ಕರಾವಳಿಯ ಅಜಾತಶತ್ರು ಪ್ರತಾಪ್ ಸಿಂಹ ನಾಯಕ
ಬೆಳ್ತಂಗಡಿ ಜನತೆಯ ಪ್ರೀತಿಗೆ ಪಾತ್ರರಾದ ಹೃದಯಶ್ರೀಮಂತ ನಮ್ಮ ಪ್ರತಾಪ
ಕರಾವಳಿಯ ರಾಜಕೀಯ ಕ್ಷೇತ್ರದ ಅಜಾತಶತ್ರು ಪ್ರತಾಪ್ ಸಿಂಹ ನಾಯಕ
ಬೆಳ್ತಂಗಡಿ ಜನತೆಯ ಪ್ರೀತಿಗೆ ಪಾತ್ರರಾದ ಹೃದಯಶ್ರೀಮಂತ ನಮ್ಮ ಪ್ರತಾಪ
ನಾನವರನ್ನು ಬಹಳ ಹತ್ತಿರದಿಂದ ಬಲ್ಲೆ. ಅವರಿಗೆ ನನ್ನ ಪರಿಚಯವಿದ್ದಿರಬಹುದು. ಒಟ್ಟಿನಲ್ಲಿ ನನ್ನ ಅವರ ಭೇಟಿ ಹತ್ತನ್ನೆರಡು ವರ್ಷಗಳ ಹಿಂದಿನದು ಬಿಡಿ. ನನ್ನ ಪರಿಚಯ ಇರ್ಲೇಬೇಕೆಂದು ಹಟ ಹಿಡಿಯಲೇನೂ ನಾನು ದೊಡ್ಡ ಮನುಷ್ಯನಲ್ಲ. ಆದಾಗ್ಯೂ ನಾನು ಬೆಳ್ತಂಗಡಿಯಿಂದ ಉದ್ಯೋಗವನ್ನರಸಿ ದಾಂಡೇಲಿಗೆ ಬಂದು ಬಹಳ ವರ್ಷಗಳ ನಂತರ ಪೇಸ್ ಬುಕ್ ಪುಟದಲ್ಲಿ ನನ್ನ ಗೆಳೆಯರಾದವರು ಅವರು. ನನ್ನ ಬಹುತೇಕ ಬರಹಗಳಿಗೆ ಕಮೆಂಟ್ಸ್ ಕೊಡಲು ಅವರಿಗೆ ಸಮಯವಿಲ್ಲದಾದರೂ ಲೈಕ್ ಅಂತೂ ಮಾಡಿಯೆ ಮಾಡ್ತಾರೆ. ಒಬ್ಬ ಸ್ತುರದ್ರೂಪಿ ಪರ್ಸನಾಲಿಟಿಯ ಯೋಗ್ಯ ವ್ಯಕ್ತಿ, ಸುಯೋಗ್ಯ ರಾಜಕಾರಣಿ. ಅವರ ಹೆಸರು ಪ್ರತಾಪ ಆದರೆ ಇನ್ನೊಬ್ಬರ ನೋವಿಗಾಗಿ ಪಶ್ಚಾತಾಪ ಪಟ್ಟು ಸಹಾಯ ಮಾಡಲು ಧಾವಿಸುವ ಪರೋಪಕಾರಿ ಗುಣಸ್ವಭಾವದ ವಕೀಲರು ಹೌದು. ಅನೇಕ ಬಡವರಿಗೆ ಉಚಿತವಾಗಿ ನ್ಯಾಯಸೇವೆಯನ್ನು ನೀಡಿದ ಧನ್ಯತೆ ಅವರಿಗಿದೆ. ಅವರ ಸಾರ್ಥಕ ಸೇವೆಯ ಬಗ್ಗೆ ನನಗಂತೂ ಅಪಾರ ಗೌರವವಿದೆ.
