Tuesday, December 18, 2018

ಸಾಧು ಸ್ವಭಾವದ ಮನದ ಗೆಳೆಯ ಸಜ್ಜನ್
ಜನ ಮೆಚ್ಚಿದ ಸಜ್ಜನನಿಗೆ ಜನ್ಮದಿನದ ಸಂಭ್ರಮ 
 

ಸಾಧು ಸ್ವಭಾವದ ಮನದ ಗೆಳೆಯ ಸಜ್ಜನ್ಜನ ಮೆಚ್ಚಿದ ಸಜ್ಜನನಿಗೆ ಜನ್ಮದಿನದ ಸಂಭ್ರಮ
ಆತ ಜೀವದ ಹಾಗೂ ಮನದ ಗೆಳೆಯ. ಆತನಿಗೆ ಎಲ್ಲರು ಬೇಕು. ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಯಾವುದೇ ಕಾರ್ಯಕ್ರಮಗಳಿರಲೀ, ಅಂಥಹ ಕಾರ್ಯಕ್ರಮಗಳಿಗೆ ತುಂಬು ಮನಸ್ಸಿನಿಂದ ಸಹಾಯ ಮಾಡುವ ಗುಣವಂತ. ಹೈಟ್ ಕಮ್ ಪೈಟ್ ಜಾದ ಎಂಬಂತಹ ಪರ್ಸನಾಲಿಟಿ. ಆದರೆ ಹೈಟ್ ನನ್ನಷ್ಟೆ ಆದರೂ ನನಗಿಂತ ಸ್ಮಾರ್ಟ್. ಬಿಡುವಿನ ಸಮಯದಲ್ಲಿ ಟ್ರಕ್ಕಿಂಗ್ ಹೋಗುವ ಉತ್ಕಟ ಹವ್ಯಾಸವನ್ನಿಟ್ಟುಕೊಂಡ ಯಶಸ್ವಿ ಸ್ವಾವಲಂಬಿ ಯುವಕ. ತನಗ್ಯಾರು ಮೋಸ ಮಾಡಿದರೂ, ಅವರಿಗೆಂದು ಕೆಡುಕನ್ನು ಬಯಸದ ಸುಯೋಗ್ಯ ಮನಸ್ಸಿನ ಆಕರ್ಷಕ ಶೈಲಿಯ ಹೃದಯವಂತ ಬೇರೆ ಯಾರು ಅಲ್ಲ. ನನ್ನ ಬೆಸ್ಟ್ ಪ್ರೆಂಡ್ ಸಜ್ಜನ್.
 
ದಾಂಡೇಲಿಯ ಇತಿಹಾಸದಲ್ಲೆ ಮೊದಲ ಬಾರಿಗೆ ಮತ್ತು ಒಂದೆ ಒಂದು ಇರುವಂತಹ ಅತ್ಯಗತ್ಯವಾಗಿ ಬೇಕಾದ ವೀಲ್ ಅಲೈನಮೆಂಟ್ ಶಾಪನ್ನು ಹೊಂದಿರುವ ಹೆಮ್ಮೆಯನ್ನು ಹೊಂದಿರುವ ಗ್ಲೋಬ್ ವೀಲ್ ಅಲೈನಮೆಂಟ್ ಇದರ ಮಾಲಕ ಸಜ್ಜನನಿಗೆ ಇಂದು ಬರ್ತುಡೆ ಸಂಭ್ರಮ. ಈ ಖುಷಿಗೆ ನನ್ನದೊಂದು ಪದಗುಚ್ಚಗಳ ರೂಪದ ಕೇಕನ್ನು ಪ್ರಿಯ ಓದುಗರಿಗೆ ಉಣಬಡಿಸಲು ಮುಂದಾಗಿದ್ದೇನೆ.
 
ಮನದಿ ಗೆಳೆಯ ಸಜ್ಜನ್ ನಿನಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಈ ಸಂದರ್ಬದಲ್ಲಿ ಮುಂದಿನ ವರ್ಷದ ಜನ್ಮದಿನದ ಸಂಭ್ರಮದಲ್ಲಿ ನಿನ್ನ ಮಗಳಿಗೊಂದು ಮುದ್ದಾದ ತಮ್ಮ ಬರಲೆಂಬ ಹಾರೈಕೆಯೊಂದಿಗೆ ಬರವಣಿಗೆ ಮುಂದುವರಿಸುತ್ತೇನೆ.
ಅಂದ ಹಾಗೆ ಕೇರಳದಿಂದ ಬದುಕು ಕಟ್ಟಿಕೊಳ್ಳಲು ದಾಂಡೇಲಿಗೆ ಬಂದು ಬಂದು, ಇಲ್ಲಿ ಸ್ವತಂತ್ರ ಸ್ವಾವಲಂಬಿಯಾಗಿ ಬದುಕು ನಡೆಸಿ, ಅಪ್ಪಟ ಕಾಂಗ್ರೆಸ್ಸಿಗರಾಗಿ, ಆ ಪಕ್ಷದ ಬ್ಲಾಕ್ ಸಮಿತಿಯ ಪ್ರಮುಖ ಪದಾಧಿಕಾರಿಯಾಗಿ, ಗುತ್ತಿಗೆದಾರರಾಗಿ ಗುಂಡು ಗುಂಡಗೆಯಂತಿರುವ ನಮ್ಮ ಹಿರೋ ಸತ್ಯನ್ ಹಾಗೂ ಎಲ್ಲರ ಮುದ್ದಿನ ಅಮ್ಮನಾದ ರಮಾ ಅವರ ಮುದ್ದಿನ ಮಗ ಈ ನಮ್ಮ ಸಜ್ಜನ್. ನಮ್ಮ ಸಜ್ಜನನಿಗೆ ಕವಿತಾ ಎಂಬ ಒಲವಿನ ತಂಗಿ ಇದ್ದಾರೆ.
 
