Saturday, December 28, 2019

ರಾಜ್ಯಮಟ್ಟದಲ್ಲಿ ಸಾಧನೆಗೈದ ಚಂದ್ರಕಾಂತ ಹುಂದಲೇಕರ
ನಿಮ್ಮ ಸಾಧನೆಗೆ ಮನಪೂರ್ವಕ ವಂದನೆ-ಅಭಿವಂದನೆ
ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ವೀರಾಗ್ರಣಿಯಾಗಿ ಹೊರಹೊಮ್ಮಿದ ಚಂದ್ರಕಾಂತ ಹುಂದಲೇಕರ
ದಾಂಡೇಲಿ: ಇತ್ತೀಚೆಗೆ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಹಳಿಯಾಳ ವಿಭಾಗದ ಬರ್ಚಿ ಅರಣ್ಯ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಚಂದ್ರಕಾಂತ ಹುಂದಲೇಕರ ಅವರು ಭಾಗವಹಿಸಿ 3 ಚಿನ್ನ, 2 ಕಂಚು ಹಾಗೂ ಹಿರಿಯರ ಅಥ್ಲೇಟಿಕ್ ವಿಭಾಗದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನರಾಗಿ ಅರಣ್ಯ ಇಲಾಖೆಯ ಹಳಿಯಾಳ ವಿಭಾಗಕ್ಕೆ ಕೀರ್ತಿ ತಂದಿರುತ್ತಾರೆ.

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದಾಖಲೆಯ ಸಾಧನೆಗೈದ ಚಂದ್ರಕಾಂತ ಹುಂದಲೇಕರ ಅವರನ್ನು ಬರ್ಚಿ ಅರಣ್ಯ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಆಶ್ರಯದಲ್ಲಿ ಶನಿವಾರ ಸನ್ಮಾನಿಸಲಾಯಿತು.

ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬರ್ಚಿ ಅರಣ್ಯ ವಲಯದ ಅರಣ್ಯಾಧಿಕಾರಿ ಸಿ.ಜಿ ನಾಯ್ಕ ಅವರು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆಗೈದು ನಮ್ಮ ಹಳಿಯಾಳ ವಿಭಾಗಕ್ಕೆ ಗೌರವವನ್ನು ತಂದು ಕೊಟ್ಟ ಚಂದ್ರಕಾಂತ ಹುಂದಲೇಕರ ಅವರ ಕ್ರೀಡಾ ಸಾಧನೆ ಇಲಾಖೆಗೆ ಹಮ್ಮೆ ತಂದಿದೆ. ಶಿಸ್ತು ಹಾಗೂ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವ ಚಂದ್ರಕಾಂತ ಹುಂದಲೇಕರ ಅವರು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ರಾಜ್ಯಮಟ್ಟದಲ್ಲಿ ಸಾಧನೆಗೈದ ಚಂದ್ರಕಾಂತ ಹುಂದಲೇಕರ ಅವರು ರಾಷ್ಟ್ರಮಟ್ಟದಲ್ಲೂ ಸಾಧನೆಗೈದು ಕರುನಾಡಿಗೆ ಕೀರ್ತಿ ತರುವಂತಾಗಲೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಕಾಂತ ಹುಂದಲೇಕರ ಅವರು ರಾಜ್ಯಮಟ್ಟದಲ್ಲಿ ಸಾಧನೆ ಮಾಡಲು ಮಾರ್ಗದರ್ಶನ ನೀಡಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮತ್ತು ಪ್ರೋತ್ಸಾಹಿಸಿದ ಸಹದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರು. ನಿರಂತರವಾದ ಪ್ರಯತ್ನದಿಂದ ಸಾಧನೆ ಸಾಧ್ಯ. ಇದು ಒಂದು ದಿನದ ಸಾಧನೆಯಲ್ಲ. ಹಲವು ವರ್ಷಗಳ ಪ್ರಯತ್ನದ ಫಲ ಎಂದು ಪ್ರೀತಿಯಿಂದ ಸನ್ಮಾನಿಸಿ, ಜವಾಬ್ದಾರಿಯನ್ನು ಹೆಚ್ಚಿಸುವಂತೆ ಮಾಡಿದ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಅರಣ್ಯ ರಕ್ಷಕ ಪರಸಪ್ಪ ಖೋತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸವಿತಾ ಬೂದಿಹಾಳ ವಂದಿಸಿದರು.

ಅತ್ಯಂತ ಉತ್ಸಾಹಿ ವ್ಯಕ್ತಿತ್ವದ ಚಂದ್ರಕಾಂತ ಹುಂದಲೇಕರ ಅವರ ರಾಜ್ಯಮಟ್ಟದ ಸಾಧನೆ ನಮಗೆಲ್ಲಾ ಅತೀವ ಸಂತಸ ತಂದಿದೆ. ನಿರಂತರವಾದ ದೈಹಿಕ ಕಸರತ್ತು, ವ್ಯಾಯಾಮ ಹಾಗೂ ಸತತ ಪರಿಶ್ರಮದ ಗೆಲುವು ನಿಮ್ಮದಾಗಿದೆ. ನಿಮಗೆ ಶುಭವಾಗಲಿ. ಕ್ರೀಡಾ ಕ್ಷೇತ್ರದಲ್ಲಿ ಮಗದಷ್ಟು ಸಾಧನೆಗೈಯುವ ಸಾಧಕರು ನೀವಾಗಲೆಂದು ಪ್ರಾರ್ಥಿಸುವ,

ನಿಮ್ಮವ
ಸಂದೇಶ್.ಎಸ್.ಜೈನ್


 

Friday, December 27, 2019

 'ಸೇವಾ' ಸಂಘಟನೆಯ ರಾಜ್ಯ ಉಪ ಪ್ರಧಾನ ಕಾರ್ಯದರ್ಶಿಯಾಗಿ ದಾಂಡೇಲಿಯ ಬಿ.ಎಫ್.ರಾಥೋಡ ಆಯ್ಕೆ
ತಮಗಿದೊ ಹಾರ್ದಿಕ ಅಭಿನಂದನೆಗಳು.
ದಾಂಡೇಲಿ: ನಗರದ ಸ್ಟೇಟ್ ಬ್ಯಾಂಕಿನ ಅಧಿಕಾರಿ ಹಾಗೂ ಸ್ಟೇಟ್ ಬ್ಯಾಂಕಿನ ಎಸ್.ಸಿ/ಎಸ್.ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘವಾದ ಸೇವಾ ಸಂಘಟನೆಯ ವಿಭಾಗೀಯ ಮಟ್ಟದ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಿ.ಎಫ್.ರಾಥೋಡ ಅವರು ಇದೀಗ ಇದೇ ಸೇವಾ ಸಂಘಟನೆಯ ಕೇಂದ್ರಿಯ ಸಮಿತಿಯ ರಾಜ್ಯ ಉಪ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬ್ಯಾಂಕ್ ವೃತ್ತಿಯ ಜೊತೆಗೆ ಬ್ಯಾಂಕಿನ ಎಸ್.ಸಿ/ಎಸ್.ಟಿ ಸಿಬ್ಬಂದಿಗಳಿಗಾಗಿರುವ ಸೇವಾ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಸಿಬ್ಬಂದಿಗಳು ಮತ್ತು ಬ್ಯಾಂಕಿನ ನಡುವೆ ಉತ್ತಮ ಸಂಬಂಧ ಏರ್ಪಡುವಂತಾಗಲೂ ಬಹುಮೂಲ್ಯ ಪಾತ್ರವನ್ನು ವಹಿಸುತ್ತಿದ್ದಾರೆ. ಸಂಘಟನೆಯ ಸದಸ್ಯರುಗಳ ಸಮಸ್ಯೆಗೆ ತ್ವರಿತಗತಿಯಲ್ಲಿ ಸ್ಪಂದಿಸುವುದರ ಮೂಲಕ ಸಂಘಟನೆಯನ್ನು ಬಲವರ್ಧನೆಗೊಳಿಸಲು ಬಿ.ಎಫ್ ರಾಥೋಡ ಅವರು ಅಹರ್ನಿಶಿ ಶ್ರಮಿಸಿರುವುದನ್ನು ಪರಿಗಣಿಸಿ, ಅವರ ಸೇವಾ ದಕ್ಷತೆ ಮತ್ತು ಸಂಘಟನೆ ಹಾಗೂ ನಾಯಕತ್ವವನ್ನು ಮೆಚ್ಚಿ ಸೇವಾ ಸಂಘವು ತನ್ನ ಕೇಂದ್ರಿಯ ಸಮಿತಿಯ ರಾಜ್ಯ ಉಪ ಪ್ರಧಾನ ಕಾರ್ಯದರ್ಶಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿ ವಿಶೇಷ ಗೌರವವನ್ನು ನೀಡಿದೆ.

ಸಂಘಟನೆಯ ಅಧ್ಯಕ್ಷ ಡಿ.ವಿಜಯರಾಜ, ಪ್ರಧಾನ ಕಾರ್ಯದರ್ಶಿ ಕೆ.ಎಲ್.ಚೌವ್ಹಾಣ್ ಹಾಗೂ ಹುಬ್ಬಳ್ಳಿ ವಲಯದ ರಾಘವೇಂದ್ರ ಅಷ್ಟೇಕರ ಹಾಗೂ ಸಂಘದ ವಿಭಾಗೀಯ ಸಮಿತಿಯ ಪದಾಧಿಕಾರಿಗಳು ಆಯ್ಕೆಗೆ ಸಹಕರಿಸಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ಬಿ.ಎಫ್.ರಾಥೋಡ ಅವರು ಸೇವಾ ಸಂಘಟನೆಯನ್ನು ಇನ್ನಷ್ಟು ಬಲಪಡಿಸಿ, ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಸಂಘದ ಪುರೋ ಅಭಿವೃದ್ಧಿಗೆ ಶ್ರಮಿಸುವುದಾಗಿಯೂ ಮತ್ತು ತನ್ನ ಪ್ರತಿಯೊಂದು ಕಾರ್ಯಚಟುವಟಿಕೆಯನ್ನು ಬೆಂಬಲಿಸಿ, ಪ್ರೋತ್ಸಾಹ ನೀಡುತ್ತಿರುವ ದಾಂಡೇಲಿ ಎಸ್.ಬಿ.ಐ ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಗಳು ಉತ್ತಮವಾಗಿ ಸ್ಪಂದಿಸುತ್ತಿರುವುದರಿಂದ ಇಂಥಹ ಅವಕಾಶ ಪ್ರಾಪ್ತವಾಗಿದೆ ಎಂದು ಬಿ.ಎಫ್.ರಾಥೋಡ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ನೂತನವಾಗಿ ಆಯ್ಕೆಯಾದ ಬಿ.ಎಫ್.ರಾಥೋಡ ಅವರನ್ನು ನಗರದ ಸ್ಟೇಟ್ ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗಣ್ಯರನೇಕರು ಅಭಿನಂದಿಸಿದ್ದಾರೆ.

ಉತ್ತಮ ಸಂಘಟಕರಾಗಿ, ಆತ್ಮೀಯ ನಡವಳಿಕೆಯ ಜೊತೆಗೆ ಸರಳ ವ್ಯಕ್ತಿತ್ವದ ನಿಮ್ಮ ಕ್ರಿಯಾಶೀಲತೆಗೆ ಮತ್ತು ನಾಯಕತ್ವವನ್ನು ಮೆಚ್ಚಿ ಈ ಅವಕಾಶ ದೊರೆತಿದೆ ಎಂದರೆ ಅತಿಶಯೋಕ್ತಿ ಎನಿಸದು. ನಿಮ್ಮ ಸಾಧನೆಗೆ ಮತ್ತು ನೂತನ ಜವಾಬ್ದಾರಿಗೆ ಶುಭವಾಗಲಿ. ನಿಮಗೆ ಇನ್ನಷ್ಟು ಸ್ಥಾನಮಾನಗಳು ನಿಮ್ಮನ್ನು ಅರಸಿ ಬರಲೆಂಬುವುದ ನನ್ನಯ ಪ್ರಾರ್ಥನೆ.

ನಿಮ್ಮವ
ಸಂದೇಶ್.ಎಸ್.ಜೈನ್

 

Thursday, December 26, 2019

ವಿಜೃಂಭಣೆಯಿಂದ ಸಂಪನ್ನಗೊಂಡ ಶ್ರೀ.ಕೃಷ್ಣ ಮೂರ್ತಿಯ ಮಹಾಪೂಜೆ
ಅಪ್ಪನಿಗೆ ತಕ್ಕ ಮಗ-ಮಗನಿಗೆ ತಕ್ಕ ಅಪ್ಪ
 
ದಾಂಡೇಲಿ : ನಗರದ ವನಶ್ರೀನಗರದ ನಿವಾಸಿ, ಸ್ಥಳೀಯ ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯ ಎನ್.ಆರ್.ನಾಯ್ಕ ಅವರ ಮಗನಾದ 16 ವರ್ಷದ ಬಾಲಕ ಪ್ರಥಮ್ ನಾಯ್ಕ ತಂದೆಯ ಸಹಕಾರದಲ್ಲಿ ತಾನೆ ಸ್ವಂತ ತಯಾರಿಸಿದ ಶ್ರೀ.ಕೃಷ್ಣಾ ಮೂರ್ತಿಯ ಭವ್ಯ ಮಹಾಪೂಜಾ ಕಾರ್ಯಕ್ರಮವು ವಿಜೃಂಭಣೆಯಿಂದ ಬುಧವಾರ ರಾತ್ರಿ ಜರುಗಿತು.

ಕಳೆದ 5 ವರ್ಷಗಳಿಂದ ಪ್ರತಿವರ್ಷ ಶ್ರೀ.ಕೃಷ್ಣ ಮೂರ್ತಿಯನ್ನು ತಯಾರಿಸಿ, ಪೂಜಾ ಕೈಂಕರ್ಯವನ್ನು ನಡೆಸುತ್ತಿರುವ ಪ್ರಥಮ್ ಸ್ಥಳೀಯ ಬಂಗೂರನಗರ ಕಾಲೇಜಿನ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಮಗನ ಧಾರ್ಮಿಕ ಬದ್ದತೆಗೆ ತಂದೆ ಎನ್.ಆರ್.ನಾಯ್ಕ ಅವರು ಮೂರ್ತಿ ತಯಾರಿಸಲು ಮತ್ತು ಅಂತಿಮ ಸ್ಪರ್ಷ ನೀಡಲು ವಿಶೇಷ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡುತ್ತಾ ಬಂದಿರುವುದು ಈ ಕಾರ್ಯಕ್ರಮದ ಯಶಸ್ಸಿಗೆ ಬಹುಮೂಲ್ಯ ಕಾರಣವಾಗಿದೆ.

ಈ ವರ್ಷ ಕಳೆದ 18 ದಿನಗಳಿಂದ ಪ್ರತಿಷ್ಟಾಪಿಸಲ್ಪಟ್ಟ ಶ್ರೀ.ಕೃಷ್ಣಾ ಮೂರ್ತಿಗೆ ಪ್ರತಿದಿನ ಪೂಜೆ, ನೈವೇದ್ಯಗಳು ನಡೆದಿದ್ದು, ಇದರ ಜೊತೆಗೆ ಗುಮಟೆಪಾಂಗ್ ಮೂಲಕ ದೇವರನ್ನು ಒಲಿಸಿಕೊಳ್ಳುವ ಮತ್ತು ಜಿಲ್ಲೆಯ ಧಾರ್ಮಿಕ ಕಲೆಯನ್ನು ಉಳಿಸಿ, ಬೆಳೆಸುವ ಮಹತ್ವದ ಆಶಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಬುಧವಾರ ಮಹಾಪೂಜೆ ನೆರವೇರಿಸಲಾಗಿದ್ದು, ಈ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳಿಗೆ ಸನ್ಮಾನಿಸಲಾಯಿತು. ಖ್ಯಾತ ನಾಟಕಕಾರ ಮುರ್ತುಜಾ ಆನೆಹೊಸೂರು, ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಪಟೇಲನಗರ ಉರ್ದು ಶಾಲೆಯ ಶಿಕ್ಷಕಿ ರಜಿಯಾ.ಆರ್.ಶೇಖ, ಜಿಲ್ಲಾ ಪ್ರಶಸ್ತಿ ವಿಜೇತ ಯುವ ಕವಿ ನರೇಶ ನಾಯ್ಕ, ಅರಣ್ಯ ಇಲಾಖೆಯ ಡಿಪ್ಪೋ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ ನಾಯ್ಕ ಅವರುಗಳನ್ನು ಎನ್.ಆರ್.ನಾಯ್ಕ ಹಾಗೂ ಗಣ್ಯರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ರೂವಾರಿ ಎನ್.ಆರ್.ನಾಯ್ಕ ಅವರು ಮಕ್ಕಳ ಆಸಕ್ತಿಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವಾದಾಗ ಸುಶಿಕ್ಷಿತ ಮತ್ತು ಸದೃಢ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳ ಅಭಿರುಚಿಗೆ ತಕ್ಕಂತೆ ಅವರನ್ನು ಯೋಗ್ಯರನ್ನಾಗಿಸುವ ಕಾರ್ಯ ಹೆತ್ತವರು ಮಾಡಿದಾಗ ಸುಸಂಸ್ಕೃತ ಮತ್ತು ಆದರ್ಶ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಮಗ ಪ್ರಥಮ್ ಕಳೆದ 5 ವರ್ಷಗಳಿಂದ ಕೃಷ್ಣಾನ ಮಣ್ಣಿನ ಮೂರ್ತಿಯನ್ನು ತಯಾರಿಸುತ್ತಿದ್ದು, ತಯಾರಿಸಿದ ಮೂರ್ತಿಗೆ ಪೂಜೆಯನ್ನು ನೆರವೇರಿಸುವುದರ ಮೂಲಕ ಮಕ್ಕಳ ಕಾರ್ಯಕ್ಕೆ ಬೆಂಬಲ ನೀಡುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದರು.

ಈ ಸಂದರ್ಭದಲ್ಲಿ ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ಆರ್.ಪಿ.ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತಿನ ಹಳಿಯಾಳ ತಾಲೂಕು ಅಧ್ಯಕ್ಷ ಉಪ್ಪೇಂದ್ರ ಘೋರ್ಪಡೆ, ಕೋಮಾರಪಂತ ಸಮಾಜದ ಪ್ರಮುಖರುಗಳಾದ ವಿ.ವಿ.ನಾಯ್ಕ, ಎಂ.ಎಸ್.ನಾಯ್ಕ, ಪೂಜಾ ನಾಯ್ಕ, ಶೀಲಾ ನಾಯ್ಕ, ಸಮಾಜ ಸೇವಕ ಸುರೇಶ ಕಾಮತ್, ಶಿಕ್ಷಕ ಸತೀಶ ನಾಯ್ಕ ಹಾಗೂ ಎನ್.ಆರ್.ನಾಯ್ಕ ಕುಟುಂಬಸ್ಥರು ಮತ್ತು ಸಮಾಜದ ನಾಗರೀಕರು, ಸ್ಥಳೀಯರು ಉಪಸ್ಥಿತರಿದ್ದರು.

ಒಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಕಂಡು ಬಂದ ಸಂದೇಶ ಇಷ್ಟೆ, ಅಪ್ಪನಿಗೆ ತಕ್ಕ ಮಗ-ಮಗನಿಗೆ ತಕ್ಕ ಅಪ್ಪ. ಇದ್ದರೇ ಹಿಂಗಿರಬೇಕು ನೋಡಿ. ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವ ಮಹೋನ್ನತ ಜವಾಬ್ದಾರಿ ಹೆತ್ತವರದ್ದು ಎನ್ನವುದನ್ನು ಮರೆಯುವ ಹಾಗಿಲ್ಲ.

ಎನ್.ಆರ್.ನಾಯ್ಕ  ಅವರಿಗೆ ಹಾಗೂ ಪ್ರಥಮನಿಗೆ ನನ್ನ ಕಡೆಯಿಂದ ದೊಡ್ಡ ಸಲಾಂ

ನಿಮ್ಮವ

ಸಂದೇಶ್.ಎಸ್.ಜೈನ್

 

Wednesday, December 25, 2019

ಉದಯಿಸುತ್ತಿರುವ ರಾಜಕೀಯ ದ್ರುವನಕ್ಷತ್ರ- ಶ್ರೀನಿವಾಸ ಘೋಟ್ನೇಕರ
ಅಹಂ ಇಲ್ಲದ ಆಪತ್ಪಾಂದವ ಶ್ರೀನಿವಾಸ ಘೋಟ್ನೇಕರವರಿಗೆ ಜನ್ಮದಿನದ ಸಂಭ್ರಮ

ಅವರು ಮನಸ್ಸು ಮಾಡಿರುತ್ತಿದ್ದರೇ ಹಳಿಯಾಳ ಬಿಟ್ಟು ಬೆಂಗಳೂರು ಅಥವಾ ಮಲ್ಟಿಸಿಟಿಯಲ್ಲಿ ನೆಲಸಬಹುದಿತ್ತು. ಅದಕ್ಕೆ ಅವರಪ್ಪನೂ ಹೂ: ಅನ್ನುತ್ತಿದ್ದರು ಬಿಡಿ. ಬೆಂಗಳೂರು, ಡೆಲ್ಲಿಯಂತಹ ನಗರಗಳಲ್ಲಿ ಬಹುದೊಡ್ಡ ಬ್ಯುಸಿನೆಸ್ ಮಾಡಬೇಕೆಂಬ ಹಂಬಲವಿದ್ದರೂ, ಹುಟ್ಟೂರು ಹಳಿಯಾಳ ಬಿಡಲಾರೆ, ಸಾಧಿಸಿದರೇ ಹಳಿಯಾಳದಲ್ಲೆ ಇದ್ದು ಸಾಧಿಸುವೆ ಎಂದು ಪ್ರತಿಜ್ಞೆ ಮಾಡಿ, ಯಶಸ್ವಿಯಾದ ನಗುಮೊಗದ ಕನಸುಗಣ್ಣಿನ ಯುವಕ ನಮ್ಮ ನಿಮ್ಮೆಲ್ಲರ ಮೆಚ್ಚಿನ ಹಾಗೂ ನೆಚ್ಚಿನ ಶ್ರೀನಿವಾಸ ಘೋಟ್ನೇಕರ ಅವರು ಎಂದು ಹೇಳಲು ಅಭಿಮಾನವೆನಿಸುತ್ತದೆ.

ನಾನ್ಯಾಕೆ ಅವರ ಬಗ್ಗೆ ಬರೆಯುತ್ತಿದ್ದೇನೆಂದು ಅಂದ್ಕೋಂಡ್ರಾ. ಹಾಂ: ಅದಕ್ಕೂ ಕಾರಣವುಂಟು. ಇಂದವರಿಗೆ ಜನ್ಮದಿನದ ಸಂಭ್ರಮ. ಈ ಸಂಭ್ರಮ, ಸಡಗರಕ್ಕೆ ನನ್ನದೊಂದು ಪದಗಳ ರೂಪದ ಶುಭಾಶಯ ಕೊರಲು ಅಣಿಯಾಗಿದ್ದೇನೆ. ಒಂದು ಮಾತು ಹೇಳಬೇಕೆಂದರೇ, ನಾನು ಯಾರು ಅಂತಲೆ ಅವರಿಗೆ ಗೊತ್ತಿರಲಿಕ್ಕಿಲ್ಲ. ಆದರೂ ಪೇಸ್ ಬುಕ್ ಪ್ರೆಂಡ್ ಅಂತು ಸತ್ಯ. ಅದು ಹೇಗೆ ಆಗಿದ್ದಾರೆ ಎನ್ನುವುದು ನನಗೂ ತಿಳಿಯಲಾಗದು. ಈಗ ಅದ್ಯಾಕೆ ಅಲ್ವೆ.