ಇಂತಹ ವ್ಯಕ್ತಿ ಯಾರಿರಬುದೆಂದು ನನ್ನ ಅನೇಕ ಗೆಳೆಯರು ಇವತ್ತು ಪ್ರಶ್ನೆ ಮಾಡಿಯೆ ಮಾಡುತ್ತಾರೆ. ಪ್ರಿಯ ಸ್ನೇಹತರೇ, ನಾವು ಎಲ್ಲೆ ಹೋದರೂ ನಮಗೆ ಜನ್ಮಕೊಟ್ಟ ತಾಯಿ ನೆಲವನ್ನು ಮರೆಯುವುದುಂಟೆ. ನಮ್ಮ ತಾಯಿ ನೆಲದ ಸಾಧಕರೆ ನಮಗೆ ದಿವ್ಯಪ್ರೇರಣೆ. ಇಂತಹ ಪ್ರೇರಣಾದಾಯಿ ವ್ಯಕ್ತಿತ್ವದ ನಿಸ್ವಾರ್ಥ ರಾಜಕಾರಣಿ, ಸಮಾಜ ಸೇವಕ, ರೋಟರಿಯೆನ್, ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡ ಹೃದಯವಂತ ಬೇರೆ ಯಾರು ಅಲ್ಲ, ನಮ್ಮ ತುಳುನಾಡಿನ ಬೆಳ್ತಂಗಡಿ ತಾಲೂಕಿನಲ್ಲಿ ಜನಸೇವೆ ಮಾಡುತ್ತಿರುವ ಜನಮಾನಸದ ವಕೀಲ, ಜನಪ್ರಿಯ ರಾಜಕಾರಣಿ, ಇನ್ನೊಬ್ಬರಿಗಾಗಿ ದುಡಿಯುವ, ಶ್ರಮಿಸುವ ಹಟಯೋಗಿ, ಕುರ್ಚಿಗಾಗಿ ಹಂಬಲಿಸದೇ ಪಕ್ಷ ಕಟ್ಟಿದ ಸೇನಾನಿ, ಬಿಜೆಪಿಯ ನಿಷ್ಟಾವಂತ ಯೋಧ ನಮ್ಮವರೇ ಆಗಿರುವ ಪ್ರತಾಪ್ ಸಿಂಹ ನಾಯಕ ಅವರು.
ಇಂದವರಿಗೆ ಜನ್ಮದಿನದ ಸಂಭ್ರಮ. ನಾನು ಪ್ರೈಮರಿ ಶಾಲೆಗೆ ಹೋಗುತ್ತಿರುವಾಗ್ಲೆ ನಮ್ಮ ಬೆಳ್ತಂಗಡಿ ತಾಲೂಕಿನ ಅತ್ಯಂತ ಸ್ಮಾರ್ಟ್ ಹಾಗೂ ಡೈನಮಿಕ್ ರಾಜಕಾರಣಿ ಎಂಬ ಹೆಸರನ್ನು ಗಳಿಸಿಕೊಂಡಿದ್ದ ಇದೇ ಪ್ರತಾಪ್ ಸಿಂಹ ನಾಯಕರವರಿಗೆ ಇಂದು ಜನ್ಮದಿನದ ಸಂಭ್ರಮ, ಸಡಗರ. ಈ ಸಂಭ್ರಮ, ಸಡಗರಕ್ಕೆ ನನ್ನದೊಂದು ನುಡಿರೂಪದ ಶುಭಾಶಯ.
ಅಂದ ಹಾಗೆ ಅವರಪ್ಪ ಒಂದುಕಾಲದಲ್ಲಿ ಬೆಳ್ತಂಗಡಿ ತಾಲೂಕಿನ ಸುಪ್ರಸಿದ್ದ ವಕೀಲರಾಗಿದ್ದವರು. ಹಾಗಾಗಿ ರಕ್ತಗತವಾಗಿ ಅವರ ಮಗ ನಮ್ಮ ಪ್ರತಾಪ್ ಸಿಂಹರವರು ಸಹ ಯಶಸ್ವಿ ವಕೀಲರಾಗಿ ತಾಲೂಕಿನ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆಯ ನಿವಾಸಿಯಾಗಿರುವ ಪ್ರತಾಪ್ ಸಿಂಹ ನಾಯಕರವರು ಉಜಿರೆಯ ಎಸ್.ಡಿ.ಎಂ ಹೈಸ್ಕೂಲ್ ಹಾಗೂ ಎಸ್.ಡಿ.ಎಂ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ. ಪದವಿ ಶಿಕ್ಷಣ ಮುಗಿದ ಮೇಲೆ ಕಾನೂನು ಪದವಿಯನ್ನು ಪಡೆದು ಅಪ್ಪನ ವಕೀಲಿ ವೃತ್ತಿಗೆ ಸಹಾಯವನ್ನು ಮಾಡಲಾರಂಭಿಸಿದ ಈ ಯುವಕ ಅಲ್ಪ ವರ್ಷದಲ್ಲೆ ಈ ವೃತಿಯಲ್ಲಿ ಅನುಪಮ ಹೆಸರನ್ನು ಗಳಿಸಿಕೊಂಡಿರುವುದಕ್ಕೆ ಸ್ವತ: ಅವರ ತಂದೆಯೆ ಹೆಮ್ಮೆ ಪಟ್ಟಿದ್ದರಂತೆ.
ಶಾಲಾ/ಕಾಲೇಜು ವಿದ್ಯಾರ್ಥಿಯಾಗಿರುವಾಗ ನಮ್ಮ ಪ್ರತಾಪ್ ಸಿಂಹರವರು ಮೊದಲೆ ಹೈಟ್ ಪರ್ಸನಾಲಿಟಿಯ ಚಂದದ ಯುವಕ ಬೇರೆ. ಅದರಲ್ಲೂ ಅವರು ಅಪ್ರತಿಮ ಕ್ರೀಡಾಪಟುವಾಗಿ ಗಮನಾರ್ಹ ಸಾಧನೆ ಮಾಡಿದ್ದರು. ವಾಲಿಬಾಲ್, ಕ್ರಿಕೆಟ್ ಅವರ ಆಸಕ್ತಿಯ ಕ್ರೀಡೆಗಳಾಗಿದ್ದವು. ಲಾಂಗ್ ಜಂಪ್, ಅಥ್ಲೇಟಿಕ್ ಅವರ ಪ್ರಮುಖ ಇಷ್ಟದ ಕ್ರೀಡೆಗಳಾಗಿದ್ದವು.
ಎಬಿವಿಪಿ ಮೂಲಕ ಸಂಘಟನೆಗಿಳಿದ ಬೆಳ್ತಂಗಡಿಯ ಸಿಂಹ:
ಅಂದು ಪ್ರತಾಪ್ ಸಿಂಹ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿ ಮೂಲಕ ಸಕ್ರೀಯ ಸಂಘಟನೆಕ್ಕಿಳಿದರು. ವಿದ್ಯಾರ್ಥಿಗಳನ್ನು ಸಂಘಟಿಸಿಕೊಂಡು ಎಬಿವಿಪಿಯನ್ನು ತಾಲೂಕಿನಲ್ಲಿ ಬಲವರ್ಧನೆಗೊಳಿಸಲು ಅವರು ಶ್ರಮಿಸಿದ ಬಗೆ ಅದು ನಿಜಕ್ಕೂ ಶ್ಲಾಘನೀಯ.
