Thursday, April 25, 2019

ಇಂದು ನನ್ನ 7ನೇ ವರ್ಷದ ವಿವಾಹ ವಾರ್ಷಿಕೋತ್ಸವ
 
ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟು 7 ವರ್ಷಗಳು ಸಂದಿವೆ. ಕಳೆದ 7 ವರ್ಷಗಳಿಂದಲೂ ನನ್ನನ್ನು ಪ್ರತಿಸಲ ಪ್ರತಿಕ್ಷಣ ಸಹಿಸಿಕೊಂಡು ಉದ್ದರಿಸಿ ಮುನ್ನಡೆಸುತ್ತಿರುವ ನನ್ನ ಜೀವನದ ಭಾಗ್ಯದ ಬೆಳಕಾದ ಕೈ ಹಿಡಿದ ಮಡದಿ ಪದ್ಮಶ್ರೀಗೆ ನಮ್ರ ಕೃತಜ್ಞತೆಗಳು. ನನ್ನ ಅಪ್ಪ, ಅಮ್ಮನಿಗೆ ಹ್ಮೆಮಯ ಸೊಸೆಯಾಗಿ, ಅತ್ತೆ ಮಾವನಿಗೆ ಪ್ರೀತಿಯ ಮಗಳಾಗಿ, ನನ್ನ ಹೃದಯವಾದ ಮಗ ಸುಯೋಗನಿಗೆ ಅಕ್ಕರೆಯ ಅಮ್ಮನಾಗಿ,  ನನ್ನ ಸಂಸಾರದೊಡತಿಯಾಗಿರುವ ಪದ್ಮಶ್ರೀ ನಿನಗಿದೊ ಮಗದೊಮ್ಮೆ ಥ್ಯಾಂಕ್ಸ್. ನನ್ನನ್ನು ವರಿಸಿ, ನನ್ನನ್ನು ಸಹಿಸಿ ಸಲಹುತ್ತಿರುವ ಪದ್ಮಶ್ರೀ ನಿನ್ನ ಪ್ರಾಂಜಲ ಹೃದಯದ ಮನಸ್ಸಿಗೆ ನಾನು ಏನು ಹೇಳಿದರೂ ಕಡಿಮೆನೆ. ನನ್ನ ಸಾವಿರ ತಪ್ಪುಗಳನ್ನು ಮನ್ನಿಸಿ, ಮುನ್ನಡೆಸುವ ನಿನಗೆ ಇಂದು ನನ್ನಿಂದಾಗಿರುವ ತಪ್ಪುಗಳಿಗೆ ಸ್ವಾರಿ ಹೇಳುತ್ತೇನೆ.

ಐ ಲೈವ್ ಯೂ,  ಪದ್ಮಶ್ರೀ, ಐ ಲವ್ ಯೂ

ಎಂದೆಂದೂ ನಿನ್ನವನೆ,

ಸಂದೇಶ್.ಎಸ್.ಜೈನ್

 

Wednesday, April 24, 2019

ಶಾಂತ ಮನಸ್ಸಿನ ಶಾರದಾ ಇನ್ನಿಲ್ಲ
ಅಯ್ಯೋ ವಿಧಿಯೆ?. ನನ್ನ ತಂಗಿಯನ್ನೇಕೆ ಕರಕೊಂಡಿ?
ನಾನು ಅತ್ಯಂತ ಇಷ್ಟ ಮತ್ತು ಗೌರವಿಸುತ್ತಿದ್ದ ನನ್ನ ಒಡಹುಟ್ಟಿದ ತಂಗಿಯಂತೆ ಇದ್ದವರು ನನ್ನ ತಂಗಿ ಶಾರದಾ ಅವರು. ನಮ್ಮ ದಾಂಡೇಲಿ ನಗರ ಸಭೆಯಲ್ಲಿ ಆರೋಗ್ಯ ನಿರೀಕ್ಷಕರಾಗಿ ಏಳೆಂಟು ವರ್ಷಗಳ ಕಾಲ ಅನುಪಮ ಸೇವೆ ಸಲ್ಲಿಸಿ ಪ್ರಾಮಾಣಿಕ ಅಧಿಕಾರಿಯಾಗಿ ಗಮನ ಸೆಳೆದವರು ಇದೇ ಸಹೋದರಿ ಶಾರದಾ ಅವರು. ಹಸುಗೂಸು ಮಗುವನ್ನು ತನ್ನ ತಾಯಿಯ ಕೈಯಲ್ಲಿ ಕೊಟ್ಟು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕೆಲಸ ಮಾಡುತ್ತಿದ್ದ ಸ್ವಚ್ಚ ಹೃದಯದ ಕೆಲಸಗಾರ್ತಿ ಮುದ್ದಿನ ತಂಗಿ ಶಾರದಾ ಇನ್ನಿಲ್ಲ. ಮರಳಿ ಬಾರದ ಲೋಕಕ್ಕೆ ಪಯಾಣ ಬೆಳೆಸಿದ್ದಾರೆ ಎನ್ನುವುದನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. 

ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿದ ಕರುಳ ಬಳ್ಳಿಗೆ ಕಾಲ ಕಾಲಕ್ಕೆ ಎದೆ ಹಾಲು ಉಣಿಸಬೇಕಾದ ನಮ್ಮ ಶಾರದಾ ಅವರು ಬಾಟಲಿ ಹಾಲನ್ನು ಕೊಡಿಸಿ ಮಗುವನ್ನು ಬೆಳೆಸುವುದರ ಜೊತೆಗೆ ಕರ್ತವ್ಯ ಪ್ರಜ್ಞೆ ಮೆರೆದಿರುವುದನ್ನು ಭಗವಂತನು ಸಹಿಸಿಕೊಳ್ಳಲಿಲ್ಲವಲ್ಲ ಎಂಬ ಕೊರಗು ಇಂದು ಮುಂಜಾನೆಯಿಂದ ನನಗೆ ಕಾಡಿಸುತ್ತಿದೆ.

