ಅಭಿಮಾನದ ಅಭಿನಂದನೆಗಳು
ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರಾಗಿ ನಮ್ಮಣ್ಣ ವಿಷ್ಣುಮೂರ್ತಿ ರಾವ್ ನೇಮಕ
ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರಾಗಿ ನಮ್ಮಣ್ಣ ವಿಷ್ಣುಮೂರ್ತಿ ರಾವ್ ನೇಮಕ
ಉತ್ತರಕನ್ನಡ ಜಿಲ್ಲೆಗೆ ಗೌರವ ವನ್ಯಜೀವಿ ಪರಿಪಾಲಕರಾಗಿ ನಗರದ ಪ್ರವಾಸೋದ್ಯಮಿ ಹಾಗೂ ಖ್ಯಾತ ಯಕ್ಷಗಾನ ಕಲಾವಿದರಾದ ವಿಷ್ಣುಮೂರ್ತಿ.ವಿ.ರಾವ್ ಅವರನ್ನು ನೇಮಕಗೊಳಿಸಲಾಗಿದೆ. ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ರ ಸೆಕ್ಷನ್ 4(1) (ಬಿಬಿ) ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸರ್ಕಾರದ ಅಧಿಸೂಚನೆ ಸಂಖ್ಯೆ: ಅಪಜೀ 28 ಎಫ್ ಡಬ್ಲೂ ಎಲ್ 2019, ದಿನಾಂಕ: 18.07.2019 ಆಯಾ ಜಿಲ್ಲೆಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಗೌರವ ವನ್ಯಜೀವಿ ಪರಿಪಾಲಕರನ್ನಾಗಿ ವಿಷ್ಣುಮೂರ್ತಿ.ವಿ.ರಾವ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ನಗರದ ಸಂತೋಷ್ ಹೊಟೆಲ್ ಹಾಗೂ ದಾಂಡೇಲಿ ಡ್ರಿಮ್ಸ್ ಹೋಂ ಸ್ಟೇ ಮಾಲಕರಾಗಿರುವ ವಿಷ್ಣುಮೂರ್ತಿ.ವಿ.ರಾವ್ ಅವರು ಯಕ್ಷಗಾನ ಭಾಗವತರಾಗಿ ಕಲಾ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ನಗರದ ಕಲಾಶ್ರೀ ಸಂಸ್ಥೆ, ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್, ರೋಟರಿ ಕ್ಲಬ್ ಹಾಗೂ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಪದಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ವಿಷ್ಣುಮೂರ್ತಿ.ವಿ.ರಾವ್ ಅವರು ಗೌರವ ವನ್ಯಜೀವಿ ಪರಿಪಾಲಕರಾಗಿರುವುದಕ್ಕೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಸದಾ ಶಾಂತಮೂರ್ತಿ ನಮ್ಮ ವಿಷ್ಣುಮೂರ್ತಿಯವರು. ನಿಮ್ಮ ಸರಳತೆ, ಪರೋಪಕಾರಿ ಗುಣಧರ್ಮಕ್ಕೆ ದೊರೆತ ಮಹತ್ವದ ಅವಕಾಶವಿದು. ವನ್ಯಜೀವಿಗಳು ಹಾಗೂ ಪರಿಸರದ ಬಗ್ಗೆ ಅಪಾರ ಗೌರವ ಮತ್ತು ಕಾಳಜಿಯನ್ನಿಟ್ಟುಕೊಂಡಿರುವ ನಿಮಗೆ ದೊರೆತ ಅವಕಾಶವು ಜಿಲ್ಲೆಯ ವನ್ಯಜೀವಿ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡುವಂತಾಗಲೆನ್ನುವ ಶುಭ ಪ್ರಾರ್ಥನೆಯೊಂದಿಗೆ, ಹಾರೈಕೆ.
ನಿಮ್ಮವ
ಸಂದೇಶ್.ಎಸ್.ಜೈನ್


No comments:
Post a Comment