Thursday, February 28, 2019


ನಾಳೆ ಶುಭಾರಂಭಗೊಳ್ಳಲಿರುವ ಆತ್ಯಾಧುನಿಕ ತಂತ್ರಜ್ಞಾನವನ್ನು ಆಳವಡಿಸಿದ ಸುಸಜ್ಜಿತ ಆಲಿಯಾ ಹೊಂಡಾ ಶೋರೂಂ

ಗೆಳೆಯ ಮಹಮ್ಮದ ಜುಬೇರ ಅಬ್ದುಲ್ ಮುನಾಫ್ ಶೇಖ ಅವರ ಮಾಲಕತ್ವದ ಆಲಿಯಾ ಹೊಂಡಾ ಶೋರೂಂ ಕುಳಗಿ ರಸ್ತೆಯಲ್ಲಿರುವ ಸುಸಜ್ಜಿತ ಕಟ್ಟಡದಲ್ಲಿ ನಾಳೆ ಅಂದರೆ ಮಾರ್ಚ್ :01 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಶುಭಾರಂಭಗೊಳ್ಳಲಿದೆ. 

ಅತ್ಯಾಧುನೀಕ ತಂತ್ರಜ್ಞಾನವನ್ನು ಆಳವಡಿಸಿಕೊಂಡಿರುವ ಆಲಿಯಾ ಹೊಂಡಾ ಶೋರೂಂ ಉತ್ತಮ ಗಣಮಟ್ಟದ ಸೇವೆ ನೀಡಲು ಅಣಿಯಾಗಿದ್ದು, ಸುಂದರ ಮತ್ತು ಸರಳ ಶುಭಾರಂಭೋತ್ಸವಕ್ಕೆ ಗೆಳೆಯ ಮಹಮ್ಮದ ಜುಬೇರ ಅಬ್ದುಲ್ ಮುನಾಫ್ ಶೇಖ ಅವರು ಸರ್ವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಆಶೀರ್ವದಿಸಿ, ಪ್ರೋತ್ಸಾಹಿಸಬೇಕಾಗಿ ವಿನಂತಿಸಿದ್ದಾರೆ.


ಮಹಾನಗರಗಳಲ್ಲಿ ಇರುವಂತೆ ಆಕರ್ಷಕವಾಗಿರುವ ನೂತನ ಆಲಿಯಾ ಹೊಂಡಾ ಶೋರೂಂ ನಗರಕ್ಕೆ ಹೊಸ ಮುನ್ನುಡಿ ಬರೆಯಲಿದೆ. ಗೆಳೆಯ ಮಹಮ್ಮದ ಜುಬೇರ ಅಬ್ದುಲ್ ಮುನಾಫ್ ಶೇಖ ಅವರ ಪ್ರಯತ್ನಕ್ಕೆ ಸಫಲತೆ ಪ್ರಾಪ್ತಿಯಾಗಲೆಂಬ ಆಶಯಗಳೊಂದಿಗೆ,


ನಿಮ್ಮವ


ಸಂದೇಶ್.ಎಸ್.ಜೈನ್


Thursday, February 21, 2019

ಪ್ರೇಮಾನಂದ ಗವಸ ಅವರ ಮಾತೃಶ್ರೀ ರುಕ್ಮಿಣಿ ವಿಷ್ಣು ಗವಸ ಇನ್ನಿಲ್ಲ
ನನ್ನ ನಗಿಸುವ ಅಮ್ಮ ಮರಳಿ ಜನ್ಮವೆತ್ತಿ ಬನ್ನಿ
ದಾಂಡೇಲಿ: ನಗರದ ಸುಭಾಸನಗರದ ನಿವಾಸಿ ಹಾಗೂ ನಿವೃತ್ತ ಅರಣ್ಯಾಧಿಕಾರಿ ದಿ: ವಿಷ್ಣು ಗವಸ ಅವರ ಧರ್ಮಪತ್ನಿ ರುಕ್ಮಿಣಿ ವಿಷ್ಣು ಗವಸ (ವ:74) ಅವರು ಗುರುವಾರ ರಾತ್ರಿ ಕೊನೆಯುಸಿರೆಳೆದರು.
 
