Monday, June 24, 2019

ಹಿರಿತನದಲ್ಲೂ ಶ್ರಮಯೋಗಿಯಾಗಿರುವ ಶ್ರೀ.ಹನೀಫ್ ಸಾಬ ಸೈಯದ ಅವರು ನಮಗೆ ಸ್ಪೂರ್ತಿ
ಆತ್ಮೀಯರೇ, ಏನೊ ಮನಸ್ಸಿಗೆ ಅನ್ನಿಸ್ತು. ಅನಿಸಿದ್ದನ್ನು ಮಾಡೆ ಬಿಡೋಣವೆಂದು ಇಂದು ಅಂದರೆ ದಿನಾಂಕ: 24.06.2019 ರಂದು ದಾಂಡೇಲಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ನಮ್ಮ ಜೈನ್ ಇಡ್ಲಿ ಕೆಫೆ ಬಳಿ, ಕಳೆದ 30 ವರ್ಷಗಳಿಂದ ಆಟೋ ಚಲಾಯಿಸುವುದರ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡ ಹಿರಿಯ ಆಟೋ ಚಾಲಕರಾದ ಶ್ರೀ ಹನೀಫ್ ಸಾಬ ಸೈಯದವರನ್ನು ನಿಮ್ಮ ಜೈನ್ ಇಡ್ಲಿ ಕೆಫೆ ಪರವಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
 
ಹಿರಿತನದಲ್ಲೂ ಶ್ರಮಯೋಗಿಯಾಗಿರುವ ಶ್ರೀ.ಹನೀಫ್ ಸಾಬ ಸೈಯದ ಅವರು ನಮಗೆ ಸ್ಪೂರ್ತಿ. ಅವರ ಬೆವರ ಹನಿಯ ಶ್ರಮ ಸಾಧನೆಗೆ ನಮ್ಮದೊಂದು ಚಿಕ್ಕ ಮತ್ತು ಚೊಕ್ಕ ಗೌರವ.
 
ಕಡೆಯ ಮಾತು, ಮಾನವೀಯ ಸ್ಪಂದನೆಯಿರುವ ಸಹೃದಯಿ ಗುಣವುಳ್ಳ ನಮ್ಮ ದಾಂಡೇಲಿಯ ಆಟೋ ಚಾಲಕರನ್ನು ಗೌರವಿಸೋಣ, ಪ್ರೀತಿಸೋಣ ಎಂಬ ವಿನಮ್ರ ಪ್ರಾರ್ಥನೆಯೊಂದಿಗೆ,
 
ನಿಮ್ಮವ
 
ಸಂದೇಶ್.ಎಸ್.ಜೈನ್

 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...