Monday, May 20, 2019

ಛಲಬಿಡದೆ ಯಶಸ್ಸಿನ ಬೆನ್ನೇರಿದ ನನ್ನ ತಮ್ಮ ಗಂಗಾಧರ ತಳವಾರ
ಜನ್ಮದಿನದ ಸಂಭ್ರಮದಲ್ಲಿ ನನ್ನ ಮುದ್ದು ತಮ್ಮ
ಆತ ನನ್ನ ತಮ್ಮ ಎಂದು ಹೇಳಿಕೊಳ್ಳಲು ಅತೀವ ಆನಂದವಾಗುತ್ತಿದೆ. ನನಗ್ಯಾವತ್ತು ಅಣ್ಣನ ಸ್ಥಾನವನ್ನು ನೀಡಿ ಗೌರವಾದರಗಳಿಂದ ಆತ ನೋಡಿಕೊಂಡ ಬಗೆಯನ್ನು ಮಾತ್ರ ನನ್ನಿಂದ ವರ್ಣಿಸಲು ಅಸಾಧ್ಯ. ಅತ್ಯಂತ ಚುರುಕಿನ ವ್ಯಕ್ತಿತ್ವದ ಕ್ರಿಯಾಶೀಲ ಯುವಕ ನನ್ನ ಮನದೊಳಗಿನ ಪ್ರೀತಿಯ ತಮ್ಮನ ಬಗ್ಗೆ ಒಂದೆರಡು ಅಕ್ಷರಗಳ ಗುಂಪನ್ನು ಬಿಡಿಸಿಡಬೇಕೆಂದು ಗಡಿಬಿಡಿಯ ನಡುವೆ ಹಂಬಲಿಸಿ ಬಿಡಿಸಲು ಹೊರಟಿದ್ದೇನೆ.
ಆತ ಯಾರು? ಎಂಬ ನಿಮ್ಮ  ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಇನ್ನೊಬ್ಬರ ಕಷ್ಟಕ್ಕೆ ತನ್ನ ಇಷ್ಟವನ್ನು ಮರೆತು, ಸ್ವಾರ್ಥವನ್ನು ಬಿಟ್ಟು ಓಡೋಡಿ ಧಾವಿಸುವ ಚಿನಕುರುಳಿ ವ್ಯಕ್ತಿತ್ವದ ಈ ಯುವಕ ಬೇರೆ ಯಾರು ಅಲ್ಲ. ನಾನು ಹೆಮ್ಮೆ ಪಡುವ ಯಶಸ್ವಿ ಜೀವನ ಸಾಧಕ ಗಂಗಾಧರ ತಳವಾರ. ಅಂದ ಹಾಗೆ ಕೇಂದ್ರದ ರೈಲ್ವೆ ಇಲಾಖೆಯ ದಕ್ಷಿಣ ಭಾರತ ರೈಲ್ವೆ ವಲಯದಲ್ಲಿ ಪ್ರಾಮಾಣಿಕ ಸೇವೆಗೈಯುತ್ತಿರುವ ಗಾಂಧಿನಗರದ ಕಣ್ಮಣಿ ಈತ ಎಂಬುವುದನ್ನು ಹೇಳಲು ನಾನ್ಯಕೆ ಹಿಂಜರಿಯಲಿ ಅಲ್ವೆ.

 
ಅದೀರಲಿ. ನನ್ನೊಳವಿನ ಗಂಗ್ಯಾ ಅಂದ್ರೆ ಗಂಗಾಧರ ತಳವಾರನಿಗೆ ಇಂದು ಜನ್ಮದಿನದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಜನ್ಮದಿನದ ಸಂಭ್ರಮ ಸಡಗರದಲ್ಲಿರುವ ಗಂಗ್ಯಾ ನಿನಗೆ ಮನದಾಳದ ಹಾರ್ದಿಕ ಶುಭಾಶಯಗಳು. ಜೀವನದಲ್ಲಿ ಮೊದಲ ಬಾರಿಗೆ ತಂದೆಯಾಗಿ ಜನ್ಮದಿನವನ್ನು ಆಚರಿಸುವ ಭಾಗ್ಯವನ್ನು ಕಂಡ ಗಂಗಾಧರನಿಗೆ ಜೀವನದಲ್ಲಿ ಉನ್ನತಿಯನ್ನು ಪ್ರಾಪ್ತಿಸಲಿ ಎಂಬ ಆಶಯದೊಂದಿಗೆ ಮಗದೊಮ್ಮೆ ಶುಭ ಹಾರೈಕೆಗಳು.
 