ಹೌದು, ಸ್ನೇಹಿತರೇ, ಇಂದು ನಾನು ಅತೀಯಾಗಿ ಮುದ್ದಿಸುತ್ತಿದ್ದ ನನ್ನ ಮನದ ತಂಗಿ ಶಾರದಾ ಅವರು ನಮ್ಮೆಲ್ಲರನ್ನು ಬಿಟ್ಟು ಪರಲೋಕಕ್ಕೆ ಪ್ರಯಾಣಿಸಿದ್ದಾರೆ. ಇನ್ನೂ ಬಹುವರ್ಷಗಳ ಕಾಲ ಬದುಕಿ, ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಬೇಕಿದ್ದ ಶಾರದಾ ಇಂದು ನಮ್ಮನ್ನೆಲ್ಲ ಅಗಲಿರುವುದು ಅತ್ಯಂತ ದುಖ:ದ ಸಂಗತಿ. ಸ್ನೇಹಿತರೇ ಬೆಂಗಳೂರಿಗೆ ಪಯಾಣಿಸುತ್ತಿದ್ದ ಶಾರದಾ ಅವರು ಸೇರಿ ಅವರ ಮನದೊಡೆಯ ಸುನೀಲ ಗಾವಡೆಯವರು ಇತ್ತೀಚೆಗೆ ಖರೀದಿಸಿದ ಹೊಚ್ಚ ಹೊಸ ಸ್ವಿಪ್ಟ್ ಡಿಜೈರ್ ಕಾರಿನಲ್ಲಿ ಬೆಂಗಳೂರಿನಲ್ಲಿದ್ದ ಮಾನಸ ಪುತ್ರನನ್ನು ಕರೆಯಲೆಂದು ರಾತ್ರಿ ಪಯಾಣ ಬೆಳೆಸಿದ್ದರು. ಆದರೆ ವಿಧಿಯಾಟಕ್ಕೆ ಏನು ಹೇಳಲಿ. ತಾಳ್ಮೆ, ಏಕಾಗ್ರತೆಯನ್ನು ಮೈಗೂಡಿಸಿಕೊಂಡಿದ್ದ ಕರಾಟೆಯಲ್ಲಿ ಅಂತರಾಷ್ಟ್ರೀಯ ಸಾಧನೆಗೈದಿದ್ದ ಸುನೀಲ ಗಾವಡೆಯವರು ಚಲಾಯಿಸುತ್ತಿದ್ದ ಕಾರು ಟ್ರಕಿಗೆ ಬಡಿದ ಪರಿಣಾಮವಾಗಿ ನನ್ನ  ತಂಗಿ ಶಾರದಾ ಅವರು ಸ್ಥಳದಲ್ಲೆ ಅಸು ನೀಗಿದ್ದಾರೆ. ಇನ್ನೂ ನಮ್ಮ ಸುನೀಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅತ್ಯಂತ ಕರುಳ ಹಿಂಡುವ ನೋವಿನ ಘಟನೆ ಇದಾಗಿದ್ದು, ಇಂಥಹ ದುರ್ಘಟನೆ ಎಂದು ಮರುಕಳಿಸದಿರಲೆಂದು ಪ್ರಾರ್ಥಿಸುತ್ತೇನೆ. ನಮ್ಮನ್ನು ಅಗಲಿದ ಮುದ್ದಿನ ತಂಗಿ ಶಾರದಾ ಅವರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲಿ, ಅವರ ಪತಿ ಸುನೀಲ ಗಾವಡೆಯವರು ಶೀಘ್ರ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ಇತೀ,

ಸಂದೇಶ್.ಎಸ್.ಜೈನ್

 

Friday, April 12, 2019

ವೈವಾಹಿಕ ಜೀವನಕ್ಕೆ ಮುಂದಡಿಯಿಟ್ಟ ನವಜೋಡಿಗೆ ಶುಭಾಶಯಗಳು
ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿರುವ ಬಾಹುಬಲಿ ಸಭಾಭವನದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹಮಹೋತ್ಸವವನ್ನು ಏರ್ಪಡಿಸಿ ವೈವಾಹಿಕ ಜೀವನಕ್ಕೆ ಶುಭ ಹೆಜ್ಜೆಯಿಟ್ಟ ಚಿ: ಪ್ರದೀಪ್ ಮತ್ತು ಚಿ:ಸೌ: ಸುರಕ್ಷಿತ ಅವರುಗಳಿಗೆ ಹಾರ್ದಿಕ ಶುಭಾಶಯಗಳು.

ಭವಿಷ್ಯದ ಸಿಹಿಕನಸುಗಳು ಶೀಘ್ರ ಈಡೇರಲಿ, ಸಂತೃಪ್ತಿ ಮತ್ತು ಸಮೃದ್ದಿಯನ್ನು ಭಗವಂತ ಸದಾ ದಯಪಾಲಿಸಲಿ. ಶುಭವಾಗಲಿ, ಬಾಳು ಬಂಗಾರವಾಗಲಿ ಎಂದು ಹಾರೈಸುವ,

ನಿಮ್ಮವ
ಸಂದೇಶ್.ಎಸ್.ಜೈನ್

 

Wednesday, April 10, 2019

ಜೈನ್ ಇಡ್ಲಿ ಕೆಫೆ, ದಾಂಡೇಲಿ

ನಮಸ್ಕಾರ
ದಯವಿಟ್ಟು ಓದಿ, ಪ್ರೊತ್ಸಾಹಿಸಿ, ಆಶೀರ್ವದಿಸಿ
ನಮ್ಮದು ಒಂದು ಸಣ್ಣ ಗೂಡಂಗಡಿ. ಹಾಗಾಂತ ಹೇಳಿ ಗೂಡಂಗಡಿ ಅಂತಾ ಹೇಳಿಕೊಳ್ಳಲು ನನಗೆ ಸ್ವಲ್ಪನೂ ಅಂಜಿಕೆಯಿಲ್ಲ. ನಮ್ಮದು ಒಂದು ಚೋಟುದ್ದ ಇರುವ ಉಪಹಾರ ಕೇಂದ್ರ. ಅದುವೆ ಜೈನ್ ಇಡ್ಲಿ ಕೆಫೆ. ಬೆಳಿಗ್ಗೆ 7 ಗಂಟೆಯಿಂದ ಸರಿ ಸುಮಾರು 10.30 ಗಂಟೆಯವರೆಗೆ ಸೇವೆಯನ್ನು ನೀಡುತ್ತಿದೆ.