ಒಂದಂತು ನಿಜ. ನಾನ್ಯಾವತ್ತು ಅವರಲ್ಲಿ ಮಾತನಾಡಿದವನಲ್ಲ. ಆದರೂ ಈ ಮನುಷ್ಯನ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇನೆ. ನಾನು ತಿಳ್ಕೊಂಡಿರುವುದನ್ನು ನಿಮ್ಮ ಬಳಿ ಹಂಚಿಕೊಳ್ಳುತ್ತೇನೆ.

ಅಂದ ಹಾಗೆ, ಶ್ರೀನಿವಾಸ ಘೋಟ್ನೇಕರ ಅವರ ಪರಿಚಯ ಮಾಡುವ ಅಗತ್ಯವಿಲ್ಲ. ಆದರೆ ಪರಿಚಯ ಮಾಡದಿದ್ದರೇ ಮುಂದೆ ಹೋಗಲು ಸಾಧ್ಯವಿಲ್ಲರಿ. ಅದಕ್ಕೆ ಶುರುವಚ್ಚಿಕೊಂಡಿದ್ದೇನೆ.  ಹಳಿಯಾಳದ ನೇರಮಾತಿನ ಒಡೆಯರು, ವಿಧಾನ ಪರಿಷತ್ತಿನ ಸದಸ್ಯರು, ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಎಸ್.ಎಲ್.ಘೋಟ್ನೇಕರ ಅವರ ಮಾನಸಪುತ್ರ ಈ ನಮ್ಮ ಶ್ರೀನಣ್ಣ ಅರ್ಥತ್ ಶ್ರೀನಿವಾಸ ಅವರು ಅನ್ರಿ.
ತನ್ನ ಪ್ರಾಥಮಿಕ, ಮಾದ್ಯಮಿಕ ಶಿಕ್ಷಣವನ್ನು ಹಳಿಯಾಳದಲ್ಲೆ ಪಡೆದ ಶ್ರೀನಿವಾಸ ಅವರು ಮುಂದೆ ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದರು.

ಇದ್ದೊಬ್ಬ ಮಗನಿಗೆ ಕೇಳಿದ್ದನ್ನು ಕೊಡುವ ಅಪ್ಪ, ಗಿಣಿಯಂತೆ ಸಾಕುತ್ತಿದ್ದ ಸುಸಂಸ್ಕೃತ ಮನಸ್ಸಿನ ಅಮ್ಮನ ಅಪ್ಪುಗೆ, ಸಹೋದರಿಯರ ಪ್ರೋತ್ಸಾಹ ಶ್ರೀನಿವಾಸ ಘೋಟ್ನೇಕರ ಅವರ ಬೆಳವಣಿಗೆಗೆ ಶ್ರೀರಕ್ಷೆಯಾಯಿತೆಂದು ಹೇಳಲು ಅಡ್ಡಿಯಿಲ್ಲ. ಎಳೆಯ ಬಾಲಕನಿರುವಾಗ್ಲೆ ತುಂಟಾಟದ ಬಾಲಕನಾಗಿ, ಕೆಂಪು ಹಾಗೂ ಬಿಳಿ ಮುಖದ ಸ್ಮಾರ್ಟ್ ಪರ್ಸನಾಲಿಟಿಯ ಈ ಬಾಲಕ ಕಂಡ್ರೆ ಎಲ್ಲರಿಗೂ ಅಚ್ಚುಮೆಚ್ಚು. ಬಾಲಕನಿರುವಾಗ್ಲೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದ ಶ್ರೀನಿವಾಸ ಅವರು ಎಳೆಯ ಪ್ರಾಯದಲ್ಲೆ ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಶಾಶ್ವತ ಫಲಕಗಳಿಗೆ ಮುತ್ತಿಟ್ಟುಕೊಂಡು ಬಾಚಿಕೊಂಡವರು. ಅಪ್ಪ ರಾಜಕೀಯ ಆಟದಲ್ಲಿ ಮೇಲುಗೈ ಸಾಧಿಸಿದರೇ, ಇತ್ತ ಮಗ ಕ್ರೀಡಾ ಕ್ಷೇತ್ರದಲ್ಲಿ ಭವಿಷ್ಯದ ಆಸ್ತಿಯಾಗುವ ಎಲ್ಲ ಲಕ್ಷಣಗಳನ್ನು ತೋರಿದ್ದರು. ಹೀಗೆ ಬೆಳೆದ ಶ್ರೀನಿವಾಸ ಅವರಿಗೆ ಸಂಬಂಧಿಕರಿಗಿಂತ ಹೆಚ್ಚು ಗೆಳೆಯರ ಬಳಗವೆ ಬಹುದೊಡ್ಡದಾಗ್ತ ಹೋಯಿತು.

ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಸದೃಢ ಕುಟುಂಬದ ಕುಡಿ ಇವರಾದರೂ ಎಂದು ಅಹಂ, ಸೊಕ್ಕು ಮಾಡಿದವರಲ್ಲ. ಸಂಕಷ್ಟದಲ್ಲಿದ್ದವರಿಗೆ ತಡವರಿಯದೇ ಸಹಾಯ ಮಾಡುವ ಅವರ ಮಾನವೀಯ ಗುಣಕೈಂಕರ್ಯಕ್ಕೆ ಬಿಗ್ ಸೆಲ್ಯೂಟ್ ಹೊಡೆಯಲೆಬೇಕು. ಪರೋಪಕಾರಿ ಗುಣ ಸಂಸ್ಕೃತಿಯ ಶ್ರೀನಿವಾಸ ಅವರು ಆಪತ್ಕಾಲದ ಆಪತ್ಬಾಂದವರಾಗಿ ಎಲ್ಲರ ಗಮನ ಸೆಳೆದವರು.

ಬಡವರ, ನೊಂದವರ, ಕಷ್ಟದಲ್ಲಿದ್ದವರ ಅನೇಕರ ಕಣ್ಣೀರನ್ನು ಒರೆಸಿ, ಅಂಥವರಿಗೆ ನೆಮ್ಮದಿ ಮತ್ತು ಧೈರ್ಯವನ್ನು ತುಂಬಿದ ಮತ್ತು ತುಂಬುತ್ತಿರುವ ಸರಳ ವ್ಯಕ್ತಿತ್ವದ ಕರುಣಾಮಯಿ. ಹಾಗಾಂತ ಹೇಳಿ ಸಿಟ್ಟು ಮೂಗಿನ ತುದಿಯಲ್ಲೆ ಇದ್ದರೂ ಅದು ಒಂದು ನಿಮಿಷದ್ದು. ಆದರೆ ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾಧಿಸುವ ವ್ಯಕ್ತಿ ಶ್ರೀನಿವಾಸ ಅವರಲ್ಲ.

ಅಪ್ಪ ಮಾಡಿರುವ ಹಲವಾರು ಉದ್ದಿಮೆಗಳನ್ನು ಮುಂದುವರೆಸುವ ಅವಕಾಶವಿದ್ದರೂ, ಅದನ್ನು ಮುಂದುವರೆಸುತ್ತಲೆ, ತನ್ನದೇನಾದರೂ ಇರಬೇಕಲ್ವೆ ಅಂದ್ಕೊಂಡು ತಾನು ಉದ್ಯಮವನ್ನು ಪ್ರಾರಂಭಿಸಿ, ಅಲ್ಪ ಸಮಯದಲ್ಲೆ ಯಶಸ್ವಿ ಉದ್ಯಮಿಯಾಗಿ ಜನಮೆಚ್ಚುಗೆಯನ್ನು ಗಳಿಸಿದ ಹಿರಿಮೆ ನಮ್ಮ ಶ್ರೀನಿವಾಸ ಅವರಿಗಿದೆ.

ಮಹಾಲಕ್ಷ್ಮೀ ಕನ್ಸಟ್ರಕ್ಷನ್ ಹೀಗೆ ಹಲವಾರು ಉದ್ದಿಮೆಗಳನ್ನು, ಡಿಲರ್ಸ್ ಶಿಪ್ ಹಾಗೂ ಟ್ರಾಕ್ಟರ್ ವಿತರಕರಾಗಿಯೂ ಗಮನಾರ್ಹ ಪರಿಶ್ರಮವನ್ನು ಪಟ್ಟು ಉದ್ಯಮದಲ್ಲಿ ಸಾರ್ಥಕತೆಯನ್ನು ಪಡೆದ ಧನ್ಯತೆ ನಮ್ಮ ಶ್ರೀನಿವಾಸ ಅವರಿಗಿದೆ.

ಮಗ ಏನನ್ನೂ ಮಾಡಲಿ, ಒಟ್ಟಿನಲ್ಲಿ ಒಳ್ಳೆಯದನ್ನೆ ಮಾಡಲೆನ್ನುವುದೆ ಅವರಪ್ಪ ಎಸ್.ಎಲ್.ಘೋಟ್ನೇಕರ ಅವರ ಅಪೇಕ್ಷೆ. ಅದರಂತೆ ಮುನ್ನುಗ್ಗಿದ್ದವರು ಈ ಶ್ರೀನಿವಾಸ ಅವರು. ಬಿಸಿ ರಕ್ತದ ನವ ತರುಣರಾಗಿದ್ದಾಗಲೆ ರಾಜಕೀಯ ರಂಗ ಪ್ರವೇಶಿಸಿ ಯುವ ಕಾಂಗ್ರೇಸ್ಸಿನ ಪ್ರಮುಖ ಪದಾಧಿಕಾರಿಯಾಗಿ ಯುವ ಕಾಂಗ್ರೆಸಿಗೆ ಹೊಸ ಆಯಾಮ ಮತ್ತು ಶಕ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆಗೆ ಶ್ರೀನಿವಾಸ ಅವರು ಪಾತ್ರರಾಗಿದ್ದಾರೆ. ಹೀಗೆ ಮುಂದುವರೆದ ಅವರ ರಾಜಕೀಯ ನಡೆ ಎ.ಪಿ.ಎಂ.ಸಿ ಅಧ್ಯಕ್ಷರಾಗುವರೆಗೆ ನಡೆದಿದ್ದು, ಭವಿಷ್ಯದ ದಿನಮಾನದಲ್ಲಿ ರಾಜಕೀಯವಾಗಿ ಇನ್ನೂ ಉತ್ತುಂಗಕ್ಕೇರುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಹಾಗೂ ಮರಾಠಾ ಸಮಾಜದ ಒಗ್ಗೂಡುವಿಕೆ ಮತ್ತು ಸಂಘಟನೆಗಾಗಿ ಶ್ರೀನಿವಾಸ ಘೋಟ್ನೇಕರ ಅವರು ಪಟ್ಟ ಶ್ರಮ ಇಡೀ ಮರಾಠಾ ಸಮುದಾಯಕ್ಕೆ ಹರ್ಷ ತಂದಿದೆ.

ನನಗೆ ಬಹಳ ಇಷ್ಟವಾದ ಅವರ ಗುಣವೆಂದರೇ, ಧರ್ಮ, ಸಂಸ್ಕೃತಿ ವಿಚಾರದಲ್ಲೆಂದೂ ರಾಜಕೀಯವನ್ನು ತರದಿರುವ ಪ್ರೌಡಿಮೆಯನ್ನು ಮೈಗೂಡಿಸಿಕೊಂಡಿದ್ದಾರೆ. ತಾಲೂಕಿನ ಪ್ರಗತಿಯ ವಿಷಯ ಬಂದಾಗ, ಸಮಸ್ಯೆಗಳ ವಿಚಾರ ಬಂದಾಗ ರಾಜಕೀಯವನ್ನು ಮೀರಿ ಸಹೃದಯನಾಗಿ ಕೆಲಸ ಮಾಡುವ ಅವರ ಪರಿ ಅತ್ಯಂತ ಹೆಮ್ಮೆ ತಂದಿದೆ. ಈ ಕಾರಣಕ್ಕಾಗಿಯೆ ಶ್ರೀನಿವಾಸ ಘೋಟ್ನೇಕರ ಅವರು ನಮಗೆ ಲೈಕ್ ಆಗುವುದು.

ರಾಜಕೀಯ ಹಾಗೂ ಉದ್ಯಮ ಕ್ಷೇತ್ರದಲ್ಲಿ ಬಹುದೊಡ್ಡ ನಿರೀಕ್ಷೆಗಳನ್ನು ಹೊತ್ತಿ ಮುನ್ನಡೆಯುತ್ತಿರುವ ಯುವ ಪೀಳಿಗೆಯ ನಗುಮೊಗದ ಯಶಸ್ವಿ ರಾಜಕಾರಣಿ, ಶ್ರೀನಿವಾಸ ಘೋಟ್ನೇಕರ ಅವರಿಗೆ ಮಗದೊಮ್ಮೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಾ, ಬರವಣಿಗೆಗೆ ವಿರಾಮವನ್ನು ಬಯಸುತ್ತಿದ್ದೇನೆ.

ನೂರು ಕಾಲ ಚೆನ್ನಾಗಿರಿ ಶ್ರೀನಿವಾಸರವರೆ, ನಿಮಗೆ ಶುಭವಾಗಲಿ.

ನಿಮ್ಮವ

ಸಂದೇಶ್.ಎಸ್.ಜೈನ್




 
ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚಿನ ಪ್ರಾಧನ್ಯತೆ ನೀಡಬೇಕು-ಕುಮಾರ್ ಕರಗಯ್ಯ
ದಾಂಡೇಲಿ : ಕ್ರೀಡಾ ಕ್ಷೇತ್ರದಲ್ಲಿ ಮಾಡುವ ಸಾಧನೆ ಭವಿಷ್ಯದ ಉನ್ನತಿಗೆ ಬಹುದೊಡ್ಡ ಕೊಡುಗೆಯಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚಿನ ಪ್ರಾಧನ್ಯತೆ ನೀಡಬೇಕೆಂದು ನಗರದ ಹೆಸ್ಕಾಂ ಅಧಿಕಾರಿ ಹಾಗೂ ಖ್ಯಾತ ಕ್ರೀಡಾಪಟು ಕುಮಾರ್ ಕರಗಯ್ಯ ಹೇಳಿದರು.
 
ಅವರು ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್ ಹಾಗೂ ಉತ್ತರಕನ್ನಡ ಜಿಲ್ಲಾ ಅಥ್ಲೆಟಿಕ್ ಅಸೋಶಯೇಶನ್ ಇವರ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಜೆವಿಡಿ ವಿದ್ಯಾಲಯದ ಆಟದ ಮೈದಾನದಲ್ಲಿ 10 ಮತ್ತು 12 ವರ್ಷದೊಳಗಿನ ಕಿರಿಯ ಮಕ್ಕಳಿಗಾಗಿ ಪ್ರಪ್ರಥಮ ಬಾರಿಗೆ ನಗರದಲ್ಲಿ ಹಮ್ಮಿಕೊಂಡಿದ್ದ ಅಥ್ಲೆಟಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕ್ರೀಡೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಉಪಯುಕ್ತವಾಗಿದೆ. ಮಕ್ಕಳ ಮಾನಸಿಕ, ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಕ್ರೀಡೆ ಉಪಯುಕ್ತವಾಗಿದ್ದು,  ಕ್ರೀಡೆಯಲ್ಲಿ ಎಲ್ಲರೂ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕೆಂದು ಕುಮಾರ್ ಕರಗಯ್ಯ ಅವರು ಕರೆ ನೀಡಿದರು.
 
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶಿರಸಿ ಅರ್ಬನ್ ಬ್ಯಾಂಕಿನ ನಿರ್ದೇಶಕ ಹಾಗೂ ಉದ್ಯಮಿ ಟಿ.ಎಸ್.ಬಾಲಮಣಿಯವರು ಶಿಕ್ಷಣೇತರ ಸಂಸ್ಥೆಯಾದರೂ ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್ ಸಂಸ್ಥೆಯವರು ಈ ಕ್ರೀಡಗೆ ವಿಶೇಷ ಆಧ್ಯತೆಯನ್ನು ನೀಡಿ, ಜಿಲ್ಲೆಯ ಮಕ್ಕಳ ಕ್ರೀಡಾಸಕ್ತಿಗೆ ಉತ್ತೇಜನ ನೀಡುತ್ತಿರುವುದು ಸ್ವಾಗತಾರ್ಹ. ಇಂತಹ ಕ್ರೀಡಾಕೂಟಗಳು ಮೇಲಿಂದ ಮೇಲೆ ನಡೆದು ನಮ್ಮೂರ ಕ್ರೀಡಾ ಪ್ರತಿಭೆಗಳು ಸಮಾಜದ ಉತ್ತುಂಗ ಶಿಖರಕ್ಕೇರುವಂತಾಗಲೆಂದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
 
ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್ ಸಂಸ್ಥೆಯ ಮುಖ್ಯಸ್ಥ ರಿಜ್ವಾನ್ ಬೆಂಡಗೇರಿಯವರು ಮಾತನಾಡಿ, ಮಕ್ಕಳ ಕ್ರೀಡಾಸಕ್ತಿಯನ್ನು ಇಮ್ಮಡಿಗೊಳಿಸುವ ಮತ್ತು ಉತ್ತೇಜಿಸುವ ಮಹತ್ವದ ಉದ್ದೇಶದೊಂದಿಗೆ ಬಹುಮುಖ್ಯವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಬೆಳವಣಿಗೆಗಾಗಿ ಮತ್ತು ಗಂಡು-ಹೆಣ್ಣು ಎನ್ನುವ ಭೇದವಿಲ್ಲದೇ ಮಕ್ಕಳನ್ನು ಸಮಾನತೆ ದೃಷ್ಟಿಯಿಂದ ನೋಡುವ ಸಲುವಾಗಿ ಹಾಗೂ ಮಕ್ಕಳನ್ನು ಭವಿಷ್ಯದಲ್ಲಿ ರಾಷ್ಟ್ರದ ಆಸ್ತಿಯನ್ನಾಗಿಸುವ ಮಹತ್ವದ ಸಂಕಲ್ಪದಡಿ 10 ಮತ್ತು 12 ವರ್ಷದೊಳಗಿನ ಕಿರಿಯ ಮಕ್ಕಳಿಗಾಗಿ ಮುಕ್ತ ಅಥ್ಲೆಟಿಕ್ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
 
ಕ್ರೀಡಾಕೂಟದ ಉಸ್ತುವಾರಿಯನ್ನು ನಿರ್ವಹಿಸಿದ ರಾಷ್ಟ್ರೀಯ ಕ್ರೀಡಾ ತರಬೇತುದಾರ ಅಮರ್ ಗುರವ ಅವರ ಕ್ರೀಡಾಕೂಟವನ್ನು ನಡೆಸಲು ಸ್ಥಳಾವಕಾಶ ನೀಡಿದ ಜೆವಿಡಿ ಕಾಲೇಜಿನ ಪ್ರಾಚಾರ್ಯ ಎಂ.ಎಸ್.ಇಟಗಿ ಹಾಗೂ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿ, ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿ ಎಂದರು.
 
ವೇದಿಕೆಯಲ್ಲಿ ಉದ್ಯಮಿ ನವೀನ್ ಕಾಮತ್, ಸಮಾಜ ಸೇವಕ ವಿನೋದ ಬಾಂದೇಕರ, ರಾಜ್ಯ ನೌಕರರ ಸಂಘದ ದಾಂಡೇಲಿ ತಾಲೂಕಾಧ್ಯಕ್ಷ ಸುರೇಶ ನಾಯಕ ಮೊದಲಾದವರು ಉಪಸ್ಥಿತರಿದ್ದರು. ಕ್ರೀಡಾ ಕೂಟದಲ್ಲಿ ಹಳಿಯಾಳ, ದಾಂಡೇಲಿ, ಜೊಯಿಡಾ, ರಾಮನಗರ, ಗಣೇಶಗುಡಿ ಮೊದಲಾದ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ಭಾಗವಹಿಸಿದ್ದರು.
 
ನಿಮ್ಮವ
ಸಂದೇಶ್.ಎಸ್.ಜೈನ್



 

Tuesday, December 24, 2019

ಡಿ: 25 ರಂದು ನಮ್ಮ ಹೆಮ್ಮೆಯ ಕಲಾವಿದರುಗಳು ಅರ್ಪಿಸುವ ಮನಮೋಹಕ ಯಕ್ಷಗಾನ

ಕಾರ್ತೀವೀರ್ಯಾರ್ಜುನ ಉಚಿತ ಯಕ್ಷಗಾನ ಪ್ರದರ್ಶನ
ಕರಾವಳಿಯ ಗಂಡುಕಲೆಯನ್ನು ಉಳಿಸಿ, ಬೆಳೆಸೋಣ, ಕಲಾವಿದರುಗಳ ಕಲಾಸೇವೆಗೆ ಪ್ರೋತ್ಸಾಹಿಸೋಣ
 
ಸ್ಥಳ: ವಿದ್ಯಾಧಿರಾಜ ಸಭಾಭವನ, ದಾಂಡೇಲಿ
 ದಿನಾಂಕ : 25.12.2019, ಸಮಯ : ಸಂಜೆ-5.00 ಗಂಟೆಗೆ ಸರಿಯಾಗಿ ಪ್ರಾರಂಭ.

ಜಲ್ದಿ ಬಂದು ನಿಮ್ಮ ಆಸನವನ್ನು ಕಾಯ್ದಿರಿಸಿಕೊಳ್ಳಿ
ನಮ್ಮೂರ ಕಲೆಯ ಸಂರಕ್ಷಕರು ನಾವಾಗೋಣ
ಯಕ್ಷಗಾನಂ ಗೆಲ್ಗೆ

ದಾಂಡೇಲಿ : ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಯೋಗದೊಂದಿಗೆ ಜೊಯಿಡಾ ತಾಲೂಕಿನ ಗುಂದದ ಸಪ್ತಸ್ವರ ಸೇವಾ ಸಂಸ್ಥೆ, ದಾಂಡೇಲಿಯ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ನಗರದ ವಿದ್ಯಾಧಿರಾಜ ಸಭಾಭವನದಲ್ಲಿ ಕಲಾಶ್ರೀ ಹಾಗೂ ಸಪ್ತಸ್ವರ ಸೇವಾ ಸಂಸ್ಥೆಯ ಹಾಗೂ ಇತರೇ ಹವ್ಯಾಸಿ ಕಲಾವಿದರುಗಳಿಂದ ಉಚಿತವಾಗಿ ಕಾರ್ತೀವೀರ್ಯಾರ್ಜುನ ಯಕ್ಷಗಾನ ಪ್ರದರ್ಶನವು ದಿನಾಂಕ: 25.12.2019 ರಂದು ಸಂಜೆ 5.00 ಗಂಟೆಗೆ ಸರಿಯಾಗಿ ಪ್ರಾರಂಭವಾಗಲಿದೆ.