ಅಲ್ಲಿ ಇಲ್ಲಿ ಎಂದು ಓಡಾಡುತ್ತಿದ್ದ ವೇಗದ ಯುವಕ ಗಂಗಾಧರ ಈತ ನಮ್ಮ ಗಾಂಧಿನಗರದ ಹಿರಿಯರು ಹಾಗೂ ವಾಲ್ಮೀಕಿ ಸಮಾಜದ ಪ್ರಮುಖರು ಆಗಿರುವ ಬೋರಪ್ಪ ತಳವಾರ ಅವರ ಮೂರು ಜನ ಮಕ್ಕಳಲ್ಲಿ ಒಬ್ಬ. ಮೊದಲನೆಯವರು ಅಣ್ಣ, ಆನಂತರ ಅಕ್ಕ, ಕೊನೆಯವನು ಈ ನಮ್ಮ ರಸಗುಲ್ಲ ಗಂಗ್ಯಾ ಎಂದು ಹೇಳಬೇಕೆಂದಿಲ್ಲ.
 
ದಾಂಡೇಲಿಯ ಆದರ್ಶ ಶಾಲೆ, ಪರಿಜ್ಞಾನಾಶ್ರಮ ಶಾಲೆ, ಬಂಗೂರನಗರ ಶಾಲೆಯಲ್ಲಿ ಪ್ರಾಥಮಿಕ, ಜೆವಿಡಿಯಲ್ಲಿ ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಪಡೆದು, ಆ ಬಳಿಕ ಅಲ್ಲಿ ಇಲ್ಲಿ ಎಂದು ಕಂಪ್ಯೂಟರ್ ಶಿಕ್ಷಣವನ್ನು ಪಡೆದುಕೊಂಡಿದ್ದ ಗಂಗಾಧರ ಕಲಿತ ವಿದ್ಯೆ ಹಾಳಾಗದಿರಲೆಂದು ಅವರಿವರ ಬಳಿ ಕಂಪ್ಯೂಟರ್ ಕೆಲಸ ಮಾಡಿಕೊಂಡು ಜೀವನವನ್ನು ಕಟ್ಟಿಕೊಂಡಿದ್ದ. ಇದರ ನಡುವೆಯೂ  ಬಿ.ಕಾಂ ಪದವಿಯನ್ನು ಉನ್ನತ ಅಂಕಗಳೊಂದಿಗೆ ಪಡೆದ ಧನ್ಯತೆ ನಮ್ಮ ಗಂಗ್ಯಾನಿಗಿದೆ. ಆನಂತರ ಸರಕಾರದ ವಿವಿಧ ಉದ್ಯೋಗಗಳಿಗೆ ಸಾಲು ಸಾಲು ಅರ್ಜಿ ಹಾಕುತ್ತಿದ್ದ ಗಂಗಾಧರನಿಗೆ ಕಳೆದ ಕೆಲ ವರ್ಷಗಳ ಹಿಂದೆ ಆತನ ಛಲಬಿಡದ ಪರಿಶ್ರಮದ ಫಲವಾಗಿ ದಕ್ಷಿಣ ಭಾರತ ರೈಲ್ವೆ ವಲಯದಲ್ಲಿ ಉದ್ಯೋಗ ಪ್ರಾಪ್ತಿಯಾಯಿತು.
 
ಈ ಉದ್ಯೋಗದಿಂದ ಬದುಕು ಬದಲಾಯಿತಾದರೂ, ಗಂಗ್ಯಾನ ಮನಸ್ಸು, ಗುಣ, ಪ್ರೀತಿ, ಆತ್ಮೀಯತೆ ಎಂದೂ ಬದಲಾಗಲಿಲ್ಲ ಎನ್ನುವುದು ಗಂಗಾಧರ ಜೀವನಯೋಗ್ಯತೆಗೆ ಹೆಮ್ಮೆಯಿಂದ ನೀಡಬಹುದಾದ ಬಹುದೊಡ್ಡ ಪಟ್ಟ ಎಂದು ಹೇಳಲು ಒಂದಿಂಚು ಸಂಕೋಚಪಡಲಾರೆ. ಹೃದಯವಂತಿಕೆ, ಗುಣವಂತಿಕೆಯಲ್ಲಿ ನನ್ನನ್ನು ಮೀರಿ ಬೆಳೆದ ಗಂಗಾಧರ ಜೀವನದಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡುವ ಸಮಯ ಸನಿಹದಲ್ಲಿದೆ ಎಂದು ಭಾವಿಸಿದವ ನಾನು. 
 
ತಾನಷ್ಟೆ ಬದುಕುವುದಲ್ಲ, ತನ್ನ ಜೊತೆ ಇನ್ನೊಬ್ಬರ ಬದುಕಿಗೂ ನೆರವಾಗಬೇಕೆಂಬ ಮಾನವೀಯ ಸಹೃದಯವನ್ನು ಹೊತ್ತ ಗಂಗಾಧರ ಅಪ್ಪ, ಅಮ್ಮನಿಗೆ ಮುದ್ದಿನ ಮಗನಾಗಿ, ಅಕ್ಕ ಮತ್ತು ಅಣ್ಣನಿಗೆ ಅಕ್ಕರೆಯ ತಮ್ಮನಾಗಿ, ಪ್ರೀತಿಸಿ, ಮುದ್ದಿಸಿ ವರಿಸಿದ ಮಡದಿಗೆ ಮುದ್ದಿನ ಸಂಗಾತಿಯಾಗಿ, ಪುಟ್ಟ ಕಂದನಿಗೆ ಹೆಮ್ಮೆಯ ತಂದೆಯಾಗಿ, ಸಹಸ್ರ್ರಾರು ಗೆಳೆಯರಿಗೆ ಮಿಡುವ ಜೀವವಾಗಿರುವ ಗಂಗಾಧರ ನೀನು ನನ್ನ ಮನದೊಳಗಿನ ಹೃದಯದ ತಮ್ಮ ಎಂದು ಹೇಳಲು ಅಭಿಮಾನದ ಜೊತೆಗೆ ಬಿಗುಮಾನವಿದೆ.
 
ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಧಾರ್ಮಿಕವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಗಂಗಾಧರನ ಪರಿಶ್ರಮದ ಜೀವನ ಜೈತ್ರಾ ಯಾತ್ರೆಗೆ ಸತ್ಪುರುಷ ದಾಂಡೇಲಪ್ಪನ ಅನುಗ್ರಹ ಸದಾ ಇರಲಿ. ಜೀವನದಲ್ಲಿ ಆರೋಗ್ಯ, ಸಮೃದ್ದಿ, ನೆಮ್ಮದಿ ನನ್ನ ಗಂಗಾಧರನ ಆಸ್ತಿಯಾಗಲೆಂದು ಹಾರೈಸುತ್ತೇನೆ.
 
ಶುಭವಾಗಲಿ, ಬಾಳು ಬೆಳಕಾಗಲಿ.

ನಿಮ್ಮವ
 
ಸಂದೇಶ್.ಎಸ್.ಜೈನ್

 

Friday, May 10, 2019

ಸಜ್ಜನ ಹಾಗೂ ವೆರಿ ಬ್ರಿಲಿಯಂಟ್ ಮ್ಯಾನ್ ಸಚ್ಚಿನ್ ಕಾಮತ್
ಜನ್ಮದಿನದ ಸಂಭ್ರಮದಲ್ಲಿ ನಮ್ಮೂರ ಸಾಧಕ
 
ಅವರದ್ದು ಶ್ರೀಮಂತ ಕುಟುಂಬ. ಸೊಕ್ಕಿಲ್ಲದ ಶಾಂತ ಸ್ವಭಾವದ ಜನರನ್ನೊಳಗೊಂಡ ಸಂಸಾರ. ಆ ಸಂಸಾರದ ನಡವಳಿಕೆ, ರೀತಿ ರಿವಾಜುಗಳೆ ಆ ಸಂಸಾರಕ್ಕೆ ಆನಂದಸಾಗರವಾಗಿದೆ. ವ್ಯಾಪಾರಸ್ಥರ ಕುಟುಂಬವಾದರೂ ಸಮಾಜದ ಬಗ್ಗೆ ವಿಶೇಷವಾದ ಕಾಳಜಿಯಿರುವ ಕುಟುಂಬವೆನ್ನಿ. ಇಂಥಹ ಕುಟುಂಬದಲ್ಲಿ ಜನ್ಮವೆತ್ತಿ ಬಂದ ಸಾಧನೆಯ ಸಾಧಕನಿಗೆ ಇಂದು ಜನ್ಮದಿನದ ಸಂಭ್ರಮ. ಈ ಸಂಭ್ರಮದಲ್ಲಿರುವ ಸಾಧಕ ಬೇರೆ ಯಾರು ಅಲ್ಲ. ದಾಂಡೇಲಿಯ ಮೆಚ್ಚಿನ ಮತ್ತು ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಚಾರ್ಟಡ್ ಅಕೌಂಟೆಂಟ್ ಸಚ್ಚಿನ್ ಕಾಮತ್ ಅವರು.

ಮೊದಲನೆಯದಾಗಿ ಜನ್ಮದಿನದ ಸಡಗರದಲ್ಲಿರುವ ಸಚ್ಚಿನ್ ಅವರಿಗೆ ಹಾರ್ದಿಕ ಶುಭಾಶಯಗಳು. ಪುಟ್ಟಿ ಪರ್ಬೋದ ಮೊಕ್ಯೆದಿಂಜಿ ಶುಭಾಶಯ. ಅಂದ ಹಾಗೆ ನಮ್ಮ ಸಚ್ಚಿನ್ ಕಾಮತ್ ಅವರು ದಾಂಡೇಲಿಯ ಸುಪ್ರಸಿದ್ದ ವರ್ತಕರಾಗಿರುವ ಹಳೆದಾಂಡೇಲಿಯ ವಿಷ್ಣು ಕಾಮತ್ ಹಾಗೂ ಭಾತೃತ್ವ ತುಂಬಿದ ಮಾತೃ ಹೃದಯದ ಶೀಲಾ ದಂಪತಿಗಳ ಮುದ್ದಿನ ಮಗ. ಸಚ್ಚಿನ ಅವರಿಗೆ ಅನಿತಾ ಎಂಬ ಅಕ್ಕ ಹಾಗೂ ನಿತಿನ್ ಎಂಬ ತಮ್ಮ ಅಕ್ಕರೆಯ ತಮ್ಮ ಇದ್ದಾರೆ.