ನನ್ನ ಈ ಸಣ್ಣ ಪ್ರಯತ್ನಕ್ಕೆ ದಾಂಡೇಲಿ ಜನತೆ ನೀಡಿದ ಪ್ರೋತ್ಸಾಹ ಮತ್ತು ಪ್ರೀತಿಗೆ ತಲೆಬಾಗಿದ್ದೇನೆ. ನನಗೆ ಅಡುಗೆ ಮಾಡುವುದು ಪ್ರವೃತ್ತಿ. ಈ ಪ್ರವೃತ್ತಿಯನ್ನು ವೃತ್ತಿಯನ್ನಾಗಿಸಬೇಕೆಂಬ ಉದ್ದೇಶದಿಂದ ಈ ರೀತಿಯ ಆಲೋಚನೆಯನ್ನು ಹೊಂದಿದ ಫಲಶೃತಿಯಾಗಿ ನಿಮ್ಮೆಲ್ಲರ ಮುಂದೆ ಅಂಬೆಗಾಲಿಡುತ್ತಿರುವ ಸಣ್ಣ ಕೂಸಿನಂತೆ ಜನ್ಮ ತಳೆದ ಜೈನ್ ಇಡ್ಲಿ ಕೆಫೆಗೆ ನೀವೆ ಮಾರ್ಗದರ್ಶಕರು, ನೀವೆ ಪ್ರೋತ್ಸಾಹದಾಯಕರು ಎಂಬುವುದನ್ನು ಬಲವಾಗಿ ನಂಬಿದವ ನಾನು.

ಸಣ್ಣ ಗೂಡಂಗಡಿಯಾದರೂ ದಾಂಡೇಲಿಯ ಬಹುತೇಕ ಜನರು ತನ್ನ ವೃತ್ತಿ, ಪ್ರತಿಷ್ಟೆಯನ್ನೆಲ್ಲ ಬದಿಗಿತ್ತು ನಮ್ಮ ಬಳಿ ಬಂದು ಉಪಹಾರ ಸೇವಿಸುತ್ತಿರುವುದು ನಮಗೆ ಚೈತನ್ಯಶಕ್ತಿ ಮತ್ತು ಉಲ್ಲಾಸಕಾರ ವಾತವರಣವನ್ನು ನಿರ್ಮಿಸಿಕೊಟ್ಟಿದೆ. ಇಂಥಹ ಘನತವೆತ್ತ ದಾಂಡೇಲಿಯಲ್ಲಿ ನಿಮ್ಮೆಲ್ಲರಲ್ಲಿ ನಾನು ಒಬ್ಬನಾಗಿರುವುದು ನನ್ನ ಜೀವನದ ಮಹತ್ವದ ಸುದೈವ.

ಹೌದು ಆತ್ಮೀಯರೇ, ಗುಣಮಟ್ಟ, ರುಚಿಕರ ಹಾಗೂ ಕಡಿಮೆದರದಲ್ಲಿ ಉಪಹಾರವನ್ನು ನೀಡಬೇಕೆಂದು ಸಂಕಲ್ಪಿಸಿ ಆರಂಭಿಸಿದ ಈ ಕೇಂದ್ರ ನಿಮ್ಮೆಲ್ಲರ ಆಶೀರ್ವಾದದಿಂದಲೆ ಮುನ್ನಡೆಯುತ್ತಿದೆ. ನಮ್ಮದೇನಿಲ್ಲ. ನೀವು ಇದ್ದರೆ ನಾವು ಎಂಬ ವಿಚಾರ ನಮ್ಮದು.

ಒಂದು ಮಾತು ನಿಜ, ನಮ್ಮದು ಮನೆ ಪಾಕ ತತ್ವದಡಿಯಲ್ಲಿ ಪ್ರಾರಂಭಿಸಿದ ಉಪಹಾರ ಕೇಂದ್ರ. ಈ ಮಾತನ್ನು ಚಾಚು ತಪ್ಪದೆ ಪಾಲಿಸುತ್ತೇನೆ. ನನ್ನ ಈ ಸಣ್ಣ ಪ್ರಯತ್ನಕೆ ಬಹುತೇಕ ನನ್ನ ಹಿತೈಷಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವನ್ನು ನೀಡಿ ನನಗೆ ಶಕ್ತಿ ತುಂಬಿದ್ದಾರೆ. ನಿಮ್ಮೆಲ್ಲರ ಸಾಮಾಜಿಕ ಜಾಲತಾಣದ ಪ್ರೋತ್ಸಾಹದ ನುಡಿಗಳಿಗೆ ಕೃತಜ್ಞತೆ ಹೇಳಲು ಆಗಲಿಲ್ಲವಲ್ಲ ಎಂಬ ನೋವು ನನಗಿದೆ. ಯಾಕೆಂದ್ರೆ ನಾನು ಮಲಗುವುದೇ ರಾತ್ರಿ 1.30 ಗಂಟೆಗೆ ಮತ್ತು ಬೆಳಿಗ್ಗೆ ಏಳುವುದು ರಾತ್ರಿ 3.30 ಗಂಟೆಗೆ. ಹಾಗಾಂತ ಹೇಳಿ ಇದನ್ನು ಹೇಳಿ ನಿಮ್ಮೆದುರು ಹಿರೋ ಆಗಿ ಮೆರೆಯಬೇಕೆಂಬ ಉದ್ದೇಶವಲ್ಲ.

ಹಲವರು ಅಂದುಕೊಂಡಿರುವುದು ಅನೇಕವಾದರೂ ಸತ್ಯ ನುಡಿಯುವೆ ನಾನು:
ನಮ್ಮಲ್ಲಿ ಒಂದು ಪ್ಲೇಟ್ ಇಡ್ಲಿಗೆ 15 ರೂ ಇರುತ್ತದೆ. ಕಡಿಮೆ ದರ ಹೌದು. ಆದರೆ ಇಡ್ಲಿನೂ ಗಾತ್ರದಲ್ಲಿ ಸಣ್ಣದಿದೆ ಎನ್ನುವ ಪರಿಜ್ಞಾನ ನನಗಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ.

ಜೈನ್ ಇಡ್ಲಿ ಕೆಫೆಯಲ್ಲಿ ಗಟ್ಟಿ ಚಟ್ನಿ ಇಲ್ಲ  ಯಾಕೆಂದ್ರೆ ನಾವು ಪೂರ್ತಿ ತೆಂಗಿನ ಕಾಯಿಯ ಚಟ್ಮಿ ಮಾಡುವುದರಿಂದ ಅನಿವಾರ್ಯ ಕಾರಣಗಳಿಂದ ಗಟ್ಟಿ ಚಟ್ನಿ ಕೊಡಲು ಅಸಾಧ್ಯವಾಗುತ್ತಿದೆ.

