ಜ: 20 ರಂದು ದಾಂಡೇಲಿಯಲ್ಲಿ ಉಚಿತ ಯಕ್ಷಗಾನ ಪ್ರದರ್ಶನ
ದಾಂಡೇಲಿ : ಸ್ಥಳೀಯ ಗಾಂಧಿನಗರದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಆಶ್ರಯದಲ್ಲಿ ದಾನಿಗಳ ನೆರವಿನೊಂದಿಗೆ ಹೊನ್ನಾವರ ತಾಲ್ಲೂಕಿನ ಜಲವಳ್ಳಿಯ ಕಲಾಧರ ಯಕ್ಷರಂಗ ಬಳಗ (ರಿ.) ಇವರಿಂದ ಜನವರಿ:20 ರಂದು ಸಂಜೆ 6.00 ಗಂಟೆಗೆ ಸರಿಯಾಗಿ ಹಳೆ ನಗರ ಸಭಾ ಮೈದಾನದಲ್ಲಿ ಉಚಿತ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಕಾರ್ತಿವೀರ & ಕೃಷ್ಣಾರ್ಜುನ ಕಾಳಗ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನ ನಡೆಯಲಿದ್ದು, ಮೇಳದಲ್ಲಿ ಭಾಗವತರುಗಳಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಪ್ರಸನ್ನ ಭಟ್ ಬಾಳ್ಕಲ್, ಪಲ್ಲವ ಗಾಣಿಗ ಹೆರಂಜಾಲು ಭಾಗವಹಿಸಲಿದ್ದಾರೆ. ಮದ್ದಳೆ: ಎನ್.ಜಿ.ಹೆಗಡೆ ಯಲ್ಲಾಪುರ, ವೆಂಕಟ್ರಮಣ ಹೆಗಡೆ ನಿಟ್ಟೂರು, ಚೆಂಡೆ: ಗಣೇಶ ಗಾಂವಕರ ಹೆಳುವಳ್ಳಿ, ರಾಮ ಭಂಡಾರಿ ಕಲಾಸೇವೆ ನೀಡಲಿದ್ದಾರೆ.
ಸ್ತ್ರೀ ವೇಷದಾರಿಗಳಾಗಿ ಹೊಸಂಗಡಿ ರಾಜೀವ ಶೇಟ್ಟಿ, ನಿಲ್ಕೊಡ, ಶಂಕರ ಹೆಗಡೆ, ನಾಗರಾಜ ಭಟ್, ಹಾಸ್ಯ ಕಲಾವಿದರುಗಳಾಗಿ ಹಳ್ಳಾಡಿ ಜಯರಾಮ ಶೆಟ್ಟಿ, ಶ್ರೀಧರ ಭಟ್ ಕಾಸರಕೋಡ ಅವರುಗಳು ಭಾಗವಹಿಸಲಿದ್ದಾರೆ. ಪ್ರಮುಖ ಕಲಾವಿದರುಗಳಾಗಿ ಬಳ್ಕೂರು ಕೃಷ್ಣಯಾಜಿ, ಉಪ್ಪುಂದ ನಾಗೇಂದ್ರ ರಾವ್, ಜಲವಳ್ಳಿ ವಿದ್ಯಾದರ ರಾವ್, ಕಾತರ್ಿಕ ಚಿಟ್ಟಾಣಿ, ವಿನಯ್ ಭಟ್ ಬೇರೋಳ್ಳಿ, ಆನಂದ ಭಟ್, ಮಹಾಬಲೇಶ್ವರ ಗೌಡ, ನಿರಂಜನ ಜಾಗನಳ್ಳಿ, ಗಣಪತಿ ಬೈಲುಗದ್ದೆ, ಬಾಸ್ಕರ ಕುಮುಟಾ ಮತ್ತು ಪರಿಶುದ್ದ ಆಚಾರ್ಯ ಅವರುಗಳು ಗೆಜ್ಜೆ ಕಟ್ಟಲಿದ್ದಾರೆ.
