ದಾಂಡೇಲಿ : ನಗರದ ವೆಸ್ಟ್ ಕೊಸ್ಟ್ ಪೇಪರ್ ಮಿಲ್ಲಿನ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ದಾಂಡೇಲಿ ಶಿಕ್ಷಣ ಸಂಸ್ಥೆಯ ಸಂಯೋಜಕರಾದ ಕೆ.ಜಿ.ಗಿರಿರಾಜ ಅವರ ಸುಪುತ್ರ ಬಸವೇಶ ಗಿರಿರಾಜ (ವ:24) ಇವರು ಶನಿವಾರ ನಗರದಲ್ಲಿರುವ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ತನ್ನ ಜೀವನದ ಮಹತ್ವದ ಆಸೆಯಂತೆ ಅವರೆರಡು ಕಣ್ಣುಗಳನ್ನು ಅವರಿಚ್ಚೆಯಂತೆ ದಾನ ಮಾಡಿ ಮರಣದಲ್ಲೂ ಮಾನವೀಯತೆಯನ್ನು ಮೆರೆದರು.
ಹುಟ್ಟು ಪೋಲಿಯೋ ಪಿಡಿತರಾಗಿ ಎರಡು ಕಾಲು ಬಲಹೀನತೆಗೊಳಗಾಗಿದ್ದರು. ತನ್ನ ಕ್ರಿಯಾಶೀಲತೆಯಿಂದ ಗಮನ ಸೆಳೆದಿದ್ದ ಬಸವೇಶ ಅವರು ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಅಚಲವಾದ ಗುರಿಯನ್ನಿಟ್ಟು ಮುನ್ನಡೆದವರು. ತಂದೆ ತಾಯಿ ಹಾಗೂ ಅಕ್ಕನ ಸಹಕಾರ, ಮಾರ್ಗದರ್ಶನದಲ್ಲಿ ಬಿ.ಕಾಂ ಪದವಿಯನ್ನು ಪೊರೈಸಿದ ಅವರು ಪದವಿ ಮುಗಿದ ಮೇಲೆ ಮನೆಯಲ್ಲೆ ಕೂತು ನವದಾನ್ಯ ಇನ್ನಿತರ ಅಗತ್ಯ ಆಹಾರ ವಸ್ತುಗಳನ್ನು ಸಿದ್ದಪಡಿಸಿ ಸ್ಥಳೀಯವಾಗಿ ಮಾರುಕಟ್ಟೆಯನ್ನು ಆರಂಭಿಸಿದ್ದರು. ಜೀವನದಲ್ಲಿ ಸಾಧಿಸಬೇಕೆಂದು ಪಣತೊಟ್ಟಿದ್ದ ಬಸವೇಶ ಅವರು ಕಿಡ್ನಿ ವೈಫಲ್ಯಕ್ಕೊಳಗಾಗಿ ಮೃತ ಪಟ್ಟಿದ್ದಾರೆ.
ಸೃಜನಾಶೀಲತೆಯನ್ನು ಮೈಗೂಡಿಸಿಕೊಂಡಿದ್ದ ನಾನು ಮೆಚ್ಚಿದ ಅಪರೂಪದ ಅಪೂರ್ವ ವ್ಯಕ್ತಿ ಬಸವೇಶ. ಅಪರೂಪಕ್ಕೊಮ್ಮೆ ಸಿಕ್ಕ ಕೂಡಲೆ ಆಂಕಲ್ ಎಂದು ಅಕ್ಕರೆಯಿಂದ ಮಾತನಾಡಿಸುತ್ತಿದ್ದ ಬಸವೇಶ ಅವರ ಅಗಲುವಿಕೆಯನ್ನು ಸಹಿಸಲಾಗದು. ವಿಕಲಚೇತನರಾಗಿದ್ದರೂ ಅವರಿಂದ ಮಹತ್ವದ ಕಾರ್ಯವನ್ನು ಮಾಡಿಸಬೇಕೆಂಬ ಹಂಬಲದಲ್ಲಿದ್ದವ ನಾನು. ಆ ಹಂಬಲವನ್ನು ಅವರಿಗೆ ತಿಳಿಸಿ, ಅವರು ಆ ದಿಸೆಯಲ್ಲಿ ಮುನ್ನಡೆದಿದ್ದರು. ಆದರೆ ವಿಧಿಯಾಟ ಅದಕ್ಕೆ ಅವಕಾಶ ನೀಡದಿರುವುದು ಮಾತ್ರ ನೋವಿನ ಸಂಗತಿ.
ಹೆತ್ತ ಮಗುವನ್ನು ಮೂರ್ನಾಲ್ಕು ವರ್ಷ ಮಗುವಿನಂತೆ ತಂದೆ ತಾಯಿಗಳು ಮುತುವರ್ಜಿಯಿಂದ ನೋಡಿಕೊಳ್ಳುವುದು ಸಹಜ. ಆದರೆ ನಮ್ಮ ಗಿರಿರಾಜ ದಂಪತಿಗಳು ಸುಪುತ್ರ ಬಸವೇಶರವರನ್ನು ಕಳೆದ 24 ವರ್ಷಗಳಿಂದ ಎಳೆಯ ಮಗುವಿನಂತ ಸಾಕಿ ಸಲಹಿದ್ದು ಮಾತ್ರ ರಿಯಾಲ್ ಗ್ರೇಟ್. ಅವರುಗಳ ಪುಣ್ಯ ಕಾರ್ಯಕ್ಕೆ ಶಿರಬಾಗುವೆ.
