Thursday, January 17, 2019

ರಾಜ್ಯಮಟ್ಟದಲ್ಲಿ ಮಿಂಚಿ ದಾಂಡೇಲಿಗೆ ಕೀರ್ತಿ ತಂದ ಸ್ಕಂದ ಸುದರ್ಶನ
ಅಭಿಮಾನದ ಅಭಿವಂದನೆಗಳು
ದಾಂಡೇಲಿ: ನಗರದ ಕೆನರಾ ವೆಲ್ಪೇರ್ ಟ್ರಸ್ಟಿನ ಇ.ಎಂ.ಎಸ್ ಆಂಗ್ಲ ಮಾದ್ಯಮ ಹಿ.ಪ್ರಾ.ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಸ್ಕಂದ ಸುದರ್ಶನ ಈತನು ಇತ್ತೀಚೆಗೆ ಉಡುಪಿಯಲ್ಲಿ ನಡೆದ 13 ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಾಟ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಕುಮಟೆ ವಿಭಾಗದಲ್ಲಿ ತೃತೀಯ ಸ್ಥಾನದೊಂದಿಗೆ ರಾಜ್ಯಮಟ್ಟದಲ್ಲಿ ಮಿಂಚುವುದರ ಮೂಲಕ ನಗರಕ್ಕೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾನೆ. ಈಗಾಗಲೆ ವಿವಿದೆಡೆಗಳಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾನೆ.
 
ಈತನ ಸಾಧನೆಗೆ ಕರಾಟೆ ತರಬೇತುದಾರ ಲಕ್ಷ್ಮಣ ಹುಲಸ್ವಾರ, ಕೆನರಾ ವೆಲ್ಪೇರ್ ಟ್ರಸ್ಟಿನ ಇ.ಎಂ.ಎಸ್ ಸಂಸ್ಥೆಯ ಆಡಳಿತ ಮಂಡಳಿ, ಸಂಸ್ಥೆಯ ಅಧೀಕ್ಷಕ ಎಂ.ಎಸ್.ಇಟಗಿ, ಮುಖ್ಯೋಪಾಧ್ಯಯನಿ ಯೂಜಿನ್ ಡಿವಾಜ್, ಶಾಲೆಯ ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಯ ಪೋಷಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
 
ರಾಜ್ಯಮಟ್ಟದಲ್ಲಿ ಮಿಂಚಿದ ನಮ್ಮೂರ ಕುವರ ಸ್ಕಂದ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಶಿಖರವನ್ನೇರಲಿ ಎಂಬ ಆಶಯ ಹಾರೈಕೆಯೊಂದಿಗೆ, ಮುದ್ದು ಬಾಲಕನಿಗೆ ನಿಮ್ಮೆಲ್ಲರ ಅಕ್ಕರೆಯ ಆಶೀರ್ವಾದವಿರಲೆಂಬ ಪ್ರಾರ್ಥನೆ.
 
ನಿಮ್ಮವ
 
ಸಂದೇಶ್.ಎಸ್.ಜೈನ್

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...