Sunday, December 23, 2018

ನನಗೆ ಮಾರ್ಗದರ್ಶಕರಾಗಿ ಆಶೀರ್ವದಿಸುತ್ತಿದ್ದ ಪ್ರಭು ಅಂಕಲ್ ಇನ್ನಿಲ್ಲ
ಅಸ್ತಂಗತರಾದ ಮಂಜುನಾಥ ನಾಗಪ್ಪ ಪ್ರಭು

ದಾಂಡೇಲಿ : ಬಹಳ ನೋವು ಮತ್ತು ಅತ್ಯಂತ ದುಖ:ದಿಂದ ಇವತ್ತು ಬರೆಯಲು ಹೊರಟಿದ್ದೇನೆ. ಕಳೆದೆರಡು ವರ್ಷಗಳ ಹಿಂದೆ ನಾನು ನನ್ನ ಬಾಡಿಗೆ ಮನೆಯನ್ನು ವನಶ್ರೀನಗರದ ದಿ: ರಘುನಾಥ ಗವಸ ಅವರ ಮನೆಗೆ ಸ್ಥಳಾಂತರಿಸಿದ್ದೇನು. ನನ್ನ ಬಾಡಿಗೆ ಮನೆಯ ಪಕ್ಕದಲ್ಲಿದ್ದವರೇ ನಿನ್ನೆ ದಿನ ದಿನ ನನ್ನಂತಹ ಅನೇಕರಿಗೆ ಮಾರ್ಗದರ್ಶನ ನೀಡಿ ಹರಸಿ, ಆಶೀರ್ವದಿಸುತ್ತಿದ್ದ ಪ್ರಭು ಅಂಕಲ್ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಇಹಲೋಕವನ್ನು ತ್ಯಜಿಸಿದರು ಎನ್ನುವುದನ್ನು ಬಹಳ ನೋವಿನ ಮನಸ್ಸಿನಿಂದ ಹೇಳಬಯಸುತ್ತೇನೆ.

ಅಂದ ಹಾಗೆ ಅವರಿಗೆ ವಯಸ್ಸು 72 ದಾಟಿ 73 ನಡೆಯುತ್ತಿದೆ. ಕಂಪ್ಯೂಟರ್ ಮತ್ತು ತಂತ್ರಜ್ಞಾನದ ವಿಚಾರದಲ್ಲಿ ಅವರ ಐದು ಪರ್ಸೆಂಟ್ ನಾನಿರಲಿಲ್ಲ ಎನ್ನುವುದು ಅಷ್ಟೆ ಸತ್ಯದ ವಿಚಾರ. ನನ್ನ ಪ್ರತಿಯೊಂದು ಬರಹಗಳನ್ನು ಓದಿ ನನ್ನನ್ನು ಹರಸುತ್ತಿದ್ದ ರೀತಿ ಇನ್ನು ನೆನಪು ಮಾತ್ರ. ನಮ್ಮ ಶ್ರೀ ಗಣೇಶ ಹಿಂದು, ಮುಸ್ಲಿಂ, ಕ್ರೈಸ್ತ ಯುವಕ ಮಂಡಳದ ಕಾರ್ಯವೈಖರಿಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿಯನ್ನು ಪಡೆದುಕೊಂಡು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದ ಅವರ ಸಮಾಜಮುಖಿ ಮನಸ್ಸು ಮನಗೆಲ್ಲಾ ಅನುಕರಣೀಯ.
ಕೆಪಿಸಿಯ ಹಿರಿಯ ಅಧಿಕಾರಿಯಾಗಿ ನಿವೃತ್ತರಾಗಿದ್ದರೂ, ಯುವಕರನ್ನು ನಾಚಿಸುವಂತೆ ಓಡಾಡುತ್ತಿದ್ದ ಪ್ರಭು ಅಂಕಲ್ ಇಂದು ನಮ್ಮ ಜೊತೆ ಇಲ್ಲ. ಈ ವಿಚಾರವನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ನಮ್ಮ ತಂದೆ ತಾಯಿ ಕೊಡುವಂತೆಯೆ ಪ್ರೀತಿ, ಆಶೀರ್ವಾದವನ್ನು ಧಾರೆಯೆರೆಯುತ್ತಿದ್ದ ಪ್ರಭು ಅಂಕಲ್ ಅವರ ವ್ಯಕ್ತಿತ್ವ, ಅವರ ಸನ್ನಡತೆ ಮತ್ತು ಜೀವನಾದರ್ಶಗಳು ಸದಾ ಅಮರ, ಅಮರ, ಅಮರ.