ಕಾರ್ಯಕ್ರಮವನ್ನು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೀಮಂತ್ ರಾಜ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಪ್ತಸ್ವರ ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ, ಸಂದ್ಯಾ ದೇಸಾಯಿ, ವಕೀಲ ಸೋಮಕುಮಾರ್, ಕಲಾಶ್ರೀ ಸಂಸ್ಥೆಯ ಸುರೇಶ ಕಾಮತ್, ಗಣೇಶ ಹೆಬ್ಬಾರ್, ಸುದರ್ಶನ ಹೆಗಡೆ ಮತ್ತು ಪ್ರವಾಸೋದ್ಯಮಿ ಆರ್.ಎನ್.ಹೆಗಡೆ ಗುಂದ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಭಾಗವತರಾಗಿ ಖ್ಯಾತ ಯಕ್ಷಗಾನ ಕಲಾವಿದ ವಿಷ್ಣುಮೂರ್ತಿ.ವಿ.ರಾವ್, ಮದ್ದಾಳೆ ಯಲಾಪುರ ಗಣಪತಿ ಹೆಗಡೆ, ಚೆಂಡೆ ಹಳವಳ್ಳಿಯ ಗಣೇಶ ಹೆಗಡೆಯವರು ಹಿಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಮುಮ್ಮೇಳನದಲ್ಲಿ ಮಯ್ಯೂರಿ ಉಪಾಧ್ಯಾಯ, ದಾಂಡೇಲಿಯ ಉಷಾ ಹೆಬ್ಬಾರ್, ಗಡಗಿಹೊಳೆಯ ಸುಮಾ ಹೆಗಡೆ, ಹಳಿಯಾಳದ ನಾಗರತ್ನಾ ದೇವಾಡಿಗ, ಗುಂದದ ಅರ್ಚನಾ ಹೆಗಡೆ ಹಾಗೂ ಸಹ ಕಲಾವಿದರುಗಳ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಯಕ್ಷಗಾನ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಕಲಾವಿದರುಗಳನ್ನು ಪ್ರೋತ್ಸಾಹಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ನಮ್ಮ ನಾಡ ಕಲೆ, ಕರಾವಳಿಯ ಹಿರಿಮೆ-ಗರಿಮೆಯನ್ನು ವಿಶ್ವವಿಖ್ಯಾತಿಗೊಳಿಸಿದ ಮಹೋನ್ನತ ಸಾಂಸ್ಕೃತಿಕ ಮತ್ತು ಸನ್ನಡತೆಯ ಕಲೆಯಾದ ಯಕ್ಷಗಾನವನ್ನು ಉಳಿಸುವ ಬಹುದೊಡ್ಡ ಸತ್ಕಾರ್ಯದಲ್ಲಿ ನಾವು ಭಾಗವಹಿಸುವುದರ ಮೂಲಕ ಪಾಲುದಾರರಾಗೋಣ.

ಯಕ್ಷಗಾನವನ್ನು ಹಮ್ಮಿಕೊಂಡಿರುವ ಕನ್ನಡ ಸಂಸ್ಕೃತಿ ಇಲಾಖೆಗೂ, ಕೈ ಜೋಡಿಸಿದ ಸಪ್ತಸ್ವರ ಸಂಸ್ಥೆಗೂ ಮತ್ತು ಕಲಾಶ್ರೀ ಸಂಸ್ಥೆಗೂ ತುಂಬು ಹೃದಯದ ಕೃತಜ್ಞತೆಗಳು.

ಮಾತೆರ್ಲಾ ಬಲೆ, ಆಟಗೂ, ನಮ್ಮೂರ್ದ ಕಲಾವಿದರೆನ ಪೊರ್ಲಕಂಠುದ ತೆಲಿಕೆ-ನಲಿಕೆದ ಆಟನೊರ ತೂಕ . ಮಾತೆರ್ಲಾ ಬೇಗ ಬಲೆ. ನಿಕ್ಲೇಗಾದು ಕಾತೊಂದು ಉಲ್ಲೇರು ನಮ್ಮ ಮೊಕೆದ ಕಲಾವಿದರು. ಮಾತೆರ್ಲಾ, ಬಲೆ, ಬರ್ರ ಮರಪ್ಪಡೆ, ಬರಾಂದೆ ನಿರಾಶೆ ಆವೋಡ್ಚಿ, ನಿಕುಲು ಬರ್ಪಾರು ಪನ್ಪಿ ನಂಬಿಕೆ ಎಂಕ್ಲೆಗೂ ಉಂಡು.

ನನರೊ, ಪಿರೊರಾ ಮಾತೆರೆಗ್ಲಾ ಉಡಲುದಿಂಜಿ ಸೊಲ್ಮೆಲು.

ನಿಮ್ಮವ
ಸಂದೇಶ್.ಎಸ್.ಜೈನ್


 

Monday, December 23, 2019

ಸಹೇಲಿಯಿಂದ ಸಾಧಕರಿಗೆ ಸನ್ಮಾನ

ಇವರು ನಮ್ಮ ದಾಂಡೇಲಿಗೆ ಹೆಮ್ಮೆ- ಇವರುಗಳ ಸಾಧನೆಗೆ ಅಭಿಮಾನದ ಅಭಿವಂದನೆ-ಸಾಧನೆಯನ್ನು ಗುರುತಿಸಿದ ಸಹೇಲಿಗೆ ಬಿಗ್ ಸೆಲ್ಯೂಟ್

ದಾಂಡೇಲಿ : ನಗರದ ಸಹೇಲಿ ಟ್ರಸ್ಟ್ ಅರ್ಪಿಸಿದ ಬಂಗೂರನಗರ ರಂಗನಾಥ ಸಭಾಭವನದಲ್ಲಿ ನಡೆದ ಸೂಪರ್ ಸೊಲೊ ಡ್ಯಾನ್ಸ್ ಮತ್ತು ಸಿಂಗಿಂಗ್ ಹಾಗೂ ಗ್ರೂಪ್ ಡ್ಯಾನ್ಸ್  ಎಂಬೆರಡು ಮುಕ್ತ ಸ್ಪರ್ಧಾ ಕಾರ್ಯಕ್ರಮಗಳ ಅದ್ದೂರಿ ಪೈನಲ್ ಕಾರ್ಯಕ್ರಮದ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳಾದ ಖ್ಯಾತ ಯಕ್ಷಗಾನ ಕಲಾವಿದ ಹಾಗೂ ನನ್ನ ಹೃದಯದ ಅಣ್ಣ ಉದ್ಯಮಿ ವಿಷ್ಣುಮೂರ್ತಿ ರಾವ್, ಕವಯತ್ರಿ ಹಾಗೂ ಉಪನ್ಯಾಸಕಿ ಸಹೋದರಿ ನಾಗರೇಖಾ ಗಾಂವಕರ, ವನವಾಸಿ ಕಲ್ಯಾಣ ಸಂಸ್ಥೆಯ ಪ್ರಾಂಜಲ ಮನಸ್ಸಿನ ರವಿ ಲಕ್ಷ್ಮೇಶ್ವರ, ಸಾಧನೆಗೈದ ಛಲಗಾರ್ತಿ ಖ್ಯಾತ ಭರತ ನಾಟ್ಯ ಕಲಾವಿದೆ ವಿಧೂಷಿ ಅಮೃತಾ ನಾಯ್ಕ ಅವರುಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಶಾಸಕ ಆರ್.ವಿ.ದೇಶಪಾಂಡೆಯವರು ಮತ್ತು ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರು ಸಾಧಕರಿಗೆ ಸನ್ಮಾನವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಹೇಲಿ ಟ್ರಸ್ಟಿನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ, ಪದಾಧಿಕಾರಿಗಳಾದ ನೀಲಾಂಬಿಕಾ ಕಣಿಮೆಹಳ್ಳಿ, ರಮ್ಯ ಪಾಠಾನಕರ, ಜಯ ನಾಯ್ಕ, ಜ್ಯೋತಿ ಪೈ, ಸುಜಾತ ಜನ್ನು, ಗಾಯತ್ರಿ ಬಾನಾವಳಿಕರ, ಶಶಿಕಲಾ ನಾಯ್ಕ, ರೇಷ್ಮಾ ಗುಡೆಅಂಗಡಿ, ಚಂದ್ರಕಲಾ ಶೆಟ್ಟಯಾರ, ಅಕ್ಷತಾ.ಎಂ, ಸುನೀತಾ ಮೆಹರವಾಡೆ ಮತ್ತು ಮಾರ್ಗದರ್ಶಕ ರಾಧಾಕೃಷ್ಣ ಕನ್ಯಾಡಿ ಉಪಸ್ಥಿತರಿದ್ದರು.

ನಮ್ಮೂರು ಬೆಳಗಿಸಿದ ಹೆಮ್ಮೆಯ ಸಾಧಕರುಗಳಿಗೆ ಭವಿಷ್ಯದಲ್ಲಿ ಮತ್ತಷ್ಟು, ಇನ್ನಷ್ಟು ಗೌರವಗಳು, ಸಮ್ಮಾನಗಳು ಅರಸಿ ಬರಲಿ. ಈ ಪುಣ್ಯದ ನಾಡಿಗೆ ಅವರ ಸೇವೆ ಹಾಗೂ ಸಾಧನೆಗಳು ಶಾಶ್ವತವಾಗಿರಲಿ ಎಂಬ ಪ್ರಾರ್ಥನೆಯೊಂದಿಗೆ,

ನಿಮ್ಮವ
ಸಂದೇಶ್.ಎಸ್.ಜೈನ್


Friday, December 20, 2019

ಎಳೆಯ ಮಕ್ಕಳಿಗಾಗಿ ಪ್ರಪ್ರಥಮ ಬಾರಿಗೆ ಮುಕ್ತ ಅಥ್ಲೆಟಿಕ್ ಕ್ರೀಡಾಕೂಟ.
ಮಕ್ಕಳ ಭವಿಷ್ಯದ ಉನ್ನತಿಗಾಗಿ ಈ ಸ್ಪರ್ಧೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಈ ಕ್ರೀಡಾಕೂಟ ಭವಿಷ್ಯಕ್ಕೆ ಆಸರೆಯಾಗಲಿದೆ.
ಡಿ: 22 ರಂದು ದಾಂಡೇಲಿಯಲ್ಲಿ ಕಿರಿಯ ಮಕ್ಕಳಿಗಾಗಿ ಮುಕ್ತ ಅಥ್ಲೆಟಿಕ್ ಕ್ರೀಡಾಕೂಟ

ದಾಂಡೇಲಿ : ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್ ಹಾಗೂ ಉತ್ತರಕನ್ನಡ ಜಿಲ್ಲಾ ಅಥ್ಲೆಟಿಕ್ ಅಸೋಶಯೇಶನ್ ಇವರ ಸಂಯುಕ್ತಾಶ್ರಯದಲ್ಲಿ 10 ಮತ್ತು 12 ವರ್ಷದೊಳಗಿನ ಕಿರಿಯ ಮಕ್ಕಳಿಗಾಗಿ ಪ್ರಪ್ರಥಮ ಬಾರಿಗೆ ನಗರದಲ್ಲಿ ಅಥ್ಲೆಟಿಕ್ ಕ್ರೀಡಾಕೂಟವನ್ನು ಡಿ:22 ರಂದು ಭಾನುವಾರ ಏರ್ಪಡಿಸಿದೆ ಎಂದು ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ನಿತೀಶ ಚಿನಿವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಕ್ರೀಡಾಸಕ್ತಿಯನ್ನು ಇಮ್ಮಡಿಗೊಳಿಸುವ ಮತ್ತು ಉತ್ತೇಜಿಸುವ ಮಹತ್ವದ ಉದ್ದೇಶದೊಂದಿಗೆ ಬಹುಮುಖ್ಯವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಬೆಳವಣಿಗೆಗಾಗಿ ಮತ್ತು ಗಂಡು-ಹೆಣ್ಣು ಎನ್ನುವ ಭೇದವಿಲ್ಲದೇ ಮಕ್ಕಳನ್ನು ಸಮಾನತೆ ದೃಷ್ಟಿಯಿಂದ ನೋಡುವ ಸಲುವಾಗಿ ಹಾಗೂ ಮಕ್ಕಳನ್ನು ಭವಿಷ್ಯದಲ್ಲಿ ರಾಷ್ಟ್ರದ ಆಸ್ತಿಯನ್ನಾಗಿಸುವ ಮಹತ್ವದ ಸಂಕಲ್ಪದಡಿ 10 ಮತ್ತು 12 ವರ್ಷದೊಳಗಿನ ಕಿರಿಯ ಮಕ್ಕಳಿಗಾಗಿ ಮುಕ್ತ ಅಥ್ಲೆಟಿಕ್ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.

ದಾಂಡೇಲಿ ನಗರದಲ್ಲಿ ಡಿ:22 ರಂದು ಅಂದರೆ ಭಾನುವಾರ ಬೆಳಿಗ್ಗೆ 8.00 ಗಂಟೆಗೆ 10-12 ವರ್ಷದೊಳಗಿನ ಮಕ್ಕಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅತ್ಯುತ್ತಮವಾದ ಮತ್ತು ಮಕ್ಕಳ ಮುಂದಿನ ಭವಿಷ್ಯದ ಏಳಿಗೆಗಾಗಿ ಈ ಸ್ಪರ್ಧೆಯು ಪ್ರಮುಖ ಪಾತ್ರವಹಿಸಲಿದೆ. ಜಿಲ್ಲೆಯ ಯಾವುದೇ ತಾಲೂಕಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ದೂರದೂರಿಂದ ಬರುವ ಮಕ್ಕಳಿಗೆ ಪ್ರಯಾಣ ಭತ್ತೆ ನೀಡಲಾಗುತ್ತಿದೆ. ವಯಸ್ಸಿನ ಆಧ್ಯತೆಯ ಪ್ರಕಾರ ಎರಡೂ ಕೆಟಗೇರಿಗಳಲ್ಲಿ ಮೊದಲು ಬಂದ 75 ಮಕ್ಕಳಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುವುದು. ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೆ ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆಯಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಮಕ್ಕಳ ಪೋಷಕರು ಅಥವಾ ಶಿಕ್ಷಕರುಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಕ್ರೀಡಾ ಮೈದಾನದ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9964528324, 7795200856, 8095602721ಗೆ ಸಂಪರ್ಕಿಸುವಂತೆ ಕೋರಲಾಗಿದೆ.

ಮಾದರಿ ಹಾಗೂ ನಮ್ಮೂರ ಮಕ್ಕಳ ಭವಿಷ್ಯದ ಉನ್ನತಿಗಾಗಿ ಹಮ್ಮಿಕೊಂಡಿರುವ ಈ ಸ್ಪರ್ಧೆಯಲ್ಲಿ ನಿಮ್ಮ ಮಕ್ಕಳನ್ನು ಭಾಗವಹಿಸುವಂತೆ ಮಾಡಿ, ಮುಂದೆ ಭಾರಿ, ಭಾರಿ ಪ್ರಯೋಜನವುಂಟು. ಮನೆಯವರೆಗೆ ಬಂದ ಅವಕಾಶ ಮಾತ್ರ ಮಿಸ್ ಮಾಡ್ಕೊಬೇಡ್ರಿ.

ಹೇಮಗೂ ಭಾನುವಾರ ಐತೆ, ನಿಮ್ಮ ಮಕ್ಕಳನ್ನು ಜಲ್ದಿ ಕರ್ಕೊಂಡು ಬಂದು, ಅವರು ಆಡುವುದನ್ನು ನೋಡಿ ಮಜಾ ತೆಗೆದುಕೊಳ್ಳಿ.

ನಿಮ್ಮವ

ಸಂದೇಶ್.ಎಸ್.ಜೈನ್

 
ಡಿ: 21 ರಂದು ಸಹೇಲಿ ಟ್ರಸ್ಟ್ ಅರ್ಪಿಸುವ ಸೂಪರ್ ಡ್ಯಾನ್ಸರ್ಸ್ & ಸಿಂಗರ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ
ನಾಳೆ ಅಂದ್ರೆ ಶನಿವಾರ ಕಣ್ರೀ.

(ಸಹೇಲಿ ಟ್ರಸ್ಟ್ ಅರ್ಪಿಸುವಸಿರುವ ಕಳೆದ ವರ್ಷದ ಸೂಪರ್ ಡ್ಯಾನ್ಸರ್ಸ್ & ಸಿಂಗರ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಮೂಡಿಬಂದ ಮನಮೋಹಕ ನೃತ್ಯ ಕಾರ್ಯಕ್ರಮದ ಒಂದು ನೋಟ)

ಜಬರ್ದಸ್ತ್ ಪ್ರೋಗ್ರೆಮ್. ಕುಂತ್ರೆ ಕಾರ್ಯಕ್ರಮ ಮುಗಿಯೊವರೆಗೆ ಏಳೊಕ್ಕೆ ಮನಸ್ಸಾಗಲ್ರಿಯಪ್ಪ ಅಂಥ ಸೂಪರ್ ಡೂಪರ್ ಕಾರ್ಯಕ್ರಮ.
ಸಹೇಲಿ ಸಹೋದರಿಯರ ಸಂಘಟನೆಗೊಂದು ಸಾಕ್ಷಿ-ಈ ಕಾರ್ಯಕ್ರಮ

ದಾಂಡೇಲಿ: ನಗರದ ಖ್ಯಾತ ಸಾಂಸ್ಕೃತಿಕ ಸಂಘಟನೆ ಹಾಗೂ ಮಹಿಳೆಯರೆ ಕೂಡಿರುವ ಸಹೇಲಿ ಟ್ರಸ್ಟ್ ಪ್ರತಿವರ್ಷದಂತೆ ಈ ವರ್ಷವೂ ಯಶಸ್ವಿಯಾಗಿ ಹಮ್ಮಿಕೊಂಡಿರುವ ಸೂಪರ್ ಡ್ಯಾನ್ಸರ್ಸ್ & ಸಿಂಗರ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು ಡಿ:21 ರಂದು ಸಂಜೆ 6.30 ಗಂಟೆಗೆ ಸರಿಯಾಗಿ ಸ್ಥಳೀಯ ಬಂಗೂರನಗರ ರಂಗನಾಥ ಸಭಾಭವನದಲ್ಲಿ ಜರಗಲಿದೆ.
ಕಳೆದ ಒಂದು ತಿಂಗಳಿನಿಂದ ವಿವಿಧ ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸ್ಪರ್ಧೆಯಲ್ಲಿ ಸೊಲೊ ಡ್ಯಾನ್ಸ್, ಗ್ರೂಪ್ ಡ್ಯಾನ್ಸ್ ಮತ್ತು ಸೊಲೊ ಸಿಂಗಿಂಗ್ ಸ್ಪರ್ಧೆಯನ್ನು ನಡೆಸಲಾಗಿ, ವಿವಿಧ ಸುತ್ತುಗಳ ಮೂಲಕ ಆಯ್ಕೆಯಾದ ಅಂತಿಮ ಸ್ಪರ್ಧಾಳುಗಳಿಗಾಗಿ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಆರ್.ವಿ.ದೇಶಪಾಂಡೆಯವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರು ಭಾಗವಹಿಸಲಿದ್ದಾರೆ. ಅತ್ಯುತ್ತಮವಾದ ಈ ಭಾಗದ ಕಲಾ ಪ್ರತಿಭೆಗಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಮ್ಮೂರ ಪ್ರತಿಭೆಗಳ ಪ್ರತಿಭೆಗಳಿಗೆ ಶುಭ ಹಾರೈಸಿ, ಪ್ರೋತ್ಸಾಹಿಸುವಂತೆ ಸಹೇಲಿ ಟ್ರಸ್ಟಿನ ಅಧ್ಯಕೆ ಮೀನಾಕ್ಷಿ ಕನ್ಯಾಡಿ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

ಮಿಸ್ ಮಾಡ್ಬೇಡ್ರಿ, ನೀವು ಬನ್ನಿ, ನಿಮ್ಮವರನ್ನು ಕರೆ ತನ್ನಿ, ಸಹೇಲಿ ಸಹೋದರಿಯರ ಸಮಾಜಮುಖಿ ಕಾರ್ಯಕ್ರಮ ಹಾಗೂ ಶ್ರಮಸಾಧನೆಯನ್ನು ಪ್ರೋತ್ಸಾಹಿಸೋಣ.

ನಿಮ್ಮವ
ಸಂದೇಶ್.ಎಸ್.ಜೈನ್
-

 

Friday, December 6, 2019

ಸಾಧನೆಯ ಛಲಗಾರ್ತಿ ನಾಗರೇಖಾ ಗಾಂವಕರಗೆ ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿ
ಅವರು ನಮ್ಮ ದಾಂಡೇಲಿಗೆ ಮಾತ್ರವಲ್ಲ ಇಡೀ ಜಿಲ್ಲೆಗೆ ಹೆಮ್ಮೆ. ಬಹುಷ: ಅವರ ಬೆಳವಣಿಗೆ ನೋಡಿದರೆ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯಕ್ಕೆ ಆಸ್ತಿಯಾಗಬಲ್ಲ ಶರವೇಗದ ಸಾದನೆಯ ಛಲಗಾರ್ತಿ ಎನ್ನಲು ಅಡ್ಡಿಯಿಲ್ಲ. ವೃತ್ತಿಯಲ್ಲಿ ಕಾಲೇಜು ಉಪನ್ಯಾಸಕಿಯಾಗಿದ್ದರೂ ವೃತ್ತಿ ಬದುಕಿನ ಜೊತೆಗೆ ಸಂಸಾರದ ಸಾರಥಿಯಾಗಿ ಮನೆ ನಿರ್ವಹಣೆಯ ಕೆಲಸವನ್ನು ಶೃದ್ದೆಯಿಂದ ಮಾಡಿ, ಸಂಸಾರದ ಪ್ರಗತಿಯ ದೀಪವಾಗಿದ್ದಾರೆ. ಅವರು ಬೇರೆ ಯಾರು ಅಲ್ಲ. ನಿರಂತರವಾದ ಶ್ರಮಸಾಧನೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸದೃಢ ಹೆಜ್ಜೆಯೊಂದಿಗೆ ಮುನ್ನಡೆಯುತ್ತಿರುವ ಸುಸಂಸ್ಕೃತ ಅಕ್ಕ ನಮ್ಮ ನಾಗರೇಖಾ ಗಾಂವಕರ. 
 
ಕನ್ನಡ ಸಾರಸ್ವತ ಲೋಕಕ್ಕೆ ಹಲವಾರು ಕೃತಿಗಳನ್ನು ಸಮರ್ಪಿಸುವುದರ ಮೂಲಕ ಕನ್ನಡಮ್ಮನ ಸೇವೆಯನ್ನು ಅತ್ಯಂತ ಶೃದ್ದಾಭಕ್ತಿಯಿಂದ ನಿರ್ವಹಿಸುತ್ತಿರುವ ನಾಗರೇಖಾ ಅವರು ಕವಯತ್ರಿಯಾಗಿ, ಅಂಕಣಕಾರರಾಗಿ, ಬರಹಗಾರರಾಗಿ ಗಮನ ಸೆಳೆಯುವುದರ ಜೊತೆಗೆ ಉತ್ತಮ ವಾಗ್ಮಿಯಾಗಿ ಚಿರಪರಿಚಿತರಾಗಿದ್ದಾರೆ.
 
