ಉತ್ತರಕನ್ನಡ ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಕುಣಬಿ ಮತ್ತು ಸಿದ್ದಿ ಬುಡಕಟ್ಟು ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪರಿಣಾಮಕಾರಿಯಾಗಿ ಶ್ರಮಸಾಧನೆಗೈದ, ಹಿರಿಯ ವಾಗ್ಮಿ, ಚಿಂತಕ, ಲೇಖಕ, ಪತ್ರಕರ್ತ, ಸಾಮಾಜಿಕ ಹೋರಾಟಗಾರ ಹಾಗೂ ಅಧ್ಯಯನಶೀಲ ವ್ಯಕ್ತಿತ್ವದ ಗುಣಸಂಪನ್ನ ನನ್ನಣ್ಣ ಎಂದೆ ಹೆಮ್ಮೆಯಿಂದ ಎದೆ ತಟ್ಟಿ ಹೇಳಲು ಹೆಮ್ಮೆಯೆನಿಸುವ ಬಿ.ಪಿ.ಮಹೇಂದ್ರಕುಮಾರ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಬುಡಕಟ್ಟು ಸಮುದಾಯಗಳ ಸೀಮಾಪದ್ಧತಿ: ತಾತ್ವಿಕ ವಿವೇಚನೆ ಎಂಬ ಉತ್ತರಕನ್ನಡ ಜಿಲ್ಲೆಯ ಕುಣಬಿ ಸಮುದಾಯವನ್ನು ಕೇಂದ್ರವಾಗಿಸಿಕೊಂಡು ವಿವಿಧ ಬುಡಕಟ್ಟು ಸಮುದಾಯಗಳ ಸೀಮಾ ಪದ್ಧತಿಯ ತೌಲನಿಕ ಅಧ್ಯಯನ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಇಂದು ಡಾಕ್ಟರೇಟ್ (ಪಿ.ಎಚ್.ಡಿ) ಪದವಿಯನ್ನು ಪ್ರಧಾನ ಮಾಡಿತು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ: ಎ.ಎಸ್.ಪ್ರಭಾಕರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಬಿ.ಪಿ.ಮಹೇಂದ್ರಕುಮಾರ್ ಅವರು ಮೊತ್ತಮೊದಲ ಬಾರಿಗೆ ಬುಡಕಟ್ಟು ಸಮುದಾಯಗಳ ಸೀಮಾ ಪದ್ಧತಿ: ತಾತ್ವಿಕ ವಿವೇಚನೆ ಎಂಬ ಮಹಾಪ್ರಬಂಧವನ್ನು ಮಂಡಿಸಿ ಇಂದು ಪಿ.ಎಚ್.ಡಿ ಪದವಿಯನ್ನು ಪಡೆಯುವುದರ ಮೂಲಕ ಜೀವನದ ಮಹತ್ವದ ಹಾಗೂ ಅಮೃತ ಘಳಿಗೆಯನ್ನು ತನ್ನತ್ತ ಬರಮಾಡಿಕೊಂಡರು.
6 ವರ್ಷಗಳ ನಿರಂತರ ಪ್ರಯತ್ನ, ಪರಿಶ್ರಮ, ತನ್ನೆಲ್ಲಾ ಸುಖವನ್ನು ತ್ಯಾಗಮಾಡಿ ರಾತ್ರಿ ಹಗಲೆನ್ನದೆ ಸಂಶೋಧನೆಯನ್ನು ನಡೆಸಿ, ಅದಕ್ಕೆ ವಸ್ತುನಿಷ್ಟವಾದ ರೂಪವನ್ನು ಕೊಟ್ಟು ಸ್ಮರಣೀಯ ಮತ್ತು ಇತಿಹಾಸದ ಪುಟದಲ್ಲಿ ದಾಖಲಾಗಬಹುದಾದ ಅತೀ ಮಹತ್ವದ ಪ್ರಬಂಧವನ್ನು ಮಂಡಿಸಿ ಬುಡಕಟ್ಟು ಸಮುದಾಯದ ಭವಿಷ್ಯದ ಉನ್ನತ ಬೆಳಕಿಗೆ ಜೀವನ ಸವೆಸಿದ ಮಹೇಂದ್ರಾಜೀಯವರ ಸಾರ್ಥಕ ಕಾರ್ಯಕ್ಕೆ ಗೌರವದಿಂದ ಶಿರಬಾಗುವೆ.
