Monday, January 21, 2019

ಮನಸೂರೆಗೊಂಡ ಯಕ್ಷಗಾನ ಪ್ರದರ್ಶನ


ದಾಂಡೇಲಿ: ಸ್ಥಳೀಯ ಗಾಂಧಿನಗರದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಆಶ್ರಯದಲ್ಲಿ ಹಾಗೂ ದಾನಿಗಳ ನೆರವಿನಲ್ಲಿ ಹೊನ್ನಾವರ ತಾಲ್ಲೂಕಿನ ಜಲವಳ್ಳಿಯ ಕಲಾಧರ ಯಕ್ಷರಂಗ ಇವರಿಂದ ನಗರದ ಹಳೆ ನಗರ ಸಭಾ ಮೈದಾನದಲ್ಲಿ ಭಾನುವಾರ ರಾತ್ರಿ ಕಾರ್ತವೀರ್ಯಾರ್ಜುನ ಮತ್ತು ಕೃಷ್ಣಾರ್ಜುನ ಕಾಳಗ ಎಂಬ ಪೌರಾಣಿಕ ಯಕ್ಷಗಾನವು ಉಚಿತ ಪ್ರದರ್ಶನದೊಂದಿಗೆ ಯಶಸ್ವಿಯಾಗಿ ಜರುಗಿ ಮನಸೂರೆಗೊಂಡಿತು.

ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಪ್ರಸನ್ನ ಭಟ್ ಬಾಳ್ಕಲ್, ಪಲ್ಲವ ಗಾಣಿಗ ಹೆರಂಜಾಲು, ಮದ್ದಳೆಯಲ್ಲಿ ಎನ್.ಜಿ.ಹೆಗಡೆ ಯಲ್ಲಾಪುರ, ವೆಂಕಟ್ರಮಣ ಹೆಗಡೆ ನಿಟ್ಟೂರು, ಚೆಂಡೆಯಲ್ಲಿ ಗಣೇಶ ಗಾಂವಕರ ಹೆಳುವಳ್ಳಿ, ರಾಮ ಭಂಡಾರಿ ಸಹಕರಿಸಿದರು. ಸ್ತ್ರೀ ವೇಷದಾರಿಗಳಾಗಿ ಹೊಸಂಗಡಿ ರಾಜೀವ ಶೆಟ್ಟಿ, ನಿಲ್ಕೊಡ ಶಂಕರ ಹೆಗಡೆ, ನಾಗರಾಜ ಭಟ್, ಹಾಸ್ಯ ಕಲಾವಿದರಾಗಿ ಹಳ್ಳಾಡಿ ಜಯರಾಮ ಶೆಟ್ಟಿ ಹಾಗೂ ಪ್ರಮುಖ ಕಲಾವಿದರುಗಳಾಗಿ ಬಳ್ಕೂರು ಕೃಷ್ಣಯಾಜಿ, ಉಪ್ಪುಂದ ನಾಗೇಂದ್ರ ರಾವ್, ಜಲವಳ್ಳಿ ವಿದ್ಯಾದರ ರಾವ್, ಕಾರ್ತಿಕ ಚಿಟ್ಟಾಣಿ, ವಿನಯ್ ಭಟ್ ಬೇರೋಳ್ಳಿ, ಆನಂದ ಭಟ್, ಮಹಾಬಲೇಶ್ವರ ಗೌಡ, ನಿರಂಜನ ಜಾಗನಳ್ಳಿ, ಗಣಪತಿ ಬೈಲುಗದ್ದೆ, ಬಾಸ್ಕರ ಕುಮುಟಾ ಮತ್ತು ಪರಿಶುದ್ದ ಆಚಾರ್ಯ ಅವರುಗಳು ಮನೋಜ್ಷ ಅಭಿನಯ ನೀಡಿದರು. ವಿಶೇಷ ಪಾತ್ರದಲ್ಲಿ ಜೊಯಿಡಾ ಯಕ್ಷಗಾನ ಕಲಾವಿದ ಸುದರ್ಶನ ಹೆಗಡೆಯವರು ವೇಷದಾರಿಯಾಗಿ ಗಮನ ಸೆಳೆದರು.

ಆರಂಭದಲ್ಲಿ ಯಕ್ಷಗಾನ ಪ್ರದರ್ಶನದ ಪ್ರಮುಖ ಸಂಘಟಕ ಹಾಗೂ ರೂವಾರಿ ವಿಷ್ಣುಮೂರ್ತಿ ರಾವ್ ಸರ್ವರನ್ನು ಸ್ವಾಗತಿಸಿದರು. ಕಲಾಧರ ಯಕ್ಷರಂಗದ ಮುಖ್ಯಸ್ಥ ವಿದ್ಯಾದರ ಜಲವಳ್ಳಿಯವರು ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಅಧ್ಯಕ್ಷ ಸಂದೇಶ್.ಎಸ್.ಜೈನ್ ಧನ್ಯವಾದ ಸಲ್ಲಿಸಿದರು. ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಮತ್ತು ಯಕ್ಷಗಾನ ಕಲಾಭಿಮಾನಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...