ಸಜ್ಜನ್ ತನ್ನ ಪ್ರಾಥಮಿಕ ಶಿಕ್ಷಣವನ್ನು ರೊಟರಿ ಶಾಲೆಯಲ್ಲಿ ಮಾಡಿ ಮುಂದೆ ಜೆವಿಡಿಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದು, ಆನಂತರ ಜಿ.ಟಿ. & ಟಿ.ಸಿ ಡಿಪ್ಲೋಂ ಪದವಿಯನ್ನು ಮಾಡಿದ ಧನ್ಯತೆಯನ್ನು ಹೊಂದಿದ್ದಾನೆ. ಡಿಪ್ಲೋಂ ಆದ ಬಳಿಕ ಕೇರಳ, ಮೆಡ್ರಾಸ್, ಪುಣೆಯಲ್ಲಿ ಉದ್ಯೋಗದ ಅವಕಾಶ ಬಂದಿತ್ತಾದರೂ ಅದನ್ನೆಲ್ಲವುಗಳನ್ನು ನಯವಾಗಿ ತಿರಸ್ಕರಿಸಿ, ತಂದೆ ತಾಯಿಯ ಜೊತೆಯಿದ್ದುಕೊಂಡೆ ಬದುಕು ನಡೆಸುತ್ತೇನೆಂದು ಪಣ ತೊಟ್ಟ ಸಜ್ಜನ್ ಇಂದು ತನ್ನ ಯಶಸ್ವಿ ಉದ್ಯಮಿಯಾಗಿ ಗಮನ ಸೆಳೆದಿರುವುದಕ್ಕೆ ಪ್ರಾಮಾಣಿಕ ಶ್ರಮವಿದೆ ಎಂದೇ ಹೇಳಬಹುದು.
 
ಕಾಲೇಜು ಮುಗಿದ ಬಳಿಕ ಆರಂಭದ ಸ್ವಲ್ಪ ವರ್ಷ ಅಪ್ಪನ ವ್ಯವಹಾರವನ್ನು ನೋಡಲಾರಂಭಿಸಿದ ಸಜ್ಜನ್ ಕಾಲಕ್ರಮೇಣ ಸ್ವಂತ ಉದ್ಯಮವನ್ನು ಮಾಡಬೇಕೆಂದು ಚಿಂತಿಸಿ, ಸ್ವಂತ ಉದ್ಯಮದ ಕಡೆಗೆ ಲಕ್ಷ್ಯ ಕೊಟ್ಟ ಪರಿಣಾಮ ಇಂದು ನಗರದ ಕುಳಗಿ ರಸ್ತೆಯಲ್ಲಿ ಗ್ಲೋಬ್ ವೀಲ್ ಅಲೈನಮೆಂಟ್ ಕೇಂದ್ರ ಅತ್ಯುತ್ತಮ ಸೇವಾ ಕೇಂದ್ರವಾಗಿ ದಾಂಡೇಲಿ, ಹಳಿಯಾಳ ಮತ್ತು ಜೊಯಿಡಾ ತಾಲೂಕಿನಲ್ಲಿ ಮನೆಮಾತಾಗಿರುವುದು ಸುಳ್ಳಲ್ಲ.
 
