ಸಿ.ಎಸ್.ಆರ್ ಯೋಜನೆಯಡಿ ಸಮಾಜಮುಖಿಯಾಗಿ ಗಮನ ಸೆಳೆದ ವೆಸ್ಟ್ ಕೊಸ್ಟ್ ಪೇಪರ್ ಮಿಲ್
ದಾಂಡೇಲಿ: ರಾಷ್ಟ್ರದ ಪ್ರತಿಷ್ಟಿತ ಕಾರ್ಖಾನೆಗಳಲ್ಲಿ ಒಂದಾದ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಕಳೆದ ಅನೇಕ ವರ್ಷಗಳಿಂದ ದಾಂಡೇಲಿ ಹಾಗೂ ದಾಂಡೇಲಿ ಸುತ್ತಲ ಪ್ರದೇಶಗಳು ಹಾಗೂ ಹಳಿಯಾಳ ಮತ್ತು ಜೊಯಿಡಾ ತಾಲೂಕಿಗೆ ಸಂಬಂಧಿಸಿದಂತೆ ಅನೇಕ ಜನಪರ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಮೂಲಕ ಜನಮುಖಿಯಾಗಿ ಹಾಗೂ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ.
ವಿಶೇಷವಾಗಿ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿ ಅಂದರೆ ಸಿ.ಎಸ್.ಆರ್ ಯೋಜನೆಯಡಿ ಹಲವಾರು ವರ್ಷಗಳಿಂದ ವಿವಿಧ ಶಾಲಾ/ಕಾಲೇಜುಗಳಿಗೆ, ಸಾರ್ವಜನಿಕ ಕ್ಷೇತ್ರಗಳಿಗೆ ಅತ್ಯಗತ್ಯ ಮೂಲಸೌಕರ್ಯಗಳನ್ನು ಒದಗಿಸಿದ ಶ್ರೇಯಸ್ಸು ಕಾಗದ ಕಾರ್ಖಾನೆಗಿದೆ.
ಮೊನ್ನೆ ನವಂಬರ್ ತಿಂಗಳಿನಿಂದ ಈವರೇಗೆ ಒಟ್ಟು ಎರಡು ತಿಂಗಳಲ್ಲಿ ಕಾಗದ ಕಾರ್ಖಾನೆ ತನ್ನ ಸಿ.ಎಸ್.ಆರ್ ಯೋಜನೆಯಡಿ ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಎಜುಕೇಶನ್ ಟ್ರಸ್ಟ್ ಇಲ್ಲಿಯ ಶಾಲೆಗೆ ರೂ:1,80,000/- ವೆಚ್ಚದಲ್ಲಿ 50 ಡೆಸ್ಕ್ ಕಂ ಬೆಂಚುಗಳನ್ನು ಒದಗಿಸಿದೆ. ಸಿದ್ದಾಪುರ ತಾಲೂಕಿನ ಕಾಳಿಕಾ ಭವನಿ ಆಂಗ್ಲ ಮಾಧ್ಯಮ ಶಾಲೆಗೆ ರೂ: 36,000/- ವೆಚ್ಚದಲ್ಲಿ 10 ಡೆಸ್ಕ್ ಕಂ ಬೆಂಚುಗಳನ್ನು, ರೂ:78,000/- ವೆಚ್ಚದಲ್ಲಿ 3 ಕಂಪ್ಯೂಟರ್ಸ್ ಗಳನ್ನು, ರೂ: 28,000/- ವೆಚ್ಚದಲ್ಲಿ 1 ನೀರಿನ ಟ್ಯಾಂಕನ್ನು ವಿತರಿಸಲಾಗಿದೆ.