ಆದರ್ಶ ಗೃಹಿಣಿಯಾಗಿದ್ದ ರುಕ್ಮಿಣಿ ವಿಷ್ಣು ಗವಸ ಅವರು ಪ್ರೇಮ್ ವುಡ್ ಡೆಕೊರ್ಸ್ ಮಾಲಕ ಹಾಗೂ ಸಾಮಾಜಿಕ ಹೋರಾಟಗಾರ ಪ್ರೇಮಾನಂದ ಗವಸ ಸೇರಿ ಆರು ಪುತ್ರರನ್ನು ಹಾಗೂ ಇಬ್ಬರು ಪುತ್ರಿಯರನ್ನು ಮತ್ತು ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ. 
 
ನನ್ನ ನಗಿಸುವ ಅಮ್ಮ ಮರಳಿ ಜನ್ಮವೆತ್ತಿ ಬನ್ನಿ:
ನನಗೆ ಮತ್ತು ರುಕ್ಮಿಣಿ ಗವಸ ಅವರ ಕುಟುಂಬಕ್ಕೆ ಅನ್ಯೋನ್ಯ ಸಂಬಂಧವಿದೆ. ನಾನು ಅವರಲ್ಲಿ ಮಾಡುತ್ತಿದ್ದ ಜೋಕ್ಸ್ಗಳು, ಅವರು ನನ್ನನ್ನು ಮಗನಂತೆ ಪ್ರೀತಿಸುತ್ತಿದ್ದ ಆ ನೆನಪು ಇನ್ನೂ ನೆನಪು ಮಾತ್ರವಾಗಿ ಉಳಿಯುವಂತಾಯ್ತು. ಮೊನ್ನೆ ಮೊನ್ನೆ ಡಾ: ಭಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದ ರುಕ್ಮಿಣಿಯಮ್ಮನನ್ನು ನೋಡಲು ನಾನು ಹೋಗಿದ್ದೆ. ತುಂಬ ನಿದ್ದೆ ಬಂದು ಮಲಗಿದ್ದರೂ, ಆದರೂ ಅವರು ತಟ್ಟನೆ ಎದ್ದು ಮುಗುಳ್ನಗೆಯಿಂದ ಮಾತಾಡಿದ್ದನ್ನು ನಾನೇಗೆ ಮರೆಯಲಿ?, ಆನಂತರ ನಾನು ಸಂದೇಶ್ ಅಲ್ಲ, ಡಾ: ಸಂದೇಶ್, ಹಾರ್ಟ್ ಸ್ಪೆಷಲಿಸ್ಟ್ ಬಂದಿದ್ದೇನೆಂದು ಹೇಳಿ ಅವರನ್ನು ನಗಿಸಿದ್ದು, ಅಲ್ಲೆ ಕೂತು ಅವರ ಮಗ ಪ್ರೇಮಾನಂದ ಗವಸ ಅವರಿಗೆ ವಿಡಿಯೋ ಕಾಲ್ ಮಾಡಿ ಹರಟೆಯಾಡಿಕೊಂಡಿದ್ದೆಲ್ಲವು ಸದಾ ನೆನಪಿನಲ್ಲಿ ಉಳಿಯುವಂತಹದ್ದೆ. ತಾನು ನಗುತ್ತಾ, ಇನ್ನೊಬ್ಬರನ್ನು ನಗಿಸುತ್ತಾ ಸ್ವಾರ್ಥವಿಲ್ಲದೇ ಬದುಕು ಕಟ್ಟಿಕೊಂಡ ರುಕ್ಮಿಣಿ ಅಮ್ಮನವರ ಸ್ವಚ್ಚ ಹೃದಯ, ಸುಯೋಗ್ಯ ಜೀವಾನದರ್ಶಗಳು ನಮಗೆಲ್ಲಾ ಪ್ರೇರಣಾದಾಯಿ. ಅಮ್ಮ ನಿಮ್ಮ ನೆನಪು ಶಾಶ್ವತ. 
 