ವೀಲ್ ಅಲೈನಮೆಂಟ್ ಉದ್ಯಮದ ಜೊತೆ ಜೊತೆಗೆ ವಾಶಿಂಗ್ ಸೆಂಟರನ್ನು ಪ್ರಾರಂಭಿಸಿ ಅದರಲ್ಲೂ ಸೈ ಎನಿಸಿಕೊಂಡು ಎಲ್ಲರ ಗಮನ ಸೆಳೆದಿರುವುದು ನಿಜಕ್ಕೂ ಹೆಮ್ಮೆ ತರುವಂತಹದ್ದೆ ಆಗಿದೆ. ಹೀಗೆ ತನ್ನ ಉದ್ಯಮದ ಮೂಲಕ ಯಶಸ್ಸಿನೆಡೆಗೆ ದಿಟ್ಟ ಹೆಜ್ಜೆಯಿಟ್ಟ ಸಜ್ಜನ್ ಇದೀಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೈಯಾಡಿಸಿಕೊಂಡು ಆರಂಭದಲ್ಲೆ ಗೆಲುವಿನ ನಗೆ ಬೀರಿರುವುದು ಸಜ್ಜನನ ವ್ಯವಹಾರ ಪ್ರೌಢಿಮೆಗೆ ಸಾಕ್ಷಿ ಎಂದರೆ ತಪ್ಪೇನಿಲ್ಲ.
 
ನಿರುದ್ಯೋಗಿ ಯುವಕರಿಗೆ ಉದ್ಯೋಗದಾಸರೆ ನೀಡಿದ ಯುವಕ ಸಜ್ಜನ್:
ತನ್ನ ಉದ್ಯಮವನ್ನು ಮುನ್ನಡೆಸಲು ಮತ್ತು ಅಲ್ಲಿ ಕಾರ್ಯ ನಿರ್ವಹಿಸುವ ಸಲುವಾಗಿ ಏಳೆಂಟು ನಿರುದ್ಯೋಗಿ ಯುವಕರಿಗೆ ಉದ್ಯೋಗವನ್ನು ನೀಡಿ ಅವರ ಬದಕನ್ನು ಹಸನಾಗಿಸಿದ ಧನ್ಯತೆ ನಮ್ಮ ಸಜ್ಜನನಿಗಿದೆ.
 
ಗೆಳೆಯರ ಅಚ್ಚುಮೆಚ್ಚಿನ ಗೆಳೆಯ ಸಜ್ಜನ್:
ತನ್ನ ವ್ಯವಹಾರದ ನಡುವೆಯೂ ಗೆಳೆಯರ ಅಚ್ಚುಮೆಚ್ಚಿನ ಗೆಳೆಯರಾಗಿ, ಗೆಳೆಯರ ಕಷ್ಟ ಸುಖಗಳಿಗೆ ಸ್ಪಂದಿಸುವ ಸಜ್ಜನನ ಈ ಗುಣವೆ ಅವನ ವ್ಯಕ್ತಿತ್ವಕ್ಕೆ ದರ್ಪಣವಿದ್ದಂತೆ. ಗೆಳೆಯರ ಜೊತೆ ಟ್ರಕ್ಕಿಂಗ್, ಚಾರಣ ಹೋಗುವ ಹವ್ಯಾಸವನ್ನು ಬೆಳೆಸಿಕೊಂಡಿರುವ ಸಜ್ಜನ್ ಗೆಳೆಯರ ಯಾವುದೇ ಕಾರ್ಯಕ್ರಮಗಳಿದ್ದರೂ ತನ್ನ ಮನೆಯ ಕಾರ್ಯವೆಂಬಂತೆ ಅಲ್ಲಿ ಮುಂದೆ ನಿಂತು ಕಾರ್ಯಕ್ರಮದ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವ ಸಜ್ಜನನ ಗುಣ ಎಲ್ಲರನ್ನು ಮೆಚ್ಚುವಂತೆ ಮಾಡದಿರಲು ಸಾಧ್ಯವೆ.
 
ಎಲ್ಲರಲ್ಲಿಯೂ ಎಲ್ಲರಂತಿರುವ ಸ್ವಾಭಿಮಾನಿ ಹಿರೋ ಸಜ್ಜನನ ಜೀವನಯಶಸ್ಸಿಗೆ ಅಪ್ಪ, ಅಮ್ಮನ ಆಶೀರ್ವಾದ, ತಂಗಿಯ ಪ್ರೋತ್ಸಾಹ, ಪ್ರೀತಿಸಿ, ಮುದ್ದಿಸಿ ಕೈಹಿಡಿದ ಪತ್ನಿ ಜ್ಯೋತಿಯವರ ಸಕಾಲಿಕ ಸ್ಪಂದನೆ, ಮುದ್ದು ಕಂದಮ್ಮ ಆರಾಧ್ಯಳ ಅಪ್ಪುಗೆಯ ಪ್ರೀತಿ, ಬಂಧುಗಳ, ಗೆಳೆಯರ ಸಹಕಾರವು ಪ್ರಮುಖ ಕಾರಣ.
 
ಮುದ್ದಿನ ಗೆಳೆಯ ಸಜ್ಜನ್ ಮಗದೊಮ್ಮೆ ಹ್ಯಾಪಿ ಬರ್ತುಡೆ ಡಿಯರ್.
 
ನಿಮ್ಮವ
 
ಸಂದೇಶ್.ಎಸ್.ಜೈನ್
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...