ವೃತ್ತಿಯ ಜೊತೆಗೆ ರಾಜಕೀಯಕ್ಕೆ ಎಂಟ್ರಿ:
ಮೊದಲೆ ಎಬಿವಿಪಿ ಸಂಘಟನೆಯ ರುಚಿ, ಆರ್.ಎಸ್.ಎಸ್ ಸಂಘಟನೆಯ ಸಕ್ರೀಯ ಕಾರ್ಯಕರ್ತರಾಗಿ ಗಮನ ಸೆಳೆದಿದ್ದ ನಮ್ಮೂರ ಸಿಂಹ ಪ್ರತಾಪ್ ಸಿಂಹ ಅವರು ಕಾಲಕ್ರಮೆಣ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಪಕ್ಷದ ಯುವ ಮೋರ್ಚಾದ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ದಿನ ಮುಂದುವರಿದಂತೆ ಪಕ್ಷದ ಪ್ರಧಾನ ಘಟಕದ ಪ್ರಮುಖ ಜವಾಬ್ದಾರಿಗೆ ಪಾತ್ರರಾದರು. ಹೀಗೆ ಬೆಳೆದ ಅವರ ರಾಜಕೀಯ ಕೆರಿಯರ್ ತಾಲೂಕಿನ ಬಿಜೆಪಿ ಘಟಕದ ಅಧ್ಯಕ್ಷರಾಗುವತ್ತಾ ಮಂದುವರಿಯಿತು. ಬಹುವರ್ಷಗಳ ಕಾಲ ಪಕ್ಷದ ತಾಲೂಕು ಘಟಕದ ಅಧ್ಯಕ್ಷರಾಗಿ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಸದ್ದು ಮತ್ತು ಸುದ್ದಿಯಿಲ್ಲದೆ ಅವರು ಪರಿಶ್ರಮಿಸಿದ ರೀತಿ ಮಾತ್ರ ಅವರ ದಿಟ್ಟ ನಾಯಕತ್ವಕ್ಕೆ ದೊರೆತ ಬಹುದೊಡ್ಡ ಫಲ ಎಂದೆ ಹೇಳಬಹುದು.
ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪ್ರತಾಪ್ ಸಿಂಹ:
ಬಿಜೆಪಿಯ ಅಗ್ರ ಬೆಳವಣಿಗೆಗೆ ಶ್ರಮವಹಿಸಿ ಸಾಧನೆಗೈದ ಪ್ರತಾಪ್ ಸಿಂಹ ಅವರ ಪಕ್ಷ ಸಂಘಟನೆ ಮತ್ತು ಅವರ ಸಮಾಜಮುಖಿ ಕಾರ್ಯವನ್ನು ಗಮನಿಸಿದ ಪಕ್ಷದ ರಾಜ್ಯ ನಾಯಕರು ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ನಿಯೋಜಿಸಿದರು. ನಮ್ಮ ಪ್ರತಾಪ್ ಸಿಂಹ ಅವರ ಜಿಲ್ಲಾಧ್ಯಕ್ಷತೆಯ ಅವಧಿಯಲ್ಲಿ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಧೂಳೆಬ್ಬಿಸಿ ವಿಜಾಯಪತಾಕೆಯನ್ನು ಹಾರಿಸಿರುವುದನ್ನು ಯಾರು ಮರೆಯುವಂತಿಲ್ಲ. ಈಗಲೂ ಜಿಲ್ಲಾ ಘಟಕದ ಸಾರಥಿಯಾಗಿ ಪಕ್ಷ ಸಂಘಟನೆಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾರೆ.
ಇಂತಹ ವ್ಯಕ್ತಿ ಯಾರಿರಬುದೆಂದು ನನ್ನ ಅನೇಕ ಗೆಳೆಯರು ಇವತ್ತು ಪ್ರಶ್ನೆ ಮಾಡಿಯೆ ಮಾಡುತ್ತಾರೆ. ಪ್ರಿಯ ಸ್ನೇಹತರೇ, ನಾವು ಎಲ್ಲೆ ಹೋದರೂ ನಮಗೆ ಜನ್ಮಕೊಟ್ಟ ತಾಯಿ ನೆಲವನ್ನು ಮರೆಯುವುದುಂಟೆ. ನಮ್ಮ ತಾಯಿ ನೆಲದ ಸಾಧಕರೆ ನಮಗೆ ದಿವ್ಯಪ್ರೇರಣೆ. ಇಂತಹ ಪ್ರೇರಣಾದಾಯಿ ವ್ಯಕ್ತಿತ್ವದ ನಿಸ್ವಾರ್ಥ ರಾಜಕಾರಣಿ, ಸಮಾಜ ಸೇವಕ, ರೋಟರಿಯೆನ್, ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡ ಹೃದಯವಂತ ಬೇರೆ ಯಾರು ಅಲ್ಲ, ನಮ್ಮ ತುಳುನಾಡಿನ ಬೆಳ್ತಂಗಡಿ ತಾಲೂಕಿನಲ್ಲಿ ಜನಸೇವೆ ಮಾಡುತ್ತಿರುವ ಜನಮಾನಸದ ವಕೀಲ, ಜನಪ್ರಿಯ ರಾಜಕಾರಣಿ, ಇನ್ನೊಬ್ಬರಿಗಾಗಿ ದುಡಿಯುವ, ಶ್ರಮಿಸುವ ಹಟಯೋಗಿ, ಕುರ್ಚಿಗಾಗಿ ಹಂಬಲಿಸದೇ ಪಕ್ಷ ಕಟ್ಟಿದ ಸೇನಾನಿ, ಬಿಜೆಪಿಯ ನಿಷ್ಟಾವಂತ ಯೋಧ ನಮ್ಮವರೇ ಆಗಿರುವ ಪ್ರತಾಪ್ ಸಿಂಹ ನಾಯಕ ಅವರು.