ಈಗಾಗಲೆ ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗಿರುವ ಪ್ರೀತಿಯ ಅಕ್ಕ ನಾಗರೇಖಾ ಗಾಂವಕರ ಅವರ ಮಡಿಲಿಗೆ ಬೆಳಗಾವಿಯ  ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ವತಿಯಿಂದ ಕೊಡಮಾಡುವ ಡಾ. ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿಯು ಅರಸಿ ಬಂದಿರುವುದು ನಮಗೆಲ್ಲಾ ಅತೀವ ಆನಂದ ತಂದಿದೆ. ಡಿಸೆಂಬರ 8 ರಂದು ಬೆಳಗಾವಿಯ ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನಾಗರೇಖಾರವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. 
 ಸರಳ, ಸಜ್ಜನಿಕೆಯ ಸುಯೋಗ್ಯ ಸುಸಂಸ್ಕೃತಿಯ ಅಕ್ಕ ನಾಗರೇಖಾ ಗಾಂವಕರ ಅವರ ಶ್ರಮಸಾಧನೆಗೆ ಅನಂತಕೋಟಿ ವಂದನೆಗಳು ಮತ್ತು ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಅಭಿಮಾನಪೂರ್ವಕ ಅಭಿವಂದನೆಗಳು. ಇವರ ಸಾಧನೆಗೆ ಕಲ್ಪವೃಕ್ಷದಂತಿರುವ ಅವರ ಪತಿ ಪ್ರವೀಣ ನಾಯಕರಿಗೂ ಒಂದು ಸೆಲ್ಯೂಟ್.

ನಿಮ್ಮ ತಮ್ಮ
ಸಂದೇಶ್.ಎಸ್.ಜೈನ್
 
 

Wednesday, December 4, 2019

ಜೈನ್ ಇಡ್ಲಿ ಕೆಫೆ ದಾಂಡೇಲಿ
ಇಂದು ದಿನಾಂಕ: 05.12.2019, ಮಧ್ಯಾಹ್ನ 12 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೆ ಸ್ವಾದಿಷ್ಟ ರುಚಿಯೊಂದಿಗೆ ಊಟ

ಸೋಡಾ ಪುಡಿ, ಟೇಸ್ಟಿಂಗ್ ಪೌಡರ್ ಬಳಸದೆ ಮಾಡಿರುವ ಮನೆಪಾಕ ತತ್ವ ನಮ್ಮದು.

ನಿಮಗೆ ಕುಚಲಕ್ಕಿ ಗಂಜಿ ಬೇಕೆ ನಮ್ಮಲ್ಲಿ ಬನ್ನಿ

ಅರಮನೆ ನೋಡಲು ಅಂದ
ಆದ್ರೆ ಊಟ ಜೈನ್ ಇಡ್ಲಿ ಕೆಫೆದ್ದೆ ಚೆಂದ
ಭರ್ಜರಿ ವೆರೈಟಿ ವೆರೈಟಿ ಊಟ ಕೇವಲ ರೂ:50/- ಮಾತ್ರ

ಸ್ಥಳ: ಜೈನ್ ಇಡ್ಲಿ ಕೆಫೆ, ನಿಯರ್: ಡಾ: ಪಾಟೀಲ್ ಆಸ್ಪತ್ರೆ

ವೈವಿಧ್ಯಮಯ ಊಟದ ಅರಮನೆ

ಇಂದು ನಮ್ಮ ಊಟದ ವಿಶೇಷತೆಗಳು:
1.    ಕುಚಲಕ್ಕಿ ಗಂಜಿ ನೀರಿನ ಆರೋಗ್ಯವರ್ದಕ ಸೂಪ್
2.    ನಾವೆ ಸಿದ್ದಪಡಿಸಿದ ರುಚಿಕರ ಉಪ್ಪಿನಕಾಯಿ
3.    ಬದನೆಕಾಯಿ ಗಸಿ
4.    ಸ್ಮಾರ್ಟ್ ಟೊಮೆಟೊ ಕೂರ್ಮ
5.    ಚಪಾತಿ
6.    ಅನ್ನ
7.    ಸಾಂಬರ್

ಇಂದು ನಮ್ಮಲ್ಲಿ ಲಭ್ಯವಿರುವ ಉಪಹಾರ:
1.    ಇಡ್ಲಿ
2.    ಉಪ್ಪಿಟ್ಟು
3.    ದಾಲ್ ಕಿಚಡಿ
4.    ಚಪಾತಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂದೇಶ್.ಎಸ್.ಜೈನ್, ಪತ್ರಕರ್ತ, ಮೊ:9620595555,7349443043

ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.

ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.

ಊಟ ಮಾಡಿ ನೋಡಿ. ಊಟ ನಮ್ಮದು, ಸಂಭ್ರಮ ನಿಮ್ಮದು.
ನಮ್ಮ ರುಚಿಯೆ ನಿಮಗೆ ಹಬ್ಬ- ನಿಮ್ಮ ಖುಷಿಯೆ ನಮಗೆ ಹಬ್ಬ

ನಿಮ್ಮವ
ಸಂದೇಶ್.ಎಸ್.ಜೈನ್



 

Tuesday, December 3, 2019

ಜೈನ್ ಇಡ್ಲಿ ಕೆಫೆ ದಾಂಡೇಲಿ
ಇಂದು ದಿನಾಂಕ: 04.12.2019, ಮಧ್ಯಾಹ್ನ 12 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೆ ಸ್ವಾದಿಷ್ಟ ರುಚಿಯೊಂದಿಗೆ ಊಟ

ಸೋಡಾ ಪುಡಿ, ಟೇಸ್ಟಿಂಗ್ ಪೌಡರ್ ಬಳಸದೆ ಮಾಡಿರುವ ಮನೆಪಾಕ ತತ್ವ ನಮ್ಮದು.

ನಿಮಗೆ ಕುಚಲಕ್ಕಿ ಗಂಜಿ ಬೇಕೆ ನಮ್ಮಲ್ಲಿ ಬನ್ನಿ

ಅರಮನೆ ನೋಡಲು ಅಂದ
ಆದ್ರೆ ಊಟ ಜೈನ್ ಇಡ್ಲಿ ಕೆಫೆದ್ದೆ ಚೆಂದ

ಭರ್ಜರಿ ವೆರೈಟಿ ವೆರೈಟಿ ಊಟ ಕೇವಲ ರೂ:50/- ಮಾತ್ರ

ಸ್ಥಳ: ಜೈನ್ ಇಡ್ಲಿ ಕೆಫೆ, ನಿಯರ್: ಡಾ: ಪಾಟೀಲ್ ಆಸ್ಪತ್ರೆ

ವೈವಿಧ್ಯಮಯ ಊಟದ ಅರಮನೆ
 
ಇಂದು ನಮ್ಮ ಊಟದ ವಿಶೇಷತೆಗಳು:
1.    ಕುಚಲಕ್ಕಿ ಗಂಜಿ ನೀರಿನ ಆರೋಗ್ಯವರ್ದಕ ಸೂಪ್
2.    ನಾವೆ ಸಿದ್ದಪಡಿಸಿದ ರುಚಿಕರ ಉಪ್ಪಿನಕಾಯಿ
3.    ಹೀರೆಕಾಯಿ, ಕ್ಯಾಪ್ಸಿಕಂ ಪಲ್ಯ
4.    ಸ್ಮಾರ್ಟ್ ರೆಡ್ ಕೂರ್ಮ
5.    ಚಪಾತಿ
6.    ಅನ್ನ
7.    ಸಾಂಬರ್
ಇಂದು ನಮ್ಮಲ್ಲಿ ಲಭ್ಯವಿರುವ ಉಪಹಾರ:
1.    ಇಡ್ಲಿ
2.    ದಾಲ್ ಕಿಚಡಿ
3.    ಚಪಾತಿ
 
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂದೇಶ್.ಎಸ್.ಜೈನ್, ಪತ್ರಕರ್ತ, ಮೊ:9620595555,7349443043
 
ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.
 
ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.
 
ಊಟ ಮಾಡಿ ನೋಡಿ. ಊಟ ನಮ್ಮದು, ಸಂಭ್ರಮ ನಿಮ್ಮದು.
ನಮ್ಮ ರುಚಿಯೆ ನಿಮಗೆ ಹಬ್ಬ- ನಿಮ್ಮ ಖುಷಿಯೆ ನಮಗೆ ಹಬ್ಬ

ನಿಮ್ಮವ
ಸಂದೇಶ್.ಎಸ್.ಜೈನ್



 

ಜೈನ್ ಇಡ್ಲಿ ಕೆಫೆ ದಾಂಡೇಲಿ
ಇಂದು ಸಂಜೆಯಿಂದ ರಾತ್ರಿ 10.30 ಗಂಟೆಯವರೆಗೆ ಊಟದ ಹಬ್ಬ

ಜೈನ್ ಇಡ್ಲಿ ಕೆಫೆ ಪ್ರಸ್ತುತ ಪಡಿಸುತ್ತಿರುವ ಮೊದಲ ಬಾರಿಗೆ ಊಟದ ಹಬ್ಬ. ಇಂದು ಮಾತ್ರ
 
ಭರ್ಜರಿ ವೆರೈಟಿ ವೆರೈಟಿ ಊಟ ಕೇವಲ ರೂ:60/- ಮಾತ್ರ  ಇಂದು ಮಾತ್ರ
 
ಸ್ಥಳ: ಜೈನ್ ಇಡ್ಲಿ ಕೆಫೆ, ನಿಯರ್: ಡಾ: ಪಾಟೀಲ್ ಆಸ್ಪತ್ರೆ
ಸಮಯ: ಇಂದು ಸಂಜೆ 6.30 ರಿಂದ ರಾತ್ರಿ 10.30 ಗಂಟೆಯವರೆಗೆ ಮಾತ್ರ

ನೋಡಲು ಅರಮನೆ ಚೆಂದ
ಆದ್ರೆ ಊಟ ನಮ್ಮ ಜೈನ್ ಇಡ್ಲಿ ಕೆಫೆಯದ್ದೆ ಚೆಂದ

ವೈವಿಧ್ಯಮಯ ಊಟದ ಅರಮನೆ
 
ಇಂದು ನಮ್ಮ ಊಟದ ವಿಶೇಷತೆಗಳು:
1.    ಸೂಪ್
2.    ನಾವೆ ಸಿದ್ದಪಡಿಸಿದ ರುಚಿಕರ ಉಪ್ಪಿನಕಾಯಿ
3.    ಹೆಮ್ಮೆಯ ಚಟ್ನಿ
4.    ಬಿನ್ಸ್ ಪಲ್ಯ
5.    ಗಸಿ
6.    ಕೂರ್ಮ
7.    ಚಪಾತಿ
8.    ಪಾಯಸ
9.    ಅನ್ನ
10.    ಸಾಂಬರ್
11.    ರಸಂ
12.    ಮಜ್ಜಿಗೆ
13.    ಮಿರ್ಚಿ ಪ್ರೈ
 
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂದೇಶ್.ಎಸ್.ಜೈನ್, ಪತ್ರಕರ್ತ, ಮೊ:9620595555,7349443043
ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.
 
ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.
 
ಊಟ ಮಾಡಿ ನೋಡಿ. ಊಟ ನಮ್ಮದು, ಸಂಭ್ರಮ ನಿಮ್ಮದು.
 
ನಮ್ಮ ರುಚಿಯೆ ನಿಮಗೆ ಹಬ್ಬ- ನಿಮ್ಮ ಖುಷಿಯೆ ನಮಗೆ ಹಬ್ಬ

ನಿಮ್ಮವ
ಸಂದೇಶ್.ಎಸ್.ಜೈನ್




 

Friday, November 29, 2019

ಜೈನ್ ಇಡ್ಲಿ ಕೆಫೆ ದಾಂಡೇಲಿ

ದಿನದ 24 ತಾಸು ಸೇವೆ ಇದು ನಿಮ್ಮ ಜೈನ್ ಇಡ್ಲಿ ಕೆಫೆಯಲ್ಲಿ ಮಾತ್ರ
 
ಎಷ್ಟೊತ್ತಿಗೂ ಬೇಕಾದರೂ ಊಟ ಅಥವಾ ರೈಸ್ ಬಾತ್ ನೀಡುವ ಸೇವೆ -ಇದು ನಿಮ್ಮ ಜೈನ್ ಇಡ್ಲಿ ಕೆಫೆಯಲ್ಲಿ ಮಾತ್ರ (ಸಸ್ಯಹಾರಿ ಪುಡ್ ಮಾತ್ರ, ಒನ್ಲಿ ವೆಜಿಟೇರಿಯನ್)

ಆತ್ಮೀಯರೇ, ಕೆಲವೊಮ್ಮೆ ನೀವು ಪರಸ್ಥಳಕ್ಕೆ ಹೋಗಿ ಹಿಂದುರುಗಿ ಬರುವಾಗ ರಾತ್ರಿ 11, 12 ಗಂಟೆ ಅಥವಾ ಅದಕ್ಕೂ ತಡವಾಗಿ ದಾಂಡೇಲಿಗೆ ಬಂದು ಮುಟ್ಟುತ್ತೀರಿ. ಆವಾಗ ನಿಮಗೆ ಎಲ್ಲಿಯೂ ಊಟ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅಂತವರ ಹಸಿವು ನೀಗಿಸುವ ಸಾಮಾಜಿಕ ಪ್ರಜ್ಞೆಯಡಿ ಜೈನ್ ಇಡ್ಲಿ ಕೆಫೆ ನೀವು ಹೇಳಿದ ಸಮಯಕ್ಕೆ ಅಂದರೆ ದಿನದ 24 ಗಂಟೆಯೂ ಊಟವನ್ನು ಒದಗಿಸುವ ಕಾರ್ಯವನ್ನು ಮಾಡಲಿದೆ. ಆದರೆ ಕನಿಷ್ಟ 5 ಗ್ರಾಹಕರು ಇರತಕ್ಕದ್ದು. 

ಉದಾಹರಣೆಗೆ ನೀವು ಧಾರವಾಡ/ಹುಬ್ಬಳ್ಳಿಗೆ ಹೋಗಿದ್ದೀರಿ. ಅಲ್ಲಿ ದಾಂಡೇಲಿಯ ಬಸ್ಸನ್ನೇರಿ ಅಥವಾ ಸ್ವಂತ ವಾಹನದಲ್ಲಿ ರಾತ್ರಿ 10 ಗಂಟೆಗೆ ಅಥವಾ 11 ಗಂಟೆಗೆ ಕುಳಿತಿರುತ್ತೀರಿ. ಆವಾಗ್ಲೆ ನಮ್ಮನ್ನು ಸಂಪರ್ಕಿಸಿ ಊಟಕ್ಕೆ ಆರ್ಡರ್ ಮಾಡಿ. ಕಡಿಮೆ ದರದಲ್ಲಿ ಹೆಚ್ಚು ರುಚಿಕರವಾದ ಊಟ ನೀಡಲಾಗುವುದು. 5 ರಿಂದ 100 ಜನರಿಗೆ ಊಟ ಒದಗಿಸಲಾಗುವುದು. ಆದರೆ ಕನಿಷ್ಟ ಒಂದು ಗಂಟೆ ಮುಂಚಿತವಾಗಿ ಹೇಳತಕ್ಕದ್ದು. 

ಆದರೆ ಒಂದು ಮಾತು, ನಾವು ಹೇಳಿದ ಸ್ಥಳಕ್ಕೆ ನೀವು ಬರುವುದು. ನಿಮಗೆ ತೊಂದರೆಯಾಗದಂತೆ ಸರ್ವಿಸ್ ಚಾರ್ಜ್ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂದೇಶ್.ಎಸ್.ಜೈನ್, ಪತ್ರಕರ್ತ, ಮೊ:9620595555,7349443043

ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.

ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.

ನಿಮ್ಮವ
ಸಂದೇಶ್.ಎಸ್.ಜೈನ್


 

Wednesday, November 27, 2019

ಜೈನ್ ಇಡ್ಲಿ ಕೆಫೆ ದಾಂಡೇಲಿ
ಜೈನ್ ಇಡ್ಲಿ ಕೆಫೆ ಪ್ರಸ್ತುತ ಪಡಿಸುತ್ತಿರುವ ಮೊದಲ ಬಾರಿಗೆ
ಮನೆ ಪಾಕ ಶೈಲಿಯಲ್ಲಿ ಊಟದ ಡಬ್ಬ ಸೇವೆ

ನಿಮ್ಮ ಮನೆ ಹುಡುಗನ ಮನೆ ಪಾಕದ ಊಟದ ಡಬ್ಬ ಸೇವೆಗೆ ಆಶೀರ್ವದಿಸಿ

ನಮ್ಮ ಜೈನ್ ಇಡ್ಲಿ ಕೆಫೆ ಪ್ರಸ್ತುತ ಪಡಿಸುತ್ತಿರುವ ಮತ್ತೊಂದು ಅಂಬೆಗಾಲಿನ ಹೆಜ್ಜೆ. ಮನೆ ಬಾಗಿಲಿಗೆ ಊಟದ ಡಬ್ಬ ಸೇವೆ. ಸೋಡಾ ಪುಡಿಯನ್ನು ಹಾಕದೇ ಸಿದ್ದ ಪಡಿಸಿದ ಅನ್ನ. ಮನೆ ಪಾಕ. ಇದು ನಮ್ಮ ಕರ್ತವ್ಯ, ನಮ್ಮ ಧ್ಯೇಯ. ಡಿಸೆಂಬರ್: 05 ರಿಂದ ಪ್ರಾರಂಭ.


ನಿಯಮಗಳು.
    ಲಿಮಿಟೆಡ್ ಡಬ್ಬ ಮಾತ್ರ..
    ಮೊದಲು ಬಂದವರಿಗೆ ಆದ್ಯತೆ.
    ನಿಮ್ಮ ಹೆಸರನ್ನು ದಿನಾಂಕ: 02.12.2019 ರೊಳಗೆ ನೊಂದಾಯಿಸಿಕೊಳ್ಳಿ.
    ಹೆಸರು ನೊಂದಾಯಿಸುವಾಗ ರೂ: 1800/- ಮೊತ್ತದ ಚೆಕ್ಕನ್ನು ನೀಡಿ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು.
    ಡಬ್ಬ ನಿಮ್ಮದು- ಊಟ ನಮ್ಮದು
    ನಿಮ್ಮ ಮನೆ ಬಾಗಿಲಿಗೆ ಪ್ರತಿ ನಿತ್ಯ ಊಟದ ಡಬ್ಬ ಸೇವೆ. ಕೇವಲ 50 ಜನರಿಗೆ ಮಾತ್ರ. ಮೊದಲು ಬಂದವರಿಗೆ ಆಧ್ಯತೆ.
    ಪ್ರಕೃತಿದತ್ತ ಆಹಾರಕ್ಕೆ ನಮ್ಮ ಮೊದಲ ಆಧ್ಯತೆ.
    ನಿಮ್ಮ ಆರೋಗ್ಯವೆ ನಮ್ಮ ಭಾಗ್ಯ. ಆರೋಗ್ಯಯುತ ಆಹಾರ ಇದು ನಮ್ಮ ಗುರಿ. 


ಅಸಿಡಿಟಿ, ಹೊಟ್ಟೆ ಉಬ್ಬರ, ಗ್ಯಾಸ್ ಟ್ರಬಲ್ ಮುಕ್ತ ಆಹಾರಕ್ಕಾಗಿ ನಿಮ್ಮ ಮನೆ ಹುಡುಗನ ಊಟದ ಡಬ್ಬವನ್ನೆ ಪಡೆದುಕೊಳ್ಳಿರಿ. ಹಣ ಯಾವತ್ತು ಗಳಿಸಬಹುದು. ಜನರನ್ನು ಕಷ್ಟಪಟ್ಟು ಗಳಿಸಬೇಕು. ಆದ್ರೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ. ನಮ್ಮ ಆರೋಗ್ಯ ಸಂರಕ್ಷಣೆಯ ಜವಾಬ್ದಾರಿ ನಮ್ಮದಲ್ವೆ.

 
ನಮ್ಮಿಂದೇನು?
ನಾವು ಪ್ರತಿನಿತ್ಯ ನೀವಿರುವ ಅಂದರೆ ನೀವು ಹೇಳಿದ ಸ್ಥಳಕ್ಕೆ ಊಟದ ಡಬ್ಬವನ್ನು ಪೊರೈಸುತ್ತೇವೆ. ಆದ್ರೆ ಊಟದ ಡಬ್ಬ ನಿಮ್ಮದಿರಬೇಕು.


ನಮ್ಮ ಊಟದ ವಿಶೇಷತೆಗಳು:
    ನಾವೆ ಮನೆಯಲ್ಲಿ ಸಿದ್ದ ಪಡಿಸಿದ ಉಪ್ಪಿನ ಕಾಯಿ ಅಥವಾ ಚಟ್ನಿ
    ಪಲ್ಯ
    ಕೂರ್ಮ
    ಚಪಾತಿ (2)
    ಅನ್ನ
    ಕುಚಲಕ್ಕಿ ಅನ್ನ ಬೇಕಾದವರಿಗೆ ಕುಚಲಕ್ಕಿ ಅನ್ನ
    ಸಾಂಬರ್ ಅಥವಾ ರಸಂ
    ಮಜ್ಜಿಗೆ ಅಥವಾ ಮೊಸರು
    ಮಿರ್ಚಿ ಪ್ರೈ ಅಥವಾ ಹಪ್ಪಳ ಅಥವಾ ಸಂಡಿಗೆ ಇನ್ನಿತರೇ
    ಸಮಯ ಸಂದರ್ಬ ನೋಡಿ ಇನ್ನೂ ಸ್ಪೇಷಲ್ ಐಟಂ
    ವಿಪರೀತ ಬೇಸಿಗೆಗಾಲದಲ್ಲಿ ನಿಮ್ಮ ಆರೋಗ್ಯ ಸಂರಕ್ಷಣೆಗಾಗಿ ಉಚಿತ ಕುಚಲಕ್ಕಿ ಗಂಜಿ ನೀರಿನ ಸೂಪ್. ಇದು ನಮ್ಮ ಸೇವೆ.


ಒಂದು ಊಟದ ಡಬ್ಬದ ದರ (ರೇಟ್): ಕೇವಲ ರೂ:60/- ಮಾತ್ರ


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂದೇಶ್.ಎಸ್.ಜೈನ್, ಪತ್ರಕರ್ತ, ಮೊ:9620595555,7349443043


ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.


ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.


ನಿಮ್ಮವ
ಸಂದೇಶ್.ಎಸ್.ಜೈನ್



 

Wednesday, November 20, 2019

ಜೈನ್ ಇಡ್ಲಿ ಕೆಫೆ ದಾಂಡೇಲಿ
ಕುಚಲಕ್ಕಿ ಗಂಜಿ ನೀರಿನ ಸೂಪ್ ರೂ:5/- ಕ್ಕೆ

ಹೀಗೊಂದು ಸಂಭಾಷಣೆ
ನಮ್ಮ ಬಸ್ಯಾ ಮತ್ತು ಮುತ್ಯಾ ಎಂಬ ಗೆಳೆಯರಿಬ್ಬರು ಬಿಸಿಲ ಧಗೆ ನಡೆದುಕೊಂಡು ಹೋಗುತ್ತಿದ್ದ ಸನ್ನಿವೇಶವಿದು.

ಬಸ್ಯಾ: ಏನ್ಲೇ ಮುತ್ಯಾ, ಈ ಬಾರಿ ಮಳೆನೂ ಜಬರ್ದಸ್ತು ಬಂತು, ಇತ್ಲಾಗೆ ಬಿಸಿಲಿನ ಧಗೆನೂ ಭಯಂಕರ ಆಯ್ತಿಯಾಪ್ಪ. ಈ ಬಿಸಿಲನ ಧಗೆಗೆ ಬಹಳ ತೊಂದರೆಯಾಯಿತೊಲ್ಲೊ.

