Thursday, June 6, 2019

ಸ್ನೇಹಶೀಲ ವ್ಯಕ್ತಿತ್ವದ ಗುಣವಂತ ವೈದ್ಯ ಡಾ: ಗೌಸ ಸೈಯದ್
ಜನ್ಮದಿನದ ಸಂಭ್ರಮದಲ್ಲಿ ಮೆಚ್ಚಿನ ಮತ್ತು ನೆಚ್ಚಿನ ವೈದ್ಯ ಡಾ: ಸೈಯದ್ 
 



ಬಹಳ ಒತ್ತಡದಲ್ಲಿದ್ದೇನೆ. ಈ ಒತ್ತಡದ ನಡುವೆಯೂ ನನ್ನವರ ಬಗ್ಗೆ ಎರಡಕ್ಷರ ಬರೆಯದಿದ್ದರೇ ಖಂಡಿತಾ ನಾನು ನನ್ನವರ ಪ್ರೀತಿಯನ್ನು ಮರೆತೆನೆಂದೆ ಅರ್ಥ. ಆದರೂ ಗಡಿಬಿಡಿಯ ನಡುವೆಯೂ ನನ್ನ ಹೃದಯದ ಸಹೋದರರೊಬ್ಬರ ಬಗ್ಗೆ ಕೆಲ ಅಕ್ಷರಗಳನ್ನು ಪದಗಳ ರೂಪದಲ್ಲಿ ಬರೆಯಲು ಹೊರಟಿದ್ದೇನೆ.
 
ಅವರೊಬ್ಬರು ಸರಳ ಸಜ್ಜನಿಕೆಯ ಮತ್ತು ಅಷ್ಟೇ ಸ್ನೇಹಪರತೆಯ ಗುಣವಂತಿಗೆಯ ವೈದ್ಯ. ಅವರು ಬೇರೆ ಯಾರು ಅಲ್ಲರಿ, ನಮ್ಮ ದಾಂಡೇಲಿಯ ಇ.ಎಸ್.ಐ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯಕ್ಕೆ ಸೇರಿ ಬಹಳಷ್ಟು ವರ್ಷಗಳ ಕಾಲ ವೈದ್ಯ ಸೇವೆಯನ್ನು ನೀಡಿ ಕಳೆದ ವರ್ಷ ಇ.ಎಸ್.ಐ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ಪದೋನ್ನತಿಗೊಂಡಿರುವ ಹೃದಯವಂತ ವೈದ್ಯ ಡಾ: ಗೌಸ್ ಸೈಯದ್.
 
ಅಂದ ಹಾಗೆ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಪರೋಪಕಾರಿ ವೈದ್ಯರಾದ ಡಾ: ಗೌಸ್ ಸೈಯದ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 
 
ಬಿಜಾಪುರದ ಆಲ್ ಅಮೀಮ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿಯನ್ನು ಪಡೆದ ಜಂಟ್ಲಮ್ಯಾನ್ ಡಾಕ್ಷರ್ ನಮ್ಮ ಸೈಯದ್ ಸರ್ ಅವರು. ಎಳೆಯ ಬಾಲಕನಿರುವಾಗ್ಲೆ ಮಾತು ಕಡಿಮೆ, ಯೋಚನೆ, ಹೊಸತನಗಳ ಅವಿಷ್ಕಾರದಲ್ಲಿ ಮುಳುಗಿ ಬೀಳುತ್ತಿದ್ದ ಸೈಯದ್ ಸರ್ ಅವರ ನಡವಳಿಕೆಯನ್ನು ನೋಡಿದ್ದ ಅವರ ತಂದೆ ಮಗ ಕಲಿಕೆಯಲ್ಲಿ ಎಷ್ಟೇ ಬ್ರಿಲಿಯಂಟ್ ಇದ್ದರೂ ಮಾತು ಕಡಿಮೆಯಿರುವ ಈತ ಜೀವನದಲ್ಲಿ ಮುಂದೆ ಬರುವುದು ಹೇಗೆ ಎಂಬ ಚಿಂತೆ. ಆದರೆ ಸೈಯದ ಅವರ ತಾಯಿಗೆ ಮಾತ್ರ ಮಗ ಮುಂದೆ ದೊಡ್ಡ ಪದವಿಗೆ ಹೋಗುತ್ತಾನೆಂಬ ಅಚಲವಾದ ನಂಬಿಕೆ. ವಿದ್ಯಾರ್ಥಿ ದೆಸೆಯಲ್ಲಿರುವಾಗ್ಲೆ ಅತ್ಯುತ್ತಮ ಕ್ರೀಡಾಪಟುವಾಗಿ ಗಮನ ಸೆಳೆದಿದ್ದ ಡಾ: ಸೈಯದ್ ಅವರು ನೋಡ್ಲಿಕ್ಕೂ ಸ್ವಲ್ಪ ಹೆಚ್ಚು ಸ್ಮಾರ್ಟ್ ಇದ್ದರೂ ಎನ್ನುವುದನ್ನು ವಿವರಿಸುವ ಅಗತ್ಯವಿಲ್ಲ.
 