ಪುಟ್ಟ ಬಾಲಕನಿರುವಾಗ್ಲೆ ತುಪ್ಪ, ಬೆಣ್ಣೆ ತಿಂದು ಗುಂಡಗೆ ಇದ್ದ ಸಚ್ಚಿನ್ ಅವರು ಅತ್ಯಂತ ಚುರುಕಿನ ಬಾಲಕನಾಗಿದ್ದದ್ದು ಸತ್ಯದ ಮಾತು ಕಣ್ರೀ. ನೋಡ್ಲಿಕ್ಕೂ ಸ್ವಲ್ಪ ಹೆಚ್ಚು ಸ್ಮಾರ್ಟ್ ಆಗಿದ್ದರಿಂದ ಪುಟ್ಟ ಬಾಲಕನನ್ನು ಎತ್ತಿ ಮುದ್ದಾಡಿಸುವವರೆ ಜಾಸ್ತಿಯಾಗಿದ್ದರು.

ನಮ್ಮ ಸಚ್ಚಿನ್ ಅವರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಪಡೆದರು. ಅತೀ ಚುರುಕಿನ ಹಾಗೂ ಬುದ್ದಿವಂತ ಬಾಲಕರಾಗಿದ್ದ ಸಚ್ಚಿನ್ ಅವರು ತನ್ನ ಆರಂಭದ ಶಿಕ್ಷಣದಿಂದ ಕೊನೆಯವರೆಗೂ ತರಗತಿಯಲ್ಲಿ ಪ್ರಥಮ ಸ್ಥಾನವನ್ನು ಭದ್ರಪಡಿಸಿಕೊಂಡು ಸಾಧನೆಗೈದಿದ್ದಾರೆ. ಬಂಗೂರನಗರ ಪಿಯು ಕಾಲೇಜಿನಲ್ಲಿ ಪಿಯುಸಿ ಮತ್ತು ಬಂಗೂರನಗರ ಪದವಿ ಕಾಲೇಜಿನಲ್ಲಿ ಬಿ.ಕಾಂ ಶಿಕ್ಷಣವನ್ನು ಅತ್ಯುನ್ನತ ಅಂಕಗಳೊಂದಿಗೆ ಪಡೆದು ದಾಂಡೇಲಿಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಡಿಗ್ರಿ ಬಳಿಕ ಚೆನೈಗೆ ತೆರಳಿದ ಸಚ್ಚಿನ್ ಕಾಮತ್ ಅವರು ಅಲ್ಲಿ ಸತತ ಅಭ್ಯಾಸ, ಕಠಿಣ ಪರಿಶ್ರಮದಿಂದ ಸಿ.ಎ ಪರೀಕ್ಷೆ ಬರೆದು ಅಲ್ಲಿಯೂ ನಿರೀಕ್ಷೆಗೂ ಮೀರಿ ಸಾಧನೆಗೈದು ಚಿಗುರು ಮೀಸೆಯ ಸುಂದರ ತರುಣ ಚಾರ್ಟಡ್ ಅಕೌಂಟೆಂಟ್ ಪದವಿಯೊಂದಿಗೆ ದಾಂಡೇಲಿಗೆ ಮರಳಿದರು.

ಶಿಕ್ಷಣದ ಬಳಿಕ ತನ್ನ ಅತ್ಯುನ್ನತ ಚಾರ್ಟಡ್ ಪದವಿಯಡಿಯಲ್ಲಿ ವೃತ್ತಿಯನ್ನು ಆರಂಭಿಸಿದರು. ಇದೀಗ ರಾಷ್ಟ್ರದ ಪ್ರಮುಖ ಬ್ಯಾಂಕ್ ಗಳಾದ ಸಿಂಡಿಕೇಟ್, ಸ್ಟೇಟ್ ಬ್ಯಾಂಕ್ ಹೀಗೆ ವಿವಿಧ ಬ್ಯಾಂಕ್ ಗಳ ಚಾರ್ಟಡ್ ಅಕೌಂಟೆಂಟ್ ಆಗಿ ಗಮನಾರ್ಹ ಕಾರ್ಯವನ್ನು ಮಾಡಿ ಬ್ಯಾಂಕುಗಳ ಪುರೋ ಅಭಿವೃದ್ಧಿಗೆ ಹೆಗಲು ಕೊಡುತ್ತಿರುವುದು ಶ್ಲಾಘನೀಯ.

ರಾಜ್ಯಮಟ್ಟದಲ್ಲೆ ಅತ್ಯಂತ ಪರಿಣಿತ, ನಿಪುಣ ಚಾರ್ಟಡ್ ಅಕೌಂಟೆಂಟ್ ಆಗಿ ಗಮನ ಸೆಳೆದಿರುವ ಸಚ್ಚಿನ್ ಅವರು ವೃತ್ತಿ ಬದುಕಿನ ನಡುವೆ ಸಾಮಾಜಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ರಂಗಗಳಲ್ಲೂ ಅನುಪಮ ಸಾಧನೆಗೈದಿದ್ದಾರೆ. ಎಳೆಯ ಬಾಲನಿರುವಾಗ್ಲೆ ಅತ್ಯುತ್ತಮ ಸಿಂಗರ್ ಆಗಿ ಹಲವಾರು ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದ ಸಚ್ಚಿನ್ ಅವರು ಪ್ರಬುದ್ದ ಗಾಯಕರಾಗಿ ನಮ್ಮ ಮುಂದಿರುವುದು ನಮಗೆಲ್ಲಾ ಹೆಮ್ಮೆ ಮತ್ತು ಅಭಿಮಾನದ ಸಂಗತಿ.

ಶಟ್ಲ್ ಹಾಗೂ ಇನ್ನಿತರ ಕ್ರೀಡೆಗಳಲ್ಲಿಯೂ ಅನನ್ಯ ಸಾಧನೆಗೈಯ್ದಿರುವ ಸಚ್ಚಿನ್ ಅವರದ್ದು ವಿಶಿಷ್ಟ ವ್ಯಕ್ತಿತ್ವ. ಸಚ್ಚಿನ್ ಅವರನ್ನು ಹತ್ತಿರದಿಂದ ನೋಡಿದಾಗ ಅವರಿಗಿರುವ ಸಾಮಾಜಿಕ ಕಾಳಜಿ, ಬದ್ದತೆಯ ಅರಿವಾಗುತ್ತದೆ. ಅನೇಕ ಬಡವರಿಗೆ ಸಹಾಯ, ಸ್ಪಂದನೆ ಮಾಡುತ್ತಿರುವುದನ್ನು ಬಹಳ ಹತ್ತಿರದಿಂದ ನೋಡಿ ತಿಳಿದಿದ್ದೇನೆ.

ಅತ್ಯುನ್ನತ ಪದವಿಯ ಜೊತೆಗೆ ಗೌರವಯುತವಾದ ವೃತ್ತಿಯಲ್ಲಿರುವ ಸಚ್ಚಿನ್ ಅವರು ಎಂದು ಅಹಂನ್ನು ತೋರಿಸಿದವರಲ್ಲ. ಸರಳತೆಯೆ ಅವರ ಜೀವನ ಶೈಲಿ. ಎಲ್ಲರಲ್ಲಿಯೂ ನಗು ನಗುತಾ ಮಾತನಾಡುವ ಅವರದ್ದು ಸುಸಂಸ್ಕೃತ ನಡವಳಿಕೆಯೆ ಸರಿ. ಒಬ್ಬ ಚಾರ್ಟಡ್ ಅಕೌಂಟೆಂಟ್ ಇದ್ದರೂ ತನ್ನಪ್ಪನ ಅಂಗಡಿಯಲ್ಲಿ ದೀಪಾವಳಿ ಸಮಯದಲ್ಲಿ ಪಟಾಕಿ ಮಾರಾಟಕ್ಕೂ ಇಳಿಯುವ ಅವರ ದೊಡ್ಡ ಮನಸ್ಸು ಮತ್ತು ದುಡಿಮೆಯೆ ದೇವರೆನ್ನುವ ಅವರ ವಿಚಾರಧಾರೆಗೆ ನಾನಂತು ಪಕ್ಕ ಮನಸೋತಿದ್ದೇನೆ.
¸ÀZÀºÀ
ದಾಂಡೇಲಿ ಹಾಗೂ ರಾಜ್ಯ ಮಟ್ಟದಲ್ಲೂ ವಿವಿಧ ಸಂಘ-ಸಂಸ್ಥೆಗಳಲ್ಲಿ ತನ್ನನ್ನುತಾನು ಗುರುತಿಸಿಕೊಂಡಿರುವ ಸಚ್ಚಿನ್ ಅವರ ಜೀವನಸಾಧನೆಗೆ ಅವರಪ್ಪ ಹಾಗೂ ಅವರಮ್ಮನ ಆಶೀರ್ವಾದ, ಅಕ್ಕ ಹಾಗೂ ತಮ್ಮನ ಪ್ರೀತಿಯ ಪ್ರೋತ್ಸಾಹ, ಮುದ್ದಿನ ಮಡದಿ ದಿ ಬೆಸ್ಟ್ ಸಿಂಗರ್ ಸಹನಾ ಕಾಮತ್ ಅವರ ಮನದುಂಬಿದ ಸಹಕಾರ, ಮಾನಸಪುತ್ರ ರೋಹನ್ ಅವರ ಪ್ರೀತಿ, ಬಂಧುಗಳ, ಗೆಳೆಯರ ಪ್ರೀತಿ, ಪ್ರೋತ್ಸಾಹವೆ ಪ್ರಮುಖ ಕಾರಣ.