ಮರಳಿ ಜನ್ಮವೆತ್ತಿ ಬನ್ನಿ ಎಂಬ ಪ್ರಾರ್ಥನೆಯೊಂದಿಗೆ,

ದುಖ:ತೃಪ್ತ

ಸಂದೇಶ್.ಎಸ್.ಜೈನ್



 

Tuesday, February 19, 2019

ಫೆ:20 ರಂದು ದಾಂಡೇಲಿಯಲ್ಲಿ 'ಯೋಧ ನಮನ' ಕಾರ್ಯಕ್ರಮ
ದಾಂಡೇಲಿ: ದಾಂಡೇಲಿ ಪ್ರೆಸ್ ಕ್ಲಬ್ ಹಾಗೂ ಗೆಳೆಯರ ಬಳಗ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪೆ. 20 ರಂದು ಸಂಜೆ 5 ಗಂಟೆಗೆ ರೋಟರಿ ಶಾಲಾ ಅವರಣದಲ್ಲಿ ಹುತಾತ್ಮ ಯೋಧರಿಗೆ ಶೃದ್ದಾಂಜಲಿ ಸಲ್ಲಿಸುವ 'ಯೋಧ ನಮನ' ಕಾರ್ಯಕ್ರಮ ನಡೆಯಲಿದೆ. 

ರೋಟರಿ ಶಾಲಾ ಆವರಣದಲ್ಲಿ ಕಲ್ಪವೃಕ್ಷವನ್ನು ನೆಡುವ ಮೂಲಕ ಹುತಾತ್ಮ ಯೋಧರಿಗೆ ಶೃದ್ದಾಂಜಲಿ ಸಲ್ಲಿಸಲಾಗುವುದು. ನಂತರ ರೋಟರಿ ಸಭಾಂಗಣದಲ್ಲಿ ನುಡಿ ನಮನ ಸಲ್ಲಿಸಲಾಗುವುದು, ನಗರದ ಸಹೃದಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಎನ್. ವಾಸರೆ, ಕಾರ್ಯದರ್ಶಿ ಸಂದೇಶ ಜೈನ್ ಹಾಗೂ ಪ್ರೆಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರುಗಳು ಮನವಿ ಮಾಡಿದ್ದಾರೆ.



 

Thursday, February 7, 2019

ಚಿತ್ರಕಲಾ ವಿದ್ಯಾರ್ಥಿಗಳಿಗೊಂದು ವಿಶಿಷ್ಟ ಚಿತ್ರಕಲಾ ಸ್ಪರ್ಧೆ.
ಫೆ:10 ರಂದು ದಂಡಕಾರಣ್ಯದಲ್ಲಿ ಮನಸೆಳೆಯಲಿದೆ ಚಿಣ್ಣರ ಕುಂಚದಿಂದ ಅರಳಲಿರುವ ಚಿತ್ರಗಳ ಕಲರವ
ರಜತ ಮಹೋತ್ಸವದ ಸವಿ ನೆನಪಿಗಾಗಿ ರಾಜೇಶ ಜುವ್ಹೆಲ್ಲರ್ಸಿನಿಂದ ಚಿತ್ರಕಲಾ ಸ್ಪರ್ಧೆ
ದಾಂಡೇಲಿ : ನಗರದಲ್ಲಿ 25 ವರ್ಷಗಳಿಂದ ವ್ಯವಹಾರ ನಡೆಸುತ್ತಿರುವ ಬಂದಿರುವ ನಗರದ ರಾಜೇಶ ಜುವ್ಹೆಲ್ಲರ್ಸ್ ಇವರು ತಮ್ಮ ಸಂಸ್ಥೆಯ ರಜತ ಮಹೋತ್ಸವದ ಸವಿನೆನಪಿಗಾಗಿ  ಇದೇ ಫೆ:10 ರಂದು ಭಾನುವಾರ ವತಿಯಿಂದ ರವಿವಾರರಂದು ಫೆ.10 ರಂದು ದಂಡಕಾರಣ್ಯ ಇಕೋ-ಪಾರ್ಕಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು  ಹಮ್ಮಿಕೊಂಡಿದ್ದಾರೆ.

