Saturday, March 30, 2019

ಮಾತೃ ಮನಸ್ಸಿನ ದಾಂಡೇಲಿಯ ಜನತೆಗೆ ಶತಕೋಟಿ ವಂದನೆಗಳು.
ನಿಮ್ಮೆಲ್ಲರ ಸಹಕಾರವಿರಲಿ-ನಿಮ್ಮ ಮನೆ ಮಗನ ಜೈನ್ ಇಡ್ಲಿ ಕೆಫೆಗೆ
  Opening Date: 31.03.2019
Place:  01. Near Patil Hospital,
            02. KSRTC Bus Stand, Near: Auto Stand 
           03. Haliyal Road Truck Terminal Center
          
Jain Idli Cafe centre time: 7 AM to 10 AM

 ಪ್ರತಿಸಲ ಏನಾದರೂ ಬರೆಯುತ್ತಿರುವ ನಾನಿಂದು ನನ್ನ ಬಗ್ಗೆಯೆ ಬರೆಯಲು ಹೊರಟಿದ್ದೇನೆ. ಸಂದೇಶ್ ಎಷ್ಟೊಂದು ಸ್ವಾರ್ಥಿ ಇದ್ದಾನಲ್ಲ ಅಂತಾ ದಯವಿಟ್ಟು ಅಂದ್ಕೊಬೇಡಿ. ನಾನಿವತ್ತು ಬರೆಯಲು ಹೊರಟಿರುವುದು ನನ್ನ ಬೆವರ ಹನಿಯ ಬಗ್ಗೆ ಎಂಬುವುದನ್ನು ವಿಸ್ತಾರವಾಗಿ ವಿವರಿಸಲು ಹೋಗೊದಿಲ್ಲ.

ಮುಕ್ತ ಮನಸ್ಸಿನಿಂದ ಹೇಳುವುದಾದರೇ, ನನ್ನ ಬದುಕಿನಲ್ಲಿ ನಾನು ಕಂಡಿರುವ ಸತ್ಯವನ್ನು ಬಿಚ್ಚಿಡಲೆ ಬೇಕು. ಹೆತ್ತಮ್ಮ ನನ್ನನ್ನು ಮುದ್ದಿನಿಂದ ಸಾಕಿದ್ದಾರೆ, ಬೆಳೆಸಿದ್ದಾರೆ. ಇಂದಿಗೂ ಕೈ ತುತ್ತು ಕೊಟ್ಟು ನನ್ನನ್ನು ಮುದ್ದಿಸುತ್ತಾರೆ. ಅಂತಹ ಅಮ್ಮನ ಪ್ರೀತಿ ಕೊಡುತ್ತಿರುವ ದಾಂಡೇಲಿಯ ಜನತೆಗೆ ಶಿರಬಾಗದೆ ನಾನೇನು ಮಾಡಲಿ. ನಾನು ಬಿದ್ದಾಗ, ಸೋತಾಗ ನನ್ನನ್ನು ಮಾತೃಹೃದಯದಿಂದ ಸಂತೈಸಿದ್ದೀರಿ. ಕಿಸೆಯಲ್ಲಿ ಪುಡಿಗಾಸು ಇಲ್ಲದಿದ್ದಾಗ ತಮ್ಮ ಬೆವರಿನ ಹಣಕೊಟ್ಟು ನನ್ನನ್ನು ಉಳಿಸಿದ್ದೀರಿ. ಎದ್ದಾಗ ಮತ್ತು ಬಿದ್ದಾಗಲೂ ನನ್ನನ್ನು ಕೈ ನೀಡಿ ಹರಸಿ, ಬೆಳೆಸಿದ ದಾಂಡೇಲಿಯ ಜನತೆಗೆ ಋಣಿಯಾಗಿದ್ದೇನೆ. ಆ ಕಾರಣಕ್ಕಾಗಿ ಇಡೀ ದೇಶದಲ್ಲೆ ಮಾತೃ ಹೃದಯ
ಗುಣ ಸಂಪನ್ನವಿರುವ ಪ್ರದೇಶವಿದ್ದರೇ ಅದು ನಮ್ಮ ಗಂಡುಮೆಟ್ಟಿನ, ಸೌಹಾರ್ಧತೆಯ ದಾಂಡೇಲಿ ಒಂದೆ ಎನ್ನುವುದನ್ನು ಎದೆ ತಟ್ಟಿ ಹೇಳಲು ನಾನ್ಯಾಕೆ ಅಂಜಲಿ. 

ದಾಂಡೇಲಿಯ ಸತ್ಪುರುಷ ದಾಂಡೇಲಪ್ಪನಿಗೆ, ಜೀವನದಿ ಕಾಳಿ ನದಿಗೆ ಮತ್ತು ದಾಂಡೇಲಿಯ ಪುಣ್ಯಭೂಮಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತಾ, ತಮ್ಮಲ್ಲೆರಲ್ಲಿ ನನ್ನ ವಿಚಾರಧಾರೆಯನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ.