 ಸ್ವಚ್ಚತೆಗೆ ಮೊದಲ ಆದ್ಯತೆಯನ್ನು ನೀಡಿದ್ದೇವೆ. ನಮ್ಮಲ್ಲಿ ಇಡ್ಲಿ ಮತ್ತು ರೈಸ್ ಬಾತ್ ಹಾಟ್ ಬಾಕ್ಸಿನಲ್ಲಿರುತ್ತದೆ. ಕೆಲವೊಂದು ಸಲ ಇಡ್ಲಿ ಸ್ವಲ್ಪ ತಣ್ಣಗಾಗಿರುತ್ತದೆ. ಆದರೆ ಅದೇ ತಣ್ಣಗಾಗಿರುವ ಇಡ್ಲಿಯನ್ನು ಮಗದೊಮ್ಮೆ ಬಿಸಿ ಮಾಡಿ ಗ್ರಾಹಕರಿಗೆ ಮಾರಾಟ ಮಾಡಿ, ಗ್ರಾಹಕರ ಆರೋಗ್ಯದ ಮೇಲೆ ತೊಂದರೆಯಾಗುವಂತಹ ಕೆಲಸಕ್ಕೆಂದೂ ಕೈ ಹಾಕುವುದಿಲ್ಲ.
 
 ಗುಣಮಟ್ಟಕ್ಕೆ ಮೊದಲ ಆಧ್ಯತೆ: ಜೈನ್ ಇಡ್ಲಿ ಕೆಫೆಯಲ್ಲಿ ಗುಣಮಟ್ಟದ ಆಹಾರ ವಸ್ತುಗಳಿಗೆ ಪ್ರಮುಖ ಪ್ರಾಧ್ಯಾನ್ಯತೆ ನೀಡಲಾಗುತ್ತಿದೆ.

 ಸದ್ಯಕ್ಕೆ ಬಸ್ ನಿಲ್ದಾಣದ ಮುಂಭಾಗ ಮತ್ತು ಪಾಟೀಲ್ ಆಸ್ಪತ್ರೆಯ ಸನಿಹದಲ್ಲಿ ಜೈನ್ ಇಡ್ಲಿ ಕೆಫೆ ಸೇವೆಯನ್ನು ನೀಡುತ್ತಿದೆ. ಈ ಉಪಹಾರ ಕೇಂದ್ರದ ವಿಚಾರಕ್ಕೆ ಹೇಳುವುದಾದರೇ ನಾವೇನೂ ಈ ವಿಷಯದಲ್ಲಿ ಪ್ರಬುದ್ದರಲ್ಲ. ಆದರೆ ನಮ್ಮ ಕೇಂದ್ರಕ್ಕೆ ಬಂದು ಬಹಳಷ್ಟು ಜನ ಪಾರ್ಸೆಲ್ ಒಯ್ಯುತ್ತಾರೆ. ಆದರೆ ನಾವು ಪಾರ್ಸೆಲ್ ಕಟ್ಟುವುದರಲ್ಲಿ ಇನ್ನು ಅಂಗನವಾಡಿ ಮಕ್ಕಳಾಗಿದ್ದೇವೆ ಎನ್ನುವುದು ನಮಗೆ ತಿಳಿದಿದೆ.
 
ಜೈನ್ ಇಡ್ಲಿ ಕೆಫೆ ಎಂದೇಳಿ ರೈಸ್ ಬಾತುನೂ ಮಾಡುತ್ತಿದ್ದಾನೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಬಹುತೇಕ ಗ್ರಾಹಕರ ಒತ್ತಾಯಕ್ಕೆ ರೈಸ್ ಬಾತ್ ಮಾಡಲಾಗುತ್ತದೆ.

ಪಾರ್ಸೆಲ್ ಕೊಂಡೊಯ್ಯುವವರು ದಯವಿಟ್ಟು ಮನೆಯಿಂದ ಬರುವಾಗ ಸಣ್ಣ ಡಬ್ಬ ಅಥವಾ ಚೀಲವನ್ನು ತಂದರೆ ಒಳಿತು. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಈ ನಿಟ್ಟಿನಲ್ಲಿ ಸರ್ವರ ಸಹಕಾರವಿರಲಿ.

ಇದೊಂದು ಸಣ್ಣ ಗೂಡಂಗಡಿ ಉಪಹಾರ ಕೇಂದ್ರ ಎಂದು ಹೇಳಲು ಒಂದಿಂಚು ಸಂಕೋಚ ಪಡೆಯಲಾರೆ. ಯಾಕೆಂದ್ರೆ ಪಾರ್ಟ್ ಟೈಮಾಗಿ 4 ಬಡ ಮಹಿಳೆಯರಿಗೆ ಮತ್ತು ನಾಲ್ವರು ಯುವಕರಿಗೆ ತಕ್ಕ ಮಟ್ಟಿನ ಉದ್ಯೋಗ ಸೃಷ್ಟಿಸಿದ ಸಂತೃಪ್ತಿ ನನಗಿದೆ.

ದಿನಾಂಕ:11.04.2019 ರಿಂದ ದಿನಾಂಕ: 15.04.2019 ರವರೆಗೆ ಜೈನ್ ಇಡ್ಲಿ ಕೆಫೆಗೆ ಅನಿವಾರ್ಯ ಕಾರಣಗಳಿಂದ ರಜೆ ಇರುತ್ತದೆ. ಗ್ರಾಹಕರು ಸಹಕರಿಸಬೇಕಾಗಿ ವಿನಮ್ರ ವಿನಂತಿ.

ದಾಂಡೇಲಿಯ ಜನತೆ ನೀಡುತ್ತಿರುವ ಪ್ರೀತಿ, ಪ್ರೋತ್ಸಾಹಕ್ಕೆ ಸದಾ ಋಣಿಯಾಗಿದ್ದೇನೆ.

ಸಹಕರಿಸಿದ, ಆಶೀರ್ವದಿಸಿದ ಸರ್ವರಿಗೂ ಮನಸ್ಸು ಬಿಚ್ಚಿ ಕೃತಜ್ಞತೆಗಳು.

ಕೊನೆಯ ಮಾತು: ನನ್ನನ್ನು ಮುದ್ದಿಸುವ ದಾಂಡೇಲಿ ಜನತೆಗೆ ಹಾಗೂ ನನ್ನನ್ನು ಸಹಿಸಿಕೊಂಡ ಮಡದಿ ಪದ್ಮಶ್ರೀ ಮತ್ತು ಮಗ ಸುಯೋಗನಿಗೆ ಶರಣನೆನ್ನುವೆ.

ನಿಮ್ಮವ

ಸಂದೇಶ್.ಎಸ್.ಜೈನ್.