ಅಂದು ಬೆಳಿಗ್ಗೆ ಸಮಯ 10.15 ರಿಂದ 12.15 ರವರೆಗೆ ಜರುಗುವ ಚಿತ್ರಕಲಾ ಸ್ಪರ್ಧೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳಿಗೆ ಇಷ್ಟವಾದ ಚಿತ್ರ ಬಿಡಿಸುವ ಸ್ಪರ್ಧೆ,  1 ರಿಂದ 2ನೇ ತರಗತಿ(ಯಾವುದೇ ಹಣ್ಣಿನ ಚಿತ್ರ), 3 ರಿಂದ 4 ತರಗತಿ(ಬಾಸ್ಕೆಟ್ನಲ್ಲಿ ಹೂವುಗಳ ಚಿತ್ರ), 5 ರಿಂದ 7 ತರಗತಿ(ಹಳ್ಳಿಯ ದೃಶ್ಯ) 8 ರಿಂದ 9ನೇ ತರಗತಿಯ (ಯಾವುದೇ ಚಿನ್ನಾಭರಣ ಚಿತ್ರ) ವಿದ್ಯಾರ್ಥಿಗಳು ಚಿತ್ರಗಳನ್ನು ಬಿಡಿಸಬಹುದಾಗಿದೆ ಎಂದು ರಾಜೇಶ ಜುವ್ಹೆಲ್ಲರ್ಸ್ ಮಾಲಿಕ ರಾಜೇಶ ವೆರ್ಣೇಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ವಿಭಾಗಕ್ಕೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನೀಡಲಾಗುವದು. 1 ರಿಂದ 9ನೇ ತರಗತಿಯ ವಿದ್ಯಾರ್ಥಿಗಳ ಪಾಲಕರಿಗೂ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ - 876277077 ಕ್ಕೆ ಸಂಪರ್ಕಿಸುವಂತೆ ಕೋರಲಾಗಿದೆ.

ರಜತ ಸಂಭ್ರಮದ ಭಾಗವಾಗಿ ರಾಜೇಶ ಜುವ್ಹೆಲ್ಲರ್ಸ್ ವತಿಯಿಂದ ಬರುವ ಶೈಕ್ಷಣಿಕ ವರ್ಷದಲ್ಲಿ ಆಯ್ದ 5 ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ಭರಿಸಲಾಗುವುದೆಂದು ಸಂಸ್ಥೆಯ ಮಾಲಕ ರಾಜೇಶ ವೆರ್ಣೇಕರ ತಿಳಿಸಿದ್ದಾರೆ.  

ನಮ್ಮೂರ ಮಕ್ಕಳ ಪ್ರತಿಭೆಗೆ ವೇದಿಕೆಯನ್ನು ನೀಡುತ್ತಿರುವ ರಜತ ಮಹೋತ್ಸವದ ಸಂಭ್ರಮದಲ್ಲಿರುವ ರಾಜೇಶ ಜುವ್ಹೆಲ್ಲರ್ಸ್ ಅವರ ಈ ಕಾರ್ಯಕ್ಕೆ ಶುಭವಾಗಲಿ.

ನಿಮ್ಮವ

ಸಂದೇಶ್.ಎಸ್.ಜೈನ್
 

Sunday, February 3, 2019

ದಾಂಡೇಲಿಯ ಇತಿಹಾಸಲ್ಲಿ ಮೊದಲ ಬಾರಿಗೆ
ಫೆ:06 ರಂದು ಚಂದನ ಟಿವಿಯವರು ನಮ್ಮೂರ್ನಾಗ 
ನಮ್ಮೂರಿನ ಗಾಯಕರಿಗೊಂದು ಸುವರ್ಣಾವಕಾಶ
ಪೆ.6 ರಂದು ದಾಂಡೇಲಿಯಲ್ಲಿ ಮಧುರ ಮಧುರವೀ ಮಂಜುಳ ಗಾನದ ಧ್ವನಿ ಪರೀಕ್ಷೆ
ದಾಂಡೇಲಿ:  ಚಂದನ ದೂರದರ್ಶನ ಕೇಂದ್ರ ಬೆಂಗಳೂರು ಇವರು ನಡೆಸಿಕೊಡುವ ಕನ್ನಡ ನಾಡಿನ ಅತ್ಯಂತ ಜನಪ್ರೀಯ ಮತ್ತು ಕಲಾವಿದರನ್ನು ಸಮಾಜದ ಮುಖ್ಯಭೂಮಿಕೆಗೆ ತರುವಲ್ಲಿ ಪರಿಣಾಮಕಾರಿಯಾಗಿ ಪಾತ್ರವಹಿಸಿದ ಹಾಗೂ ವಹಿಸುತ್ತಿರುವ ಕಾರ್ಯಕ್ರಮವಾದ 'ಮಧುರ ಮಧುರವೀ ಮಂಜುಳ ಗಾನ' ಕಾರ್ಯಕ್ರಮವು ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ ಆಶ್ರಯದಲ್ಲಿ ದಾಂಡೇಲಿಯಲ್ಲಿ ನಡೆಯಲಿದ್ದು, ಇದರಲ್ಲಿ ಭಾಗವಹಿಸುವವರ ಆಡಿಶನ್ (ಧ್ವ್ವನಿ ಪರೀಕ್ಷೆ) ಜನವರಿ 6 ರಂದು  ಮುಂಜಾನೆ 9.30 ಗಂಟೆಯಿಂದ ದಾಂಡೇಲಿಯ ರಂಗನಾಥ ಸಭಾಂಗಣದಲ್ಲಿ ನಡೆಯಲಿದೆ. 
 