ಮುತ್ಯಾ: ಅದು ನಿಜ ಕಣ್ಲ. ಬಿಸಿಲಿಗೆ ಸ್ವಲ್ಪ ತಂಪು ಮಾಡೋಣ. 

ಬಸ್ಯಾ: ಏನು ಮಾಡೋದು?

ಮುತ್ಯಾ: ಒಂದು ಎಳ್ನೀರು ಕುಡಿಯೋಣ, ಬಾ

ಬಸ್ಯಾ: ಛೇ. ಛೇ ಬೇಡಪ್ಪೊ, ಎಳ್ನೀರು ರೇಟ್ ಕೇಳಿದ್ರೆ ಸುಸ್ತಾಗಿ ಬಿಡ್ತೀಯಾ. ಏನು ಮಾರಾಯ 30 ರೂಪಾಯಿ ಕೊಟ್ಟು ಯಾವಾಗ್ಲೋ ತಂದು ಸ್ಟಾಕ್ ಇಟ್ಟಿರೊ ಎಳ್ನೀರು ಕುಡಿದ್ರೆ ಏನು ಲಾಭಾ ಆಗ್ತಾತೈತಿ. ಅದಕ್ಕೆ ನಮ್ಮ ಜೈನ್ ಇಡ್ಲಿ ಕೆಫೆ ಇದೆಯಲ್ಲಾ. ಅದು ಪಾಟೀಲ್ ಆಸ್ಪತ್ರೆ ಬಳಿ ಇರೋ ಜೈನ್ ಇಡ್ಲಿ ಕೆಫೆಯಲ್ಲಿ ತಂಪು ಮಾಡುವುದಕ್ಕಾಗಿ ಮತ್ತು ಪಕ್ಕಾ ಆರೋಗ್ಯವರ್ಧಕವಾಗಿರುವ ಕುಚಲಕ್ಕಿ ಗಂಜಿ ನೀರಿನ ಸೂಪ್ ಆಯ್ತಿ ಮಾರಾಯ. ಅದು ಬರೀ ರೂ: 5/- ಗೆ ಮಾತ್ರ. ರೊಕ್ಕನೂ ಉಳಿತೈತಿ. ಆರೋಗ್ಯನೂ ಚಲೋ ಇರುತೈತಿ.

ಮುತ್ಯಾ: ಬಹಳ ಬೆಸ್ಟ್ ಕೆಲಸ ಮಾಡ್ಯಾರೆ ನೋಡು. ಹಾಗಾದ್ರೆ 30 ರೂಪಾಯಿ ಖರ್ಚು ಮಾಡುವ ಬದಲು, ಜೈನ್ ಇಡ್ಲಿ ಕೆಫೆಗೆ ಹೋಗಿ ಕುಚಲಕ್ಕಿ ಗಂಜಿ ನೀರಿನ ಸೂಪ್ ಕುಡಿಯೋಣ.

ಬಸ್ಯಾ: ಬೇಗ ಹೋಗೋಣ ಮಾರಾಯ. ಅವರು ಬೆಳಿಗ್ಗೆ  7 ಗಂಟೆಯಿಂದ 10.30 ಗಂಟೆಯವರೆಗೆ ಮಾತ್ರ ಇರ್ತಾರೆ. ಮತ್ತೆ ಸಂಜೆ 6.30 ರಿಂದ ರಾತ್ರಿ 10.30 ರವರೆಗೆ ಮಾತ್ರ ಇರ್ತಾರೆ. ಅದು ಲಿಮಿಟೆಡ್ ಸೇಲ್ ಮಾರಾಯ. ಬಾ  ಹೋಗೋಣ.
ಮುತ್ಯಾ: ಅಯ್ತು ಕಣ್ಲೇ. ಬಾ ಹೋಗೋಣ.

ಕೇವಲ ರೂ:5 ಕ್ಕೆ ಆರೋಗ್ಯವರ್ದಕ ಮತ್ತು ಗುಣಮಟ್ಟದ ಕುಚಲಕ್ಕಿ ಗಂಜಿ ನೀರಿನ ಸೂಪ್. ಇದು ನಿಮ್ಮ ಜೈನ್ ಇಡ್ಲಿ ಕೆಫೆಯಲ್ಲಿ ಮಾತ್ರ. ಕುಚಲಕ್ಕಿ ಗಂಜಿನೂ ಸಿಗುತ್ತದೆ. ರಾತ್ರಿ ಮಿನಿ ಊಟ ಇದೆ ಕಣ್ರೀ. ರೂ 30 ಮಾತ್ರ.

ಸ್ಥಳ: ನಿಯರ್: ಡಾ: ಪಾಟೀಲ್ ಆಸ್ಪತ್ರೆ, ಜೆ.ಎನ್.ರಸ್ತೆ, ದಾಂಡೇಲಿ

ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.

ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.

ನಿಮ್ಮವ
ಸಂದೇಶ್.ಎಸ್.ಜೈನ್

Sunday, November 10, 2019

ಜೈನ್ ಇಡ್ಲಿ ಕೆಫೆ ದಾಂಡೇಲಿ
ಜೈನ್ ಕ್ಯಾಟರಿಂಗ್ ಸರ್ವಿಸ್
ನೀವು ಆಶೀರ್ವದಿಸಿ, ಬೆಳೆಸಿದ ನಿಮ್ಮ ಮನೆಹುಡುಗನ ಜೈನ್ ಇಡ್ಲಿ ಕೆಫೆ ಮತ್ತೊಂದು ಪುಟ್ಟ ಕಾರ್ಯದತ್ತ ಮುಂದಡಿಯಿಟ್ಟಿದೆ. ಜೈನ್ ಇಡ್ಲಿ ಕೆಫೆಯ ಮತ್ತೊಂದು ಪುಟ್ಟ ಪ್ರಯತ್ನವೆ

ಜೈನ್ ಕ್ಯಾಟರಿಂಗ್ ಸರ್ವಿಸ್ 

ಉಪಹಾರ, ದಕ್ಷಿಣ ಭಾರತೀಯ ಹಾಗೂ ಕರಾವಳಿ ಶೈಲಿಯ ಮತ್ತು ನಿಸರ್ಗದತ್ತ ಉತ್ಪನ್ನಗಳಿಂದ ತಯಾರಿಸುವ ಮನೆಪಾಕಕ್ಕಾಗಿ ಸಂಪರ್ಕಿಸಿ: ಮೊ: 9620595555, 7349443043.

ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.

ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.

ನಿಮ್ಮವ
ಸಂದೇಶ್.ಎಸ್.ಜೈನ್



 

Thursday, November 7, 2019

ವೆರಿ ವೆರಿ ಸ್ಪೇಷಲ್ ಕುಚಲಕ್ಕಿ ಗಂಜಿ (ಬಾಯ್ಡ್ ರೈಸ್)
ಜೈನ್ ಇಡ್ಲಿ ಕೆಫೆ ದಾಂಡೇಲಿ

ಸ್ಥಳ: ನಿಯರ್: ಡಾ: ಪಾಟೀಲ್ ಆಸ್ಪತ್ರೆ, ಜೆ.ಎನ್.ರಸ್ತೆ, ದಾಂಡೇಲಿ

ದಿನಾಂಕ: 07.11.2019, ಸಂಜೆ: 6.30 ರಿಂದ ರಾತ್ರಿ 10.30 ರವರೆಗೆ 

ನಮ್ಮ ವಿಶೇಷ : (ನೀವೆಲ್ಲರೂ ಆಶ್ಚರ್ಯಪಡುವಂತೆ ಎಲ್ಲಿಯೂ ಸಿಗದಿರುವ ಕುಚಲಕ್ಕಿ ಗಂಜಿ, ಇದು ನಿಮ್ಮ ಜೈನ್ ಇಡ್ಲಿ ಕೆಫೆಯಲ್ಲಿ ಮಾತ್ರ)

1.    ವೆರಿ ವೆರಿ ಸ್ಪೇಷಲ್ ಕುಚಲಕ್ಕಿ ಗಂಜಿ
2.    ಅನ್ನಸಾಂಬರ್: (ಅಮ್ಟೆ ದಾಲ್ ಗಸಿ, ಖಾರ ಚಟ್ನಿ, ಸಾಂಬರ್).
3.    ಬಿಸಿ ಬಿಸಿ ಇಡ್ಲಿ ಸಾಂಬರ್.

ಆತ್ಮೀಯರೇ, ನಾಳೆಯಿಂದ ಅಂದರೆ ದಿನಾಂಕ:08.11.2019 ರಿಂದ ಪಾಟೀಲ್ ಆಸ್ಪತ್ರೆ ಬಳಿಯಿರುವ ಜೈನ್ ಇಡ್ಲಿ ಕೆಫೆಯಲ್ಲಿ ಬೆಳಿಗ್ಗೆ ಕುಚಲಕ್ಕಿ ಗಂಜಿ ಊಟ ಸಿಗಲಿದೆ. ಆರೋಗ್ಯವರ್ಧಕ ಗಂಜಿ ಊಟ ನಮ್ಮಲ್ಲಿ ಮಾತ್ರ. ನಮ್ಮ ಹೋಟೆಲ್ ಸಣ್ಣದಿರಬಹುದು, ಆದ್ರೆ ಸ್ವಚ್ಚ, ಸ್ವಾದಿಷ್ಟ ಮತ್ತು ಆರೋಗ್ಯಪೂರ್ಣ ಮನೆ ಪಾಕಕ್ಕೆ ಒಮ್ಮೆ ಭೇಟಿ ಕೊಡಿ.

ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.

ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.

ನಿಮ್ಮವ
ಸಂದೇಶ್.ಎಸ್.ಜೈನ್


 

Wednesday, November 6, 2019

ವೆರಿ ವೆರಿ ಸ್ಪೇಷಲ್ ಕುಚಲಕ್ಕಿ ಗಂಜಿ (ಬಾಯ್ಡ್ ರೈಸ್)
ಜೈನ್ ಇಡ್ಲಿ ಕೆಫೆ ದಾಂಡೇಲಿ

ಸ್ಥಳ: ನಿಯರ್: ಡಾ: ಪಾಟೀಲ್ ಆಸ್ಪತ್ರೆ, ಜೆ.ಎನ್.ರಸ್ತೆ, ದಾಂಡೇಲಿ

ದಿನಾಂಕ: 06.11.2019, ಸಂಜೆ: 6.30 ರಿಂದ ರಾತ್ರಿ 10.30 ರವರೆಗೆ 

ಇಂದಿನ ವಿಶೇಷ : (ನೀವೆಲ್ಲರೂ ಆಶ್ಚರ್ಯಪಡುವಂತೆ ಎಲ್ಲಿಯೂ ಸಿಗದಿರುವ ಕುಚಲಕ್ಕಿ ಗಂಜಿ ಇದು ನಿಮ್ಮ ಜೈನ್ ಇಡ್ಲಿ ಕೆಫೆಯಲ್ಲಿ ಮಾತ್ರ)

1.    ವೆರಿ ವೆರಿ ಸ್ಪೇಷಲ್ ಕುಚಲಕ್ಕಿ ಗಂಜಿ
2.    ಅನ್ನಸಾಂಬರ್: (ಹೀರೆ ಕಾಯಿ ಪಲ್ಯ, ಸೂಪರ್ ಚಟ್ನಿ, ಸಾಂಬರ್).
3.    ಗಮ ಗಮ ಉಪ್ಪಿಟ್ಟು

ನಿಮ್ಮವ

ಸಂದೇಶ್.ಎಸ್.ಜೈನ್


 

Tuesday, November 5, 2019

ವೆರಿ ವೆರಿ ಸ್ಪೇಷಲ್ ಹಲಸಿನ ಕಾಯಿ ಪಲ್ಯ
ಜೈನ್ ಇಡ್ಲಿ ಕೆಫೆ ದಾಂಡೇಲಿ

ಸ್ಥಳ: ನಿಯರ್: ಡಾ: ಪಾಟೀಲ್ ಆಸ್ಪತ್ರೆ, ಜೆ.ಎನ್.ರಸ್ತೆ, ದಾಂಡೇಲಿ
ದಿನಾಂಕ: 05.11.2019, ಸಂಜೆ: 6.30 ರಿಂದ ರಾತ್ರಿ 10.30 ರವರೆಗೆ 

ಇಂದಿನ ವಿಶೇಷ : (ನೀವೆಲ್ಲರೂ ಆಶ್ಚರ್ಯಪಡುವಂತೆ ಎಲ್ಲಿಯೂ ಸಿಗದಿರುವ ಹಲಸಿನ ಕಾಯಿ ಪಲ್ಯ ಇದು ನಿಮ್ಮ ಜೈನ್ ಇಡ್ಲಿ ಕೆಫೆಯಲ್ಲಿ ಮಾತ್ರ)
 
1.    ವೆರಿ ವೆರಿ ಸ್ಪೇಷಲ್ ಅನ್ನಸಾಂಬರ್: (ಹಲಸಿನ ಕಾಯಿ ಪಲ್ಯ, ಸೂಪರ್ ಚಟ್ನಿ, ಸಾಂಬರ್).
2.    ಗಮ ಗಮ ಉಪ್ಪಿಟ್ಟು

ನಿಮ್ಮವ

ಸಂದೇಶ್.ಎಸ್.ಜೈನ್


 
ರಾಜ್ಯಮಟ್ಟಕ್ಕೆ ಆಯ್ಕೆಯಾದ ದಾಂಡೇಲಿ ಪ್ರತಿಭೆ- ನಿಧಿ ನಾಯ್ಕ

ಕರ್ನಾಟಕ ರಾಜ್ಯ ಮಹಿಳಾ ಮತ್ತು  ಮಕ್ಕಳ ಕಲ್ಯಾಣ ಇಲಾಖೆಯವರು ಕಾರವಾರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಲಾಶ್ರಿ ಪ್ರಶಸ್ತಿಯ ಆಯ್ಕೆ ಶಿಬಿರದಲ್ಲಿ ದ್ವಿತೀಯ ಸ್ಥಾನವನ್ನು ನಗರದ ಜನತಾ ವಿದ್ಯಾಲಯ ಇ.ಎಮ್.ಎಸ್ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ ನಿಧಿ ಬಾಲಕೃಷ್ಣ ನಾಯ್ಕ ಈಕೆಯು ತನ್ನದಾಗಿಸಿಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ನಗರದ ಕೀರ್ತಿ ಬೆಳಗಿ, ನಮಗೆಲ್ಲ ಹೆಮ್ಮೆ ತಂದಿದ್ದಾಳೆ.

ಸೃಜನಾತ್ಮಕ ಪ್ರದರ್ಶನ ವಿಭಾಗದಲ್ಲಿ ಅಮೋಘ ಪ್ರದರ್ಶನವನ್ನು ನೀಡಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಬಹುಮಾನ ವಿತರಿಸಿದರು. ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಈಕೆ ಬಹುಮಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.  ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ನಿಧಿ ನಾಯ್ಕ ಅರಣ್ಯ ಇಲಾಖೆಯ ನೌಕರ ಬಾಲಕೃಷ್ಣ ನಾಯ್ಕ ಹಾಗೂ ಕಾವ್ಯಾ ನಾಯ್ಕರ ಮಗಳಾಗಿದ್ದಾಳೆ.  ಈಕೆಯ ಸಾಧನೆಗೆ ಜನತಾ ವಿದ್ಯಾಲಯದ ಪ್ರಾಚಾರ್ಯ ಎಂ.ಎಸ್.ಇಟಗಿ, ಶಾಲಾ ಮುಖ್ಯೋಪಾಧ್ಯಾಯಿನಿ ಯೂಜಿನ್ ಡಿವಾಜ್, ಶಾಲಾ ಶಿಕ್ಷಕ ವೃಂದ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ನಮ್ಮೂರಿಗೆ ಹಮ್ಮೆ ಮತ್ತು ಗೌರವ ತಂದುಕೊಟ್ಟ ಸುಸಂಸ್ಕೃತ ಬಾಲಕಿ ನಿಧಿ ನಿನಗಿದೊ ಅಕ್ಕರೆಯ ಅಭಿಮಾನದ ಅಭಿನಂದನೆಗಳು. ಶುಭವಾಗಲಿ, ಭವಿಷ್ಯದಲ್ಲಿ ಉನ್ನತಿ ನಿನ್ನದಾಗಲಿ.

ನಿಮ್ಮವ

ಸಂದೇಶ್.ಎಸ್.ಜೈನ್


 
ರಾಜ್ಯಮಟ್ಟದಲ್ಲಿ ಗಮನ ಸೆಳೆದ ನಮ್ಮೂರ ಹೆಮ್ಮೆಯ ಚಿನ್ನದ ಕುವರ ನವನೀತ ಕಾಮತ್ 
ಅವನು ಚೋಟುದ್ದವಿರುವ ಬಾಲಕ. ನೋಡಲು ಮಿಂಚುಳ್ಳಿಯಂತೆ ಹೊಳೆಯುವ ಮುಖದ ಅಂದ ಚೆಂದದ ಮುದ್ದಾದ ಬಾಲಕ. ಪತ್ಲವಿದ್ದರೂ ಪಾದರಸದಂತಿರುವ ಕ್ರಿಯಾಶೀಲತೆ. ಅವನ ಬೆಳವಣಿಗೆ ಭವಿಷ್ಯದ ಉಜ್ವಲ ಬದುಕಿಗೆ ಸುಭದ್ರ ಅಡಿಪಾಯವಂತು ಸುಳ್ಳಲ್ಲ. ಶ್ರಮಸಾಧನೆಯ ಬಾಲಕನಿಗೆ ಶ್ರಮಕ್ಕೆ ತಕ್ಕ ಇಂಬು ದೊರೆಯುತ್ತಿರುವುದು ಅವನ ಪ್ರಾಮಾಣಿಕ ಮತ್ತು ಪರಿಶುದ್ದ ಶ್ರಮಕ್ಕೆ ದೊರೆತ ಅರ್ಹ ಜಯವೆಂದರೇ ಅತಿಶಯೋಕ್ತಿ ಎನಿಸದು.

ಉತ್ತಮ ಸಂಸ್ಕಾರ, ಸರಳ ನಡೆ, ಗುರು ಹಿರಿಯರ ಬಗ್ಗೆ ಅಪಾರವಾದ ಗೌರವವನ್ನಿಟ್ಟುಕೊಂಡಿರುವ ಆ ಬಾಲಕ ಬೇರೆ ಯಾರು ಅಲ್ಲ. ದಿನನಿತ್ಯ ಅನ್ನದಾಸೋಹವನ್ನು ಉಣಬಡಿಸುವ ಕಾಮತ್ ರಿಪ್ರೆಶಮೆಂಟ್ ಮಾಲಕ ನವೀನ್ ಕಾಮತ್ ಹಾಗೂ ನಿವೇದಿತಾ ಕಾಮತ್ ದಂಪತಿಗಳ ಮಾನಸಪುತ್ರ ನಮ್ಮ ಹೆಮ್ಮೆಯ ಕೀರ್ತಿವಂತ ನವನೀತ್ ಕಾಮತ್.

ಅಂದ ಹಾಗೆ ಭಾಷಣದಲ್ಲೂ ಪರಾಕ್ರಮವನ್ನು ಹೊಂದಿರುವ ಈತ ಚುಟುಕು ಹೇಳುವುದರಲ್ಲಿ ನಿಪುಣ. ಚರ್ಚೆಯಲ್ಲಿ ಕೇಳುವುದೆ ಬೇಡ. ಚೆಸ್ ಆಟದಲ್ಲಿ ಎದುರಾಳಿಯನ್ನು ಬೆವರಿಳಿಸುವ ಬುದ್ದಿವಂತ. ಇನ್ನೂ ಶಟಲ್ ಬ್ಯಾಡ್ಮಿಂಟನ್ ನಲ್ಲೂ ಅಂತೂ ಹೇಳುವುದೆ ಬೇಡ. ದೊಡ್ಡವರ ಜೊತೆನೂ ಏಕಾಂಗಿಯಾಗಿ ಆಡಿ ತನ್ನತ್ತ ಪಂದ್ಯಾವಳಿಯನ್ನು ತಿರುಗಿಸಿಕೊಂಡು ಎಲ್ಲರಿಂದಲೂ ಬೆನ್ನು ತಟ್ಟಿಸಿ, ಪ್ರೋತ್ಸಾಹವನ್ನು ಗಿಟ್ಟಿಸಿಕೊಂಡ ಈತ ನಿಜವಾಗಿಯೂ ದಾಂಡೇಲಿಗೆ ಹೆಮ್ಮೆ ಅಲ್ಲದೇ ಮತ್ತೇನು.

ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತಾಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಗಮನಾರ್ಹ ಸಾಧನೆಗೈದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿಯೂ ತನ್ನ ಅದ್ಬುತ ಪ್ರದರ್ಶನವನ್ನು ನೀಡಿ ಎಲ್ಲರಿಂದ ಭೇಷ್ ಎನಿಸಿಕೊಂಡಿರುವುದಲ್ಲದೇ ತೃತೀಯ ಸ್ಥಾನವನ್ನು ತನ್ನದಾಗಿಸಿ ನಮ್ಮೂರಿನ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾನೆ.

ಇತ್ತೀಚೆಗೆ
udupi ಯಲ್ಲಿ ನಡೆದ 14 ವರ್ಷದೊಳಗಿನ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾ ಕೂಟದಲ್ಲಿ ಬೆಳಗಾವಿ ವಿಭಾಗವನ್ನು ಪ್ರತಿನಿಧಿಸಿದ  ನಗರದ ಜನತಾ ವಿದ್ಯಾಲಯ ಇ.ಎಮ್.ಎಸ್. ಶಾಲೆಯ ವಿದ್ಯಾರ್ಥಿಯಾದ ನನ್ನ ಮೆಚ್ಚಿನ ಮತ್ತು ನೆಚ್ಚಿನ ನವನೀತ ನವೀನ ಕಾಮತ ಈತನು ತೃತೀಯ ಸ್ಥಾನವನ್ನು ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆದು ಜಿಲ್ಲೆಗೆ ಹಾಗೂ ನಗರಕ್ಕೆ ಕೀರ್ತಿ ತಂದಿದ್ದಾನೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿದೆಡೆಯಿಂದ ಆಟಗಾರರು ಭಾಗವಹಿಸಿದ್ದರು. ನವನೀತ ಕಾಮತ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದನು. ಈತನಿಗೆ  ಅಂತರಾಷ್ಟ್ರೀಯ ಖ್ಯಾತಿಯ ತರಬೇತುದಾರರಾಗಿರುವ ರೋಶನ್ಲಾಲ್ ಜೈನ್ ಅವರು ತರಬೇತಿ ನೀಡಿದ್ದರು. ಈ ಹಿಂದೆ ಅಮರ್ ಗುರವ ಹಾಗೂ ಶರಣಯ್ಯ ಹುಬ್ಬಳ್ಳಿಮಠ ಅವರ ಜೊತೆ ತರಬೇತಿ ಪಡೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈತನ ಸಾಧನೆಗೆ ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಹಾಗೂ ನಗರದ ಗಣ್ಯರನೇಕರು ಮತ್ತು ಶಾಲಾ ಮುಖ್ಯೋಪಾದ್ಯಾಯಿನಿ ಯೂಜಿನ್ ಡಿವಾಜ್, ಜೆವಿಡಿ ಪ್ರಾಚಾರ್ಯ ಎಂ.ಎಸ್.ಇಟಗಿ ಹಾಗೂ ಶಾಲಾ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.