 

 

Monday, April 8, 2019

ಅಸ್ತಂಗತರಾದ ಜರೋಮ ಡಿಸೋಜಾ 
ನಮ್ಮ ದಾಂಡೇಲಿಯ  ಡಿ.ಎಸ್. ಎಫ್.ಎ ಕಾರ್ಖಾನೆಯಲ್ಲಿ ಹಿರಿಯ ಅಧಿಕಾರಿಯಾಗಿ 35 ವರ್ಷ ಅನುಪಮ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಸಮಾಜಮುಖಿ ವ್ಯಕ್ತಿತ್ವದ ಜರೋಮ ಡಿಸೋಜಾ (65) ಇಂದು ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರ್ರೆಯಲ್ಲಿ ಹೃದಯಾಘಾತದಿಂದ ಸ್ವರ್ಗಸ್ಥರಾಗಿದ್ದಾರೆ.

ಜನಮುಖಿಯಾಗಿ, ಸಮಾಜಮುಖಿಯಾಗಿ ಬದುಕನ್ನು ಕಟ್ಟಕೊಂಡಿದ್ದ ದಾಂಡೇಲಿಯ ಕೊಂಡಿಯೊಂದು ಕಳಚಿದಂತಾಗಿದೆ. ಎಲ್ಲರೊಂದಿಗೆ ಬೆರೆಯುತ್ತಿದ್ದ ಮಾನವೀಯ ವ್ಯಕ್ತಿತ್ವದ ಜರೋಮ ಡಿಸೋಜಾ ಅವರ ಅಗಲಿಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲಿ ಎಂದು ಈ ಮೂಲಕ ಪ್ರಾರ್ಥಿಸುತ್ತಿದ್ದೇನೆ.

ಮರಳಿ ಜನ್ಮವೆತ್ತಿ ಬನ್ನಿ ಎಂಬ ಆಶಯದೊಂದಿಗೆ,

ಇಂತಿ

ಸಂದೇಶ್.ಎಸ್.ಜೈನ್
 

Friday, April 5, 2019

ಜೈನ್ ಇಡ್ಲಿ ಕೆಫೆ, ದಾಂಡೇಲಿ


 ನಿಮ್ಮೆಲ್ಲರ ಆಶೀರ್ವಾದ, ಸಹಕಾರ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ಸದಾ ನಮಗಿರಲಿ.
ದಿನಾಂಕ: 31.03.2019 ರಂದು ಒಂದು ಸಣ್ಣದಾದ ಇಡ್ಲಿ ಕೆಫೆ ಎಂಬ ಉಪಹಾರ ಕೇಂದ್ರವನ್ನು ಆರಂಭಿಸಿದ್ದೇನೆ. ದಾಂಡೇಲಿಯ ಜನತೆ ನನ್ನಿ ಈ ಕಾರ್ಯಕ್ಕೆ ಸಹಕಾರವನ್ನು ನೀಡುತ್ತಿರುವುದಕ್ಕೆ ಋಣಿಯಾಗಿದ್ದೇನೆ.

ಸ್ವಚ್ಚತೆಗೆ ಮೊದಲ ಆದ್ಯತೆ
ದರ ವಿವರ:
ಸಿಂಗಲ್ ಇಡ್ಲಿ- ರೂ:10.00
ಒಂದು ಪ್ಲೇಟ್ ಇಡ್ಲಿ- ರೂ: 15.00
ಜೈನ್ ರೈಸ್ ಬಾತ್ - ರೂ: 20.00
ಟೀ: 5.00
ಗ್ರಾಹಕರ ತಾಳ್ಮೆ ಮತ್ತು ಪ್ರೀತಿಯೆ ನಮಗೆ ಶ್ರೀರಕ್ಷೆ

ನಿಮ್ಮವ
ಸಂದೇಶ್.ಎಸ್.ಜೈನ್


Wednesday, April 3, 2019

ಜನ್ಮದಿನದ ಸಂಭ್ರಮದಲ್ಲಿ ಕ್ರೀಡಾ ಕ್ಷೇತ್ರದ ರಾಷ್ಟ್ರೀಯ ಸಾಧಕ ಮುರಳಿಧರ ಗುರವ
ವಯಸ್ಸು 60 ಮೀರಿದರೂ ಕ್ರಿಯಾಶೀಲತೆಯ ತರುಣ ನಮ್ಮ ಮುರಳಿಧರ ಗುರವ 
ಅವರೊಬ್ಬ ವಯಸ್ಸಿನಲ್ಲಿ ಹಿರಿಯರು. ಅವರಿಗೆ ನನಗೆ ವಯಸ್ಸಿನಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಅವರು ನನ್ನ ನೆಚ್ಚಿನ ನೆಚ್ಚಿನ ಸ್ನೇಹಿತ, ಮೆಚ್ಚಿನ ಮಾರ್ಗದರ್ಶಕರು. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರೀಯ ಸಾಧನೆಗೈದ ಅಪರೂಪದ ಅಪೂರ್ವ ವ್ಯಕ್ತಿ. ತಾನು ಬೆಳೆಯುವುದರ ಜೊತೆಗೆ ತನ್ನ ಮಗನನ್ನು ಸೇರಿದಂತೆ ಅನೇಕ ಯುವ ಜನರನ್ನು ಕ್ರೀಡಾ ಕ್ಷೇತ್ರದ ಅನನ್ಯ ಪ್ರತಿಭೆಗಳನ್ನು ಕೊಟ್ಟ ಹೆಗ್ಗಳಿಕೆಗೆ ಪಾತ್ರರಾದ ನಿಸ್ವಾರ್ಥ ಮನಸ್ಸಿನ ಹೃದಯವಂತ, ಗುಣವಂತ ನನ್ನ ಸೂಪರ್ ಪ್ರೆಂಡ್, ಸೂಪರ್ ಗುರು, ಸೂಪರ್ ಮಾರ್ಗದರ್ಶಕರು ಆಗಿರುವ ನಿವೃತ್ತ ಎ.ಎಸೈ ಮುರಳಿಧರ ಗುರವ ಅವರು. ಇಂದವರ ಬಗ್ಗೆ ಬರೆಯಲೆಬೇಕು. ಯಾಕ್ಗೊತ್ತಾ, ಹೇಳ್ತೆನೆ ಕೇಳಿ ಸ್ವಲ್ಪ.
 