ಈ ಕಾರ್ಯಕ್ರಮವು ' ನಿಸರ್ಗ ಸಿರಿ ವಿಶೇಷ' ಎಂಬ ವಿಷಯದ ಮೇಲೆ ನಡೆಯಲಿದ್ದು,  ಪೃಕೃತಿ ಸೌಂದರ್ಯಕ್ಕೆ ಸಂಬಂದಪಟ್ಟ ಕನ್ನಡ ಚಲನಚಿತ್ರ ಹಾಡು ಮತ್ತು ನೃತ್ಯಗಳಿಗೆ ಮಾತ್ರ ಅವಕಾಶವಿರುತ್ತದೆ. 

 ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ಗಾಯಕರು ಹಾಗೂ ನೃತ್ಯ ತಂಡದವರು ತಮ್ಮ ಹೆಸರು, ವಿಳಾಸ, ದೂರವಣಿ ಸಂಖ್ಯೆಯ ಜೊತೆಗೆ ಭಾವಚಿತ್ರ ಹೊಂದಿದ ಅರ್ಜಿಯನ್ನು ಕಾರ್ಯಕ್ರಮ ನಿರ್ದೇಶಕರು, ಚಂದನ ದೂರದರ್ಶನ ಇವರ ಹಸರಿಗೆ ನಮೂದಿಸಿ, ದಾಂಡೇಲಿಯಲ್ಲಿ ಬಿ.ಎನ್. ವಾಸರೆ, ಅಧ್ಯಕ್ಷರು ಒಡನಾಡಿ ಸಂಸ್ಥೆ, ಯುನೈಟೆಡ್ ಬಿಲ್ಡಿಂಗ್, ದಾಂಡೇಲಿ, (9480043450), ಹಾಗೂ ಮೀನಾಕ್ಷಿ ಕನ್ಯಾಡಿ, ಅಧ್ಯಕ್ಷರು ಸಹೇಲಿ ಟ್ರಸ್ಟ್ (9483038344) ಹಾಗೂ ಹಳಿಯಾಳದಲ್ಲಿ  ಬಸ್ ನಿಲ್ದಾಣದ ಬಳಿಯ ನಮ್ಮ ಮಿತ್ರ ಕಾರ್ಯಲಯ ( 08284-220223) ಇವರಿಗೆ ತಲುಪಿಸಬೇಕು. ಜೊತೆಗೆ ಆಡಿಶನ್ (ಧ್ವನಿ ಪರೀಕ್ಷೆಗೆ) ನಿಗದಿತ ಸಮಯದೊಳಗೆ ಹಾಜರಿರಬೇಕು ಎಂದು ಚಂದನ ದೂರದರ್ಶನ ಹಾಗೂ ವಿ.ಆರ್.ಡಿ.ಎಮ್.ಟ್ರಸ್ಟ್ ನವರು ತಿಳಿಸಿದ್ದಾರೆ. 