ಇವರ ಜೊತೆ ಜೊತೆಯಲ್ಲಿ ದಾಂಡೇಲಿಯ ಹೆಮ್ಮೆಯ ಕಲಾವಿದ ಹಾಗೂ ಸಂತೋಷ್ ಹೊಟೆಲ್ ಮಾಲಕರಾದ ವಿಷ್ಣುಮೂರ್ತಿ ರಾವ್ ಅವರ ಕಂಚಿನ ಕಂಠದ ಭಾಗವತಿಗೆ ಹಾಗೂ ಜೊಯಿಡಾ ಖ್ಯಾತ ಕಲಾವಿದ ಸುದರ್ಶನ ಹೆಗಡೆಯವರು ವೇಶದಾರಿಯಾಗಿ ಗಮನ ಸೆಳೆಯಲಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿನಂತಿಸಿದ್ದಾರೆ.
ಸ್ತ್ರೀ ವೇಷದಾರಿಗಳಾಗಿ ಹೊಸಂಗಡಿ ರಾಜೀವ ಶೇಟ್ಟಿ, ನಿಲ್ಕೊಡ, ಶಂಕರ ಹೆಗಡೆ, ನಾಗರಾಜ ಭಟ್, ಹಾಸ್ಯ ಕಲಾವಿದರುಗಳಾಗಿ ಹಳ್ಳಾಡಿ ಜಯರಾಮ ಶೆಟ್ಟಿ, ಶ್ರೀಧರ ಭಟ್ ಕಾಸರಕೋಡ ಅವರುಗಳು ಭಾಗವಹಿಸಲಿದ್ದಾರೆ. ಪ್ರಮುಖ ಕಲಾವಿದರುಗಳಾಗಿ ಬಳ್ಕೂರು ಕೃಷ್ಣಯಾಜಿ, ಉಪ್ಪುಂದ ನಾಗೇಂದ್ರ ರಾವ್, ಜಲವಳ್ಳಿ ವಿದ್ಯಾದರ ರಾವ್, ಕಾತರ್ಿಕ ಚಿಟ್ಟಾಣಿ, ವಿನಯ್ ಭಟ್ ಬೇರೋಳ್ಳಿ, ಆನಂದ ಭಟ್, ಮಹಾಬಲೇಶ್ವರ ಗೌಡ, ನಿರಂಜನ ಜಾಗನಳ್ಳಿ, ಗಣಪತಿ ಬೈಲುಗದ್ದೆ, ಬಾಸ್ಕರ ಕುಮುಟಾ ಮತ್ತು ಪರಿಶುದ್ದ ಆಚಾರ್ಯ ಅವರುಗಳು ಗೆಜ್ಜೆ ಕಟ್ಟಲಿದ್ದಾರೆ.
ಇವರ ಜೊತೆ ಜೊತೆಯಲ್ಲಿ ದಾಂಡೇಲಿಯ ಹೆಮ್ಮೆಯ ಕಲಾವಿದ ಹಾಗೂ ಸಂತೋಷ್ ಹೊಟೆಲ್ ಮಾಲಕರಾದ ವಿಷ್ಣುಮೂರ್ತಿ ರಾವ್ ಅವರ ಕಂಚಿನ ಕಂಠದ ಭಾಗವತಿಗೆ ಹಾಗೂ ಜೊಯಿಡಾ ಖ್ಯಾತ ಕಲಾವಿದ ಸುದರ್ಶನ ಹೆಗಡೆಯವರು ವೇಶದಾರಿಯಾಗಿ ಗಮನ ಸೆಳೆಯಲಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿನಂತಿಸಿದ್ದಾರೆ.
ಹಾರ್ದಿಕ ಸ್ವಾಗತ ಸುಸ್ವಾಗತ ಬಯಸುವ
ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು
ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ, ಗಾಂಧಿನಗರ, ದಾಂಡೇಲಿ
ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು
ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ, ಗಾಂಧಿನಗರ, ದಾಂಡೇಲಿ

No comments:
Post a Comment