ಹೀಗೆ ಬೆಳೆದ ಸೈಯದ್ ಅವರು ಅವರ ತಾಯಿಯ ಅಚಲವಾದ ನಂಬಿಕೆಯನ್ನು ಉಳಿಸುವುದರ ಮೂಲಕ ಅವರ ಕುಟುಂಬದ ಹಿರಿಮೆ ಗರಿಮೆಯನ್ನು ಹೆಚ್ಚಿಸುವಲ್ಲಿ ಬಹುಮೂಲ್ಯ ಪಾತ್ರ ವಹಿಸಿದ್ದಾರೆ. ಸೈಕಲನ್ನೇರಿ ಶಾಲಾ-ಕಾಲೇಜು ಮುಗಿಸಿದ  ಸೈಯದ ಅವರೇನು ಶ್ರೀಮಂತಿಕೆಯ ಕುಟುಂಬದಿಂದ ಬಂದವರಲ್ಲ. ಶ್ರಮದ ಸಾಧನೆಯಿಂದ ಬೆವರ ಹನಿಯಿಂದ ಜೀವನದಲ್ಲಿ ಉನ್ನತಿಯ ಸ್ಥಾನಕ್ಕೇರಿದವರು.
 
ಅಂದ ಹಾಗೆ ನನಗನಿಸಿದ ಪ್ರಕಾರ ಡಾ: ಸೈಯದ್ ಅವರು ಈಗಲೂ ಅವರದ್ದು ಮಾತು ಕಡಿಮೆಯೆ. ಆದರೆ ಅವರ ಸುಂದರ ಮನಸ್ಸಿನ, ಸಂಸ್ಕಾರಯುತವಾದ ನಗು ಮಾತ್ರ ಅವರ ವ್ಯಕ್ತಿತ್ವಕ್ಕೆ ಶೋಭೆಯನ್ನು ತಂದುಕೊಟ್ಟಿದೆ ಎಂದರೆ ಅತಿಶಯೋಕ್ತಿ ಎನಿಸದು.
 
ಇ.ಎಸ್.ಐ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿದ್ದರೂ, ಎಲ್ಲಿಯೂ ಅಹಂನ್ನು ಪ್ರದರ್ಶಿಸದೇ ಸಾಮಾನ್ಯರಲ್ಲಿ, ಸಾಮಾನ್ಯರಾಗಿರುವ ಡಾ: ಸೈಯದ ಅವರ ಗುಣ ವಿಶೇಷತೆಗೆ ಬಿಗ್ ಸೆಲ್ಯೂಟ್ ಹೇಳಲೆಬೇಕು.
ಒಬ್ಬ ಸೃಜನಶೀಲ ವೈದ್ಯರೊಬ್ಬರನ್ನು ದಾಂಡೇಲಿಗೆ ಬರಮಾಡಿಸಿ, ದಾಂಡೇಲಿಯವರನ್ನಾಗಿಸಿಕೊಂಡ ದಾಂಡೇಲಪ್ಪನಿಗೆ ನೂರೆಂಟು ನಮನಗಳನ್ನು ಸಲ್ಲಿಸಲೆಬೇಕು.
 
ಡಾಕ್ಟ್ರೇ, ನಾನು ನನಗನಿಸಿದ್ದನ್ನು ಬರೆದಿದ್ದೇನೆ. ಏನಾದರೂ ಹೆಚ್ಚು ಕಡಿಮೆ ಇದ್ದರೇ ಕ್ಷಮೆಯಿರಲಿ. ನಿಮಗೆ ಮೊಬೈಲ್ ಕರೆ ಮಾಡಿ ಕೇಳುವಷ್ಟು ಸಮಯ ನನ್ನಲ್ಲಿರಲಿಲ್ಲ. ಹಾಗಾಂತ ಹೇಳಿ ನಾನಂತೂ ದೊಡ್ಡ ಮನುಷ್ಯನಲ್ಲ. ನಾಳೆ ಗ್ರಾಹಕರಿಗೆ ಇಡ್ಲಿ ಕೊಡಬೇಕೆಂದ್ರೆ ನಾನಿನ್ನೂ ಮನೆಗೆ ಹೋಗಿ ಮಸಾಲೆ ರೆಡಿ ಮಾಡಬೇಕು. ಹಾಗಾಗಿ ಮುಂದಿನ ವರ್ಷ ನಿಮ್ಮ ಹುಟ್ಟುಹಬ್ಬವನ್ನು ನಮ್ಮ ಜೈನ್ ಇಡ್ಲಿ ಕೆಫೆಯಲ್ಲಿ ಮಾಡೋಣ.
 
ಮತೋಮ್ಮೆ, ಮಗದೊಮ್ಮೆ ನಿಮಗೆ ಶುಭವಾಗಲಿ ಎಂಬ ಶುಭ ಪ್ರಾರ್ಥನೆಯೊಂದಿಗೆ,

ನಿಮ್ಮವ

ಸಂದೇಶ್.ಎಸ್.ಜೈನ್
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...