ಶ್ರೀ.ಛತ್ರಪತಿ ಶಿವಾಜಿ ಮಹಾರಾಜ ಮೂರ್ತಿ ಪ್ರತಿಷ್ಟಾಪಣೆಯ ನಿಮಿತ್ತ
ಉದ್ಯಮಿ ಪ್ರೇಮಾನಂದ ಗವಸ ಅವರಿಂದ ಗೌರಿಗೆ ರೂ:3000/- ಕಾಣಿಕೆ
ಉದ್ಯಮಿ ಪ್ರೇಮಾನಂದ ಗವಸ ಅವರಿಂದ ಗೌರಿಗೆ ರೂ:3000/- ಕಾಣಿಕೆ
ಆಹಾ, ಮನುಷ್ಯತ್ವಕ್ಕೆ ಬೆಲೆ ಕಟ್ಟಲು ಸಾಧ್ಯವೆ. ನಾಳೆ ಅಂದರೆ ದಿನಾಂಕ: 12.01.2019 ರಂದು ದಾಂಡೇಲಿಯ ಸೋಮಾನಿ ವೃತ್ತದಲ್ಲಿ ಶ್ರೀ.ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಟಾಪಣೆಯ ನಿಮಿತ್ತ ಮರಾಠಾ ಸಮಾಜ ಬಾಂಧವರು ಆಗಿರುವ ಹಾಗೂ ಯಶಸ್ವಿ ಉದ್ಯಮಿಯಾಗಿರುವ ಮತ್ತು ಪ್ರೇಮ, ವುಡ್ ಡೆಕೊರ್ಸ್ ಮಾಲಕರಾದ ಶ್ರೀ.ಪ್ರೇಮಾನಂದ ಗವಸ ಅವರು ರೂ: 3000/- ಹಣವನ್ನು ರಕ್ತದ ಕ್ಯಾನ್ಸರಿನಿಂದ ಬಲಳುತ್ತಿರುವ ಕಂದಮ್ಮ ಗೌರಿಯ ತಂದೆ ಅನಿಲ್ ನಾಯ್ಕ ಅವರ ಉಳಿತಾಯ ಖಾತೆಗೆ ಜಮಾ ಮಾಡುವುದಾಗಿ ಘೋಷಿಸಿದ್ದಾರೆ.
ಸಮಾಜದ ಶಕ್ತಿಯಾಗಿದ್ದ, ರಾಷ್ಟ್ರದ ಕ್ರಾಂತಿಪುರುಷ ಶ್ರೀ.ಛತ್ರಪತಿ ಶಿವಾಜಿ ಮಹಾರಾಜ ಅವರ ಹೆಸರಿನಲ್ಲಿ ಜೀವುಳಿಸಲು ನೆರವಾಗುವ ಸೇವೆಗೈದ ಪ್ರೇಮಾನಂದ ಗವಸ ಅವರ ಈ ಕಾರ್ಯ ಶ್ಲಾಘನೀಯ.
ನಿಮ್ಮ ಈ ಕಾರ್ಯಕ್ಕೆ ಶಿರಬಾಗುವೆ,
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment