Saturday, March 16, 2019

ದಾಂಡೇಲಿಯ ಮಕ್ಕಳ ಪಾಲಿಗೆ ಮಹೋನ್ನತ ಭಾಗ್ಯ.
ಮಗದೊಮ್ಮೆ ಅಂತರಾಷ್ಟ್ರೀಯ ಖ್ಯಾತಿಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಶ್ರೀ. ರೋಶನಲಾಲ್ ನಹರ್ ದಾಂಡೇಲಿಗೆ
ಸಮ್ಮರ್ ಬ್ಯಾಡ್ಮಿಂಟನ್ ಕೋಚಿಂಗ್ ಕ್ಯಾಂಪ್ ನಮ್ಮ - ನಿಮ್ಮ ದಾಂಡೇಲಿಯಲ್ಲಿ
 

ಬಹುಷ: ಇದು ದಾಂಡೇಲಿಯ ಮಕ್ಕಳ ಪಾಲಿಗೆ ಮಹೋನ್ನತ ಬಾಗ್ಯ ಎಂದರೆ ಅತಿಶಯೋಕ್ತಿ ಎನಿಸದು. ಮಕ್ಕಳೆಲ್ಲಾ ಪರೀಕ್ಷೆಯ ಬ್ಯುಜಿ ಶೆಡ್ಯೂಲಿನಲ್ಲಿದ್ದಾರೆ. ಎಕ್ಸಾಂ ಮುಗಿದ ಮೇಲೆ ಏನ್ಮಾಡೋದು ಎಂಬ ಚಿಂತೆ, ಈ ಬಾರಿ ನಮ್ಮೂರ ಮಕ್ಕಳಿಗೆ ಬೇಡವೆ ಬೇಡ. ಅದಕ್ಕಾಗಿಯೆ ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಸನ್ ಸಮ್ಮರ್ ಬ್ಯಾಡ್ಮಿಂಟನ್ ಕೋಚಿಂಗ್ ಕ್ಯಾಂಪನ್ನು ಪ್ರಸ್ತುತ ಪಡಿಸುತ್ತಿದೆ.

ಭಾರತ ಕಂಡ ಅತ್ಯುತ್ತಮ ಹಾಗೂ ಕ್ರೀಡಾಸ್ಪೂರ್ತಿ ಮೆರೆದ ಭಾರತದ ಬ್ಯಾಡ್ಮಿಂಟನ್ ಕ್ಷೇತ್ರದ ಅನನ್ಯ ಪ್ರತಿಭೆಗಳ ಮುಖ್ಯ ತರಬೇತುದಾರರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಶ್ರೀ. ರೋಶನಲಾಲ್ ನಹರ್ ಅವರು ಈ ಬಾರಿ ಮಗದೊಮ್ಮೆ ದಾಂಡೇಲಿಯ ಮಕ್ಕಳಿಗೆ ಬ್ಯಾಡ್ಮಿಂಟನ್ ಕೋಚಿಂಗ್ ನೀಡಲು ಆಗಮಿಸುತ್ತಿದ್ದಾರೆ. ಕಳೆದ 14 ವರ್ಷಗಳಿಂದ ರಾಷ್ಟ್ರೀಯ ಕ್ಯಾಂಪ್ ಗಳನ್ನು ಯಶಸ್ವಿಯಾಗಿ ಸಂಘಟಿಸಿದ ಕೀರ್ತಿಗೆ ಭಾಜನರಾಗಿರುವ ಭಾರತ ಬ್ಯಾಡ್ಮಿಂಟನ್ ತಂಡದ ಕೋಚ್ ಆಗಿ ಗಣನೀಯ ಕ್ರೀಡಾಸೇವೆ ನೀಡಿದ ಶ್ರೀ.ರೋಶನಲಾಲ್ ಅವರು ತನ್ನ ಅತ್ಯುತ್ತಮವಾದ ತರಬೇತಿಯಿಂದಾಗಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆಗೆ ಪಾತ್ರರಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ವಿವಿಧ ಪ್ರಶಸ್ತಿಗಳು, ಸನ್ಮಾನ ಪತ್ರಗಳು ಅವರನ್ನು ಅರಸಿ ಬಂದಿವೆ.  ನಮ್ಮೂರ ಮಕ್ಕಳನ್ನು ತರಬೇತಿ ನೀಡುವುದರ ಮೂಲಕ ಆಶೀರ್ವದಿಸಲು ಬರುತ್ತಿರುವ ಶ್ರೀ. ರೋಶನಲಾಲ್ ಅವರಿಗೆ ಅಭಿಮಾನದ ಸ್ವಾಗತ.

