Wednesday, January 16, 2019



ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ, ಗಾಂಧಿನಗರ, ದಾಂಡೇಲಿ
ಇವರ ಆಶ್ರಯದಲ್ಲಿ
ಉಚಿತ ಯಕ್ಷಗಾನ ಪ್ರದರ್ಶನ
ಕಲಾಧರ ಯಕ್ಷರಂಗ ಬಳಗ(ರಿ.) ಜಲವಳ್ಳಿ, ಹೊನ್ನಾವರ ತಾಲೂಕು.
ಇವರಿಂದ
 "ಕಾರ್ತಿವೀರ & ಕೃಷ್ಣಾರ್ಜುನ ಕಾಳಗ"
 ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನ

ದಿನಾಂಕ: 20.01.2019, ಸಮಯ: ಸಂಜೆ 6.00 ಗಂಟೆಯಿಂದ ರಾತ್ರಿ 12.00 ಗಂಟೆಯವರೆಗೆ
ಸ್ಥಳ: ಹಳೆ ನಗರ ಸಭಾ ಮೈದಾನ, ದಾಂಡೇಲಿ.            
 
ಸ್ಮರಣೀಯ ಯಕ್ಷಗಾನದ ಈ ಪ್ರದರ್ಶನದಲ್ಲಿ ಕಲಾಸೇವೆಯನ್ನು ನೀಡಲಿರುವ ಕಲಾವಿದರುಗಳು:
ಭಾಗವತರಾಗಿ: ಶ್ರೀ. ರಾಮಕೃಷ್ಣ ಹೆಗಡೆ ಹಿಲ್ಲೂರು, ಶ್ರೀ.ಪ್ರಸನ್ನ ಭಟ್ ಬಾಳ್ಕಲ್, ಶ್ರೀ. ಪಲ್ಲವ ಗಾಣಿಗ ಹೆರಂಜಾಲು
 
ಮದ್ದಳೆ: ಶ್ರೀ.ಎನ್.ಜಿ.ಹೆಗಡೆ ಯಲ್ಲಾಪುರ, ಶ್ರೀ. ವೆಂಕಟ್ರಮಣ ಹೆಗಡೆ ನಿಟ್ಟೂರು,
ಚೆಂಡೆ; ಶ್ರೀ.ಗಣೇಶ ಗಾಂವಕರ ಹೆಳುವಳ್ಳಿ, ಶ್ರೀ.ರಾಮ ಭಂಡಾರಿ
 
ಸ್ತ್ರೀ ವೇಶದಾರಿಗಳಾಗಿ ಹೊಸಂಗಡಿ ಶ್ರೀ.ರಾಜೀವ ಶೇಟ್ಟಿ, ನಿಲ್ಕೊಡ ಶ್ರೀ.ಶಂಕರ ಹೆಗಡೆ, ಶ್ರೀ.ನಾಗರಾಜ ಭಟ್,
 
ಹಾಸ್ಯ ಕಲಾವಿದರುಗಳಾಗಿ ಹಳ್ಳಾಡಿ ಶ್ರೀ.ಜಯರಾಮ ಶೆಟ್ಟಿ, ಶ್ರೀ.ಶ್ರೀಧರ ಭಟ್ ಕಾಸರಕೋಡ ಅವರುಗಳು ಭಾಗವಹಿಸಲಿದ್ದಾರೆ.
 
ಪ್ರಮುಖ ಕಲಾವಿದರುಗಳಾಗಿ ಬಳ್ಕೂರು ಶ್ರೀ. ಕೃಷ್ಣಯಾಜಿ, ಉಪ್ಪುಂದ ಶ್ರೀ ನಾಗೇಂದ್ರ ರಾವ್, ಜಲವಳ್ಳಿ ಶ್ರೀ ವಿದ್ಯಾದರ ರಾವ್, ಶ್ರೀ.ಕಾರ್ತಿಕ ಚಿಟ್ಟಾಣಿ, ಶ್ರೀ.ವಿನಯ್ ಭಟ್ ಬೇರೋಳ್ಳಿ, ಶ್ರೀ.ಆನಂದ ಭಟ್, ಶ್ರೀ.ಮಹಾಬಲೇಶ್ವರ ಗೌಡ, ಶ್ರೀ.ನಿರಂಜನ ಜಾಗನಳ್ಳಿ, ಶ್ರೀ.ಗಣಪತಿ ಬೈಲುಗದ್ದೆ, ಶ್ರೀ.ಬಾಸ್ಕರ ಕುಮುಟಾ ಮತ್ತು ಶ್ರೀ.ಪರಿಶುದ್ದ ಆಚಾರ್ಯ ಅವರುಗಳು ಗೆಜ್ಜೆ ಕಟ್ಟಲಿದ್ದಾರೆ.
 
 
ಇವರ ಜೊತೆ ಜೊತೆಯಲ್ಲಿ ದಾಂಡೇಲಿಯ ಹೆಮ್ಮೆಯ ಕಲಾವಿದ ಹಾಗೂ ಸಂತೋಷ್ ಹೊಟೆಲ್ ಮಾಲಕರಾದ ಶ್ರೀ.ವಿಷ್ಣುಮೂರ್ತಿ ರಾವ್ ಅವರ ಕಂಚಿನ ಕಂಠದ ಭಾಗವತಿಗೆ ಹಾಗೂ ಜೊಯಿಡಾ ಮಣ್ಣಿನ ಮಗ ಶ್ರೀ.ಸುದರ್ಶನ ಹೆಗಡೆಯವರು ವೇಶದಾರಿಯಾಗಿ ಗಮನ ಸೆಳೆಯಲಿದ್ದಾರೆ.
 
ನೀವು ಬನ್ನಿ, ನಿಮ್ಮವರನ್ನು ಕರೆ ತನ್ನಿ.
ಕರಾವಳಿಯ ಗಂಡು ಕಲೆಯನ್ನು ಬೆಳೆಸೋಣ, ಉಳಿಸೋಣ.
ಉಚಿತ ಪ್ರದರ್ಶನ
              
ಹಾರ್ದಿಕ ಸ್ವಾಗತ ಸುಸ್ವಾಗತ ಬಯಸುವ
ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು
ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ, ಗಾಂಧಿನಗರ, ದಾಂಡೇಲಿ
ಸಂಪರ್ಕಕ್ಕಾಗಿ : ಮೊ: 9845848498,  9620595555
ಯಕ್ಷಗಾನಂ ಗೆಲ್ಗೆ

 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...