ಇಂದವರಿಗೆ ಜನ್ಮದಿನದ ಸಂಭ್ರಮ. ನಾನು ಪ್ರೈಮರಿ ಶಾಲೆಗೆ ಹೋಗುತ್ತಿರುವಾಗ್ಲೆ ನಮ್ಮ ಬೆಳ್ತಂಗಡಿ ತಾಲೂಕಿನ ಅತ್ಯಂತ ಸ್ಮಾರ್ಟ್ ಹಾಗೂ ಡೈನಮಿಕ್ ರಾಜಕಾರಣಿ ಎಂಬ ಹೆಸರನ್ನು ಗಳಿಸಿಕೊಂಡಿದ್ದ ಇದೇ ಪ್ರತಾಪ್ ಸಿಂಹ ನಾಯಕರವರಿಗೆ ಇಂದು ಜನ್ಮದಿನದ ಸಂಭ್ರಮ, ಸಡಗರ. ಈ ಸಂಭ್ರಮ, ಸಡಗರಕ್ಕೆ ನನ್ನದೊಂದು ನುಡಿರೂಪದ ಶುಭಾಶಯ.
ಅಂದ ಹಾಗೆ ಅವರಪ್ಪ ಒಂದುಕಾಲದಲ್ಲಿ ಬೆಳ್ತಂಗಡಿ ತಾಲೂಕಿನ ಸುಪ್ರಸಿದ್ದ ವಕೀಲರಾಗಿದ್ದವರು. ಹಾಗಾಗಿ ರಕ್ತಗತವಾಗಿ ಅವರ ಮಗ ನಮ್ಮ ಪ್ರತಾಪ್ ಸಿಂಹರವರು ಸಹ ಯಶಸ್ವಿ ವಕೀಲರಾಗಿ ತಾಲೂಕಿನ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆಯ ನಿವಾಸಿಯಾಗಿರುವ ಪ್ರತಾಪ್ ಸಿಂಹ ನಾಯಕರವರು ಉಜಿರೆಯ ಎಸ್.ಡಿ.ಎಂ ಹೈಸ್ಕೂಲ್ ಹಾಗೂ ಎಸ್.ಡಿ.ಎಂ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ. ಪದವಿ ಶಿಕ್ಷಣ ಮುಗಿದ ಮೇಲೆ ಕಾನೂನು ಪದವಿಯನ್ನು ಪಡೆದು ಅಪ್ಪನ ವಕೀಲಿ ವೃತ್ತಿಗೆ ಸಹಾಯವನ್ನು ಮಾಡಲಾರಂಭಿಸಿದ ಈ ಯುವಕ ಅಲ್ಪ ವರ್ಷದಲ್ಲೆ ಈ ವೃತಿಯಲ್ಲಿ ಅನುಪಮ ಹೆಸರನ್ನು ಗಳಿಸಿಕೊಂಡಿರುವುದಕ್ಕೆ ಸ್ವತ: ಅವರ ತಂದೆಯೆ ಹೆಮ್ಮೆ ಪಟ್ಟಿದ್ದರಂತೆ.