ಪುಣ್ಯದೂರಿಗೆ ಪುಣ್ಯವಂತ ಮಗನನ್ನು ನೀಡಿದ ನವೀನ್ ಕಾಮತ್ ದಂಪತಿಗಳಿಗೆ ನನ್ನದೊಂದು ಬಿಗ್ ಸೆಲ್ಯೂಟ್. 


ಪರಾಕ್ರಮಿ ನವನೀತ್ ಕಾಮತ್ ಈತನಿಗೆ ಪ್ರೀತಿಯ, ಅಭಿಮಾನದ ಅಭಿವಂದನೆಗಳು.

ನಿಮ್ಮವ

ಸಂದೇಶ್.ಎಸ್.ಜೈನ್


 

Saturday, August 10, 2019

ಇದು ಸ್ಪೂರ್ತಿಯ ನಡೆ
ಗಂಜಿ ಕೇಂದ್ರದ ಸಂತ್ರಸ್ಥರಿಗೆ ಆಹಾರ ವಸ್ತುಗಳನ್ನು ವಿತರಿಸಿದ ರವಿ ಚಾಟ್ಲ ತಂಡ
ದಾಂಡೇಲಿಯ ಅಂಬೇಡ್ಕರ್ ಭವನದ ಗಂಜಿ ಕೇಂದ್ರದಲ್ಲಿರುವ ಆಶ್ರಯ ಪಡೆದಿರುವ ಪ್ರವಾಹ ಸಂತ್ರಸ್ಥರಿಗೆ ನಗರದ ಯುವ ಸಮಾಜ ಸೇವಕ ಹಾಗೂ ಮಿತ್ರ ರವಿ ಚಾಟ್ಲ ಅವರ ನೇತೃತ್ವದ ತಂಡ ಬಿಸ್ಕೆಟ್, ಬ್ರೆಡ್ ಹಾಗೂ ಇನ್ನಿತರ ಆಹಾರ ವಸ್ತುಗಳನ್ನು ವಿತರಿಸಿ ಗಮನ ಸೆಳೆದರು.

ರವಿ ಚಾಟ್ಲ ಅವರ ಜೊತೆ ಅವರ ಸ್ನೇಹಿತರಾದ ಮುತ್ತು ಚಲವಾದಿ, ಡೇವಿಡ್ ರಾಜ್ ಹಾಗೂ ಅವಕ ಮಕ್ಕಳು ಸಹಕರಿಸಿದರು.
ರವಿಯವರ ಈ ಕಾರ್ಯ ಸ್ಪೂರ್ತಿ. ಈ ರೀತಿಯ ಕೈಂಕರ್ಯಗಳು ನಿತ್ಯ ನಿರಂತರವಾಗಲಿ, ನಿಮಗೆ ಶುಭವಾಗಲಿ.

ನಿಮ್ಮವ

ಸಂದೇಶ್.ಎಸ್.ಜೈನ್


Friday, August 9, 2019

ಶ್ರಮಜೀವಿ ಸನ್ಮಿತ್ರ ಜಮೀಲ್ ಇನ್ನಿಲ್ಲ
ಮಗದೊಮ್ಮೆ ಹುಟ್ಟಿ ಬನ್ನಿ ಜಮೀಲ್
ಅವರು ಎಂದೂ ಯಾರಲ್ಲಿಯೂ ಕೈ ಚಾಚಿದವರಲ್ಲ. ಶ್ರಮವಹಿಸಿ, ಬೆವರು ಸುರಿಸಿ ಬದುಕು ಕಟ್ಟಿಕೊಂಡ ಕಾಯಕಯೋಗಿ. ಎಳೆಯ ಪ್ರಾಯದಲ್ಲೆ ಸಂಸಾರದ ನೊಗವನ್ನು ಹೊತ್ತಿ, ಅಪ್ಪ, ಅಮ್ಮನಿಗೆ ಆದರ್ಶ ಮಗನಾಗಿ ಸಂಸಾರವನ್ನು ಆರ್ಥಿಕವಾಗಿ ಬೆಳಗಿಸಿ ಮನೆ ಮಂದಿಗೆ ಸಂತೃಪ್ತಿಯನ್ನು ಕರುಣಿಸಿದವರು. ಅವರು ಬೇರೆ ಯಾರು ಅಲ್ಲ. ವರುಣನ ಅರ್ಭಟಕ್ಕೆ ಇಹಲೋಕವನ್ನು ತ್ಯಜಿಸಿದ ಮನದ ಸನ್ಮಿತ್ರ ಮಹಮ್ಮದ್ ಜಮೀಲ್.ಎಂ.ನದಾಫ್.

ಅಂದ ಹಾಗೆ ಹಳಿಯಾಳದ ನಿವಾಸಿಯಾಗಿರುವ ಇವರು ಬಿಗ್ ಬ್ರೆಡ್ ವಿತರಣೆಯ ಕಾರ್ಯವನ್ನು ನಡೆಸುತ್ತಿದ್ದರು. ಹಳಿಯಾಳದವರಾದರೂ ನಮ್ಮ ದಾಂಡೇಲಿಯ ನವೀನ್ ಕಾಮತ್ ಅವರಿಂದ ಪರಿಚಯವಾದವರು. ಎರಡು ವರ್ಷಗಳ ಹಿಂದೆ ಪರಿಚಯಸ್ಥರಾದ ಜಮೀಲ್ ಅಲ್ಪದಿನದಲ್ಲೆ ಬೆಸ್ಟ್ ಪ್ರೆಂಟ್ ಆದವರು. 

ಬಿಗ್ ಬ್ರೆಡ್ ಮಾರುಕಟ್ಟೆಯ ಮೂಲಕ ಬದುಕು ಕಟ್ಟಿಕೊಂಡಿದ್ದ ಜಮೀಲ್ ಸಾಕಷ್ಟು ಬಡವರಿಗೆ, ಕ್ರೀಡಾ ಕಾರ್ಯಕ್ರಮಗಳಿಗೆ ನೆರವನ್ನು ನೀಡುತ್ತಿದ್ದ ಸಹೃದಯಿ. ಇಂದು ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಪಯಾಣ ಬೆಳೆಸಿದ್ದಾರೆ.

ವಾರದಲ್ಲಿ ಎರಡು ಮೂರು ಸಾರಿ ದಾಂಡೇಲಿಗೆ ಭೇಟಿ ಕೊಡುತ್ತಿದ್ದ ಹೃದಯದ ಮಿತ್ರ ಜಮೀಲ್ ನಾನು ಅದೇಷ್ಟೋ ಬಾರಿ ಹಸ್ಯಚಟಾಕಿಯನ್ನು ಹಾರಿಸುತ್ತಾ ಕಾಮತ್ ರಿಪ್ರೆಶಮೆಂಟಿನಲ್ಲಿ ನಾಷ್ಟ ಮಾಡುತ್ತಿದ್ದ ಆ ದಿನಗಳ ಸನ್ನಿವೇಶಗಳು ಇನ್ನೂ ನೆನಪು ಮಾತ್ರ. ಇನ್ನೂ ಬಹುವರ್ಷಗಳ ಕಾಲ ಬದುಕಿ ಬಾಳಬೇಕಿದ್ದ ಜಮೀಲ್ ಇಷ್ಟು ಬೇಗ ನಮ್ಮನ್ನೆಲ್ಲಾ ಯಾಕೆ ಬಿಟ್ಟು ಹೋದಿರಿ. ನಿಮ್ಮ ಅಗಲುವಿಕೆಯ ಸುದ್ದಿ ಕೇಳಿ ದುಖ:ತೃಪ್ತರಾಗಿದ್ದೇವೆ.

ನೋವಿನಲ್ಲೂ ಸಂತಸ ತರುತ್ತಿದ್ದ ಆ ನಿಮ್ಮ ವ್ಯಕ್ತಿತ್ವ, ಪರೋಪಕಾರಿ ಮನುಷ್ಯತ್ವ, ಹೃದಯವಂತಿಕೆ ನಾವು ಹೇಗೆ ಮರೆಯಲು ಸಾಧ್ಯ. ಆಕಸ್ಮಿಕವಾಗಿ ಅಗಲಿದ ಶ್ರಮಚೇತನ ನೀವು. ಮಗದೊಮ್ಮೆ ಜನ್ಮವೆತ್ತಿ ಬನ್ನಿ. ನಿಮ್ಮ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನಿಮ್ಮ ಕುಟುಂಬಸ್ಥರಿಗೆ ಭಗವಂತ ಕರುಣಿಸಲಿ. ನಿಮ್ಮ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುವ,

ದುಖ:ತೃಪ್ತ ಗೆಳೆಯ

ಸಂದೇಶ್.ಎಸ್.ಜೈನ್



 

Thursday, August 8, 2019

ದಯವಿಟ್ಟು ಗಮನಿಸಿ
ಎಚ್ಚರ ಎಚ್ಚರ
ಬಂಧುಗಳೇ, ವರುಣನ ಅರ್ಭಟ ಕ್ಷಣ ಕ್ಷಣಕ್ಕೂ ಎಲ್ಲೆ ಮೀರಿ ನಡೆಯುತ್ತಿದೆ. ಊಹಿಸಲಾಸಾಧ್ಯವಾದ ಸಂಕಷ್ಟದಲ್ಲಿ ಕರುನಾಡ ಜನತೆ ಇರುವುದು ನೋವಿನ ವಿಚಾರ.

ಈ ನಡುವೆ ಕೆಲವೊಂದು ವಿಚಾರಗಳನ್ನು ತಮ್ಮುಂದೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ.


1.    ಬಂಧುಗಳೇ ಮಳೆಯ ನೀರು ನಿಂತಲ್ಲಿ ನಡೆದಾಡುವಾಗ ಎಚ್ಚರಿಕೆ ವಹಿಸಿ, ಮಳೆಯ ನೀರಿನಲ್ಲಿ ಹಾವುಗಳು, ಇನ್ನಿತರೇ ವಿಷ ಜಂತುಗಳು ಬರಬಹುದು. ನಮ್ಮ ಮೋಜಿನಾಟ ಅಥವಾ ಮನೆಗೆ ಸೇರುವ ಆತುರದಲ್ಲಿ, ಗಡಿಬಿಡಿಯಲ್ಲಿ ನೋಡಿ ಮುಂದೆ ಸಾಗಿ. ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸುವ ಮುಂಚೆ ಕೈಯಲ್ಲೊಂದು ಕೋಲನ್ನು ಇಟ್ಟುಕೊಳ್ಳಿ. ಕೋಲಿನಲ್ಲಿ ನೀರಿಗೆ ಕುಟ್ಟುತ್ತಾ ಕುಟ್ಟುತ್ತಾ ಕಾಲ್ನಡಿಗೆಯಲ್ಲಿ ಮುಂದೆ ಸಾಗಿರಿ.


2.    ಕರೆಂಟ್ (ವಿದ್ಯುತ್ ) ಕಂಬವನ್ನು ಮುಟ್ಟದಿರಿ.


3.    ಮನೆಯಲ್ಲಿ ವಿಗಾರ್ಡ್ ಅಥವಾ ವಿದ್ಯುತ್ ಅಪತ್ತನ್ನು ತಡೆಗಟ್ಟುವ ಸಾಮಾಗ್ರಿಗಳು ಇಲ್ಲದೇ ಇದ್ದಲ್ಲಿ ಪ್ರಿಡ್ಜ್, ಟಿ.ವಿ ಇನ್ನಿತರ ಎಲೆಕ್ರ್ಟಾನಿಕ್ಸ್ ಸಾಮಾಗಿಗ್ರಳ ಸ್ವಿಚ್ ಆಫ್ ಮಾಡಿ ಮಲಗಿ.


4.    ರಾತ್ರಿ ಘನಘೋರ (ಕುಂಭಕರ್ಣ) ನಿದ್ರೆಗೆ ಜಾರಾದಿರಿ.


5.    ದಯವಿಟ್ಟು ಕುದಿಸಿ, ಆರಿಸಿದ ನೀರನ್ನೆ ಕುಡಿಯಲು ಉಪಯೋಗಿಸಿ,


6.    ದಯವಿಟ್ಟು ನೀವು ಮಾಡುವ ಅಡುಗೆ ವಸ್ತುಗಳಲ್ಲಿ ಯಾವುದಾದರೂ ಒಂದಕ್ಕಾದರೂ ಶುಂಠಿ, ಅಜ್ವಾನ್, ಕರಿ ಮೆಣಸು ಬಳಸಿರಿ.


7.    ರಾತ್ರಿ ಸಮಯದಲ್ಲಿ ನಿಮ್ಮ ಮೊಬೈಲ್ ಸ್ವಿಚ್ ಆಫ್ ಮಾಡದಿರಿ. ಸ್ವಿಚ್ ಆಫ್ ಆಗುವ ತನಕ ಬಳಸದಿರಿ. ನಿಮ್ಮ ಮೊಬೈಲನ್ನು ಜಾರ್ಜ್ ಮಾಡಿ ಆದ ಬಳಿಕವೆ ಮಲಗಿರಿ.


8.    ಮನೆಯ ಕಿಟಕಿ, ಬಾಗಿಲು ಮುಚ್ಚಿ ಮಲಗಿದರೂ, ಯಾವುದಾದರೂ ಒಂದು ಕಿಟಕಿಯನ್ನು ಶೇ:10 ರಷ್ಟು ತೆರೆದಿಡಿ.


9.    ರಾತ್ರಿ ಮಲಗುವ ಮುಂಚೆ ಬಿಸಿ ಬಿಸಿ ಕಷಾಯ ಇಲ್ಲವೇ ಬಿಸಿ ನೀರು ಕುಡಿದು ಮಲಗಿರಿ.


10.    ವಾರಕ್ಕೆ ಬೇಕಾದ ಪಡಿತರ ವಸ್ತುಗಳನ್ನು ಈಗಲೇ ಖರೀಧಿಸಿಟ್ಟುಕೊಳ್ಳಿ.


11.    ಅಡುಗೆ ಅನಿಲ ಮಿತವಾಗಿ ಬಳಸಿರಿ, ಅಡುಗೆ ಅನಿಲ ಪೊರೈಕೆಯಲ್ಲಿ ಹಲವಾರು ಅನಾನುಕೂಲತೆಗಳಾಗುತ್ತಿವೆ. ಪ್ರಾಕೃತಿಕ ವಿಕೋಪಕ್ಕೆ ಆಗುವ ತೊಂದರೆಗಾಗಿ ಗ್ಯಾಸ್ ವಿತರಕರಲ್ಲಿ ಜಗಳ ಮಾಡದಿರಿ.


12.    ಪೊಲೀಸ್ ಇಲಾಖೆ, ಕೆಇಬಿ ಯ ದೂರವಾಣಿ ಸಂಖ್ಯೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಮನೆಯಲ್ಲಿ ಎಲ್ಲರಿಗೂ ಗೊತ್ತಾಗುವಂತೆ ಬರೆದಿಟ್ಟುಕೊಳ್ಳಿ.


13.    ನಿಮ್ಮ ನಿಮ್ಮ ವಾಹನಗಳಿಗೆ ಇಂಧನವನ್ನು ಈಗಲೇ ಹಾಕಿಸಿಕೊಳ್ಳಿ.  ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿರುವುದರಿಂದ ಇಂಧನ ತುಂಬಿದ ಟ್ಯಾಂಕರ್ ಗಳು ಬರುತ್ತಿಲ್ಲ.


14.    ನಮ್ಮೂರಿಗೆ ಕೆಲಸದ ನಿಮಿತ್ತ ಬಂದಿರುವ ಟ್ರಕ್ ಡ್ರೈವರ್ಸ್ ಗಳಿಗೆಸಿತರೇ ವಾಹನ ಚಾಲಕರಿಗೆ, ಕ್ಲೀನರ್ಸ್ ಗಳಿಗೆ, ಪರವೂರಿನವರಿನವರಿನ ಜನರಿದ್ದಲ್ಲಿ ಯೋಗಕ್ಷೇಮ ಕೇಳಿ, ಅವರಿಗೆ ಅನ್ನ, ಉಪಹಾರ ಸಿಗದಿದ್ದ ಪಕ್ಷದಲ್ಲಿ ನಾವು ತಿನ್ನುವುದರಲ್ಲೆ ಸ್ವಲ್ಪ ಕೊಟ್ಟು ಸಹಕರಿಸೋಣ.


15.    ಪೊಲೀಸ್ ಸಿಬ್ಬಂದಿಗಳು ಹಾಗೂ ಕೆಇಬಿ ಸಿಬ್ಬಂದಿಗಳ ಜೊತೆ ಗೌರವದಿಂದ ವರ್ತಿಸಿ. ಅವರೆ ನಮ್ಮನ್ನು ಕಾಯುವ ಸೇನಾನಿಗಳು ಎನ್ನುವುದನ್ನು ಮರೆಯಬೇಡಿ.


16.    ಯಾವುದೋ ಕುಂಟು ನೆಪಕ್ಕಾಗಿ ಪಕ್ಕದ ಮನೆಯವರ ಜೊತೆ ಜಗಳವಾಗಿ ಮಾತು ನಿಲ್ಲಿಸಿದ್ದರೇ, ದಯವಿಟ್ಟು ರಾಜಿಯಾಗಿ ಅವರ ಜೊತೆ ಅನ್ಯೋನ್ಯ ಸಂಬಂಧ ಬೆಳೆಸಿ. ರಾತ್ರಿ ಮಲಗಿ ಬೆಳಿಗ್ಗೆ ಏಳುತ್ತೇವೆಯೋ ಎನ್ನುವ ಅನುಮಾನದಲ್ಲಿರುವ ಸಂದಿಗ್ದತೆಯಲ್ಲಿ ಕೋಪ, ಜಗಳದಿಂದ ಏನು ಸಾಧಿಸಲಾಗದು.


17.    ಪ್ರತಿಯೊಂದು ಮನೆಯಲ್ಲಿ ವಿದ್ಯುತ್ ಟೆಸ್ಟ್ ಮಾಡುವ ಟೆಸ್ಟರನ್ನು ಇಟ್ಟುಕೊಳ್ಳಿ.


18.    ರಾತ್ರಿ ಸಂಚಾರಿಸುವಾಗ ಟಾರ್ಚ್ ಇಲ್ಲವೇ ಮೊಬೈಲ್ ಲೈಟನ್ನು ಆನ್ ಮಾಡಿಯೆ ಮುಂದೆ ಸಾಗಿ.


19.    ತೆಂಗಿನ ಮರ ಹಾಗೂ ಇನ್ನಿತರೇ ಮರಗಳ ಕೆಳಗಡೆ ನಿಮ್ಮ, ನಿಮ್ಮ ವಾಹನಗಳನ್ನು ನಿಲ್ಲಿಸದಿರಿ.


20.    ಜ್ವರ, ಕೆಮ್ಮು, ತಲೆ ನೋವು, ನೆಗಡಿಗೆ ಸಂಬಂಧಿಸಿದ ಮಾತ್ರೆಗಳನ್ನು ಹಾಗೂ ವಿಕ್ಸ್, ಅಮೃತಾಂಜನ್, ತೈಲಾವನ್ನು ಮನೆಯಲ್ಲಿ ಸದಾ ಇಟ್ಟುಕೊಂಡಿರಿ.


21.    ದಯವಿಟ್ಟು ಹೆಚ್ಚು ಹೆಚ್ಚು ಒಳ ಉಡುಪನ್ನು ಖರೀಧಿಸಿಟ್ಟುಕೊಳ್ಳಿ. ಹಸಿದಿರುವ ಬಟ್ಟೆಯನ್ನು ಧರಿಸದಿರಿ.


22.    ಮದ್ಯಾಹ್ನಕ್ಕೆ ಬೇಕಾಗುವಷ್ಟೆ ಅನ್ನವನ್ನು ಮಾಡಿಟ್ಟುಕೊಳ್ಳಿ, ರಾತ್ರಿಗೆ ಸಪರೇಟ್ ಮಾಡಿ ಬಿಸಿ ಬಿಸಿ ಊಟ ಮಾಡಿ.


23.    ಬೆಳಿಗ್ಗೆ ಎದ್ದ ತಕ್ಷಣ ಮನೆಯ ಸುತ್ತ ಮುತ್ತ ಕಣ್ಣಾಡಿಸಿ, ಮಳೆಯ ರುದ್ರ ನರ್ತನಕ್ಕೆ ಹಾವುಗಳು, ವಿಷ ಜಂತುಗಳು ಮನೆಯ ಸುತ್ತಲಿನ ಯಾವುದಾದರೂ ಬಿಸಿ ಜಾಗವನ್ನು ಹುಡುಕಿ ವಾಸ ಮಾಡುವ ಸಾಧ್ಯತೆಯಿದೆ. ಇದರಿಂದ ನಮ್ಮ ಸಣ್ಣ ಮಕ್ಕಳು ಅಚಾತುರ್ಯಕ್ಕೆ ಬಲಿಯಾಗಬಹುದು.


24.    ಮಳೆಗಾಲದ ಸಂದರ್ಭದಲ್ಲಿ ನಿಮ್ಮ ಮಕ್ಕಳಿಗೆ ಶಾಲೆಗೆ ಹೋಗುವಾಗ ಬಿಸಿ ಮಾಡಿ ಕುದಿಸಿ, ಆರಿಸಿದ ನೀರನ್ನೆ ಕೊಡಿ.


25.    ಎಲ್ಲ ಶಾಲೆಗಳಲ್ಲಿ ಬಿಸಿಯೂಟ ಚೆನ್ನಾಗಿರುತ್ತದೆ. ಬಿಸಿಯೂಟ ಮಾಡದಿರು ಎಂದು ಹೇಳಿ, ನೀವು ನಿಮ್ಮ ಮಗುವಿನ ಊಟದ ಡಬ್ಬಕ್ಕೆ ಬಿಸ್ಕೆಟ್ ಅಥವಾ ಬೆಳಿಗ್ಗೆ ಮಾಡಿಟ್ಟಿರುವ ತಿಂಡಿ ತಿನಸುಗಳನ್ನು ದಯವಿಟ್ಟು ಕೊಡಬೇಡಿ. 


ನಿಮ್ಮವ
ಸಂದೇಶ್.ಎಸ್.ಜೈನ್


 
ಮರಳಿ ಜನ್ಮವೆತ್ತಿ ಬನ್ನಿ ಜೀವದ ಗೆಳೆಯ
ಬಾರದ ಲೋಕಕ್ಕೆ ಪಯಾಣ ಬೆಳೆಸಿದ ನಮ್ಮ ನಲ್ಲಪ್ಪಾ

ವಿಧಿಯ ಆಟವೆ ಹೀಗೆ. ನಾವು ಅಂದ್ಕೊಳ್ಳುವುದೇ ಒಂದು, ವಿಧಿಯ ಲೀಲೆಯೆ ಇನ್ನೊಂದು. ನನ್ನ ಜೀವದ ಗೆಳೆಯ, ಶ್ರಮಜೀವಿ, ಅಹಂವಿಲ್ಲದ ಶಾಂತಮೂರ್ತಿಯಾಗಿರುವುದರ ಜೊತೆಗೆ ನಗರದ ಖ್ಯಾತ ಗಾಯಕ ಹಾಗೂ ಉದ್ಯಮಿಯಾಗಿದ್ದ ನಲ್ಲಪ್ಪಾ ಭಂಡಾರಿ (ವ:49) ಬುಧವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು.