ಒಬ್ಬ ಬೆಸ್ಟ್ ಪ್ರೆಂಡ್, ಒಬ್ಬ ಗೈಡರ್, ಒಬ್ಬ ಫಿಲೋಸಫರ್, ಒಬ್ಬ ಸಂಸ್ಕಾರಯುತ ನಡವಳಿಕೆಯ ದಾರ್ಶನಿಕ ಮನುಜನನ್ನು ಕಳೆದುಕೊಂಡ ನೋವು ನನಗಾಗುತ್ತಿದೆ. ಹೇ ದೇವರೇ, ನಮ್ಮ ಒಳಿತನ್ನೆ ಬಯಸುವ ಮಾನವೀಯತೆಯ ಸಕಾರಮೂರ್ತಿಯನ್ನು ನಮ್ಮ ಜೊತೆ ಇರಲಾರದೇ ಬಹುಬೇಗ ಕರೆಸಿಕೊಳ್ಳುತ್ತಿ ಯಾಕೆ? ಎಂಬ ಮಮ್ಮಲ ಮರುಗುವ ಪ್ರಶ್ನೆಗೆ ಉತ್ತರಿಸುವಿಯಾ. ಭಗವಂತ ಅಲ್ಪ ಸಮಯದಲ್ಲೆ ಕೊನೆಯ ಉಸಿರು ಇರುವವರೆಗೆ ನೆನಪಿಸಿಕೊಳ್ಳಬೇಕಾದ ಸ್ವಚ್ಚ ಹೃದಯದ ಗುಣವಂತನನ್ನು ಪರಿಚಯಿಸಿ, ಅಷ್ಟು ಬೇಗ ಎಳೆದುಕೊಂಡು ಹೋದಿಯಲ್ಲ ಎಂಬ ನೋವು ಕೊನೆ ತನಕ ನನ್ನನ್ನು ಕಾಡಿಸದಿರದು.

ಏನೇ ಇರಲಿ. ಹುಟ್ಟು ಸಾವು ನಿಶ್ಚಿತ. ಜೀವನದಲ್ಲೆಂದೂ ಯಾರಿಗೂ ನೋವು ಕೊಡದೇ ಸಮಾಜಮುಖಿಯಾಗಿ, ಸ್ವಾಭಿಮಾನಿಯಾಗಿ ಬಂಗಾರದ ಬದುಕು ಸಾಗಿಸಿದ ಪ್ರಭು ಅಂಕಲ್ ಅವರ ಜೀವನ ನಡೆ ನಮಗೆಲ್ಲಾ ಸ್ಪೂರ್ತಿ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಪ್ರಾಪ್ತಿಸಲಿ ಎಂಬ ಪ್ರಾರ್ಥನೆಯೊಂದಿಗೆ.

ಮಗದೊಮ್ಮೆ ಹುಟ್ಟಿ ಬನ್ನಿ ಪ್ರಭು ಅಂಕಲ್ ಎಂಬ ಪ್ರಾರ್ಥನೆಯೊಂದಿಗೆ,

ದುಖತೃಪ್ತ ನಿಮ್ಮವ

ಸಂದೇಶ್.ಎಸ್.ಜೈನ್
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...