ಇಂದು ನಮ್ಮ ಹಿರೋ ಮುರಳಿಧರ ಗುರುವ ಅವರಿಗೆ ಜನ್ಮದಿನದ ಸಂಭ್ರಮ. ಈ ಸಂಭ್ರಮಕ್ಕೆ ನನ್ನದೊಂದು ಪದಗುಚ್ಚಗಳ ಶುಭಾಶಯ. ಮಾನ್ಯ ಮುರಳಿಧರ ಗುರುವ ಅವರೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆ ಭಗವಂತ ಅವರನ್ನು ನೂರು ಕಾಲ ಸುಖವಾಗಿ ಇಟ್ಟಿರಲಿ ಎಂಬ ಪ್ರಾರ್ಥನೆಯೊಂದಿಗೆ ಅನಿಸಿದ್ದನ್ನು ನೇರವಾಗಿ ಬರೆಯಲು ಮುಂದಡಿಯಿಟ್ಟಿದ್ದೇನೆ.
ಅಂದ ಹಾಗೆ ನಮ್ಮ ಮುರಳಿಧರ ಗುರವ ಅವರು ಟೌನಶೀಪ್ ನಿವಾಸಿಯಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಅನುಪಮ ಸೇವೆ ಸಲ್ಲಿಸಿ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ಅವರ ಧರ್ಮಪತ್ನಿ ಶಿಕ್ಷಕಿ ವನಿತಾ ಕಿನ್ನರಕರ ಅವರು ಸ್ವರ್ಗಸ್ಥರಾಗಿದ್ದಾರೆ. ಪತ್ನಿಯ ಅಗಲುವಿಕೆಯ ನೋವಿನಲ್ಲಿ ಎರಡು ವರ್ಷ ಕಳೆದಿರುವ ಮುರಳಿಧರ ಅವರು ತನ್ನಿಬ್ಬರು ಮಕ್ಕಳಾದ ಪೂರ್ಣಿಮಾ ಮತ್ತು ಅಮರ್ ಗುರವ ಅವರಿಗೆ ಅಪ್ಪ ಮಾತ್ರವಲ್ಲದೇ ಅಮ್ಮನ ಪ್ರೀತಿಯನ್ನು ನೀಡುತ್ತಾ ಬಂದಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ 30 ವರ್ಷಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಮುರಳಿಧರ ಗುರವ ಅವರು ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರರಾಗಿ ಗಮನ ಸೆಳೆದವರು. ವಿವಿಧ ಅಥ್ಲೀಟ್ ಹಾಗೂ ಬೇರೆ ಬೇರೆ ಕ್ರೀಡೆಗಳಲ್ಲಿ ರಾಷ್ಟ್ರ ಮಟ್ಟದವರೆಗೆ ತನ್ನ ಛಾಪನ್ನು ಪ್ರದರ್ಶಿಸಿದ ಹೆಮ್ಮೆಯ ರಣಧೀರರಾಗಿದ್ದರು. ಪೊಲೀಸ್ ಇಲಾಖೆಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಿಂಚಿನ ಸಾಧನೆಯನ್ನು ಮಾಡಿ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಹೆಸರನ್ನು ತಂದುಕೊಟ್ಟ ಹೆಮ್ಮೆಯ ಕುಡಿ ನಮ್ಮ ಮುರಳಿಧರ ಗುರವ ಅವರು.
 
ತನ್ನ ಜೊತೆ ಇನ್ನೂ ಅನೇಕ ಯುವ ಪ್ರತಿಭೆಗಳಿಗೆ ಪ್ರೇರಣಾದಾಯಿಯಾಗಿರುವ ಮುರಳಿಧರ ಗುರವ ಅವರು ಸಾಕಷ್ಟು ಕ್ರೀಡಾ ಪ್ರತಿಭೆಗಳನ್ನು ಕ್ರೀಡಾ ಕ್ಷೇತ್ರಕ್ಕೆ ನೀಡಿ ಕ್ರೀಡಾ ಕ್ಷೇತ್ರದ ವರ್ಧನೆಗೆ ಶ್ರಮ ಸಾಧನೆಯನ್ನು ಧಾರೆ ಎರದಿದ್ದಾರೆ. ಮುದ್ದಿನ ಮಗ ಅಮರ್ ಗುರವ ಅವರ ಕ್ರೀಡಾ ಸಾಧನೆಗೆ ಮೊದಲ ಗುರು, ಮೊದಲ ಮಾರ್ಗದರ್ಶಕರಾದವರೆ ಮುರಳಿಧರ ಗುರವ ಅವರು. ಅವರ ಒತ್ತಾಸೆ, ಪ್ರೇರಣೆಯ ಫಲವಾಗಿ ಅಮರ್ ಗುರವ ಅವರು ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ತನ್ನ ಸಾಧನೆಯನ್ನು ಮೆರೆದಿದ್ದಾರೆ.
 
ವೃತ್ತಿ ಬದುಕಿನಲ್ಲಿ ಪ್ರಾಮಾಣಿಕತೆ, ಶಿಸ್ತು, ಪರೋಪಕಾರಿ ಗುಣವನ್ನು ಮೈಗೂಡಿಸಿಕೊಂಡಿದ್ದ ಮುರಳಿಧರ ಗುರವ ಅವರ ಧೈರ್ಯ ಎಷ್ಟರ ಮಟ್ಟಿಗೆ ಇತ್ತೇಂದರೇ ಎಂಥಹ ಕಠಿಣ ಪರಿಸ್ಥಿತಿಯಲ್ಲೂ ತನ್ನ ಕೆಚ್ಚೆದೆಯ ಧೈರ್ಯದಿಂದ ಹಲವಾರು ಪ್ರಕರಣಗಳನ್ನು ಬೇಧಿಸಿ ಇಲಾಖೆಯ ಗೌರವವನ್ನು ಇಮ್ಮಡಿಗೊಳಿಸಿದ ಶ್ರೇಯಸ್ಸನ್ನು ಹೊಂದಿದ್ದಾರೆ.
 
ನಿವೃತ್ತರಾದರೂ ಬಡವರಿಗೆ, ಸಂಕಷ್ಟದಲ್ಲಿದ್ದವರಿಗೆ ಸದಾ ನೆರವನ್ನು ನೀಡಿ, ಈಗಲೂ ವ್ಯಾಯಾಮ, ಯೋಗ ಎಂದು ವಿವಿಧ ಕಸರತ್ತುಗಳ ಮೂಲಕ ಯುವಕರನ್ನು ನಾಚಿಸುವಂತಹ ಎನರ್ಜಿಟಿಕ್ ಪರ್ಸನಾಲಿಟಿಯನ್ನು ಹೊಂದಿರುವ ಲವ್ಲಿ ಡಿಯರ್ ಮುರಳಿಧರ ಗುರವ ಅವರಿಗೆ ಅವರ ಸಾಹಸಿಕ ಹಾಗೂ ಸಾಧನೆಯ ಜೀವನ ಪಯಾಣದ ಯಶಸ್ಸಿಗೆ ಗುರು ಹಿರಿಯರ ಆಶೀರ್ವಾದ, ಮಡದಿ ದಿ: ವನಿತಾ ಅವರ ಪ್ರೀತಿ, ಮಕ್ಕಳಾದ ಅಮರ್ ಮತ್ತು ಪೂರ್ಣಿಮಾ ಅವರುಗಳ ಪ್ರೀತಿ, ಸೊಸೆ, ಅಳಿಯ, ಮೊಮ್ಮಕ್ಕಳ ಅಕ್ಕರೆಯ ವಾತ್ಸಲ್ಯವು ಪ್ರಮುಖ ಕಾರಣ.
 