ಜೀವನದಲ್ಲಿ ಹಲವಾರು ಎಡರು ತೊಡರುಗಳನ್ನು, ನೋವು ನಲಿವುಗಳನ್ನು ಉಂಡು ತಿಂದು ಬೆಳೆದು, ಇನ್ನೊಬ್ಬರಿಗಾಗಿ, ತುಳಿತಕ್ಕೊಳಗಾದ ಸಮಾಜಕ್ಕಾಗಿ ತನ್ನನ್ನು ಸಮರ್ಪಣಾಭಾವದಿಂದ ಸಮರ್ಪಿಸಿರುವುದರ ಫಲವೆ ಅವರಿಗೆ ಡಾಕ್ಟರೇಟ್ ಪದವಿ ದೊರೆಯಲು ಬಹುಮೂಲ್ಯ ಕಾರಣ ಎಂದು ಹೇಳಬಹುದು.
ಇನ್ನೊಬ್ಬರ ನಾಳೆಯ ಒಳಿತಿಗಾಗಿ ಬದುಕು ಕಟ್ಟಿಕೊಂಡ ಸ್ವಚ್ಚ ಹೃದಯದ ಹಟಯೋಗಿ ಮಹೇಂದ್ರಕುಮಾರ್ ಅವರ ಅಪರೂಪದ ಅಪೂರ್ವ ಸಾಧನೆಗೆ ಮಗದೊಮ್ಮೆ ಗೌರವಪೂರ್ವಕ ಅಭಿವಂದನೆಗಳು. ಅವರ ಈ ಕಾರ್ಯಕ್ಕೆ ತುಂಬು ಮನಸ್ಸಿನಿಂದ ಸಹಕರಿಸಿದ ಅವರ ಮಡದಿ ಸಿಂಚನಾ ಅವರಿಗೆ, ಮಕ್ಕಳಾದ ಸಸ್ಯ ಹಾಗೂ ಶೌರ್ಯ ಅವರ ಮಮಕಾರದ ಪ್ರೀತಿಗೆ ಬಿಗ್ ಹ್ಯಾಟ್ಸ್ ಆಫ್.
ಈ ಮಹಾಪ್ರಬಂಧ ಅದ್ವಿತೀಯ ಪ್ರಬಂಧವಾಗಿ, ಗ್ರಂಥವಾಗಿ ಬುಡಕಟ್ಟು ಸಮುದಾಯದ ಬದುಕಿಗೆ ಬೆಳಕಿಂಡಿಯಾಗಲೆಂದು ಪ್ರಾರ್ಥಿಸುವುದರ ಜೊತೆಗೆ ಸಾಧನೆಗೆ ಮನಸ್ಸು ಇರಬೇಕು, ಛಲವಿರಬೇಕೆಂಬ ಸಂದೇಶವನ್ನು ಸಾರಿದ ಮಹೇಧ್ರಕುಮಾರ್ ಅವರ ಹಟಸಾಧನೆಗೆ ಮತ್ತು ಗುರಿ ಸಾಧನೆಗೆ ಕೈಮುಗಿದು ನಮಿಸುವೆ.
ಸುಖವಾಗಿರಿ, ಶುಭವಾಗಲಿ.
ನಿಮ್ಮವ
ಸಂದೇಶ್.ಎಸ್.ಜೈನ್
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ: ಎ.ಎಸ್.ಪ್ರಭಾಕರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಬಿ.ಪಿ.ಮಹೇಂದ್ರಕುಮಾರ್ ಅವರು ಮೊತ್ತಮೊದಲ ಬಾರಿಗೆ ಬುಡಕಟ್ಟು ಸಮುದಾಯಗಳ ಸೀಮಾ ಪದ್ಧತಿ: ತಾತ್ವಿಕ ವಿವೇಚನೆ ಎಂಬ ಮಹಾಪ್ರಬಂಧವನ್ನು ಮಂಡಿಸಿ ಇಂದು ಪಿ.ಎಚ್.ಡಿ ಪದವಿಯನ್ನು ಪಡೆಯುವುದರ ಮೂಲಕ ಜೀವನದ ಮಹತ್ವದ ಹಾಗೂ ಅಮೃತ ಘಳಿಗೆಯನ್ನು ತನ್ನತ್ತ ಬರಮಾಡಿಕೊಂಡರು.