ಡೈನಮಿಕ್ ವ್ಯಕ್ತಿತ್ವದ, ಸೂಪರ್ ಡೂಪರ್ ಪರ್ಸನಾಲಿಟಿಯ ಸಚ್ಚಿನ್ ಅವರಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸಚ್ಚಿನ್ ಬಾವಾ ಐ ಲೈಕ್ ಯೂ.

ನಿಮ್ಮವ

ಸಂದೇಶ್.ಎಸ್.ಜೈನ್




 

Thursday, May 9, 2019

ವಿಷನ್ ಇಟ್ಟುಕೊಂಡ ನಮ್ಮ ರೋಶನಜಿತರಿಗೆ ಬರ್ತುಡೆ ಸಂಭ್ರಮ
ಜನಮುಖಿ ವ್ಯಕ್ತಿತ್ವದ ರೋಶನ್ ಬಾಯ್
ಅವರು ಒಂದು ಕಡೆ ಸುಮ್ನೆ ಕೂರುವ ಜಾಯಮಾನದವರಂತೂ ಅಲ್ಲವೆ ಅಲ್ಲ. ಅಲ್ಲಿ-ಇಲ್ಲಿ ಎಂದು ಸದಾ ಸುತ್ತಾಡುತ್ತಲೆ ಜನಸಾಮಾನ್ಯರ ಕಷ್ಟಸುಖಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ಯುವ ನಾಯಕನೆಂದರೆ ಅಚ್ಚರಿ ಪಡಬೇಕಿಲ್ಲ. ಒಟ್ಟಿನಲ್ಲಿ ಭರವಸೆಯ ಯುವ ನಾಯಕ ಅಂದ್ರುನೂ ತಪ್ಪಿಲ್ಲ. ರೋಷವಿದ್ದರೂ ವೈಯಕ್ತಿಕ ಸ್ವಾರ್ಥಕ್ಕಂತು ಅಲ್ಲವೆ ಅಲ್ಲ. ಅದು ಸಮಾಜದ ಉನ್ನತಿಗಾಗಿ ಎನ್ನುವುದು ದಿಟ. ಇಂತಹ ಸಮಾಜಮುಖಿ ಹಾಗೂ ಹಟಮಾರಿ ಧೋರಣೆಯ ಸರಳ ಮನಸ್ಸಿನ ಗಟ್ಟಿಗ ನನ್ನ ಇಂದಿನ ಮುಖಪುಟದ ಹಿರೋ. ಅಂದ ಹಾಗೆ ಅವರೇನು ಹೊರಗಿನವರಲ್ಲ. ಈ ಬಾರಿ ನಡೆದ ನಗರ ಸಭೆಸಯ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಯನ್ನು ಬುಡಮೇಲು ಮಾಡಿ ವಾರ್ಡ್ ನಂ: 28 ರಲ್ಲಿ ಗೆಲುವಿನ ಮಾಲೆಯನ್ನು ಧರಿಸಿಕೊಂಡ ಛಲದಂಕಮಲ್ಲ ನಮ್ಮ ರೋಶನಜಿತ್ ಅವರು.
 


ಇಂದು ರೋಶನಜಿತ್ ಅವರಿಗೆ ಜನ್ಮದಿನದ ಸಂಭ್ರಮ. ಪ್ರಥಮವಾಗಿ ಪ್ರೀತಿಯ ರೋಶನಜಿತ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನೀವೆಲ್ಲ ಅಂದುಕೊಂಡಿರುತ್ತೀರಾ, ಈ ಸಂದೇಶ್ ಜೈನ್ ಇಡ್ಲಿ ಕೆಫೆ ಆದ ಬಳಿಕ ಇಡ್ಲಿಯಲ್ಲೆ ಬಿದ್ದಿರಬೇಕುಂತಾ. ಅದು ತಪ್ಪಲ್ಲ ಬಿಡಿ. ಬಹುತೇಕ ಮಟ್ಟಿಗೆ ಅದು ಹೌದೆ. ಆದರೂ ಆಗೊಮ್ಮೆ-ಈಗೊಮ್ಮೆ ಮುಖಪಟದಲ್ಲಿ ನಾಲ್ಕಕ್ಷರ ಬರೆಯದಿದ್ದರೇ ಹೇಗೆ ಅಲ್ವೆ.
 