ಶಾಲಾ/ಕಾಲೇಜು ವಿದ್ಯಾರ್ಥಿಯಾಗಿರುವಾಗ ನಮ್ಮ ಪ್ರತಾಪ್ ಸಿಂಹರವರು ಮೊದಲೆ ಹೈಟ್ ಪರ್ಸನಾಲಿಟಿಯ ಚಂದದ ಯುವಕ ಬೇರೆ. ಅದರಲ್ಲೂ ಅವರು ಅಪ್ರತಿಮ ಕ್ರೀಡಾಪಟುವಾಗಿ ಗಮನಾರ್ಹ ಸಾಧನೆ ಮಾಡಿದ್ದರು. ವಾಲಿಬಾಲ್, ಕ್ರಿಕೆಟ್ ಅವರ ಆಸಕ್ತಿಯ ಕ್ರೀಡೆಗಳಾಗಿದ್ದವು. ಲಾಂಗ್ ಜಂಪ್, ಅಥ್ಲೇಟಿಕ್ ಅವರ ಪ್ರಮುಖ ಇಷ್ಟದ ಕ್ರೀಡೆಗಳಾಗಿದ್ದವು.
ಎಬಿವಿಪಿ ಮೂಲಕ ಸಂಘಟನೆಗಿಳಿದ ಬೆಳ್ತಂಗಡಿಯ ಸಿಂಹ:
ಅಂದು ಪ್ರತಾಪ್ ಸಿಂಹ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿ ಮೂಲಕ ಸಕ್ರೀಯ ಸಂಘಟನೆಕ್ಕಿಳಿದರು. ವಿದ್ಯಾರ್ಥಿಗಳನ್ನು ಸಂಘಟಿಸಿಕೊಂಡು ಎಬಿವಿಪಿಯನ್ನು ತಾಲೂಕಿನಲ್ಲಿ ಬಲವರ್ಧನೆಗೊಳಿಸಲು ಅವರು ಶ್ರಮಿಸಿದ ಬಗೆ ಅದು ನಿಜಕ್ಕೂ ಶ್ಲಾಘನೀಯ.
ವೃತ್ತಿಯ ಜೊತೆಗೆ ರಾಜಕೀಯಕ್ಕೆ ಎಂಟ್ರಿ:
ಮೊದಲೆ ಎಬಿವಿಪಿ ಸಂಘಟನೆಯ ರುಚಿ, ಆರ್.ಎಸ್.ಎಸ್ ಸಂಘಟನೆಯ ಸಕ್ರೀಯ ಕಾರ್ಯಕರ್ತರಾಗಿ ಗಮನ ಸೆಳೆದಿದ್ದ ನಮ್ಮೂರ ಸಿಂಹ ಪ್ರತಾಪ್ ಸಿಂಹ ಅವರು ಕಾಲಕ್ರಮೆಣ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಪಕ್ಷದ ಯುವ ಮೋರ್ಚಾದ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ದಿನ ಮುಂದುವರಿದಂತೆ ಪಕ್ಷದ ಪ್ರಧಾನ ಘಟಕದ ಪ್ರಮುಖ ಜವಾಬ್ದಾರಿಗೆ ಪಾತ್ರರಾದರು. ಹೀಗೆ ಬೆಳೆದ ಅವರ ರಾಜಕೀಯ ಕೆರಿಯರ್ ತಾಲೂಕಿನ ಬಿಜೆಪಿ ಘಟಕದ ಅಧ್ಯಕ್ಷರಾಗುವತ್ತಾ ಮಂದುವರಿಯಿತು. ಬಹುವರ್ಷಗಳ ಕಾಲ ಪಕ್ಷದ ತಾಲೂಕು ಘಟಕದ ಅಧ್ಯಕ್ಷರಾಗಿ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಸದ್ದು ಮತ್ತು ಸುದ್ದಿಯಿಲ್ಲದೆ ಅವರು ಪರಿಶ್ರಮಿಸಿದ ರೀತಿ ಮಾತ್ರ ಅವರ ದಿಟ್ಟ ನಾಯಕತ್ವಕ್ಕೆ ದೊರೆತ ಬಹುದೊಡ್ಡ ಫಲ ಎಂದೆ ಹೇಳಬಹುದು.
ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪ್ರತಾಪ್ ಸಿಂಹ:
ಬಿಜೆಪಿಯ ಅಗ್ರ ಬೆಳವಣಿಗೆಗೆ ಶ್ರಮವಹಿಸಿ ಸಾಧನೆಗೈದ ಪ್ರತಾಪ್ ಸಿಂಹ ಅವರ ಪಕ್ಷ ಸಂಘಟನೆ ಮತ್ತು ಅವರ ಸಮಾಜಮುಖಿ ಕಾರ್ಯವನ್ನು ಗಮನಿಸಿದ ಪಕ್ಷದ ರಾಜ್ಯ ನಾಯಕರು ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ನಿಯೋಜಿಸಿದರು. ನಮ್ಮ ಪ್ರತಾಪ್ ಸಿಂಹ ಅವರ ಜಿಲ್ಲಾಧ್ಯಕ್ಷತೆಯ ಅವಧಿಯಲ್ಲಿ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಧೂಳೆಬ್ಬಿಸಿ ವಿಜಾಯಪತಾಕೆಯನ್ನು ಹಾರಿಸಿರುವುದನ್ನು ಯಾರು ಮರೆಯುವಂತಿಲ್ಲ. ಈಗಲೂ ಜಿಲ್ಲಾ ಘಟಕದ ಸಾರಥಿಯಾಗಿ ಪಕ್ಷ ಸಂಘಟನೆಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾರೆ.
ಬಿಜೆಪಿ ನೀಡಿದ ಎಲ್ಲ ಅವಕಾಶಗಳನ್ನು ಹಾಗೂ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದ ಹೃದಯವಂತ ಪ್ರತಾಪ್ ಸಿಂಹ ಅವರು ಮುಂದಿನ ದಿನಗಳಲ್ಲಿ ಜಿಲ್ಲೆಯ ವಿದಾನ ಪರಿಷತ್ ಸದಸ್ಯರಾಗುವ ದಿನ ದೂರವಿಲ್ಲ ಎಂಬ ಮಾತು ನಿಜವಾಗುವ ಸ್ಪಷ್ಟ ಲಕ್ಷಣ ದೊರೆಯುತ್ತಿದೆ. ಅದು ಅವರ ಶ್ರಮ ಸಾಧನೆಗೆ ಸಿಗಲಿರುವ ಮಹೋನ್ನತ ವರಪ್ರಸಾದ ಎಂದೆ ಹೇಳಬಹುದು.
ಜನಜಾಗೃತಿ ವೇದಿಕೆಯಲ್ಲಿ ನಮ್ಮ ಪ್ರತಾಪ್ ಜೀ:
ಶ್ರೀ.ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸು ಜನಜಾಗೃತಿ ವೇದಿಕೆಯ ಆರಂಭದಿಂದ ಹಿಡಿದು ಈವರೇಗೂ ಹಾಗೂ ಮುಂದೆಯೂ ಅದರ ಸಕ್ರೀಯ ಪದಾಧಿಕಾರಿಯಾಗಿ ವ್ಯಸನಮುಕ್ತ ಸಮಾಜ ನಿರ್ಮಾಣದ ಗುರಿಯೆಡೆಗೆ ದಿಟ್ಟ ಹೆಜ್ಜೆಯಿಟ್ಟವರು ಈ ನಮ್ಮ ಸಿಂಹ ಪ್ರತಾಪ್ ಅವರೆನ್ನಿ. ಜನಜಾಗೃತಿ ವೇದಿಕೆಯ ತಾಲೂಕು ಮಟ್ಟದ ಅಧ್ಯಕ್ಷರಾಗಿ, ಇದೀಗ ರಾಜ್ಯಮಟ್ಟದ ಜನಜಾಗೃತಿ ವೇದಿಕೆಯ ಪ್ರಮುಖ ಪದಾಧಿಕಾರಿಯಾಗಿ ಸೇವೆಯನ್ನು ನೀಡುತ್ತಿದ್ದಾರೆ.