ನಾವು ಮಾಡಬೇಕಾದುದು ಇಷ್ಟೆ ನೋಡಿ:
ನಮ್ಮೂರಿನ ಹೆಮ್ಮೆಯ ಸಂಗೀತ ಕಲಾವಿದರುಗಳಿಗೆ ಇದರ ಮಾಹಿತಿಯನ್ನು ನೀಡಿ ಅವರನ್ನು ಭಾಗವಹಿಸುವಂತೆ ಮಾಡಿ, ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತಲಿನ ಹೆಸರನ್ನು ರಾಜ್ಯದ ರಾಜಧಾನಿಯವರೆಗೆ ಪಸರಿಸುವಂತೆ ಮಾಡಬೇಕಾಗಿದೆ. ನಮ್ಮೂರ ಸಮೀಪದ ಹಳ್ಳಿಯಲ್ಲಿ ಅತ್ಯುತ್ತಮ ಗಾಯಕರಿದ್ದಾರೆ. ನಮ್ಮ ಮನೆ ಸಮೀಪವು ಇರಬಹುದು. ಅಂಥವರಿಗೆ ಈ ಕಾರ್ಯಕ್ರಮದ ಬಗ್ಗೆ ಹೇಳಿ ಅವರನ್ನು ಭಾಗವಹಿಸುವಂತೆ ಮಾಡಿ ಕಲಾಸೇವೆಯನ್ನು ಮಾಡುವ ಕಲಾವಿದರುಗಳಿಗೆ ಪ್ರೋತ್ಸಾಹಿಸೋಣ.

ನಮ್ಮೂರ ಕಲಾವಿದರುಗಳು ನಮ್ಮ ಹೆಮ್ಮೆ

ನಿಮ್ಮವ

ಸಂದೇಶ್.ಎಸ್.ಜೈನ್

 

Saturday, February 2, 2019

ಹಳಿಯಾಳದ ಶ್ರೀ.ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಅರ್ಪಿಸುವ ಕುಂದಾಪುರದ ರೂಪಕಲಾ(ಕುಳ್ಳಪ್ಪು) ಇವರ ಸಹಯೋಗದೊಂದಿಗೆ ಅಂತಾಷ್ಟ್ರೀಯ ಖ್ಯಾತಿಯ ಮೂರುಮುತ್ತು ಕಲಾವಿದರಿಂದ ದಿ: ಕೆ.ಬಾಲಕೃಷ್ಣ ಪೈ ಯವರು ರಚಿಸಿದ ಕರಾವಳಿ ಮುತ್ತು ಖ್ಯಾತಿಯ  ಸತೀಶ ಶೆಟ್ಟಿಯವರ ನಿರ್ದೇಶನದಲ್ಲಿ ಹಾಸ್ಯಮಯ ಮೂರುಮುತ್ತು ಎಂಬ ನಗೆ ನಾಟಕವು ಉಚಿತವಾಗಿ ನಾಳೆ ಅಂದರೆ ಫೆಬ್ರವರಿ: 03 ರಂದು ಭಾನುವಾರ ಸಂಜೆ 5.30 ಗಂಟೆಗೆ ಸರಿಯಾಗಿ ಕಾಗದ ಕಾರ್ಖಾನೆಯ ರಂಗನಾಥ ಸಭಾಭವನದಲ್ಲಿ ಜರಗಲಿದೆ.

ನೋಡಲೆಬೇಕಾದ ಅತ್ಯಾಮೋಘ, ವೈಶಿಷ್ಟ್ಯಪೂರ್ಣ, ಎಲ್ಲರನ್ನು ನಗೆಗಡಲಲ್ಲಿ ತೇಲಾಡಿಸಲಿರುವ ಹಾಸ್ಯಮಯ ನಾಟಕ, ನಮ್ಮೂರಲ್ಲಿ. ಹಾಗಾದ್ರೆ ಹಿಂದೆ ಮುಂದೆ ಯಾಕೆ ನೋಡುತ್ತಿರಿ. ನಾಲೆ ಭಾನುವಾರವಿರುವುದರಿಂದ ಬೆಳಿಗ್ಗೆಯೆ ಮಾರ್ಕೆಟ್ ಮುಗಿಸಿ, ಸಂಜೆ ನಾಟಕ ನೋಡಲು ಕುಟುಂಬ ಸಮೇತರಾಗಿ ಬನ್ನಿ. ಬರ್ಬೇಕು ಪ್ಲೀಸಾ.


ನಿಮ್ಮವ

ಸಂದೇಶ್.ಎಸ್.ಜೈನ್
 
ಬೆಳ್ಳಂ ಬೆಳಗ್ಗೆ ಮಕ್ಕಳನ್ನು ಟ್ಯೂಷನ್ ಕಳುಹಿಸುವ ಪಾಲಕರೆ ದಯವಿಟ್ಟು ಇತ್ತ ಕಡೆ ಗಮನಿಸಿ
ಆತ್ಮೀಯರೇ, ಪ್ರತಿಯೊಂದನ್ನು ಪ್ರತಿಯೊಬ್ಬರ ಬಳಿ ಹೇಳಿಕೊಳ್ಳಲು ಆಗದು. ಆ ಕಾರಣಕ್ಕಾಗಿ ನಾನು ಕಂಡಿದ್ದನ್ನು, ನೋಡಿದ್ದನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿ, ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನ ಈ ಬರಹದ್ದಾಗಿದೆ.