ಅದೀರಲಿ, ನೇರ ವಿಷ್ಯಕ್ಕೆ ಬರ್ತೇನೆ. ಪಾದರಸದಂತೆ ಚಲಿಸುವ ನಮ್ಮ ರೋಶನಜಿತ್ ಅವರು ಒಂದು ಕಾಲದ ಫೇಮಸ್ ಕಾಂಟ್ರಕ್ಟರ್ ದಿ: ಶಿವದಾಸನ್ ಹಾಗೂ ಓಮಣಾ ಶಿವದಾಸನ್ ದಂಪತಿಗಳ ಹಿರಿಮಗ. ರೋಶನ್ ಅವರಿಗೆ ಇಬ್ಬರು ಸಹೋದರರು. ಒಬ್ಬ ತಮ್ಮ ರಂಜಿತ್. ಅವರು ಅಪಘಾತಕ್ಕೊಳಗಾಗಿ ಮೃತಪಟ್ಟು ಹಲವು ವರ್ಷಗಳು ಸಂದಿವೆ. ಕೊನೆಯ ತಮ್ಮ ರಾಬಿನ್. ಒಟ್ಟಿನಲ್ಲಿ ನೆಮ್ಮದಿ, ಸಂತೃಪ್ತಿಯ ಕುಟುಂಬದಲ್ಲಿ ಜನ್ಮವೆತ್ತವರು ಈ ನಮ್ಮ ರೋಶನ್ ಅವರು.
 
ಎಳೆಯ ಬಾಲಕಿನಿರುವಾಗ್ಲೆ ಹುಡುಗಾಟದ ಮೂಲಕ ಎಲ್ಲರಿಗೂ ಪರಿಚಿತರಾಗಿದ್ದ ರೋಶನ್ ಅವರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಪಡೆದು, ಮುಂದೆ ಬಂಗೂರನಗರ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದರು. ಅದಾದ ಬಳಿಕ ಕಂಪ್ಯೂಟರ್ ಡಿಪ್ಲೋಮಾ ಕೋರ್ಸನ್ನು ಮಾಡಿದರು.
 
ಶಿಕ್ಷಣ ಮುಗಿದ ಬಳಿಕ ಅಲ್ಲಿ ಇಲ್ಲಿ ಎಂದು ಉದ್ಯೋಗಕ್ಕಾಗಿ ಹಪಹಪಿಸದೇ, ಸ್ವತಂತ್ರವಾಗಿ ಸ್ವಾವಲಂಬಿ ಜೀವನ ನಡೆಸಬೇಕೆಂದು ಉದ್ದೇಶಿಸಿ ಬ್ಯುಜಿನೆಸ್ ಮಾಡಲಾರಂಭಿಸಿದರು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಮಾಡಿದ ವ್ಯವಹಾರ ಕಾಲಕ್ರಮೇಣ ಅವರನ್ನು ಕೈ ನೀಡಿ ಮುನ್ನಡೆಸಿತು.
 
ವ್ಯವಹಾರದ ಜೊತೆ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ  ರೋಶನ್ ಅವರು ಅವರಿರುವ ಎಲ್ಲೆ ಜಾಗದಲ್ಲಿ ಅಪಘಾತಗಳಂತಹ ದುರ್ಘಟನೆ ನಡೆದರೇ ಹಿಂದು-ಮುಂದು ನೋಡದೆ ಗಾಯಳುಗಳನ್ನು ಆಸ್ಪತ್ರೆಗೆ ಸೇರಿಸಿ ಅವರ ಯೋಗಕ್ಷೇಮಕ್ಕಾಗಿ ಒದ್ದಾಡುವ ಅವರ ಮಾನವೀಯ ಮನಸ್ಸಿಗೆ ಇಲ್ಲಿಂದಲೆ ಶರಣೆನ್ನುವೆ.
 
ಎಲ್ಲಿ ಯಾರೇ ಸಂಕಷ್ಟದಲ್ಲಿ, ಅಪತ್ತಿನಲ್ಲಿ ಒಳಗಾಗಿರುವುದು ಗೊತ್ತಾದರೇ ಸಾಕು, ಅಲ್ಲಿ ರೋಶನ್ ಅವರ ಹಾಜರಾತಿ ನೂರಕ್ಕೆ ನೂರು ಇರಲೆಬೇಕು. ಒಟ್ಟಿನಲ್ಲಿ ತಾನು ಅಂದುಕೊಂಡಿರುವಂತೆ ನಡೆಯುವ ಧೀರ ಎಂದರೆ ಅತಿಶಯೋಕ್ತಿ ಎನಿಸದು. ಸಂಕಷ್ಟದ ಸಂದರ್ಭದಲ್ಲಿ ರಾತ್ರಿ ಎರಡು ಗಂಟೆಗೂ ಕರೆದರೂ ಓಡೋಡಿ ಬರುವ ನಮ್ಮ ರೋಶನ್ ಅವರು ನಮ್ಮವರು ಎಂದು ಹೇಳಲು ಅಭಿಮಾನವಿದೆ, ಬಿಗುಮಾನವಿದೆ.
 