ಇದೇ ಬರುವ ದಿನಾಂಕ: 22.03.2019 ರಿಂದ 06.04.2019 ರವರೆಗೆ ದಾಂಡೇಲಿಯ ಸುಭಾಸನಗರದ ಒಳ ಕ್ರೀಡಾಂಗಣದಲ್ಲಿ ಸಮ್ಮರ್ ಬ್ಯಾಡ್ಮಿಂಟನ್ ಕ್ಯಾಂಪ್ ನಡೆಯಲಿದ್ದು, ಆಸಕ್ತರು ಈ ಕೂಡಲೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ.

ಮಾರ್ಚ್ : 22 ರಿಂದ ಆರಂಭವಾಗುವ ಕೋಚಿಂಗ್ ಕ್ಯಾಂಪಿನಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ 7.30 ಗಂಟೆಯವರೆಗೆ ದೈಹಿಕ ಪಿಟ್ನೇಸ್ ನಡೆಯಲಿದೆ. ಆ ಬಳಿಕ ಬೆಳಿಗ್ಗೆ 9.30 ರಿಂದ 11.30 ಗಂಟೆಯವರೆಗೆ ಮತ್ತು ಸಂಜೆ 4.30 ರಿಂದ 7.30 ಗಂಟೆಯವರೆಗೆ ಬ್ಯಾಡ್ಮಿಂಟನ್ ಕೋಚಿಂಗ್ ನಡೆಯಲಿದೆ. 
 
ಇದೊಂದು ಅಪೂರ್ವ ಅವಕಾಶ. ಈ ಅವಕಾಶ ಎಲ್ಲರಿಗೂ, ಎಲ್ಲ ಕಡೆ ಸಿಗಲು ಸಾಧ್ಯವೆ ಇಲ್ಲ. ಇಂತಹದ್ದರಲ್ಲಿ ದಾಂಡೇಲಿಯಲ್ಲಿ ಮಹತ್ವದ ಕ್ಯಾಂಪ್ ನಡೆಯುತ್ತಿರುವುದು ನಿಜಕ್ಕೂ ದಾಂಡೇಲಿಗೆ ಹೆಮ್ಮೆ, ನಮ್ಮೂರ ಮಕ್ಕಳ ಪುಣ್ಯವೆ ಸರಿ.
ಹಾಗದ್ರೆ ತಡವೇಕೆ, ಕೂಡಲೆ ತಮ್ಮ ಹೆಸರನ್ನು ನೊಂದಾಯಿಸಿ, ಹೆಚ್ಚಿನ ಮಾಹಿತಿಗಾಗಿ
 
ನವೀನ್ ಕಾಮತ್ ಮೊ: 9591618850
ಗುರು ಮಠಪತಿ ಮೊ: 9916010060
ಕುಮಾರ್ ಕರಗಯ್ಯ ಮೊ: 9845730069
 
ಬನ್ನಿ, ನಮ್ಮೂರ ಮಕ್ಕಳನ್ನು ಕ್ರೀಡಾಕ್ಷೇತ್ರದ ಮಹೋನ್ನತ ಆಸ್ತಿಯನ್ನಾಗಿಸೋಣ.
 
ನಿಮ್ಮವ
 
ಸಂದೇಶ್.ಎಸ್.ಜೈನ್






 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...