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮುರಳಿಧರ ಗುರವ ಅವರಿಗೆ ಮಗದೊಮ್ಮೆ ನನ್ನಿ ಕಡೆಯಿಂದ ಶುಭಾಶಯಗಳು.
 
ನಿಮ್ಮವ

ಸಂದೇಶ್.ಎಸ್.ಜೈನ್


 

Monday, April 1, 2019

ನಗುಮೊಗದ ಆಪತ್ಪಾಂದವ ವೈದ್ಯ ನಮ್ಮೂರ ಡಾ: ಅನಿಲ್ ನಾಯ್ಕ
ಹ್ಯಾಪಿ ಬರ್ತುಡೆ ಮೈ ಡಿಯರ್ ಲವ್ಲಿ ಡಾಕ್ಟ್ರೆ
 
ಅವರದ್ದು ಜಬರ್ದಸ್ತ್ ಪರ್ಸನಾಲಿಟಿ. ನೇರ ಮಾತಿನ ಕ್ರಿಯಾಶೀಲ ಯುವಕ. ಗಂಡೆದೆಯ ದೈರ್ಯವಂತ. ಅಪತ್ತಿಗಂತೂ ಆಪತ್ಪಾಂದವ ಎನ್ನಲು ಅಡ್ಡಿಯಿಲ್ಲ. ಒಟ್ಟಿನಲ್ಲಿ ವೈದ್ಯ ಸೇವೆಯ ಮೂಲಕ ಅಲ್ಪ ವರ್ಷದಲ್ಲೆ ಮನೆ ಮಾತಾದ ಯುವಕ ಬೇರೆ ಯಾರು ಅಲ್ಲ. ಆ ಗುಣವಂತ ಡಾ: ಅನಿಲ್ ನಾಯ್ಕ.

ಅಂದ ಹಾಗೆ ಇಂದು ನಮ್ಮಲ್ಲೆರ ಅಚ್ಚುಮೆಚ್ಚಿನ ಡಾ: ಅನಿಲ್ ಅವರಿಗೆ ಜನ್ಮದಿನದ ಸಂಭ್ರಮ. ಹುಟ್ಟು ಹಬ್ಬದ ಖುಷಿಯಲ್ಲಿರುವ ಡಾ: ಅನಿಲ್ ಅವರಿಗೆ ನನ್ನ ಕಡೆಯಿಂದ ಒಲವಿನ ಶುಭಾಶಯಗಳು.

ಮಾಜಿ ಪೌರಾಯುಕ್ತ ಎನ್.ಎಸ್.ನಾಯ್ಕ ಅವರ ಮುದ್ದಿನ ಮಗನಾದ ಡಾ: ಅನಿಲ್ ಅವರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಪಡೆದರು. ಆ ಬಳಿಕ ಬಂಗೂರನಗರ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದು, ದಾವಣಗೆರೆಯ ಸುಪ್ರಸಿದ್ದ ಜೆ.ಜೆ.ಎಂ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪಡೆದರು.

ಎಳೆಯ ಮಗುವಾಗಿದ್ದಾಗಲೇ ದಷ್ಟಪುಷ್ಟರಾಗಿದ್ದ ನಮ್ಮ ಅನಿಲ್ ಅವರನ್ನು ಅವರ ಅಮ್ಮನಿಗೆ ಸಲೀಸಾಗಿ ಎತ್ತಿಕೊಳ್ಳಲು ಆಗುತ್ತಿರಲಿಲ್ಲ. ಮುದ್ದು ಕಂದ ಆವಾಗ್ಲೆ ಮನೆ ಸುತ್ತಾಮುತ್ತ ಎಲ್ಲರ ಪ್ರೀತಿ ವಾತ್ಸಲ್ಯಕ್ಕೆ ಪಾತ್ರರಾಗಿದ್ದದ್ದು ಮಾತ್ರ ವಿಶೇಷ. ಕ್ರಿಕೆಟ್, ವಾಲಿಬಾಲ್ ಅಂದರೆ ಪಂಚಪ್ರಾಣ ನಮ್ಮ ಅನಿಲ್ ಅವರಿಗೆ. ಶಾಲೆಗೆ ರಜೆ ಬಂತೆಂದರೆ ಉರಿ ಬಿಸಿಲಲ್ಲಿಯೂ ಮೈದಾನದಲ್ಲಿ ಕ್ರಿಕೆಟ್ ಆಡುವುದನ್ನು ಬೆಳೆಸಿಕೊಂಡಿದ್ದರಂತೆ. ಆಟದಲ್ಲೂ ಪಾಠದಲ್ಲೂ ಮುಂದಿದ್ದ ಡಾ: ಅನಿಲ್ ಅವರು ಶಾಲಾ/ಕಾಲೇಜು ದಿನಗಳಲ್ಲಿರುವಾಗ್ಲೆ ಅಸಂಖ್ಯಾತ ಗೆಳೆಯರನ್ನು ಸಂಪಾದಿಸಿಕೊಂಡಿದ್ದರು. ಅವರ ಗೆಳೆಯರ ಬಳಗವನ್ನು ನೋಡಿ ಇವ ಡಾಕ್ಟರ್ ಆಗುತ್ತಾನೊ ಎಂಬ ಒಳಗೊಳಗೆ ಚಿಂತೆ ಅವರ ಅಪ್ಪನಿಗಿದ್ದದ್ದು ಹೌದಾದರೂ, ಮಗನ ಕಲಿಕೆ ಮತ್ತು ಉತ್ಸಾಹ ಅಪ್ಪ, ಅಮ್ಮ ಇಟ್ಟುಕೊಂಡಿದ್ದ ಭವಿಷ್ಯದ ಕನಸು ನನಸಾಗಲು ಸಾಧ್ಯವಾಯಿತು.

