ಹರಸಿ-ಆಶೀರ್ವದಿಸಿದ ತಮಗೆಲ್ಲರಿಗೂ ಗೌರವದ ಕೃತಜ್ಞತೆಗಳು
ನಿನ್ನೆ ನನ್ನ ಹುಟ್ಟುಹಬ್ಬದ ದಿನ. ನನ್ನ ಹುಟ್ಟುಹಬ್ಬಕ್ಕೆ ಸಾಕಷ್ಟು ಜನ ಹರಸಿ, ಆಶೀರ್ವದಿಸಿದ್ದಾರೆ. ನನ್ನನ್ನು ಹೆತ್ತು ಹೊತ್ತು ಸಾಕಿ, ಸಲಹಿದ ಅಪ್ಪ, ಅಮ್ಮನ ಪಾದಗಳಿಗೆ ನಮಿಸುವೆ. ಕುಟುಂಬದ ಹಿರಿಯರ ಆಶೀರ್ವಾದ, ಕುಟುಂಬದವರೆಲ್ಲರ ಪ್ರೀತಿಗೆ ಋಣಿಯಾಗಿದ್ದೇನೆ.
ಸರಿ ಸುಮಾರು 425 ಕಿ.ಮೀ ದೂರದಿಂದ ಬಂದ ನನ್ನನ್ನು ದಾಂಡೇಲಿಗನನ್ನಾಗಿಸಿ, ಸಲಹುತ್ತಿರುವ ದಾಂಡೇಲಿ ಜನತೆಗೆ ಕೋಟಿ ಕೋಟಿ ಪ್ರಣಾಮಗಳು. ನನ್ನ ಹುಟ್ಟುಹಬ್ಬಕ್ಕೆ ಹಿರಿಯರು-ಕಿರಿಯವರೆನ್ನದೇ ಶುಭ ಹಾರೈಸಿದ್ದೀರಿ, ಪ್ರೋತ್ಸಾಹಿಸಿದ್ದೀರಿ, ಆಶೀರ್ವದಿಸಿದ್ದೀರಿ. ನಿಮ್ಮ ಈ ಅಮೂಲ್ಯ ಪ್ರೀತಿಗೆ ಶರಣಾಗಿದ್ದೇನೆ.
ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹವೆ ನನಗೆ ಅದಮ್ಯ ಶಕ್ತಿ. ತಪ್ಪಿದಾಗ ತಿದ್ದಿದ್ದೀರಿ, ಒಳ್ಳೆಯ ಕಾರ್ಯ ಮಾಡಿದಾಗ ಅಪ್ಪಿಕೊಂಡಿದ್ದೀರಿ. ಒಟ್ಟಿನಲ್ಲಿ ನಿಮ್ಮೆಲ್ಲರ ಮನೆ ಹುಡುಗನಾಗಿ ಬೆಳೆಸಿದ್ದೀರಿ. ಇದು ದಾಂಡೇಲಪ್ಪನ ಹಾಗೂ ದಾಂಡೇಲಿಯ ಮಣ್ಣಿನ ಮಹಿಮೆ.
ಶುಭ ಕೋರಿದವರೆಲ್ಲರಿಗೂ ವೈಯಕ್ತಿಕವಾಗಿ ಕೃತಜ್ಞತೆ ಹೇಳಲಾಗಿಲ್ಲ. ಕ್ಷಮಿಸಿ. ನಿಮ್ಮೆಲ್ಲರ ಪ್ರೀತಿ, ವಾತ್ಸಲ್ಯಕ್ಕೆ ಮಗದೊಮ್ಮೆ ಮನದಾಳದ ವಂದನೆಗಳು.
ನನ್ನನ್ನು ಸಹಿಸಿ, ಸಲಹುತ್ತಿರುವ ಪತ್ನಿ ಪದ್ಮಶ್ರೀ ಹಾಗೂ ನನ್ನ ಆಸ್ತಿ ಮಗ ಸುಯೋಗನಿಗೆ ಕೃತಜ್ಞತೆಗಳು.
ಎಂದೆಂದೂ ನಿಮ್ಮವನೇ,
ಸಂದೇಶ್.ಎಸ್.ಜೈನ್
No comments:
Post a Comment