ಬಿ.ಇ ಪದವಿದರರಾಗಿದ್ದ ನಲ್ಲಪ್ಪ ಭಂಡಾರಿಯವರು ತಮಿಳುನಾಡಿನಲ್ಲಿ ಪ್ರಸಿದ್ದ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರೂ, ಹುಟ್ಟೂರಾದ ದಾಂಡೇಲಿಯಲ್ಲೆ ಬದುಕು ಕಟ್ಟಿಕೊಳ್ಳಬೇಕೆಂದು ಬಯಸಿ ಯಶ್ ಎಲೆಕ್ಟ್ರೀಕಲ್ಸ್ ಎಂಬ ವ್ಯವಹಾರೋದ್ಯಮವನ್ನು ಪ್ರಾರಂಭಿಸಿ ಗಮನ ಸೆಳೆದಿದ್ದರು. ಪ್ರವೃತ್ತಿಯಲ್ಲಿ ಉತ್ತಮ ಗಾಯಕರಾಗಿ ಅಪಾರ ಜನಮನ್ನಣೆಗಳಿಸಿದ್ದ ನಲ್ಲಪ್ಪಾ ಭಂಡಾರಿಯವರು ಮಡದಿ, ಇಬ್ಬರು ಪುತ್ರರು ಮತ್ತು ಒಬ್ಬಳು ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ.

ಸರಳತೆಯನ್ನು ಮೈಗೂಡಿಸಿ ಬದುಕು ಕಟ್ಟಿಕೊಂಡಿದ್ದ ನಲ್ಲಪ್ಪಾ ಭಂಡಾರಿಯವರ ಹೃದಯವಂತಿಕೆ ಮತ್ತು ಗುಣಧಮರ್ಮಕ್ಕೆ ಶರಣು ಎನ್ನಲೆಬೇಕು. ಸುಯೋಗ್ಯ ಜೀವದ ಗೆಳೆಯನನ್ನು ಕಳೆದುಕೊಂಡ ನೋವು ನಮ್ಮದಾಗಿದೆ. ನಿಮ್ಮ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲಿ. ಮರಳಿ ಜನ್ಮವೆತ್ತಿ ಬನ್ನಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ದುಖ:ತೃಪ್ತ ಗೆಳೆಯ,

ಸಂದೇಶ್.ಎಸ್.ಜೈನ್




Thursday, July 25, 2019

ಅಭಿಮಾನದ ಅಭಿನಂದನೆಗಳು
ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರಾಗಿ ಬ್ರದರ್ ರಾಹುಲ್ ಬಾವಾಜಿ ನೇಮಕ
ಉತ್ತರಕನ್ನಡ ಜಿಲ್ಲೆಗೆ ಗೌರವ ವನ್ಯಜೀವಿ ಪರಿಪಾಲಕರಾಗಿ ನಗರದ ಯುವ ನ್ಯಾಯವಾದಿ, Green ಅಂಬ್ರೆಲ್ಲಾ ಇಕೋ ಕ್ಲಬ್ ಅಧ್ಯಕ್ಷ ಹಾಗೂ ಪ್ರವಾಸೋದ್ಯಮಿ ರಾಹುಲ್ ಬಾವಾಜಿಯವರನ್ನು ನೇಮಕಗೊಳಿಸಲಾಗಿದೆ. ಹಾಗೂ ಪ್ರವಾಸೋದ್ಯಮಿ ರಾಹುಲ್ ಬಾವಾಜಿಯವರನ್ನು ನೇಮಕಗೊಳಿಸಲಾಗಿದೆ. ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ರ ಸೆಕ್ಷನ್ 4(1) (ಬಿಬಿ) ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸರ್ಕಾರದ ಅಧಿಸೂಚನೆ ಸಂಖ್ಯೆ: ಅಪಜೀ 28 ಎಫ್ ಡಬ್ಲೂ ಎಲ್ 2019, ದಿನಾಂಕ: 18.07.2019 ಆಯಾ ಜಿಲ್ಲೆಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಗೌರವ ವನ್ಯಜೀವಿ ಪರಿಪಾಲಕರನ್ನಾಗಿ ರಾಹುಲ್ ಬಾವಾಜಿಯವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ನಗರದ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ರಾಹುಲ್ ಬಾವಾಜಿಯವರು ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ನಗರದ ಕಲಾಶ್ರೀ ಸಂಸ್ಥೆ, ರೋಟರಿ ಕ್ಲಬಿನ ಪದಾಧಿಕಾರಿಯಾಗಿ ಹಾಗೂ ಸಂಡೇ ಮಾರ್ಕೆಟ್ ವಾಣಿಜ್ಯ ಕಟ್ಟಡದ ಮಳಿಗೆದಾರರ ಸಂಘದ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿರುವ ರಾಹುಲ್ ಬಾವಾಜಿಯವರು ಗೌರವ ವನ್ಯಜೀವಿ ಪರಿಪಾಲಕರಾಗಿರುವುದಕ್ಕೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

 
 ಚುರುಕಿನ ವ್ಯಕ್ತಿತ್ವದ ಜನಮುಖಿ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಜೊತೆಗೆ ವನ್ಯಜೀವಿಗಳು ಹಾಗೂ ಪರಿಸರದ ಬಗ್ಗೆ ಅಪಾರ ಗೌರವ ಮತ್ತು ಕಾಳಜಿಯನ್ನಿಟ್ಟುಕೊಂಡಿರುವ ನಿಮಗೆ ದೊರೆತ ಅವಕಾಶವು ಜಿಲ್ಲೆಯ ವನ್ಯಜೀವಿ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡುವಂತಾಗಲೆನ್ನುವ ಶುಭ ಹಾರೈಕೆಯೊಂದಿಗೆ, 

ನಿಮ್ಮವ
ಸಂದೇಶ್.ಎಸ್.ಜೈನ್

 

Wednesday, July 24, 2019

ಅಭಿಮಾನದ ಅಭಿನಂದನೆಗಳು
ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರಾಗಿ ನಮ್ಮಣ್ಣ ವಿಷ್ಣುಮೂರ್ತಿ ರಾವ್ ನೇಮಕ
ಉತ್ತರಕನ್ನಡ ಜಿಲ್ಲೆಗೆ ಗೌರವ ವನ್ಯಜೀವಿ ಪರಿಪಾಲಕರಾಗಿ ನಗರದ ಪ್ರವಾಸೋದ್ಯಮಿ ಹಾಗೂ ಖ್ಯಾತ ಯಕ್ಷಗಾನ ಕಲಾವಿದರಾದ ವಿಷ್ಣುಮೂರ್ತಿ.ವಿ.ರಾವ್ ಅವರನ್ನು ನೇಮಕಗೊಳಿಸಲಾಗಿದೆ. ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ರ ಸೆಕ್ಷನ್ 4(1) (ಬಿಬಿ) ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸರ್ಕಾರದ ಅಧಿಸೂಚನೆ ಸಂಖ್ಯೆ: ಅಪಜೀ 28 ಎಫ್ ಡಬ್ಲೂ ಎಲ್ 2019, ದಿನಾಂಕ: 18.07.2019 ಆಯಾ ಜಿಲ್ಲೆಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಗೌರವ ವನ್ಯಜೀವಿ ಪರಿಪಾಲಕರನ್ನಾಗಿ ವಿಷ್ಣುಮೂರ್ತಿ.ವಿ.ರಾವ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
 
ನಗರದ ಸಂತೋಷ್ ಹೊಟೆಲ್ ಹಾಗೂ ದಾಂಡೇಲಿ ಡ್ರಿಮ್ಸ್ ಹೋಂ ಸ್ಟೇ ಮಾಲಕರಾಗಿರುವ ವಿಷ್ಣುಮೂರ್ತಿ.ವಿ.ರಾವ್ ಅವರು ಯಕ್ಷಗಾನ ಭಾಗವತರಾಗಿ ಕಲಾ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ನಗರದ ಕಲಾಶ್ರೀ ಸಂಸ್ಥೆ, ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್, ರೋಟರಿ ಕ್ಲಬ್ ಹಾಗೂ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಪದಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ವಿಷ್ಣುಮೂರ್ತಿ.ವಿ.ರಾವ್ ಅವರು ಗೌರವ ವನ್ಯಜೀವಿ ಪರಿಪಾಲಕರಾಗಿರುವುದಕ್ಕೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಸದಾ ಶಾಂತಮೂರ್ತಿ ನಮ್ಮ ವಿಷ್ಣುಮೂರ್ತಿಯವರು. ನಿಮ್ಮ ಸರಳತೆ, ಪರೋಪಕಾರಿ ಗುಣಧರ್ಮಕ್ಕೆ ದೊರೆತ ಮಹತ್ವದ ಅವಕಾಶವಿದು. ವನ್ಯಜೀವಿಗಳು ಹಾಗೂ ಪರಿಸರದ ಬಗ್ಗೆ ಅಪಾರ ಗೌರವ ಮತ್ತು ಕಾಳಜಿಯನ್ನಿಟ್ಟುಕೊಂಡಿರುವ ನಿಮಗೆ ದೊರೆತ ಅವಕಾಶವು ಜಿಲ್ಲೆಯ ವನ್ಯಜೀವಿ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡುವಂತಾಗಲೆನ್ನುವ ಶುಭ ಪ್ರಾರ್ಥನೆಯೊಂದಿಗೆ, ಹಾರೈಕೆ.
 
ನಿಮ್ಮವ
ಸಂದೇಶ್.ಎಸ್.ಜೈನ್


Monday, July 22, 2019

ಅಪ್ಪುಗೆಯ ಅಮ್ಮ ನಮ್ಮ ಶಾಲಿನಿಯಮ್ಮ
ಸ್ವಚ್ಚ ಹೃದಯವಂತೆಗೆ ಜನ್ಮದಿನದ ಸಂಭ್ರಮ

ಬಹಳ ಹೆಮ್ಮೆ ಮತ್ತು ಗೌರವಾಭಿಮಾನದಿಂದ ನನ್ನನ್ನು ಅಕ್ಕರೆಯಿಂದ ಪ್ರೀತಿಸುವ, ಅಪ್ಪುಗೆಯಿಂದ ಆಶೀರ್ವದಿಸುವ ಅಮ್ಮ ಶಾಲಿನಿ ಬೆಂಡೆಯವರ ಬಗ್ಗೆ ನಾಲ್ಕಕ್ಷರ ಬರೆಯಲು ಉಲ್ಲಾಸೀತನಾಗಿದ್ದೇನೆ.
 
ಇಂದವರಿಗೆ ಜನ್ಮದಿನದ ಸಂಭ್ರಮ. ಅವರ ಪಾದಕ್ಕೆ ಶಿರಬಾಗುವುದರ ಜೊತೆಗೆ ಹುಟ್ಟು ಹಬ್ಬಕ್ಕೆ ಅಕ್ಷರ ರೂಪದಲ್ಲಿ ಶುಭ ಕೋರಲು ಅಣಿಯಾಗಿದ್ದೇನೆ. ಅಮ್ಮ ನಿಮಗೆ ಶುಭಾಷಯಗಳು. ಆಯುರಾರೋಗ್ಯ ಹಾಗೂ ಸದಾ ಸಂತೃಪ್ತಿ, ನೆಮ್ಮದಿ ನಿಮ್ಮ ಆಸ್ತಿಯಾಗಲೆನ್ನುವ ಹರಕೆ ಹಾರೈಕೆ ನನ್ನದು.
ಶಾಲಿನಿಯಮ್ಮ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನವರು. ನಾರಾಯಣ ಗಂಗೋಡ್ಕರ್ ಮತ್ತು ದೈವಭಕ್ತೆ, ಧರ್ಮಕಾರ್ಯಗಳ ಮೂಲಕ ಜನಪ್ರೀತಿಗಳಿಸಿದ ಸುಶೀಲಾ ದಂಪತಿಗಳ ಮುದ್ದಿನ ರಾಜಕುಮಾರಿಯೆ ಈ ನಮ್ಮ ಶಾಲಿನಿಯಮ್ಮ. ಸುಸಂಸ್ಕೃತ ಕುಟುಂಬದಲ್ಲಿ ಜನ್ಮವೆತ್ತ ಶಾಲಿನಿಯವರದ್ದು ಕೃಷಿಕ ಮನೆತನ. ಹಾಲು ಮೊಸರಿಗೇನೂ ಕೊರತೆಯಿರಲಿಲ್ಲ. ಅಕ್ಕಿಯಿಂದ ಹಿಡಿದು ತರಕಾರಿಯವರೆಗೂ ಅವರ ಜಮೀನಿನಲ್ಲೆ ಬೆಳೆಸಲಾಗುತ್ತಿತ್ತು. 
 
ಅಂಬೆಗಾಲಿಡಲು ಆರಂಭಿಸುತ್ತಿದ್ದ ಪುಟ್ಟ ಮಗು ಶಾಲಿನಿಯವರು ಎದ್ದು ಬಿದ್ದು ನಡೆಯಲು ಪ್ರಾರಂಭಿಸುವ ಹೊತ್ತಿನಲ್ಲೆ ಪ್ರತಿದಿನ ಅಮ್ಮನ ಜೊತೆ ಬೆಳ್ಳಂ ಬೆಳಗ್ಗೆ ರಂಗೋಲಿಯನ್ನು ಹಾಕುತ್ತಿದ್ದರಂತೆ, ಇದಾದ ಬಳಿಕ ಅಮ್ಮನ ಸಂಗಡ ಹಾಲು ಕರೆಯಲು ಹೆಲ್ಪರ್ ಆಗಿಯೂ ಪ್ರಾಣಿ ಪ್ರೀತಿಗೆ ಸಾಕ್ಷಿಯಾದವರು ನಮ್ಮ ಶಾಲಿನಿಯಮ್ಮ. ಒಟ್ಟಿನಲ್ಲಿ ಅತ್ಯಂತ ಚರುಕಿನ, ಚಂದನವನದ ಗೊಂಬೆಯಂತಿದ್ದ ಪುಟ್ಟ ಶಾಲಿನಿಯಮ್ಮ ಎಲ್ಲರ ನಲುಮೆ ಒಲುಮೆಗೆ ಪಾತ್ರರಾಗಿದ್ದು ಸುಳ್ಳಲ್ಲ.
 
ಇಂಥಹ ರೀತಿಯಲ್ಲಿ ಬೆಳೆದ ನಮ್ಮ ಶಾಲಿನಿಯಮ್ಮ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟೂರು ಖಾನಾಪುರದಲ್ಲೆ ಪಡೆದರು. ಹೈಸ್ಕೂಲೆ ಸಾಕೆಂದ ಶಾಲಿನಿಯಮ್ಮ ಅವರಮ್ಮನ ಒತ್ತಾಸೆಗೆ ಟೈಲರಿಂಗ್ ಕಲಿತರು. ಮನೆ ಕೆಲಸ ಮಾಡಿದ ಮೇಲೆ ಬಟ್ಟೆ ಹೊಲಿಯುವ ಕೆಲಸವನ್ನು ಶುರುವಚ್ಚಿಕೊಂಡವರು ನಮ್ಮ ಶಾಲಿನಿಯಮ್ಮ. ಹೀಗೆ ಬೆಳೆದ ಸುಂದರಿ ಶಾಲಿನಿಯಮ್ಮ ಹಳಿಯಾಳದ ಆದರ್ಶ ಮನೆತನದ ಕುಡಿ ಮೋಹನ ವಿಠ್ಠಲ ಬೆಂಡೆಯವರನ್ನು ವರಿಸಿಕೊಂಡರು.
 
ಅಂದ ಹಾಗೆ ಬ್ಯೂಟಿ ಶಾಲಿನಿಯಮ್ಮ ಬೆಂಡೆ ಕುಟುಂಬದ ಸುಸಂಸ್ಕೃತ ಸೊಸೆಯಾಗಿ ಎಲ್ಲರ ಅಕ್ಕರೆಗೆ ಪಾತ್ರರಾದರು. ಪತಿ ಮೋಹನ ಬೆಂಡೆಯವರದ್ದು ಮಾತು ಕಡಿಮೆ. ಆದರೆ ನಮ್ಮ ಶಾಲಿನಿಯಮ್ಮನವರದ್ದು ಮಾತು ಹೆಚ್ಚು. ಎಳೆಯ ಮಗುವಿನಿಂದ ಹಿಡಿದು ಎಲ್ಲರಲ್ಲಿಯೂ ಅತ್ಯಂತ ಗೌರವಯುತವಾಗಿ ಮಾತನಾಡುವವರು ಶಾಲಿನಿಯಮ್ಮ. ಬೆಂಡೆ ಮನೆತನದ ಹಿರಿಮೆ ಗರಿಮೆಯನ್ನು ಸುಭದ್ರವಾಗಿಸಿಕೊಂಡು ಮನೆತನವನ್ನು ಮುನ್ನಡೆಸಿದ ಧನ್ಯತೆ ಶಾಲಿನಿಯಮ್ಮವನರಿಗಿದೆ. 
 
ಪತಿ ಮೋಹನ ಅವರು ಕಾಗದ ಕಾರ್ಖಾನೆಯಲ್ಲಿ ಉದ್ಯೋಗದಲ್ಲಿದ್ದ ಕಾರಣ, ದಾಂಡೇಲಿಯಲ್ಲೆ ಕಾರ್ಖಾನೆಯ ಕ್ವಾಟ್ರಸಿನಲ್ಲಿ ಮನೆ ಮಾಡಿಕೊಂಡು ಭವಿಷ್ಯದ ಉನ್ನತಿಯೆಡೆಗೆ ಹಜ್ಜೆಯನ್ನೂರಿದರು. ನಮ್ಮ ಶಾಲಿನಿಯಮ್ಮನವರಿಗೆ ದಾಂಡೇಲಿಯ ಜಂಟ್ಲಮ್ಯಾನ್ ಸತೀಶ ಬೆಂಡೆಯವರು ಏಕೈಕ ಮಾನಸ ಪುತ್ರ ಹಾಗೂ ಸಂದ್ಯಾ, ಸುನೀತಾ ಮತ್ತು ಸಂಗೀತಾ ಎಂಬ ಮೂವರು ಮುದ್ದಿನ ಹೆಣ್ಮಕ್ಕಳು ಇದ್ದಾರೆ.
 
ಕರೆದು ಹೊಟ್ಟೆ ತುಂಬ ಊಟ ಹಾಕುವ ಅನ್ನಪೂರ್ಣೇಶ್ವರಿ ನಮ್ಮ ಶಾಲಿನಿಯಮ್ಮ. ಅವರ ಮನೆಗೆ ಯಾರೇ ಹೋಗಲಿ, ಬರಿಗೈಯಲ್ಲಿ ಕಳುಹಿಸುವ ಮನಸ್ಸು ಶಾಲಿನಿಯವರಿಗಿಲ್ಲ. ಹೊಟ್ಟೆ ತುಂಬ ತಿನ್ನಿಸಿ ಕಳುಹಿಸುವ ಉದಾತ್ತ ಗುಣಧರ್ಮವನ್ನು ಮೈಗೂಡಿಸಿಕೊಂಡವರು ನಮ್ಮ ಶಾಲಿನಿಯಮ್ಮನವರು.
 
ಅವರ ನಳಪಾಕಕ್ಕೆ ಎಂಥವರೂ ಕೂಡ ಶರಣಾಗಲೆಬೇಕು. ವೆರೈಟಿ ವೆರೈಟಿ ರುಚಿಕರವಾದ ಆಹಾರ ತಯಾರಿಸುವ ಅವರ ಕೈರುಚಿ ಮಾತ್ರ ಅದ್ಬುತ. ನಿಜಕ್ಕೂ ಅವರ ಸೊಸೆ ಸಂಜನಾ ಅವರು ಪುಣ್ಯವಂತರೆಂದು ಹೇಳಲೂ ಅಂಜಿಕೆಯಿಲ್ಲ.
 
ತನ್ನ ನಾಲ್ವರು ಮಕ್ಕಳಿಗೂ ಉನ್ನತ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸಿ, ಆದರ್ಶ ಪ್ರಜೆಗಳನ್ನಾಗಿಸಿದ ಶಾಲಿನಿಯವರ ವ್ಯಕ್ತಿತ್ವಕ್ಕೆ ಮತ್ತು ಅವರ ಮಾತೃ ಹೃದಯದ ಮನಸ್ಸಿಗೆ ಶಿರಬಾಗಲೆಬೇಕು. ಮದುವೆಯಾದಾಗಿನಿಂದ ಒಂದು ದಿನವೂ ಜಗಳವಾಡದೇ ಪತಿಗೆ ತಕ್ಕ ಮಡದಿಯಾಗಿ, ಮಕ್ಕಳಿಗೆ ಹೆಮ್ಮೆಯ ಅಮ್ಮನಾಗಿ ತನ್ನನ್ನು ತಾನು ಸಮರ್ಪಿಸಿಕೊಂಡ ಶಾಲಿನಿಯವರ ಪರೋಪಕಾರಿ ನಡವಳಿಕೆ, ಅಹಂ ಇಲ್ಲವ ಶಾಂತ ಮನಸ್ಸಿನ ಮುಗ್ದತೆ ಮತ್ತು ಅವರ ಜೀವನ ನಡವಳಿಕೆ ಅನುಕರಣೀಯ ಹಾಗೂ ಅಭಿನಂದನೀಯ.
 
ಇತ್ತೀಚೆಗೆ ಅವರ ಪತಿಯವರು ಇಹಲೋಕವನ್ನು ತ್ಯಜಿಸಿದ್ದು, ಪತಿಯ ಅಗಲುವಿಕೆಯ ನೋವು ಇನ್ನೂ ಅವರ ಮನದಲ್ಲಿದೆ. ಆದರ್ಶ ದಂಪತಿಗಳಾಗಿ ಎಲ್ಲರಿಗೂ ಮಾದರಿಯಾಗಿ ಗಮನ ಸೆಳೆದವರು ಇದೇ ನಮ್ಮ ಶಾಲಿನಿಯಮ್ಮನವರು.
 
ಬಹುವರ್ಷಗಳ ಸ್ವಂತ ಮನೆ ನಿರ್ಮಾಣದ ಕನಸನ್ನು ನನಸಾಗಿಸಿದ ಮುದ್ದಿನ ಮಗ ಸತೀಶ ಬೆಂಡೆಯವರನ್ನು ಇನ್ನೂ ಎಳೆಯ ಮಗುವಿನಂತೆ ಕಾಣುವ ಶಾಲಿನಿಯಮ್ಮನವರ ಮುಗ್ದ ಮನಸ್ಸೆ ನಮಗೆ ಅತೀ ಖುಷಿ ನೀಡುವುದು.
 
ಸದಾ ಒಳಿತನ್ನೆ ಬಯಸುವ ಮಾತೃಶ್ರೀ ಶಾಲಿನಿಯಮ್ಮನವರಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ನೆರಳನ್ನೆ ಅನುಸರಿಸಿ, ಜೀವನದಲ್ಲಿ ಸಫಲತೆಯನ್ನು ಕಾಣುತ್ತಿರುವ ನಿಮ್ಮ ಕುಟುಂಬಸ್ಥರ ಪ್ರೀತಿ, ಪ್ರೋತ್ಸಾಹವೆ ನಿಮಗೆ ಬಹುದೊಡ್ಡ ಶಕ್ತಿ. 
 
