Monday, March 4, 2019


ದಾಂಡೇಲಿ: ಆಹಾ: ಒಂದೆಡೆ ಬಿಸಿಲು, ದಟ್ಟ ಕಾನನನ ಮಧ್ಯೆ ಏರಿಳಿದು ವರ್ಷಕ್ಕೊಮ್ಮೆ ದರ್ಶನ ನೀಡುವ ಕವಳೇಶ್ವರನ ದರ್ಶನ ಪಡೆಯುವ ಭಕ್ತರ ಮನತಣಿಸಲು ಮತ್ತು ನೀರಿನ ದಾಹ ತಣಿಸಲು ಕಳೆದ 19 ವರ್ಷಗಳಿಂದ ಶುದ್ದ ಕುಡಿಯುವ ನೀರು ಹಾಗೂ ಬೆಲ್ಲವನ್ನು ವಿತರಿಸುವ ಕಾಯಕಕ್ಕೆ ಇಳಿಯುವುದರ ಮೂಲಕ ಭಕ್ತರ ನೀರಿನ ದಾಹ ತಣಿಯಲು ಕೈಗೊಂಡ ದಾಂಡೇಲಿಯ ರಾಜೇಶ ಜುವ್ಹೆಲ್ಲರ್ಸ್ ಮಾಲಕ ಹಾಗೂ ಯುವ ಸಮಾಜ ಸೇವಕ ರಾಜೇಶ ವೆರ್ಣೇಕರ ಅವರು ಕೈಗೊಂಡ ಈ ಸೇವಾ ಕೈಂಕರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕಳೆದ 19 ವರ್ಷಗಳಿಂದ ಈ ಸೇವೆಯನ್ನು ನೀಡುತ್ತಾ ಬಂದಿರುವ ರಾಜೇಶ ವೆಣರ್ೇಕರ ಅವರ ಈ ಸೇವೆಯ ಹಿಂದೆ ಬಲವಾದ ಕಾರಣವಿದೆ. ಹೌದು, 1999 ರಲ್ಲಿ ಕವಳೇಶ್ವರನ ದರ್ಶನಕ್ಕೆ ಕುಟುಂಬ ಸಮೇತರಾಗಿ ಹೋದ ಸಂದರ್ಭದಲ್ಲಿ ನೀರಿಗಾಗಿ ಹಪಹಪಿಸುತ್ತಿರುವುದನ್ನು ನೋಡಿ, ಮುಂದಿನ ವರ್ಷದಿಂದ ಈ ಸಮಸ್ಯೆಗೆ ಪರಿಹಾರವನ್ನು ನೀಡಬೇಕು, ದಣಿದು ಬರುವ ಭಕ್ತರಿಗೆ ತತಕ್ಷಣವೆ ಕುಡಿಯುವ ನೀರು ಸಿಗಬೇಕೆಂದು ಚಿಂತಿಸಿ 2000 ನೇ ವರ್ಷದಿಂದ ರಾಜೇಶ ವೆರ್ಣೇಕರ ಅವರು ತನ್ನ ಗಳೆಯರ ಹಾಗೂ ತನ್ನ ಸಂಸ್ಥೆಯ ಸಿಬ್ಬಂದಿಗಳ ಜೊತೆಗೂಡಿ ದಣಿವರಿದು ಬಂದ ಭಕ್ತರಿಗೆ ಶುದ್ದ ಕುಡಿಯುವ ನೀರು ಹಾಗೂ ಬೆಲ್ಲದ ವ್ಯವಸ್ಥೆಯನ್ನು ಮಾಡುವುದರ ಮೂಲಕ ಭಕ್ತಾಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಈ ವರ್ಷವೂ ಸೋಮವಾರ ಅತ್ಯಂತ ವ್ಯವಸ್ಥಿತವಾಗಿ, ಶಿಸ್ತುಬದ್ದವಾಗಿ ನೀರು ಮತ್ತು ಬೆಲ್ಲವನ್ನು ವಿತರಿಸುವ ಮೂಲಕ ರಾಜೇಶ ವೆರ್ಣೇಕರ ಹಾಗೂ ಅವರ ತಂಡ ಗಮನ ಸೆಳೆದಿದೆ.

ಇದು ನಿರಂತರ:
ರಾಜೇಶ ವೆರ್ಣೇಕರ 
ಮಹಾ ಶಿವರಾತ್ರಿಯಂದು ಕವಳೇಶ್ವರ ಸನ್ನಿಧಿಗೆ ಬರುವ ಭಕ್ತಾಭಿಮಾನಿಗಳಿಗೆ ನೀರು ಮತ್ತು ಬೆಲ್ಲ ವನ್ನು ವಿತರಿಸುವ ಕಾರ್ಯ ಮಹಾಶಿವರಾತ್ರಿಯಂದು ನಿರಂತರವಾಗಿ ನಡೆಯಲಿದೆ. ಇದು ಶಿವನ ಸೇವೆ ಎಂದು ರಾಜೇಶ ವೆರ್ಣೇಕರ ಅವರು ಪತ್ರಿಕೆಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ದುರ್ಗಮ ಕಾಡಿನೊಳಗೊಡೆ ಏರಿಳಿದು ಕವಳೇಶ್ವರ ದರ್ಶನ ಪಡೆಯುವ ಭಕ್ತರ ಮನ ತಣಿಸಲು ಆರಂಭಿಸಿದ ರಾಜೇಶ ವೆರ್ಣೇಕರ ಹಾಗೂ ಅವರ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ನಿಮ್ಮವ

ಸಂದೇಶ್.ಎಸ್.ಜೈನ್
 




 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...