ಕಳೆದೆರಡು ದಿನಗಳ ಹಿಂದೆ ಬೆಳ್ಳಂ ಬೆಳಗ್ಗೆ ಇಬ್ಬರು ಬಹುಷ: ಹೈಸ್ಕೂಲ್ ವಿದ್ಯಾರ್ಥಿಗಳಿರಬಹುದು ಎಂದು ಅನಿಸ್ತದೆ. ಅವರು ಟ್ಯೂಷನ್ ಮುಗಿಸಿ ವಾಪಾಸ್ಸು ಹೊರಡುವಾಗ ತಮ್ಮ ದ್ವಿಚಕ್ರ ವಾಹನದಲ್ಲಿ (ಬೈಕಿನಲ್ಲಿ) ಅಡ್ಡಾದಿಡ್ಡಿಯಾಗಿ ಅತೀಯಾದ ವೇಗವಾಗಿ ಚಲಾಯಿಸಿಕೊಂಡು, ಸಾರಿಗೆ ನಿಯಾಮವಳಿಯನ್ನು ಗಾಳಿಗೆ ತೂರುತ್ತಿರುವುದನ್ನು ಪ್ರತ್ಯಕ್ಷ ಕಂಡಿದ್ದೇನೆ. ಅವರು ಹೋಗುವ ವೇಗ ಮತ್ತು ಅಜಾಗರೂಕತೆಯನ್ನು ಗಮನಿಸಿದರೇ ಮಕ್ಕಳ ಶವಕ್ಕೆ ತಂದೆಯೆ ಕೊಳ್ಳಿ ಇಡಬೇಕಾದ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡಬೇಕಿಲ್ಲ ಎಂದೆನಿಸಿತು. ಆ ಇಬ್ಬರು ಬಾಲಕರು ಏನಾದರೂ ಹೆಚ್ಚು ಕಡಿಮೆಯಾಗಿ ಅಪಘಾತಕ್ಕೊಳಗಾಗುತ್ತಿದ್ದಾರೆ ಸಾವು ನಿಶ್ಚಿತ, ಇಲ್ಲವೇ ಜೀವನದ ಕೊನೆತನಕ ಶಾಶ್ವತ ಅಂಗವೈಕಲ್ಯಕ್ಕೆ ಬಲಿತಯಾಗುವಂತಹ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನೂ ಕೆಲ ಪಾಲಕರು ತನ್ನ ಮಕ್ಕಳಿಗೆ ದುಬಾರಿ ಬೆಲೆಯ ಬೈಕನ್ನು ಕೊಡಿಸಿ, ಶಾಲೆ/ಕಾಲೇಜಿಗೆ ಕಳುಹಿಸುತ್ತಾರೆ. ಆದರೆ ಆ ಬೈಕ್ ಗಳು ಕಾಲೇಜಿನಲ್ಲಿ ಇರದೇ ಊರ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚಾರಿ ನಿಯಮವಗಳನ್ನು ಗಾಳಿಗೆ ತೂರಿ ಅಡ್ಡಾಡುತ್ತಿರುವುದು ಸಾಮಾನ್ಯವಾಗಿದೆ.

