Tuesday, January 22, 2019

 
ಅವರು ಎಲ್ಲರಂತಲ್ಲ. ಒಂದು ವಿಶಿಷ್ಟ ವ್ಯಕ್ತಿತ್ವದ ಸರಳ ಸಹೃದಯಿ ಅಣ್ಣ. ಅಪಾರ ಜ್ಞಾನ ಸಂಪನ್ನ. ಅತ್ಯುತ್ತಮ ವಾಗ್ಮಿ. ಹೊಸತನ, ಹೊಸ ವಿಚಾರಗಳೊಂದಿಗೆ ಸಮಾಜಮುಖಿಯಾಗಿ ಆದರ್ಶ ಜೀವನವನ್ನು ನಡೆಸುತ್ತಿರುವ ಇವರು ನನ್ನ ಹೆಮ್ಮೆಯ ಅಣ್ಣ ಮಹೇಂದ್ರಕುಮಾರ್ ಅವರು.

ಇಂದವರಿಗೆ ಹುಟ್ಟುಹಬ್ಬದ ಶುಭ ಸಂಭ್ರಮ. ಕಳೆದ ವರ್ಷವೆ ಅವರ ಹುಟ್ಟುಹಬ್ಬದ ಲೇಖನದಲ್ಲಿ ಸವಿವರವಾಗಿ ಬರೆದಿದ್ದೆ. ಆದ್ರೆ ಈ ಬಾರಿ ಮತ್ಯಾಕೆ ಬರೆಯುತ್ತಿದ್ದೇನೆಂದು ಅಂದುಕೊಂಡಿರೆ?

ಜೀವನದ ಮಹತ್ವದ ಜನ್ಮವರ್ಷ ನಮ್ಮ ಮಹೇಂದ್ರ ಅವರ ಪಾಲಿಗೆ :
ವಿವಿಧ ಹೋರಾಟ, ಜನಜಾಗೃತಿಗಳ ಮೂಲಕ ಬುಡಕಟ್ಟು ಸಮಾಜವನ್ನು ಸಮಾಜದ ಮುಖ್ಯಭೂಮಿಕೆಗೆ ತರುವಲ್ಲಿ ಪ್ರಾಮಾಣಿಕ ಹೋರಾಟಗೈದ ನಮ್ಮ ಬಿ.ಪಿ.ಮಹೇಂದ್ರಕುಮಾರ್ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಡಿ ಬುಡಕಟ್ಟು ಸಮಾಜಕ್ಕಾಗಿಯೆ ಬುಡಕಟ್ಟು ಸಮಾಜದ ಸಮಗ್ರ ವಿಚಾರಗಳನ್ನೊಳಗೊಂಡ ಸಂಶೋಧನೆಯನ್ನು ನಡೆಸಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ರಾತ್ರಿ ಹಗಲೆನ್ನದೆ ಸಂಶೋಧನಾ ಕಾರ್ಯದಲ್ಲಿ ತೊಡಗಿ ಇದೀಗ ತಮ್ಮ ಸಂಶೋಧನಾ ಗ್ರಂಥ ಸಿದ್ದಗೊಂಡು ಪದವಿ ಪ್ರಧಾನ ಸಮಾರಂಭದ ದಿನಗಣನೆಯಲ್ಲಿ ನನ್ನಣ್ಣ ಇದ್ದಾರೆ.

ಹಾಗಾಗಿ ಈ ವರ್ಷ ಮಹೇಂದ್ರಕುಮಾರ್ ಅವರ ಪಾಲಿಗೆ ಜೀವನದ ಮಹತ್ವದ ವರ್ಷವೆಂದೆ ಹೇಳಬಹುದು. ಮಹೇಂದ್ರಕುಮಾರ್ ಅವರ ಪ್ರಯತ್ನ, ಪ್ರಾಮಾಣಿಕತೆ, ದಕ್ಷತೆ, ಪರಿಶ್ರಮಕ್ಕೆ ಅಬಾರಿಯಾಗಿದ್ದೇನೆ. ಜನ್ಮದಿನದ ಸಂಭ್ರಮದಲ್ಲಿರುವ ಸಾಧನೆಯ ಸರದಾರ ಮಹೇಂದ್ರಕುಮಾರ್ ಅವರಿಗೆ ಈ ನಿಮ್ಮ ತಮ್ಮನ ಕಡೆಯಿಂದ ಪ್ರೀತಿಪೂರ್ವಕ ಶುಭಾಶಯಗಳು.

ನಿಮ್ಮವ

ಸಂದೇಶ್.ಎಸ್.ಜೈನ್
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...