ಸಾಮಾಜಿಕ ಕೈಂಕರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ರೋಶನ್ ಅವರು ಈ ಬಾರಿ ನಡೆದ ನಗರ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವಿನ ಸರಮಾಲೆಯನ್ನು ಧಕ್ಕಿಸಿಕೊಂಡು ವಾರ್ಡ್ ನಂ:28 ರ ಮನೆಮಗನಂತೆ ಹೆಮ್ಮೆಯಿಂದ ಕೆಲಸ ಮಾಡುತ್ತಿರುವ ರೋಶನ್ ಅವರ ಕ್ರಿಯಾಶೀಲತೆಗೆ ಹ್ಯಾಟ್ಸ್ ಆಫ್ ಹೇಳಲೆಬೇಕು. ಅವರ ವಾರ್ಡಿನ ಪೌರಕಾರ್ಮಿಕರಿಗಂತೂ ದೇವರ ಪ್ರತಿರೂಪದಂತಿರುವ ರೋಶನ್ ಅವರ ಈ ಗುಣಧರ್ಮವೆ ಅವರ ವೈಯಕ್ತಿಕ ವರ್ಚಸ್ಸು ಬೆಳೆಯಲು ಪ್ರೇರಣಾದಾಯಿಯಾಗಿದೆ.
 
ಇಂಥಹ ಸಮಾಜಮುಖಿ, ಜನಮುಖಿ ವ್ಯಕ್ತಿತ್ವದ ರೋಶನ್ ಅವರಿಗೆ ಹೆತ್ತವರ ಆಶೀರ್ವಾದ, ಸಹೋದರ ರಾಬಿನ್ ಅವರ ಅಕ್ಕರೆಯ ಪ್ರೀತಿ ಹಾಗೂ ಪ್ರೀತಿಸಿ, ಮುದ್ದಿಸಿ ಕೈ ಹಿಡಿದ ಮಡದಿ ಅಕ್ಷತಾ ಅವರ ಸಹಕಾರ, ಪ್ರೋತ್ಸಾಹ, ಮಕ್ಕಳಾದ ಆರೋಹನ್ ಮತ್ತು ದ್ರುವ್ ಅವರುಗಳ ಮನದುಂಬಿದ ಪ್ರೀತಿ, ಗೆಳೆಯರ, ಬಂಧುಗಳ ಸಹಕಾರವೆ ಪ್ರಮುಖ ಆಸ್ತಿಯಾಗಿದೆ.
ಜೀವನದಲ್ಲಿ ಹಲವಾರು ಕನಸುಗಳನ್ನು ಇಟ್ಟು ಶರವೇಗದಲ್ಲಿ ಹೆಜ್ಜೆಯಿಟ್ಟಿರುವ ರೋಶನ್ ಅವರಿಗೆ ಮಗದೊಮ್ಮೆ ಜನ್ಮದಿನದ ಶುಭಾಶಯಗಳು.
 
ನಿಮ್ಮವ
 
ಸಂದೇಶ್.ಎಸ್.ಜೈನ್

 

Monday, May 6, 2019

ಜೀವದ ಗೆಳೆಯನ ಮಗನ ಸಾಧನೆಗೆ ಅಭಿಮಾನದ ಅಭಿನಂದನೆಗಳು
ಎಸ್.ಎಸ್.ಎಲ್.ಸಿಯಲ್ಲಿ ಸಾಧನೆಗೈದ ಲೊಕೇಶ.ಡಿ.ಹಳದನಕರ
ದಾಂಡೇಲಿ: ಈ ಬಾರಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಲೊಕೇಶ ದಿನೇಶ ಹಳದನಕರ ಈತನೂ 583 ಅಂಕಗಳೊಂದಿಗೆ ಶೇ:93.3 ಫಲಿತಾಂಶವನ್ನು ಪಡೆದು ಗಣನೀಯ ಸಾಧನೆಗೈದು ಗಮನ ಸೆಳೆದಿದ್ದಾನೆ.

ಈತನೂ ನನ್ನ ಜೀವದ ಗೆಳೆಯ ಹಾಗೂ ನಗರದ ಯುವ ಸಮಾಜ ಸೇವಕ ಹಾಗೂ ಉದ್ಯಮಿ ದಿನೇಶ ಹಳದನಕರ ಅವರ ಸುಪುತ್ರನಾಗಿದ್ದು, ಈತನ ಸಾಧನೆಗೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
 
ಶಿಸ್ತು ಬದ್ದ ಜೀವನ ನಡವಳಿಕೆ, ಸುಸಂಸ್ಕೃತ ಜೀವನ ಶೈಲಿ, ಸದ್ಗುಣ ಸಂಪನ್ನನಾದ ಲೋಕೇಶನ ಸಾಧನೆಗೆ ಮಗದೊಮ್ಮೆ ಮನದುಂಬಿದ ಶುಭಾಶಯಗಳು. ಉಜ್ವಲ ಭವಿಷ್ಯಕ್ಕೆ ಭಗವಂತನ ಕೃಪೆಯಿರಲಿ ಎಂಬ ಶುಭ ಪ್ರಾರ್ಥನೆಯೊಂದಿಗೆ,

ನಿಮ್ಮವ


ಸಂದೇಶ್.ಎಸ್.ಜೈನ್

 


ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...