ತಮ್ಮ ಸೇವಾ ಗುಣಗಳು ನಮಗೆಲ್ಲಾ ಸ್ಪೂರ್ತಿದಾಯಕವಾಗಿದೆ, ಪ್ರೇರಣಾದಾಯಿಯಾಗಿದೆ. ನಿಮ್ಮ ಆಶೀರ್ವಾದ ಎನಗಿರಲೆಂದು ಪ್ರಾರ್ಥಿಸುವೆ,

ನಿಮ್ಮವ
ಸಂದೇಶ್.ಎಸ್.ಜೈನ್

 

Thursday, July 18, 2019

ಜೆವಿಡಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ರೋಶನ್ ನೇತ್ರಾವಳಿ
ದಾಂಡೇಲಿ: ನಗರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಜೆವಿಡಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ನಗರದ ಸಮಾಜ ಸೇವಕ, ಬಿಜೆಪಿಯ ಜಿಲ್ಲಾ ಕಾರ್ಮಿಕ ಪ್ರಕೋಷ್ಟದ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ರೋಶನ್ ನೇತ್ರಾವಳಿಯವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುನೀತಾ ಅಗರವಾಲ್ ಅವರು ಆಯ್ಕೆಯಾಗಿದ್ದಾರೆ.
 
ಇತ್ತೀಚೆಗೆ ನಡೆದ ಆಯ್ಕೆ ಸಭೆಯು ಜೆವಿಡಿ ಸಂಯುಕ್ತಾ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಸ್.ಇಟಗಿ ಹಾಗೂ ಪ್ರೌಢಶಾಲೆಯ ಮುಖ್ಯೋಪಾದ್ಯಯಿನಿ ಹಲೀಮಾ ಮಾಲ್ದಾರ್ ಅವರ ನೇತೃತ್ವದಲ್ಲಿ ಜರುಗಿತು. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
 
ರೋಶನ್ ನೇತ್ರಾವಳಿಯವರ ಅಧ್ಯಕ್ಷತೆಯಲ್ಲಿ ಶಾಲೆಯು ಸಮಗ್ರ ಅಭಿವೃದ್ಧಿಯ ಕಡೆಗೆ ಶರವೇಗದ ಹೆಜ್ಜೆಯನ್ನು ಇಡುವಂತಾಗಲಿ. ದಾಂಡೇಲಿ ನಗರದ ಮುಕುಟಕ್ಕೆ ಕೀರ್ತಿಯ ಕಿರೀಟವನ್ನು ತರುವಂತಾಗಲೆನ್ನುವ ಶುಭ ಹಾರೈಕೆಯೊಂದಿಗೆ,

ನಿಮ್ಮವ
ಸಂದೇಶ್.ಎಸ್.ಜೈನ್
 

Sunday, July 14, 2019

ತುಂಬು ಹೃದಯದ ಕೃತಜ್ಞತೆಗಳು.

ದಾಂಡೇಲಿ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ಶನಿವಾರ ಸಂಜೆ ಅಂದರೆ ದಿನಾಂಕ: 13.07.2019 ರಂದು ಹಮ್ಮಿಕೊಂಡಿದ್ದ 'ಪತ್ರಿಕಾ ದಿನಾಚರಣೆ ಹಾಗೂ ಗೌರವ ಸನ್ಮಾನ' ಕಾರ್ಯಕ್ರಮಕ್ಕೆ ಆಗಮಿಸಿ, ಕಾರ್ಯಕ್ರಮಕ್ಕೆ ಮೆರುಗನ್ನು ತಂದುಕೊಟ್ಟಿರುವ ಸರ್ವರಿಗೂ ಅಭಿಮಾನಪೂರ್ವಕ ಕೃತಜ್ಞತೆಗಳು.

ನಮ್ಮ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿರುವುದರ ಜೊತೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲರಿಗೂ ನಮಿಸುವೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಸಹಕಾರ ನಮ್ಮ ಈ ಪ್ರೆಸ್ ಕ್ಲಬಿಗೆ ಹಾಗೂ ದಾಂಡೇಲಿಯ ಸರ್ವ ಪತ್ರಕರ್ತ ಸಹೋದದರರಿಗೆ ಸದಾ ಇರಲೆನ್ನುವುದೇ ನನ್ನಯ ಪ್ರಾರ್ಥನೆ.

ಕಾರ್ಯಕ್ರಮವನ್ನು ಆಯೋಜಿಸಲು ಸ್ಥಳಾವಕಾಶ ನೀಡಿ ಸಹಕರಿಸಿದ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ನವರಿಗೆ ಹೃದಯಪೂರ್ವಕ ಕೃತಜ್ಞತೆಗಳು. ನಮ್ಮ ಸಣ್ಣ ಸನ್ಮಾನವನ್ನು ಸ್ವೀಕರಿಸಿದ ಸನ್ಮಾನಿತರಿಗೆ ನನ್ನ ಕಡೆಯಿಂದ ಮಗದೊಮ್ಮೆ ಅಭಿನಂದನೆಗಳು. ನಮ್ಮನ್ನು ಯಾವತ್ತು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿರುವ ದಾಂಡೇಲಿಯ ಸಮಸ್ತ ಜನತೆಗೆ ಪ್ರೀತಿಯ ವಂದನೆಗಳು.

ನಮ್ಮ ಈ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಂತೆ ನಮ್ಮ ಜೊತೆಗೂಡಿ ಕೆಲಸ ಮಾಡಿದ ನಮ್ಮ ಅಣ್ಣ-ತಮ್ಮಂದಿರರಿಗೆ ವಂದಿಸುವೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ನಮ್ಮ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀ.ಬಿ.ಎನ್.ವಾಸರೆಯವರಿಗೆ ಹಾಗೂ ಸಂಘದ ಪದಾಧಿಕಾರಿಗಳಾದ ಶ್ರೀ.ಯು.ಎಸ್.ಪಾಟೀಲ್, ಶ್ರೀ. ಕೃಷ್ಣಾ ಪಾಟೀಲ, ಡಾ: ಬಿ.ಪಿ.ಮಹೇಂದ್ರಕುಮಾರ್, ಶ್ರೀ.ಗುರುಶಾಂತ ಜಡೆ ಹಿರೇಮಠ ಅವರುಗಳಿಗೆ ಹಾಗೂ ಸಹಕರಿಸಿದ ಪತ್ರಿಕಾ ವಿತರಕರುಗಳಾದ ಶ್ರೀ.ರಿಯಾಜ್ ಮತ್ತು ಶ್ರೀ.ಅಕ್ಷಯ್ ಅವರುಗಳಿಗೆ ದೊಡ್ಡ ನಮಸ್ಕಾರಗಳೊಂದಿಗೆ ಹಾರ್ದಿಕ ಕೃತಜ್ಞತೆಗಳು.

ಸರ್ವರ ಪ್ರೀತಿ, ಪ್ರೋತ್ಸಾಹ ನಮಗಿರಲಿ ಎಂಬ ಪ್ರಾರ್ಥನೆಯೊಂದಿಗೆ,

ನಿಮ್ಮವ
ಸಂದೇಶ್.ಎಸ್.ಜೈನ್


 

Wednesday, July 10, 2019

ತಮಗಿದೊ ಹಾರ್ದಿಕ ಅಭಿವಂದನೆಗಳು
ದಾಂಡೇಲಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಎಸ್.ಅರುಣಾದ್ರಿ ರಾವ್, ಕಾರ್ಯದರ್ಶಿಯಾಗಿ ಡಾ: ಮೆಹರವಾಡೆ, ಖಜಾಂಚಿಯಾಗಿ ಸುಧಾಕರ ಶೆಟ್ಟಿ



ನಗರದ ಪ್ರತಿಷ್ಟಿತ ರೋಟರಿ ಕ್ಲಬಿನ ನೂತನ ಸಾಲಿಗೆ ಅಧ್ಯಕ್ಷರಾಗಿ ಉದ್ಯಮಿ ಎಸ್.ಅರುಣಾದ್ರಿ ರಾವ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಗರದ ಬಂಗೂರನಗರ ಪದವಿ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ: ಹೀರಲಾಲ್ ಮೆಹರವಾಡೆ ಮತ್ತು ಖಜಾಂಚಿಯಾಗಿ ಉದ್ಯಮಿ ಸುಧಾಕರ ಶೆಟ್ಟಿ ಆಯ್ಕೆಯಾಗಿದ್ದಾರೆ. 

ನೂತನವಾಗಿ ಆಯ್ಕೆಯಾದ ಸರ್ವ ಪದಾಧಿಕಾರಿಗಳಿಗೆ ಹಾರ್ದಿಕ ಅಭಿವಂದನೆಗಳು. ತಮ್ಮ ಅವಧಿಯಲ್ಲಿ ದಾಂಡೇಲಿಯಲ್ಲಿ ಜನಪರ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆಯುವಂತಾಗಲಿ. ದಾಂಡೇಲಿಯ ಮುಕುಟಕ್ಕೆ ಕೀರ್ತಿ ತರುವ ಕಾರ್ಯ ದಾಂಡೇಲಿಯ ರೋಟರಿ ಕ್ಲಬಿನಿಂದ ಇನ್ನಷ್ಟು ಆಗುವಂತಾಗಲೆಂಬುವುದೆ ಹಾರೈಕೆ.

ನಿಮ್ಮವ

ಸಂದೇಶ್.ಎಸ್.ಜೈನ್


ಸಹಿಷ್ಣುತೆಯ ಮನಸ್ಸಿನ ನಮ್ಮೂರ ವಿಷ್ಣುವಿಗೆ ಜನ್ಮದಿನದ ಸಂಭ್ರಮ
ಯುವ ನಾಯಕನಾಗಿ ಬೆಳೆಯುತ್ತಿರುವ ವಿಷ್ಣು ನಾಯರ್

ಆತ ಎಲ್ಲರಂತಲ್ಲ. ಒಂಥರ ಡಿಪರೆಂಟ್ ಎನ್ನಿ. ಇನ್ನೊಬ್ಬರ ನೋವಿಗೆ ತಡಮಾಡದೇ ಧಾವಿಸಿ, ಸ್ಪಂದಿಸುವ ಗುಣವಂತ. ಜಾತಿ, ಧರ್ಮವನ್ನು ಮೀರಿ ಅನ್ಯಾಯಕ್ಕೊಳಗಾದವರಿಗೆ ಧ್ವನಿಯಾಗಿ ನಿಲ್ಲುವ ಗಟ್ಟಿ ಮನಸ್ಸಿನ ಧೈರ್ಯಶಾಲಿ ಯುವಕ. ಸಣ್ಣ ಮನೆಯಲ್ಲಿ ವಾಸವಿದ್ದರೂ ದೊಡ್ಡ ಮನಸ್ಸಿನ ಹೃದಯವಂತ. ಒಟ್ಟಿನಲ್ಲಿ ಹೇಳುವುದಾದರೇ ಶ್ರಮ ಸಾಧನೆಯ ಮೂಲಕ ಬದುಕು ಕಟ್ಟಿಕೊಂಡ ಶ್ರಮಿಕ ಈತ. ಯಾರಿವನು? ಎಂಬ ಪ್ರಶ್ನಗೆ ಉತ್ತರ ಹುಡುಕಲು ಹೊರಡದಿರಿ. ಯಾಕೆಂದ್ರೆ ಆ ಪುಣ್ಯಾತ್ಮನ ಜೀವನದ ಯಶೋಗಾಥೆಯನ್ನು ಹೊತ್ತು ತಂದು ಬರೆಯಲು ಅಣಿಯಾಗಿದ್ದೇನೆ.

ಆತ ಬೇರೆ ಯಾರು ಅಲ್ಲ. ದಾಂಡೇಲಿಯ ವಿಜಯನಗರದ ನಿವಾಸಿ ಮೋಹನ ನಾಯರ್ ಹಾಗೂ ಶ್ರಮವಹಿಸಿ ದುಡಿಯುವ ಅಮ್ಮ ರೋಹಿಣಿ ದಂಪತಿಗಳ ಮಾನಸಪುತ್ರ ನಮ್ಮೂರ ಬೆಂಕಿಯ ಚೆಂಡು ವಿಷ್ಣು ನಾಯರ್. ಅಂದ ಹಾಗೆ ವಿಷ್ಣು ನಾಯರನಿಗೆ ಇಂದು ಜನ್ಮದಿನದ ಸಂಭ್ರಮ, ಸಡಗರ. ಈ ಶುಭ ಸಂದರ್ಭದಲ್ಲಿ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಾ ಮುಂದಿನ ಬರವಣಿಗೆಗೆ ಹೆಜ್ಜೆಯೂರಿದ್ದೇನೆ.

ನಮ್ಮ ವಿಷ್ಣು ನಾಯರನಿಗೆ ವಿದ್ಯಾ ಎಂಬ ಮುದ್ದಿನ ಅಕ್ಕ ಹಾಗೂ ವೀಣಾ ಎಂಬ ಅಕ್ಕರೆಯ ತಂಗಿ ಇದ್ದಾರೆ. ತೀವ್ರ ಬಡತನದ ಕುಟುಂಬದಲ್ಲಿ ಜನ್ಮವೆತ್ತರೂ, ಬೆವರು ಸುರಿಸಿ ಬದುಕು ಕಟ್ಟಿಕೊಂಡ ಶ್ರಮ ಸಾಧಕರ ಮನೆಯ ಹೆಮ್ಮೆಯ ಕುಡಿ ನಮ್ಮ ವಿಷ್ಣು ನಾಯರ್.

ಎಳೆಯ ಬಾಲಕಿನಿರುವಾಗ್ಲೆ ಅಗರಬತ್ತಿಯಂತಿದ್ದ ವಿಷ್ಣು ನಾಯರ್ ಬಗ್ಗೆ ಅವನ ಅಪ್ಪ, ಅಮ್ಮನಿಗೆ ಇವ ಹೆಂಗೆ ಬೆಳೆಯಬಹುದು. ಪತ್ಲ ಮಗು ಮುಂದೆ ಹೆಂಗೆ ಬೆಳೆಯಬಹುದೆಂಬುದೆ ದೊಡ್ಡ ಹೆಡಕ್ ಆಗಿತ್ತಂತೆ. ಆದರೂ ಇದ್ದದ್ದರಲ್ಲೆ ಬೆಳೆದ ನಮ್ಮ ವಿಷ್ಣು ನಾಯರ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಬಂಗೂರನಗರ ಸರಕಾರಿ ಕನ್ನಡ ಶಾಲೆಯಲ್ಲಿ ಪಡೆದು ಮುಂದೆ ಹಳೆದಾಂಡೇಲಿ ಸರಕಾರಿ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪಡೆದನು.

ತನ್ನ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣದ ಸಮಯದಲ್ಲಿ ಮನೆ ಮನೆಗೆ ಪೇಪರ್ ಹಂಚುತ್ತಿದ್ದ ಇದೇ ವಿಷ್ಣು ನಾಯರ್ ಸಂಜೆಯಾಗುತ್ತಲೆ ತನ್ನ ಅಮ್ಮನಿಟ್ಟಿದ್ದ ಸಣ್ಣ ಟೀ ಅಂಗಡಿಯಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದನು. ಹೈಸ್ಕೂಲ್ ಮುಗಿದ ಮೇಲೆ ಕೇರಳದ ತಲಕಾಡುವಿನಲ್ಲಿ 3 ತಿಂಗಳ ಮೆಕಾನಿಕಲ್ ಇಂಜಿನಿಯರಿಂಗ್ ತರಬೇತಿಯನ್ನು ಪಡೆದುಕೊಂಡ. ಅಲ್ಲಿ ತರಬೇತಿ ಪಡೆದ ಮೇಲೆ ಅಲ್ಲೆ ಉದ್ಯೋಗದ ಅವಕಾಶ ಬಂದಿತ್ತಾದರೂ, ಹುಟ್ಟಿದ ದಾಂಡೇಲಿಯಲ್ಲೆ ಬದುಕು ಕಟ್ಟಿಕೊಳ್ಳುತ್ತೇನೆಂದು ನಿರ್ಧರಿಸಿ ದಾಂಡೇಲಿಗೆ ಬಂದು ಬಿಟ್ಟ ನಮ್ಮ ವಿಷ್ಣು ನಾಯರ್.

ದಾಂಡೇಲಿಗೆ ಬಂದ ವಿಷ್ಣು ನಾಯರ್ ಆರಂಭದಲ್ಲಿ ಅಲ್ಲಿ ಇಲ್ಲಿ ಎಂದು ಕೆಲಸ ಹುಡುಕಿ ಸುಸ್ತಾಗಿ, ಕೊನೆಗೊಮ್ಮೆ ರೇಣುಕಾ ಆಟೊಮೊಬೈಲ್ ಅಂಗಡಿಯನ್ನು ಪ್ರಾರಂಭಿಸಿದ. ಕೆಲ ವರ್ಷಗಳವರೆಗೆ ಈ ಅಂಗಡಿಯನ್ನು ನಡೆಸಿ, ಆನಂತರದಲ್ಲಿ ಕಾಗದ ಕಾರ್ಖಾನೆಯಲ್ಲಿ ನೌಕರಿ ಸಿಕ್ಕಿ ಈಗ ಅಲ್ಲೆ ನೌಕರಿ ಮಾಡುತ್ತಿದ್ದರೂ ತಾನು ಆರಂಭಿಸಿದ ಆಟೊಮೊಬೈಲ್ ಗ್ಯಾರೇಜನ್ನು ಈಗಲೂ ನಡೆಸಿಕೊಂಡು ಹೋಗುತ್ತಿದ್ದಾನೆ.

ಒಂದು ಕಡೆ ಸಣ್ಣದಾದ ಗ್ಯಾರೇಜ್, ಇನ್ನೊಂದು ಕಡೆ ದುಡಿಮೆಗೆ ತಕ್ಕ ಪಗಾರವಿರುವ ನೌಕರಿ. ಒಟ್ಟಿನಲ್ಲಿ ಸಂತೃಪ್ತಿಯ ನಿಟ್ಟುಸಿರು ನಮ್ಮ ವಿಷ್ಣು ಬ್ರದರಿಗೆ.

ಹೀಗೆ ಬದುಕಿಗೆ ಪರ್ಪೆಕ್ಟ್ ದಾರಿ ಹುಡುಕಿಕೊಂಡ ವಿಷ್ಣು ನಾಯರ್, ತಾನೊಬ್ಬನೇ ಬದುಕಿದರೇ ಸಾಲದು, ಅದರ ಜೊತೆ ಜೊತೆಗೆ ಇನ್ನೊಬ್ಬರ ಬದುಕಿಗೆ ನೆರವಾಗಬೇಕು, ಅದಕ್ಕಾಗಿ ಸಮಾಜ ಸೇವೆಯಲ್ಲಿ ನಿರತನಾಗಬೇಕೆಂದು ಬಯಸಿ, 2006 ರಲ್ಲಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಳ್ಳಲಾರಂಭಿಸಿದನು. ಬಿಜೆಪಿಗೆ ಸೇರಿದವನೇ ಆರಂಭದಲ್ಲಿ ಬಿಜೆಪಿ ಯುವ ಮೋರ್ಚಾದ ಸಕ್ರೀಯ ಸದಸ್ಯನಾಗಿ ರಾಜಕೀಯ ದೀಕ್ಷೆಯನ್ನು ಪಡೆದನು. ಇಲ್ಲಿಂದ ಆರಂಭಗೊಂಡ ರಾಜಕೀಯ ನಡೆ, ಮುಂದೆ ಪಕ್ಷದ ಆಟೋ ಎನೌನ್ಸರ್ ಆಗಿ ಗಮನ ಸೆಳೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಹೀಗೆ ರಾಜಕೀಯವಾಗಿ ಹಂತ ಹಂತವಾಗಿ ಬೆಳೆದ ವಿಷ್ಣು ನಾಯರ್ ಮುಂದೆ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷನಾಗಿ, ಇದೀಗ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಇದರ ಜೊತೆ ಜೊತೆಗೆ ಈ ದೇಶ ಕಂಡ ಅಪ್ರತಿಮ ಹಾಗೂ ಎಂದು ಮರೆಯಲಾರದ ಧೀಮಂತ ವ್ಯಕ್ತಿತ್ವದ ಮಾಜಿ ಪ್ರಧಾನಿ ದಿ: ಅಟಲ್ ಬಿಹಾರಿ ವಾಜಪೇಯಿಯವರು ಕಾಲವಾದ ನಂತರ ಅವರ ಹೆಸರಲ್ಲಿ ಆರಂಭಿಸಿದ ಅಟಲ್ ಅಭಿಮಾನಿ ಸಂಘಟನೆಯನ್ನು ಹುಟ್ಟು ಹಾಕಿ ಅದರ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಈ ಸಂಘಟನೆಯ ಮೂಲಕ ಸಮಾಜದ ಹಲವಾರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಶೃದ್ದೆಯಿಂದ ಮಾಡುವುದರ ಮೂಲಕ ಭವಿಷ್ಯದ ಕೌನ್ಸಿಲರ್ ಎಂಬ ಬಿರುದಿಗೆ ಪಾತ್ರನಾಗಿದ್ದಾನೆ ನಮ್ಮೂರ ಬಿಸಿರಕ್ತದ ನವ ತರುಣ ವಿಷ್ಣು ನಾಯರ್.

ದಾಂಡೇಲಿಯಲ್ಲಿ ನಡೆಯುವ ಸಾಮಾಜಿಕ ಹೋರಾಟಗಳಲ್ಲಿ ಸಕ್ರೀಯನಾಗಿ ಭಾಗವಹಿಸುತ್ತಿರುವ ವಿಷ್ಣು ನಾಯರ್ ನಗರದ ದಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಸಕ್ರೀಯನಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಮೂಲಕ ಎಲ್ಲರ ಪ್ರೀತಿ, ಅಭಿಮಾನಕ್ಕೆ ಪಾತ್ರನಾಗಿದ್ದಾನೆ.

ರಾಜಕೀಯವಾಗಿ ಹಂತ ಹಂತವಾಗಿ ಬೆಳೆಯುತ್ತಿರುವ ವಿಷ್ಣು ನಾಯರನ ಬೆಳವಣಿಗೆಗೆ ಅವನ ಅಪ್ಪ, ಅಮ್ಮನ ಆಶೀರ್ವಾದ, ಅಕ್ಕ, ತಂಗಿಯ ಸಹಕಾರ, ಗುರು ಹಿರಿಯರ ಆಶೀರ್ವಾದ, ಗೆಳೆಯರ ನಗುಮೊಗದ ಪ್ರೀತಿಯೆ ಬಹುಮೂಲ್ಯ ಕಾರಣವಾಗಿದೆ.

ತಾನು ಬೆಳೆಯುವುದರ ಜೊತೆಗೆ ಇನ್ನೊಬ್ಬರ ಬೆಳವಣಿಗೆಗೆ ಮತ್ತು ಒಳಿತಿಗಾಗಿ ಶ್ರಮಿಸುವ ಭವಿಷ್ಯದ ಭರವಸೆಯ ನಾಯಕ ವಿಷ್ಣು ನಾಯರನಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ನಿಮ್ಮವ
ಸಂದೇಶ್.ಎಸ್.ಜೈನ್

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...