ನನ್ನ ಹೃದಯ ಮಿತ್ರ ಬಸವೇಶ ನಿಮ್ಮ ಅಗಲುವಿಕೆಯಿಂದ ನಾವು ನೊಂದಿದ್ದೇವೆ. ನಿಮ್ಮ ಆತ್ಮಕ್ಕೆ ಶಾಂತಿ ಪ್ರಾಪ್ತಿಯಾಗಲೆಂದು ಭಗವಂತನಲ್ಲಿ ಬೇಡುತ್ತೇವೆ.
ನೊಂದ ಹಾಗೂ ಸದಾ ನಿಮ್ಮ ನೆನೆಯುವ ಮನಸ್ಸು,
ಸಂದೇಶ್.ಎಸ್.ಜೈನ್
ಹುಟ್ಟು ಪೋಲಿಯೋ ಪಿಡಿತರಾಗಿ ಎರಡು ಕಾಲು ಬಲಹೀನತೆಗೊಳಗಾಗಿದ್ದರು. ತನ್ನ ಕ್ರಿಯಾಶೀಲತೆಯಿಂದ ಗಮನ ಸೆಳೆದಿದ್ದ ಬಸವೇಶ ಅವರು ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಅಚಲವಾದ ಗುರಿಯನ್ನಿಟ್ಟು ಮುನ್ನಡೆದವರು. ತಂದೆ ತಾಯಿ ಹಾಗೂ ಅಕ್ಕನ ಸಹಕಾರ, ಮಾರ್ಗದರ್ಶನದಲ್ಲಿ ಬಿ.ಕಾಂ ಪದವಿಯನ್ನು ಪೊರೈಸಿದ ಅವರು ಪದವಿ ಮುಗಿದ ಮೇಲೆ ಮನೆಯಲ್ಲೆ ಕೂತು ನವದಾನ್ಯ ಇನ್ನಿತರ ಅಗತ್ಯ ಆಹಾರ ವಸ್ತುಗಳನ್ನು ಸಿದ್ದಪಡಿಸಿ ಸ್ಥಳೀಯವಾಗಿ ಮಾರುಕಟ್ಟೆಯನ್ನು ಆರಂಭಿಸಿದ್ದರು. ಜೀವನದಲ್ಲಿ ಸಾಧಿಸಬೇಕೆಂದು ಪಣತೊಟ್ಟಿದ್ದ ಬಸವೇಶ ಅವರು ಕಿಡ್ನಿ ವೈಫಲ್ಯಕ್ಕೊಳಗಾಗಿ ಮೃತ ಪಟ್ಟಿದ್ದಾರೆ.
ಸೃಜನಾಶೀಲತೆಯನ್ನು ಮೈಗೂಡಿಸಿಕೊಂಡಿದ್ದ ನಾನು ಮೆಚ್ಚಿದ ಅಪರೂಪದ ಅಪೂರ್ವ ವ್ಯಕ್ತಿ ಬಸವೇಶ. ಅಪರೂಪಕ್ಕೊಮ್ಮೆ ಸಿಕ್ಕ ಕೂಡಲೆ ಆಂಕಲ್ ಎಂದು ಅಕ್ಕರೆಯಿಂದ ಮಾತನಾಡಿಸುತ್ತಿದ್ದ ಬಸವೇಶ ಅವರ ಅಗಲುವಿಕೆಯನ್ನು ಸಹಿಸಲಾಗದು. ವಿಕಲಚೇತನರಾಗಿದ್ದರೂ ಅವರಿಂದ ಮಹತ್ವದ ಕಾರ್ಯವನ್ನು ಮಾಡಿಸಬೇಕೆಂಬ ಹಂಬಲದಲ್ಲಿದ್ದವ ನಾನು. ಆ ಹಂಬಲವನ್ನು ಅವರಿಗೆ ತಿಳಿಸಿ, ಅವರು ಆ ದಿಸೆಯಲ್ಲಿ ಮುನ್ನಡೆದಿದ್ದರು. ಆದರೆ ವಿಧಿಯಾಟ ಅದಕ್ಕೆ ಅವಕಾಶ ನೀಡದಿರುವುದು ಮಾತ್ರ ನೋವಿನ ಸಂಗತಿ.
ಹೆತ್ತ ಮಗುವನ್ನು ಮೂರ್ನಾಲ್ಕು ವರ್ಷ ಮಗುವಿನಂತೆ ತಂದೆ ತಾಯಿಗಳು ಮುತುವರ್ಜಿಯಿಂದ ನೋಡಿಕೊಳ್ಳುವುದು ಸಹಜ. ಆದರೆ ನಮ್ಮ ಗಿರಿರಾಜ ದಂಪತಿಗಳು ಸುಪುತ್ರ ಬಸವೇಶರವರನ್ನು ಕಳೆದ 24 ವರ್ಷಗಳಿಂದ ಎಳೆಯ ಮಗುವಿನಂತ ಸಾಕಿ ಸಲಹಿದ್ದು ಮಾತ್ರ ರಿಯಾಲ್ ಗ್ರೇಟ್. ಅವರುಗಳ ಪುಣ್ಯ ಕಾರ್ಯಕ್ಕೆ ಶಿರಬಾಗುವೆ.
ನನ್ನ ಹೃದಯ ಮಿತ್ರ ಬಸವೇಶ ನಿಮ್ಮ ಅಗಲುವಿಕೆಯಿಂದ ನಾವು ನೊಂದಿದ್ದೇವೆ. ನಿಮ್ಮ ಆತ್ಮಕ್ಕೆ ಶಾಂತಿ ಪ್ರಾಪ್ತಿಯಾಗಲೆಂದು ಭಗವಂತನಲ್ಲಿ ಬೇಡುತ್ತೇವೆ.
ನೊಂದ ಹಾಗೂ ಸದಾ ನಿಮ್ಮ ನೆನೆಯುವ ಮನಸ್ಸು,
ಸಂದೇಶ್.ಎಸ್.ಜೈನ್




No comments:
Post a Comment