ಗೌರಿಯ ಚಿಕಿತ್ಸೆಗೆ ಧನಸಹಾಯ ನೀಡಿದ ಆಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗ
ದಾಂಡೇಲಿ : ರಕ್ತದ ಕ್ಯಾನ್ಸರಿಗೊಳಗಾಗಿ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಗರದ ಹನ್ನೊಂದರ ಹರೆಯದ ಬಾಲಕಿ ಗೌರಿಯ ಚಿಕಿತ್ಸೆಗೆ ನಗರದ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದವರು ರೂ:5150/- ಧನ ಸಹಾಯವನ್ನು ನೀಡಿ ಗಮನ ಸೆಳೆದಿದ್ದಾರೆ.
ಬಾಲಕಿ ಗೌರಿಯ ತಂದೆ ಅನಿಲ್ ನಾಯ್ಕ ಅವರ ಉಳಿತಾಯ ಖಾತೆಗೆ ಈ ಹಣವನ್ನು ಹರೀಶ ಪೂಜಾರಿಯವರ ಮೂಲಕ ಜಮಾ ಮಾಡಲಾಗಿದ್ದು, ಧನ ಸಹಾಯ ಮಾಡಿದ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ವಿಷ್ಣು ನಾಯರ್, ಪ್ರಶಾಂತ ಕಲಾಲ, ಪಾಂಡುರಂಗ ಮೋಟ್ರಾಚೆ, ರಾಮ ನಾಯ್ಡು ಮತ್ತು ಉಮ್ಮರ್ ಶೇಖ ಉಪಸ್ಥಿತರಿದ್ದರು.
ವಿಷ್ಣು ನಾಯರ್ ನೇತೃತ್ವದ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ಈ ಮಾನವೀಯ ಕಾರ್ಯಕ್ಕೆ ಗೌರಿ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ಈ ಸತ್ಕಾರ್ಯಕ್ಕೆ ವಿಶೇಷ ಅಭಿನಂದನೆಗಳು.
ನಿಮ್ಮವ
ಸಂದೇಶ್.ಎಸ್.ಜೈನ್
ಬಾಲಕಿ ಗೌರಿಯ ತಂದೆ ಅನಿಲ್ ನಾಯ್ಕ ಅವರ ಉಳಿತಾಯ ಖಾತೆಗೆ ಈ ಹಣವನ್ನು ಹರೀಶ ಪೂಜಾರಿಯವರ ಮೂಲಕ ಜಮಾ ಮಾಡಲಾಗಿದ್ದು, ಧನ ಸಹಾಯ ಮಾಡಿದ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ವಿಷ್ಣು ನಾಯರ್, ಪ್ರಶಾಂತ ಕಲಾಲ, ಪಾಂಡುರಂಗ ಮೋಟ್ರಾಚೆ, ರಾಮ ನಾಯ್ಡು ಮತ್ತು ಉಮ್ಮರ್ ಶೇಖ ಉಪಸ್ಥಿತರಿದ್ದರು.
ವಿಷ್ಣು ನಾಯರ್ ನೇತೃತ್ವದ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ಈ ಮಾನವೀಯ ಕಾರ್ಯಕ್ಕೆ ಗೌರಿ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ಈ ಸತ್ಕಾರ್ಯಕ್ಕೆ ವಿಶೇಷ ಅಭಿನಂದನೆಗಳು.
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment