ಸಾಧನೆಯ ಛಲಗಾರ್ತಿ ನಾಗರೇಖಾ ಗಾಂವಕರಗೆ ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿ
ಕನ್ನಡ ಸಾರಸ್ವತ ಲೋಕಕ್ಕೆ ಹಲವಾರು ಕೃತಿಗಳನ್ನು ಸಮರ್ಪಿಸುವುದರ ಮೂಲಕ ಕನ್ನಡಮ್ಮನ ಸೇವೆಯನ್ನು ಅತ್ಯಂತ ಶೃದ್ದಾಭಕ್ತಿಯಿಂದ ನಿರ್ವಹಿಸುತ್ತಿರುವ ನಾಗರೇಖಾ ಅವರು ಕವಯತ್ರಿಯಾಗಿ, ಅಂಕಣಕಾರರಾಗಿ, ಬರಹಗಾರರಾಗಿ ಗಮನ ಸೆಳೆಯುವುದರ ಜೊತೆಗೆ ಉತ್ತಮ ವಾಗ್ಮಿಯಾಗಿ ಚಿರಪರಿಚಿತರಾಗಿದ್ದಾರೆ.
ಈಗಾಗಲೆ ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗಿರುವ ಪ್ರೀತಿಯ ಅಕ್ಕ ನಾಗರೇಖಾ ಗಾಂವಕರ ಅವರ ಮಡಿಲಿಗೆ ಬೆಳಗಾವಿಯ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ವತಿಯಿಂದ ಕೊಡಮಾಡುವ ಡಾ. ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿಯು ಅರಸಿ ಬಂದಿರುವುದು ನಮಗೆಲ್ಲಾ ಅತೀವ ಆನಂದ ತಂದಿದೆ. ಡಿಸೆಂಬರ 8 ರಂದು ಬೆಳಗಾವಿಯ ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನಾಗರೇಖಾರವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸರಳ, ಸಜ್ಜನಿಕೆಯ ಸುಯೋಗ್ಯ ಸುಸಂಸ್ಕೃತಿಯ ಅಕ್ಕ ನಾಗರೇಖಾ ಗಾಂವಕರ ಅವರ ಶ್ರಮಸಾಧನೆಗೆ ಅನಂತಕೋಟಿ ವಂದನೆಗಳು ಮತ್ತು ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಅಭಿಮಾನಪೂರ್ವಕ ಅಭಿವಂದನೆಗಳು. ಇವರ ಸಾಧನೆಗೆ ಕಲ್ಪವೃಕ್ಷದಂತಿರುವ ಅವರ ಪತಿ ಪ್ರವೀಣ ನಾಯಕರಿಗೂ ಒಂದು ಸೆಲ್ಯೂಟ್.
ನಿಮ್ಮ ತಮ್ಮ
ಸಂದೇಶ್.ಎಸ್.ಜೈನ್
ನಿಮ್ಮ ತಮ್ಮ
ಸಂದೇಶ್.ಎಸ್.ಜೈನ್

No comments:
Post a Comment