ಊರಿನ ಅಭಿವೃದ್ಧಿ, ಜ್ವಲಂತ ಸಮಸ್ಯೆಗಳು ಬಂದಾಗ ಜಾತಿ, ಧರ್ಮ, ಪಕ್ಷವನ್ನು ಮೀರಿ ಸಮಾಜಮುಖಿಯಾಗಿ, ಜನಮುಖಿಯಾಗಿ ತನ್ನ ಇರುವಿಕೆಯನ್ನು ಪ್ರದರ್ಶಿಸುತ್ತಾ, ಊರಿನ ಪ್ರಗತಿಗಾಗಿ ಅಹರ್ನಿಶಿ ಶ್ರಮಿಸುವ ಸ್ವಚ್ಚ ಹೃದಯದ ಗ್ರೇಟ್ ಹೃದಯವಂತ ರಾಜಕಾರಣಿ ನಮ್ಮ ಪ್ರತಾಪ್ ಜೀ ಯವರೆನ್ನುವುದನ್ನು ಹೇಳಲು ಅಭಿಮಾನವೆನಿಸುತ್ತದೆ. ತಾಲೂಕಿನಲ್ಲಿರುವ ರೊಟರಿ ಕ್ಲಬ್ ಇರಬಹುದು, ಇನ್ನಿತರ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಮೂಲಕ ಸಂಘ ಜೀವಿಯಾಗಿ ಬದುಕುತ್ತಿರುವ ಸರಳ, ಸಜ್ಜನಿಕೆಯ ಪ್ರತಾಪ್ ಸಿಂಹ ಅವರು ನಮ್ಮವರೆಂದು ಹೇಳಿಕೊಳ್ಳಲು ಹರ್ಷವೆನಿಸುತ್ತದೆ.
ವೃತಿ, ಸೇವೆ, ರಾಜಕಾರಣ ಇವೆಲ್ಲವುಗಳನ್ನು ಸಮಾನವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಬೆಳ್ತಂಗಡಿ ತಾಲೂಕಿನ ಕ್ಲೀನ್ ಇಮೇಜಿನ ಪ್ರತಾಪ್ ಸಿಂಹ ನಾಯಕ ಅವರ ಶ್ರಮ ಸಾಧನೆ, ಅವರ ಬದುಕು ಮತ್ತು ಆದರ್ಶ ನಮಗೆಲ್ಲಾ ಪ್ರೇರಣೆ.
ತಾಲೂಕಿನ ಜನಪ್ರಿಯ ಶಾಸಕ ಹರೀಶ ಪೂಂಜಾ ಅವರಿಗೆ ಅಣ್ಣನ ಸ್ಥಾನದಲ್ಲಿ ನಿಂತು ಹರಸುವ, ಮುದ್ದಿಸುವ ನಮ್ಮ ಪ್ರತಾಪ್ ಸಿಂಹ ನಾಯಕರವರಿಗೆ ಮಗದೊಮ್ಮೆ ಜನ್ಮದಿನದ ಶುಭಾಶಯಗಳು.
ಆದಷ್ಟು ಶೀಘ್ರ ವಿಧಾನ ಪರಿಷತ್ ಸದಸ್ಯತ್ವ ಅಥವಾ ಬಹುದೊಡ್ಡ ಸ್ಥಾನ ಮಾನಗಳು ತಮ್ಮನ್ನು ಅರಸಿ ಬರಲೆನ್ನುವ ಹರಕೆ ಹಾರೈಕೆಯೊಂದಿಗೆ,
ನಿಮ್ಮವ
ಸಂದೇಶ್.ಎಸ್.ಜೈನ್
Mo: 9620595555
Email: sandesh.kanyady55@gmail.com














No comments:
Post a Comment