ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಬಿ.ನಾಯ್ಕ ವಿಧಿವಶ
ದಾಂಡೇಲಿ: ನಗರದ ಹಿರಿಯ ಕಾಂಗ್ರೆಸ್ ಮುಖಂಡ ಟೌನಶೀಪ್ ನಿವಾಸಿ ಎಸ್.ಬಿ.ನಾಯ್ಕ (ವ: 75) ಅವರು ಗುರುವಾರ ತಡರಾತ್ರಿ ವಿಧಿವಶರಾಗಿದ್ದಾರೆ.
ಮೃತ ಎಸ್.ಬಿ.ನಾಯ್ಕ ಅವರು ಕಳೆದ 50 ವರ್ಷಗಳಿಂದ ಸಕ್ರೀಯ ರಾಜಕಾರಣದಲ್ಲಿದ್ದು, ನಗರದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಕೆ.ಪಿ.ಸಿ.ಸಿ ಸದಸ್ಯರಾಗಿ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು:
ಎಸ್.ಬಿ.ನಾಯ್ಕ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆಯವರು ಕಂಬನಿ ಮಿಡಿದಿದ್ದು, ಎಸ್.ಬಿ.ನಾಯ್ಕ ಅವರ ಪ್ರಾಮಾಣಿಕ ಸೇವೆ ಮತ್ತು ಜನಪರ ನಿಲುವನ್ನು ಸ್ಮರಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ, ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಾಟಿ, ಕಾಂಗ್ರೆಸ್ ಮುಖಂಡರುಗಳಾದ ಸತೀಶ ಬೆಂಡೆ, ರಾಧಾಕೃಷ್ಣ ಕನ್ಯಾಡಿ, ವಿ.ಸತ್ಯನ್, ಎನ್.ಜಿ.ಸಾಳುಂಕೆ, ದಿವಾಕರ ನಾಯ್ಕ, ಕರೀಂ ಅಜ್ರೇಕರ, ಆರ್.ಜಿ.ಶೆಟ್ಟಿ, ಬಸೀರ್ ಗಿರಿಯಾಲ, ಎಸ್.ಎಸ್.ಪೂಜಾರ, ಬಾಪು ಗೌಡ, ಎನ್.ಎಸ್.ನಾಯ್ಕ, ಸುಬ್ರಹ್ಮಣಿ ಸಮರು, ವೀರೇಶ ಯರಗೇರಿ, ಅವಿನಾಶ ಘೋಡಕೆ, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಆದಂ ದೇಸೂರು, ಅಷ್ಪಾಕ ಶೇಖ, ನಂದೀಶ ಮುಂಗರವಾಡಿ, ಅನಿಲ್ ನಾಯ್ಕರ್, ಆಸೀಪ್ ಮುಜಾವರ, ಮೌಲಾಲಿ ಮುಲ್ಲಾ, ಸಂಜು ಚಂದ್ರಕಾಂತ ನಂದ್ಯಾಳ್ಕರ ಮೊದಲಾದವರು ಕಂಬನಿ ಮಿಡಿದಿದ್ದಾರೆ.
ಆದರ್ಶ ರಾಜಕಾರಣಿಯಾಇ, ಜನಸೇವೆಗೈದ ಸರಳ ವ್ಯಕ್ತಿತ್ವದ ಸಹೃದಯಿ ಎಸ್.ಬಿ.ನಾಯ್ಕ ಅವರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುವ,
ಮೃತ ಎಸ್.ಬಿ.ನಾಯ್ಕ ಅವರು ಕಳೆದ 50 ವರ್ಷಗಳಿಂದ ಸಕ್ರೀಯ ರಾಜಕಾರಣದಲ್ಲಿದ್ದು, ನಗರದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಕೆ.ಪಿ.ಸಿ.ಸಿ ಸದಸ್ಯರಾಗಿ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು:
ಎಸ್.ಬಿ.ನಾಯ್ಕ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆಯವರು ಕಂಬನಿ ಮಿಡಿದಿದ್ದು, ಎಸ್.ಬಿ.ನಾಯ್ಕ ಅವರ ಪ್ರಾಮಾಣಿಕ ಸೇವೆ ಮತ್ತು ಜನಪರ ನಿಲುವನ್ನು ಸ್ಮರಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ, ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಾಟಿ, ಕಾಂಗ್ರೆಸ್ ಮುಖಂಡರುಗಳಾದ ಸತೀಶ ಬೆಂಡೆ, ರಾಧಾಕೃಷ್ಣ ಕನ್ಯಾಡಿ, ವಿ.ಸತ್ಯನ್, ಎನ್.ಜಿ.ಸಾಳುಂಕೆ, ದಿವಾಕರ ನಾಯ್ಕ, ಕರೀಂ ಅಜ್ರೇಕರ, ಆರ್.ಜಿ.ಶೆಟ್ಟಿ, ಬಸೀರ್ ಗಿರಿಯಾಲ, ಎಸ್.ಎಸ್.ಪೂಜಾರ, ಬಾಪು ಗೌಡ, ಎನ್.ಎಸ್.ನಾಯ್ಕ, ಸುಬ್ರಹ್ಮಣಿ ಸಮರು, ವೀರೇಶ ಯರಗೇರಿ, ಅವಿನಾಶ ಘೋಡಕೆ, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಆದಂ ದೇಸೂರು, ಅಷ್ಪಾಕ ಶೇಖ, ನಂದೀಶ ಮುಂಗರವಾಡಿ, ಅನಿಲ್ ನಾಯ್ಕರ್, ಆಸೀಪ್ ಮುಜಾವರ, ಮೌಲಾಲಿ ಮುಲ್ಲಾ, ಸಂಜು ಚಂದ್ರಕಾಂತ ನಂದ್ಯಾಳ್ಕರ ಮೊದಲಾದವರು ಕಂಬನಿ ಮಿಡಿದಿದ್ದಾರೆ.
ಆದರ್ಶ ರಾಜಕಾರಣಿಯಾಇ, ಜನಸೇವೆಗೈದ ಸರಳ ವ್ಯಕ್ತಿತ್ವದ ಸಹೃದಯಿ ಎಸ್.ಬಿ.ನಾಯ್ಕ ಅವರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುವ,
ಸಂದೇಶ್.ಎಸ್.ಜೈನ್

No comments:
Post a Comment