ದಾಂಡೇಲಿಯ ಟೌನ್ಶೀಪ್, ಹಳಿಯಾಳ ರಸ್ತೆಯಲ್ಲಿರುವ ಅಲೈಡ್ ಏರಿಯದಲ್ಲಿರುವ ಹಾಗೂ ನಿರ್ಮಲ ನಗರದಲ್ಲಿರುವ ಒಟ್ಟು ಮೂರು ಅಂಗನವಾಡಿ ಕೇಂದ್ರಗಳಿಗೆ ಹಾಗೂ ಹಳಿಯಾಳದ ಗುಂಡಿಕೇರಿ ಮತ್ತು ಬಸವನಗಲ್ಲಿ ಅಂಗನವಾಡಿ ಕೇಂದ್ರಗಳಿಗೆ ಒಟ್ಟು ರೂ: 1 ಲಕ್ಷ ವೆಚ್ಚದಲ್ಲಿ 32 ಇಂಚಿನ ಒಟ್ಟು 5 ಎಲ್.ಇ.ಡಿ ಟಿವಿಗಳನ್ನು ವಿತರಿಸಲಾಗಿದೆ. ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ರೂ: 25,000/- ವೆಚ್ಚದಲ್ಲಿ 24 ಇಂಚಿನ 1 ಎಲ್.ಇ.ಡಿ ಟಿವಿಯನ್ನು ನೀಡಲಾಗಿದೆ.
ಬಂಗೂರನಗರ ಪಿಯು ಕಾಲೇಜಿಗೆ ರೂ: 1,38,800/- ಮೊತ್ತದಲ್ಲಿ 2 ಶುದ್ದ ಕುಡಿಯುವ ನೀರಿನ ಘಟಕವನ್ನು, ಬಂಗೂರುನಗರ ಪದವಿ ಕಾಲೇಜಿಗೆ ರೂ:64,000/- ವೆಚ್ಚದಲ್ಲಿ 1 ಶುದ್ದ ಕುಡಿಯುವ ನೀರಿನ ಘಟಕ ಮತ್ತು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ರೂ: 64,000/- ವೆಚ್ಚದಲ್ಲಿ 1 ಶುದ್ದ ಕುಡಿಯುವ ನೀರಿನ ಘಟಕವನ್ನು ಕಾಗದ ಕಾಖರ್ಾನೆ ಉಚಿತವಾಗಿ ನೀಡಿ ಗಮನ ಸೆಳೆದಿದೆ. ಒಟ್ಟಾರೆಯಾಗಿ ಕಳೆದೆರಡು ತಿಂಗಳಿನಿಂದ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಒಟ್ಟು ರೂ: 7,13,800/- ಮೊತ್ತವನ್ನು ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯ ಈ ಕಾರ್ಯಕ್ರಮಕ್ಕೆ ಬಳಕೆ ಮಾಡಿದಂತಾಗಿದೆ. ಇವುಗಳ ಹೊರತಾಗಿಯೂ ದಾಂಡೇಲಿ ಹಾಗೂ ಜೊಯಿಡಾದ ಸಾರ್ವಜನಿಕ ಆಸ್ಪತ್ರೆಗಳಿಗೆ ಶವವನ್ನು ಇಡುವ ಪ್ರಿಜರ್ ಯಂತ್ರವನ್ನು ಉಚಿತವಾಗಿ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಉಳಿದಂತೆ ಕಳೆದ ಅನೇಕ ವರ್ಷಗಳಿಂದ ನಗರದ ವಿವಿಧ ಸಾರ್ವಜನಿಕ ಕ್ಷೇತ್ರಗಳ ಅಭಿವೃದ್ಧಿಗೆ ಕೈ ಜೋಡಿಸಿರುವುದಲ್ಲದೇ, ಬಡ ಮಕ್ಕಳ ಶಿಕ್ಷಣಕ್ಕೆ ಶಿಕ್ಷಣ ನೆರವು ಹೀಗೆ ಮೊದಲಾದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನಸಾಮಾನ್ಯರ ಅಚ್ಚುಮೆಚ್ಚಿನ ಕಾರ್ಖಾನೆಯಾಗಿ ಗಮನ ಸೆಳೆಯುತ್ತಿದೆ.
No comments:
Post a Comment