ಜೈನ್ ಇಡ್ಲಿ ಕೆಫೆ:
ಆತ್ಮೀಯರೇ, ನನ್ನ ಬಹುದಿನಗಳ ಕನಸು ನಿಮ್ಮ ಸಹಕಾರದಿಂದ ಯಶಸ್ವಿಯಾಗಬಹುದೆಂದು ಭಾವಿಸಿಕೊಂಡಿದ್ದೇನೆ. ಹಲವಾರು ಕಡೆ ವಿವಿಧ ಕಾರ್ಯಕ್ರಮಗಳ ಅಡುಗೆ ತಯಾರಿಸಿದ ಸಂತೃಪ್ತಿ ನನಗಿದೆ. ಆ ಭರವಸೆ, ನಿಮ್ಮೆಲ್ಲರ ಪ್ರೀತಿ, ಅಪ್ಪುಗೆಯ ಅಕ್ಕರೆಯೆ ನನಗೆ ಜೈನ್ ಇಡ್ಲಿ ಕೆಫೆ ಎಂಬ ವಿನೂತನ ಉಪಾಹರ ಕೇಂದ್ರವನ್ನು ಸ್ಥಾಪಿಸಲು ಸಹಾಯವಾಗಿದೆ ಎಂದು ಭಾವಿಸಿದ್ದೇನೆ.

ಒತ್ತಡದ ನಡುವೆ ಎಲ್ಲರಿಗೂ ವೈಯಕ್ತಿಕವಾಗಿ ಭೇಟಿಯಾಗಿ ಹೇಳಲು ಆಗಲಿಲ್ಲ. ಅದಕ್ಕಾಗಿ ಈ ಮೂಲಕ ತಮ್ಮಲ್ಲರಿಗೂ ತಿಳಿಸುವ ಸಣ್ಣ ಯತ್ನ ಮಾಡಿದ್ದೇನೆ.

ಆತ್ಮೀಯರೇ, ದಿನಾಂಕ:31.03.2019 ರಂದು ಜೈನ್ ಇಡ್ಲಿ ಕೆಫೆ ಎಂಬ ಉಪಹಾರ ಕೇಂದ್ರ ಶುಭಾರಂಭಗೊಳ್ಳಲಿದೆ. ಅತ್ಯಂತ ಕಡಿಮೆದರ ಹೆಚ್ಚು ರುಚಿಕರ, ಮನೆಪಾಕ ಎಂಬ ದ್ಯೇಯದಡಿ ಈ ಕೇಂದ್ರವನ್ನು ಪ್ರಾರಂಭಿಸುತ್ತಿದ್ದೇನೆ. ಪ್ರತಿದಿನ ಬೆಳಿಗ್ಗೆ 7 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಇಡ್ಲಿ ಕೆಫೆ ಕೇಂದ್ರ ತನ್ನ ಸೇವೆಯನ್ನು ನೀಡಲಿದೆ. ಪ್ರತಿ ದಿನ ವೆರೈಟಿ ಸಾಂಬರ್ ನಮ್ಮ ಸ್ಪೇಷಲಿಟಿ ಎಂಬ ಆಶಯವನ್ನು ಹೊತ್ತಿದ್ದೇನೆ. ಆರಂಭದಲ್ಲಿ ಅಂದರೆ ನಾಳೆ ದಿನಾಂಕ:31.03.2019 ರಂದು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ದಾಂಡೇಲಿಯ ಪಾಟೀಲ್ ಆಸ್ಪತ್ರೆಯ ಬಳಿ, ಬಸ್ ನಿಲ್ದಾಣದ ಬಳಿಯಿರುವ ಆಟೋ ನಿಲ್ದಾಣದ ಸಮೀಪ ಮತ್ತು ಹಳಿಯಾಳ ರಸ್ತೆಯ ಟ್ರಕ್ ಟರ್ಮಿನಲ್ ಕೇಂದ್ರದ ಬಳಿ ಜೈನ್ ಇಡ್ಲಿ ಕೆಫೆ ಸೇವೆಯನ್ನು ಪ್ರಾರಂಭಿಸಲಿದೆ.

ನನ್ನ ಈ ಪ್ರಯತ್ನಕ್ಕೆ ತಮ್ಮೆಲ್ಲರ ಅಕ್ಕರೆಯ ಸಹಕಾರವಿರಲೆಂಬ ಗೌರವಪೂರ್ವಕ ಪ್ರಾರ್ಥನೆಯೊಂದಿಗೆ,

ನಿಮ್ಮವ

ಸಂದೇಶ್.ಎಸ್.ಜೈನ್



 


1 comment:

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...