ಪಾಲಕರೆ, ದಯವಿಟ್ಟು ತಮ್ಮೆಲ್ಲರಲ್ಲಿಯೂ ಗೌರವಪೂರ್ವಕ ಪ್ರಾರ್ಥನೆಯಿಷ್ಟೆ, ನೀವು ನಿಮ್ಮ ಮಕ್ಕಳಿಗೆ ಸಾರಿಗೆ ನಿಯಾಮವಳಿಯನ್ನು ಮೀರಿ ದ್ವಿಚಕ್ರ ವಾಹನವನ್ನು ಕೊಡಬೇಡಿ. ಕೊಟ್ಟರೇ ನೀವೆ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕೊಡಲಿಯೇಟು ನೀಡಿದಂತಾಗುತ್ತದೆ. ನೀವು ನಿಮ್ಮ ಮಕ್ಕಳನ್ನು ಟ್ಯೂಷನಿಗೆ, ಶಾಲಾ, ಕಾಲೇಜಿಗೆ ಕಳುಹಿಸುವುದಾದಲ್ಲಿ ಸೈಕಲ್ ಇಲ್ಲವೆ ಆಟೋ ರಿಕ್ಷಾದ ಮೂಲಕ ಕಳುಹಿಸಿ. ಇಲ್ಲದೇ ಹೋದಲ್ಲಿ ತಂದೆಯ ಹೆಣಕ್ಕೆ ಹೆಗಲು ಕೊಡಬೇಕಾದ ಮಗನ ಸಾವಿಗೆ ಯಾವ ತಂದೆಯೂ ಕಾರಣರಾಗದಿರಿ. 

ದಯವಿಟ್ಟು, ಎಲ್ಲ ಪಾಲಕರು ಈ ಬಗ್ಗೆ ಗಂಭಿರವಾಗಿ ಕ್ರಮ ಕೈಗೊಳ್ಳಬೇಕೆಂಬ ವಿನಮ್ರ ಪ್ರಾರ್ಥನೆ ನನ್ನದು. ನಮ್ಮೂರಿನ ಮಕ್ಕಳು ನಮ್ಮೂರಿನ ಆಸ್ತಿ. ಆ ಆಸ್ತಿಯ ಸಂರಕ್ಷಣೆಗೆ ನಮ್ಮೆಲ್ಲರ ಆಧ್ಯತೆಯಿರಲಿ.

ನಿಮ್ಮವ

ಸಂದೇಶ್.ಎಸ್.ಜೈನ್

                       
 

Friday, February 1, 2019

ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಸಂಘಟನೆಯ ಅಧ್ಯಕ್ಷರಾಗಿ ವಿಷ್ಣು ನಾಯರ್
ಹಾರ್ದಿಕ ಅಭಿವಂದನೆಗಳು-ವಂದನೆಗಳು

ದಾಂಡೇಲಿ : ಮಾಜಿ ಪ್ರಧಾನಿ, ಅಜಾತಶತ್ರು ರಾಜಕಾರಣಿಯಾಗಿದ್ದ ದಿ: ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಸಂಘಟನೆಯ ದಾಂಡೇಲಿ ನಗರದ ಅಧ್ಯಕ್ಷರಾಗಿ ಯುವ ಸಾಮಾಜಿಕ ಮುಖಂಡ, ಬಿಜೆಪಿ ಯುವ ಮೋರ್ಚಾದ ಪ್ರಮುಖ ಪದಾಧಿಕಾರಿ ವಿಷ್ಣು ನಾಯರ್ ಅವರು ಆಯ್ಕೆಯಾಗಿದ್ದಾರೆ.
 
ಕಳೆದ ಕೆಲ ವರ್ಷಗಳಿಂದ ದಿ: ಅಟಲ್ ಬಿಹಾರಿ ವಾಜಪೇಯಿಯವರ ಹೆಸರಿನಲ್ಲಿ ವಿವಿಧ ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಅಟಲಜೀಯವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯವನ್ನು ವಿಷ್ಣು ನಾಯರ್ ಅವರು ಮಾಡಿಕೊಂಡು ಬರುತ್ತಿದ್ದರು. ನಗರದ ವಿವಿಧ ಜನಪರ ಹೋರಾಟ ಹಾಗೂ ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವಿಷ್ಣು ನಾಯರ್ ಅವರು ಇದೀಗ ದಿ: ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಸಂಘಟನೆಯ ಅಧ್ಯಕ್ಷರಾಗಿರುವುದಕ್ಕೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಸೇವಾಕೈಂಕರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಮೂಲಕ ದೇವರು ಮೆಚ್ಚುವ ಕಾರ್ಯವನ್ನು ಮಾಡುತ್ತಿರುವುದಕ್ಕೆ ನನ್ನ ಕಡೆಯಿಂದ ವಿಶೇಷ ಅಭಿವಂದನೆಗಳು.
 
ನಿಮ್ಮವ
 
ಸಂದೇಶ್.ಎಸ್.ಜೈನ್


 

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...