೆನಪು ಮಾತ್ರ ಅಂದರೆ ಇದೆಂಥ ದುರ್ದೈವ್ಯ.
ಓ, ಭಗವಂತ ಯಾಕೆ ಹಿಂಗೆ ಮಾಡ್ತಿಯಾ, ನೂರಾರು ಕನಸುಗಳನ್ನಿಟ್ಟು ಕಠಿಣ ಪರಿಶ್ರಮದ ಸಾಧನೆಯ ಹಾದಿಯಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದ್ದ ನಮ್ಮ ಅನಿಲ್ ನ ವೇಗವನ್ನು ನಿಲ್ಲಿಸಿ ಬಿಟ್ಟಿಯಲ್ಲ. ಇವತ್ತು ನಗರದ ಸಾಂಸ್ಕೃತಿಕ ಕ್ಷೇತ್ರ ಬಹುದೊಡ್ಡ ಆಸ್ತಿಯನ್ನು ಕಳೆದುಕೊಂಡು ಬಡವಾಗಿದೆ. ನಗರದ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಹೊರಟಿದ್ದ ಅನಿಲ್ ಅವರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುವೆ.
ಸಾವು ಬರ್ಬೇಕು, ಆದ್ರೆ ಇಷ್ಟು ಸಣ್ಣ ವಯಸ್ಸಿನಲ್ಲಿ ಅಲ್ಲವೆ ಅಲ್ಲ. ಜೀವನದ ಕಹಿಯನ್ನುಂಡು ಸಿಹಿಯನ್ನು ಉಣ್ಣಲಾರಂಭಿಸುವಾಗ್ಲೆ ಅನಿಲ್ ನಮ್ಮನ್ನೆಲ್ಲ ಬಿಟ್ಟು ಬರಬಾರದ ಲೋಕಕ್ಕೆ ಹೊರಟು ಹೋಗಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಆದರೇನು, ನಮ್ಮ ಮುಂದೆ ಓಡಾಡಿಕೊಂಡಿದ್ದ ಅನಿಲ್ ಅವರಿಗೆ ಓಂ ಶಾಂತಿ ಬಿಟ್ಟು ಬೇರೆ ಏನನ್ನು ಹೇಳಲಾಗದು.
ಓಂ ಶಾಂತಿ.
ಮರಳಿ ಜನ್ಮವೆತ್ತಿ ಬನ್ನಿ,
ದುಖ:ತೃಪ್ತ ಗೆಳೆಯ
ಸಂದೇಶ್.ಎಸ್.ಜೈನ್

Very much shocking ... Unbelievable but had to believe..may the almighty give enough strength to overcome this untimely demise
ReplyDeleteVery much shocking ... Unbelievable but had to believe..may the almighty give enough strength to overcome this untimely demise
ReplyDelete