ಎಂ.ಬಿ.ಬಿ.ಎಸ್ ಪದವಿ ಬಳಿಕ ಕೇರಳದ ಪ್ರಸಿದ್ದ ಆಸ್ಪತ್ರೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ಡಾ: ಅನಿಲ್ ಅವರು ಅಪ್ಪ, ಅಮ್ಮನ ಕರೆಗೆ ಓಗೊಟ್ಟು ಕೈ ತುಂಬ ಸಂಬಳ ಬರುವ ಕೆಲಸಕ್ಕೆ ಗುಡ್ ಬೈ ಹಾಡಿ ದಾಂಡೇಲಿಗೆ ಬಂದರು. ದಾಂಡೇಲಿಗೆ ಬಂದವರೆ ಹಳಿಯಾಳ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾಗಿ ಸೇವೆಯನ್ನು ಸಲ್ಲಿಸಲಾರಂಭಿಸಿದರು. ಪ್ರಸಕ್ತ ಹಳಿಯಾಳ ಸಾರ್ವಜನಿಕ ಆಸ್ಪತ್ರೆ ವ್ಯಾಪ್ತಿಯ ಭಾಗವತಿಯಲ್ಲಿರುವ ಪ್ರಾಥಾಮಿಕ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದರ ಮುನ್ನ ಯಡೋಗಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆಯನ್ನು ಸಲ್ಲಿಸಿ ಯಡೋಗಾ ಜನರ ಪೀತಿಗೆ ಪಾತ್ರರಾಗಿದ್ದರು. ಯಡೋಗಾ ಜನತೆಯ ಪಾಲಿಗೆ ಅದೃಷ್ಟ ವೈದ್ಯರಾಗಿ ಸೇವೆಯನ್ನು ಸಲ್ಲಿಸಿದ ಕೀರ್ತಿ ನಮ್ಮ ಅನಿಲ್ ಅವರಿಗಿದೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಅತ್ಯಂತ ಗೌರವಯುತವಾಗಿ ನಡೆದುಕೊಳ್ಳುವ ಪರಿಯಂತು ಅವರ ಹೃದಯವಂತಿಕೆಯನ್ನು ಸಾರಿ ಹೇಳುತ್ತದೆ. ಸಾವಿನ ಸನಿಹದಲ್ಲಿದ್ದ ಅನೇಕರಿಗೆ ಆರೋಗ್ಯ ಧೈರ್ಯವನ್ನು ನೀಡಿ ಅವರುಗಳನ್ನು ಉಳಿಸಿಕೊಂಡ ಧನ್ಯತೆ ನಮ್ಮ ಅನಿಲ್ ಅವರಿಗಿದೆ.

ತನ್ನ ಕೆಲಸದ ನಂತರ ಪ್ರತಿದಿನ ಸಂಜೆಯಿಂದ ರಾತ್ರಿ 11 ಗಂಟೆಯವರೆಗೆ ದಾಂಡೇಲಿಯ ಸೋಮಾನಿ ವೃತ್ತದ ಬಳಿ ಇರುವ ವಿಶಾಲ ಕಟ್ಟಡದಲ್ಲಿ ಶ್ರೀ.ಕ್ಲಿನಿಕ್ ಮೂಲಕ ವೈದ್ಯ ಸೇವೆ ನೀಡುತ್ತಿರುವ ಡಾ: ಅನಿಲ್ ನಾಯ್ಕ ಅವರು ಅತ್ಯುತ್ತಮವಾಗಿ ಆರೋಗ್ಯ ಸೇವೆಯನ್ನು ನೀಡಿ ನಗರದ ಜನತೆಯ ಮಮತೆಗೆ ಪಾತ್ರರಾಗಿದ್ದಾರೆ.

ಕಳೆದ ವರ್ಷ ಮರವೊಂದು ಬಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ವಯಸ್ಸಾದ ಮಹಿಳೆಯೊಬ್ಬರನ್ನು ಸುದರ್ಶನ್ ಆರ್.ಸಿ ಯವರು ಅನಿಲ್ ಅವರ ಕ್ಲಿನಿಕಿಗೆ ಕರೆ ತಂದಾಗ ಡಾ: ಅನಿಲ್ ಅವರು ಸ್ಪಂದಿಸಿದ ರೀತಿ ಮತ್ತು ಆ ಹೆಣ್ಮಗಳನ್ನು ಉಳಿಸಲು ಮಾಡಿದ ಹೋರಾಟಕ್ಕೆ ಬಿಗ್ ಸೆಲ್ಯೂಟ್ ಹೊಡೆಯಲೆಬೇಕು. ಹೀಗೆ ಇನ್ನೂ ಅನೇಕ ಜೀವಗಳಿಗೆ ಮರಳಿ ಜೀವವನ್ನು ಒದಗಿಸಿಕೊಟ್ಟಂತಹ ಸಾಧನೆಯನ್ನು ಮಾಡಿದ ಡಾ: ಅನಿಲ್ ಅವರ ಮಾನವೀಯ ಕಾರ್ಯವನ್ನು ಮೆಚ್ಚಲೆಬೇಕು. ಬಡ ಬಗ್ಗರು ಅವರ ಕ್ಲಿನಿಕ್ ಹೋದರೆ ಉಚಿತವಾಗಿ ಆರೋಗ್ಯ ಸೇವೆ ನೀಡುವುದರ ಮೂಲಕ ಜೀವನ ಸಾರ್ಥಕತೆಯತ್ತ ಹೆಜ್ಜೆಯಿಟ್ಟಿದ್ದಾರೆ.

ಒಬ್ಬ ಮಾದರಿ ವೈದ್ಯರಾಗಿ, ಅನುಪಮ ಸೇವೆಗೈಯುತ್ತಿರುವ ಡಾ: ಅನಿಲ್ ಅವರು ನಿಜವಾಗಿಯೂ ನಮ್ಮ ದಾಂಡೇಲಿಯ ಆಸ್ತಿ ಎಂದರೆ ಅತಿಶಯೋಕ್ತಿ ಎನಿಸದು. ವಿಶಾಲ ಮನಸ್ಸಿನ ನನ್ನ ಆತ್ಮೀಯ ಮಿತ್ರರಾದ ಡಾ: ಅನಿಲ್ ಅವರ ಸಾಮಾಜಿಕ ಕಾಳಜಿ, ಬದ್ಧತೆಗೆ ಗೌರವಪೂರ್ವಕ ಕೃತಜ್ಞತೆಗಳು.

ಭವಿಷ್ಯದ ಬಹಳಷ್ಟು ಕನಸುಗಳನ್ನೇರಿ ನಾಗಲೋಟದಲ್ಲಿ ಸಾಗುತ್ತಿರುವ ಡಾ: ಅನಿಲ್ ಅವರಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ನಿಮ್ಮವ

ಸಂದೇಶ್.ಎಸ್.ಜೈನ್    
 

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...