6 ವರ್ಷಗಳ ನಿರಂತರ ಪ್ರಯತ್ನ, ಪರಿಶ್ರಮ, ತನ್ನೆಲ್ಲಾ ಸುಖವನ್ನು ತ್ಯಾಗಮಾಡಿ ರಾತ್ರಿ ಹಗಲೆನ್ನದೆ ಸಂಶೋಧನೆಯನ್ನು ನಡೆಸಿ, ಅದಕ್ಕೆ ವಸ್ತುನಿಷ್ಟವಾದ ರೂಪವನ್ನು ಕೊಟ್ಟು ಸ್ಮರಣೀಯ ಮತ್ತು ಇತಿಹಾಸದ ಪುಟದಲ್ಲಿ ದಾಖಲಾಗಬಹುದಾದ ಅತೀ ಮಹತ್ವದ ಪ್ರಬಂಧವನ್ನು ಮಂಡಿಸಿ ಬುಡಕಟ್ಟು ಸಮುದಾಯದ ಭವಿಷ್ಯದ ಉನ್ನತ ಬೆಳಕಿಗೆ ಜೀವನ ಸವೆಸಿದ ಮಹೇಂದ್ರಾಜೀಯವರ ಸಾರ್ಥಕ ಕಾರ್ಯಕ್ಕೆ ಗೌರವದಿಂದ ಶಿರಬಾಗುವೆ.
ಜೀವನದಲ್ಲಿ ಹಲವಾರು ಎಡರು ತೊಡರುಗಳನ್ನು, ನೋವು ನಲಿವುಗಳನ್ನು ಉಂಡು ತಿಂದು ಬೆಳೆದು, ಇನ್ನೊಬ್ಬರಿಗಾಗಿ, ತುಳಿತಕ್ಕೊಳಗಾದ ಸಮಾಜಕ್ಕಾಗಿ ತನ್ನನ್ನು ಸಮರ್ಪಣಾಭಾವದಿಂದ ಸಮರ್ಪಿಸಿರುವುದರ ಫಲವೆ ಅವರಿಗೆ ಡಾಕ್ಟರೇಟ್ ಪದವಿ ದೊರೆಯಲು ಬಹುಮೂಲ್ಯ ಕಾರಣ ಎಂದು ಹೇಳಬಹುದು.
ಇನ್ನೊಬ್ಬರ ನಾಳೆಯ ಒಳಿತಿಗಾಗಿ ಬದುಕು ಕಟ್ಟಿಕೊಂಡ ಸ್ವಚ್ಚ ಹೃದಯದ ಹಟಯೋಗಿ ಮಹೇಂದ್ರಕುಮಾರ್ ಅವರ ಅಪರೂಪದ ಅಪೂರ್ವ ಸಾಧನೆಗೆ ಮಗದೊಮ್ಮೆ ಗೌರವಪೂರ್ವಕ ಅಭಿವಂದನೆಗಳು. ಅವರ ಈ ಕಾರ್ಯಕ್ಕೆ ತುಂಬು ಮನಸ್ಸಿನಿಂದ ಸಹಕರಿಸಿದ ಅವರ ಮಡದಿ ಸಿಂಚನಾ ಅವರಿಗೆ, ಮಕ್ಕಳಾದ ಸಸ್ಯ ಹಾಗೂ ಶೌರ್ಯ ಅವರ ಮಮಕಾರದ ಪ್ರೀತಿಗೆ ಬಿಗ್ ಹ್ಯಾಟ್ಸ್ ಆಫ್.
ಈ ಮಹಾಪ್ರಬಂಧ ಅದ್ವಿತೀಯ ಪ್ರಬಂಧವಾಗಿ, ಗ್ರಂಥವಾಗಿ ಬುಡಕಟ್ಟು ಸಮುದಾಯದ ಬದುಕಿಗೆ ಬೆಳಕಿಂಡಿಯಾಗಲೆಂದು ಪ್ರಾರ್ಥಿಸುವುದರ ಜೊತೆಗೆ ಸಾಧನೆಗೆ ಮನಸ್ಸು ಇರಬೇಕು, ಛಲವಿರಬೇಕೆಂಬ ಸಂದೇಶವನ್ನು ಸಾರಿದ ಮಹೇಧ್ರಕುಮಾರ್ ಅವರ ಹಟಸಾಧನೆಗೆ ಮತ್ತು ಗುರಿ ಸಾಧನೆಗೆ ಕೈಮುಗಿದು ನಮಿಸುವೆ.
ಸುಖವಾಗಿರಿ, ಶುಭವಾಗಲಿ.
ನಿಮ್ಮವ
ಸಂದೇಶ್.ಎಸ್.ಜೈನ್






















































